AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್​ಗೆ ದಿನಗಣನೆ; ನಿರ್ಮಲಾ ಸೀತಾರಾಮನ್​ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?

Union Budget and Halwa ceremony: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲಿ ಇಂದು (ಜ. 24) ಸಂಜೆ 5ಕ್ಕೆ ಸಂಸತ್ತಿನ ನಾರ್ತ್ ಬ್ಲಾಕ್​ನಲ್ಲಿ ಹಲ್ವಾ ಕಾರ್ಯಕ್ರಮ ನಡೆಯಿತು. ಬಜೆಟ್ ಸಿದ್ಧತೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಹಿ ತಿಂದು ಸಂಭ್ರಮಿಸಿದರು. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗಲಿದ್ದು, ಅಲ್ಲಿಯವರೆಗೆ ಈ ಸಿಬ್ಬಂದಿಗೆ ಲಾಕಿನ್ ಅವಧಿ ಇರುತ್ತದೆ. ಬಾಹ್ಯ ಸಂಪರ್ಕದಿಂದ ಸಂಪೂರ್ಣ ಕಡಿದುಕೊಳ್ಳುತ್ತಾರೆ.

ಬಜೆಟ್​ಗೆ ದಿನಗಣನೆ; ನಿರ್ಮಲಾ ಸೀತಾರಾಮನ್​ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?
ಹಲ್ವಾ ಕಾರ್ಯಕ್ರಮ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 24, 2025 | 7:36 PM

Share

ನವದೆಹಲಿ, ಜನವರಿ 24: ಕೇಂದ್ರ ಬಜೆಟ್ ಮಂಡನೆ ದಿನ ಸಮೀಪಿಸುತ್ತಿದ್ದು, ಇಂದು ಶುಕ್ರವಾರ ಸಂಜೆಯ ಬಳಿಕ ಹಲ್ವಾ ಕಾರ್ಯಕ್ರಮ ನಡೆಯುತ್ತಿದೆ. ಬಜೆಟ್ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಈ ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ತಂಡದ ಸದಸ್ಯರಿಗೆ ಸಿಹಿ ತಿನಿಸುತ್ತಾರೆ. ಪ್ರತೀ ಬಜೆಟ್​ನಲ್ಲೂ ಕೆಲ ದಿನಗಳ ಮೊದಲು ಈ ರೀತಿ ಹಲ್ವಾ ಕಾರ್ಯಕ್ರಮ ನಡೆಯುವುದು ರೂಢಿಯಲ್ಲಿದೆ.

ಹಲ್ವಾ ಕಾರ್ಯಕ್ರಮದ ಮಹತ್ವ ಏನು?

ಬಜೆಟ್ ಸಿದ್ಧಪಡಿಸುವ ಕೆಲಸ ಸಾಧಾರಣ ಇರುವುದಿಲ್ಲ. ಐದಾರು ತಿಂಗಳಿಂದ ನಿರಂತರವಾಗಿ ನಡೆಯುವ ಪ್ರಕ್ರಿಯೆ. ವಿವಿಧ ಇಲಾಖೆಗಳು, ವಿವಿಧ ಸಚಿವಾಲಯಗಳು, ವಿವಿಧ ಉದ್ಯಮಗಳು, ವಿವಿಧ ರಾಜ್ಯಗಳು ಹೀಗೆ ಬಹಳಷ್ಟು ಜನರನ್ನು ಸಂಪರ್ಕಿಸಿ, ಚರ್ಚಿಸಿ, ಸಮಾಲೋಚಿಸಿ ಆ ಬಳಿಕ ಬಜೆಟ್ ಸಿದ್ಧಪಡಿಸಲಾಗುತ್ತದೆ. ಹೀಗೆ ಹಲವು ದಿನಗಳಿಂದ ಬಜೆಟ್ ಸಿದ್ಧತೆಗೆ ಶ್ರಮ ವಹಿಸಿದ ಸಿಬ್ಬಂದಿಗೆ ಕೇಂದ್ರ ಹಣಕಾಸು ಸಚಿವೆ ಸಿಹಿ ತಿನಿಸಿ ಧನ್ಯವಾದ ಹೇಳುವ ಕಾರ್ಯವೇ ಹಲ್ವಾ ಕಾರ್ಯಕ್ರಮ.

ಇದನ್ನೂ ಓದಿ: ಬಜೆಟ್ 2025: ಕೃಷಿ ವಲಯಕ್ಕೆ ಶೇ. 15ರಷ್ಟು ಹೆಚ್ಚು ಫಂಡಿಂಗ್ ಸಾಧ್ಯತೆ; ವಿವಿಧ ಕಾರ್ಯಗಳಿಗೆ ಹೆಚ್ಚು ಹಣ

ಮಹತ್ವದ ಸಂಗತಿ ಎಂದರೆ, ಬಜೆಟ್ ಸಿದ್ಧತೆಯಲ್ಲಿ ತೊಡಗಿರುವ ಅಧಿಕಾರಿಗಳು ಇತ್ಯಾದಿ ಸಿಬ್ಬಂದಿಯು, ಹಲ್ವ ಕಾರ್ಯಕ್ರಮದಲ ಬಳಿಕ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾರೆ. ಬಜೆಟ್ ಮಂಡನೆ ಆಗುವವರೆಗೂ ಅವರು ಅಕ್ಷರಶಃ ಲಾಕ್ ಆಗಿರುತ್ತಾರೆ. ಸಂಸತ್ತಿನ ನಾರ್ತ್ ಬ್ಲಾಕ್​​ನಲ್ಲಿ ಇರುವ ಅವರು ಮೊಬೈಲ್ ಫೋನ್​ಗಳನ್ನೂ ಬಳಸುವಂತಿಲ್ಲ. ಬಾಹ್ಯ ಪ್ರಪಂಚಕ್ಕೆ ಅವರಿಗೆ ಯಾವುದೇ ಸಂವಹನ ಮಾರ್ಗ ಇರುವುದಿಲ್ಲ. ಸಂಸತ್ತಿನಲ್ಲಿ ಅಧಿಕೃತವಾಗಿ ಮಂಡನೆ ಆಗುವ ಮುನ್ನ ಬಜೆಟ್​ನ ಯಾವುದೇ ಮಾಹಿತಿ ಸೋರಿಕೆ ಆಗಬಾರದು ಎನ್ನುವ ಉದ್ದೇಶದಿಂದ ಹೀಗೆ ಲಾಕಿನ್ ಪೀರಿಯಡ್ ಇರುತ್ತದೆ.

ಬಜೆಟ್ ದಿನವೂ ಕೂಡ ಸಂಸತ್ತಿನಲ್ಲಿ ಬಜೆಟ್ ಓದುವಾಗಲಷ್ಟೇ ಸಂಸದರಿಗೆ ಬಜೆಟ್ ಪ್ರತಿ ನೀಡಲಾಗಿರುತ್ತದೆ. ಬಜೆಟ್ ಮಂಡನೆ ಮುಗಿಯುವ ಹಂತದಲ್ಲಿರುವಾಗ ಆನ್​ಲೈನ್​ನಲ್ಲಿ ಬಜೆಟ್​ನ ಇ-ಪ್ರತಿಯನ್ನು ಅಪ್​ಲೋಡ್ ಮಾಡಲಾಗುತ್ತದೆ. ಆ ಮಟ್ಟಿಗೆ ಒಂದಷ್ಟು ಗೌಪ್ಯತೆಯನ್ನು ಬಜೆಟ್ ವಿಚಾರದಲ್ಲಿ ಕಾಯ್ದುಕೊಳ್ಳಲಾಗುತ್ತದೆ.

ಇದನ್ನೂ ಓದಿ: French Fry: ಆವತ್ತು ಆಮದು , ಇವತ್ತು ರಫ್ತು; ಜಾಗತಿಕ ಫ್ರೆಂಚ್ ಫ್ರೈ ಮಾರುಕಟ್ಟೆಯಲ್ಲಿ ಭಾರತದ ಅಧಿಪತ್ಯ

ಹಲ್ವಾ ಕಾರ್ಯಕ್ರಮದ ಬಳಿಕ ಬಜೆಟ್ ಪ್ರತಿಗಳ ಮುದ್ರಣ ಕೆಲಸ ನಡೆಯುತ್ತದೆ. ಹಣಕಾಸು ಸಚಿವೆ ಪರಾಮರ್ಶಿಸಿದ ಬಜೆಟ್ ಪ್ರತಿಯನ್ನು ಪ್ರಧಾನಿಗಳ ಅನುಮೋದನೆಗೆ ಕಳುಹಿಸಲಾಗುತ್ತದೆ. ಅದಾದ ಬಳಿಕವಷ್ಟೇ ಮುದ್ರಣ ನಡೆಯುತ್ತದೆ. ಗುಪ್ತಚರ ಅಧಿಕಾರಿಗಳು ಬಜೆಟ್ ಮುದ್ರಿಸುತ್ತಿರುವ ಸ್ಥಳಕ್ಕೆ ಗೌಪ್ಯವಾಗಿ ಹೋಗಿ ಪರಿಶೀಲನೆ ನಡೆಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್