AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jobs: 2023ರಲ್ಲಿ ಪ್ರತಿ ಐವರಲ್ಲಿ ಒಬ್ಬರು ಹೊಸ ಕೆಲಸ ಹುಡುಕುವ ಸಾಧ್ಯತೆ ಎನ್ನುತ್ತಿದೆ ಈ ಸಮೀಕ್ಷೆ

ಪಿಡಬ್ಲ್ಯುಸಿ ಜಾಗತಿಕ ಸಮೀಕ್ಷೆ ಪ್ರಕಾರ ಪ್ರತಿ ನಾಲ್ವರಲ್ಲಿ ಒಬ್ಬರು ಮುಂದಿನ ವರ್ಷ ಹೊಸ ಕೆಲಸ ಹುಡುಕಲಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿವೆ.

Jobs: 2023ರಲ್ಲಿ ಪ್ರತಿ ಐವರಲ್ಲಿ ಒಬ್ಬರು ಹೊಸ ಕೆಲಸ ಹುಡುಕುವ ಸಾಧ್ಯತೆ ಎನ್ನುತ್ತಿದೆ ಈ ಸಮೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 25, 2022 | 7:32 AM

Share

ಕೊವಿಡ್​-19 ನಂತರದಲ್ಲಿ ಉದ್ಯೋಗಿಗಳ ರಾಜೀನಾಮೆ (Resignation) ಪರ್ವ ಮುಂದುವರಿಯಲಿದೆ ಎಂಬುದು PwC ಹೊಸ ಜಾಗತಿಕ ಸಮೀಕ್ಷೆಯಿಂದ (survey) ತಿಳಿದುಬಂದಿದೆ. ಮುಂದಿನ 12 ತಿಂಗಳಲ್ಲಿ ಹೊಸ ಕೆಲಸ ಹುಡುಕಿಕೊಳ್ಳುವುದಾಗಿ ಪ್ರತಿ ಐದು ಮಂದಿಯಲ್ಲಿ ಒಬ್ಬರು ವಿಶ್ವದಾದ್ಯಂತ ಹೇಳಿಕೊಂಡಿದ್ದಾರೆ. PwCಯಿಂದ “ಗ್ಲೋಬಲ್ ವರ್ಕ್​ಫೋರ್ಸ್ ಹೋಪ್ಸ್ ಅಂಡ್ ಫಿಯರ್ಸ್ ಸರ್ವೇ 2022” ಅನ್ನು ವಿಶ್ವ ಆರ್ಥಿಕ ಫೋರಂನಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು. 44 ದೇಶಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ 52,195 ಮಂದಿ ಇದರಲ್ಲಿ ಭಾಗಿ ಆಗಿದ್ದರು. ಸಮೀಕ್ಷೆಯಲ್ಲಿ ಕಂಡುಬಂದಿರುವ ಪ್ರಕಾರ, ಹೆಚ್ಚಿನ ಸಂಬಳಕ್ಕಾಗಿ ಹೊಸ ಹುದ್ದೆಯನ್ನು ಹುಡುಕುವುದಾಗಿ ಹೇಳಿಕೊಂಡಿರುವವರ ಪ್ರಮಾಣ ಅತಿ ಹೆಚ್ಚು, ಅಂದರೆ ಶೇ 71ರಷ್ಟಿದೆ. ಈ ಮಧ್ಯೆ ಈಗಿನ ಉದ್ಯೋಗದಾತರನ್ನೇ ಸಂಬಳ ಹೆಚ್ಚಿಸುವಂತೆ ಕೇಳುವುದಾಗಿ ಶೇ 35ರಷ್ಟು ಮಂದಿ ಯೋಜನೆ ಇರಿಸಿಕೊಂಡಿದ್ದಾರೆ.

“ಈಗ ಕಂಡುಬದಿರುವುದರಲ್ಲಿ ಬಹಳ ಸ್ಪಷ್ಟವಾಗುವುದು ಏನೆಂದರೆ… ಬಹಳ ದೊಡ್ಡ ಸಂಖ್ಯೆಯ ಉದ್ಯೋಗಿಗಳು ತಮ್ಮ ಭವಿಷ್ಯದ ಉದ್ಯೋಗ ಮತ್ತು ಉದ್ಯೋಗ ಭದ್ರತೆ ಬಗ್ಗೆ ಆಲೋಚಿಸುತ್ತಿದ್ದಾರೆ,” ಎಂದು PwC ಜಾಗತಿಕ ಅಧ್ಯಕ್ಷ ಬಾಬ್ ಮೊರಿಟ್ಜ್ ವಿಶ್ವ ಆರ್ಥಿಕ ಫೋರಂನಲ್ಲಿ ಹೇಳಿದ್ದಾರೆ. ಆದರೆ “ಅಧಿಕಾರವು ಈಗ, ನಾವು ವಾದಿಸುವಂತೆ ಯಾರು ಉದ್ಯೋಗದಲ್ಲಿ ಇರುತ್ತಾರೋ ಅವರ ಕೈಯಲ್ಲಿದೆ.”

ದಶಕದಲ್ಲೇ ಹೆಚ್ಚುತ್ತಿರುವ ಹಣದುಬ್ಬರ, ಬಿಗಿಯಾದ ಕಾರ್ಮಿಕ ಮಾರುಕಟ್ಟೆಯ ಕಾರಣಕ್ಕೆ ಕಾರ್ಮಿಕರು ಹೆಚ್ಚಿನ ವೇತನವನ್ನು ಕೇಳುವಂತೆ ಮಾಡುತ್ತಿದೆ ಎಂಬುದು ಅಭಿಪ್ರಾಯ ಸಂಗ್ರಹ ವೇಳೆಯಲ್ಲಿ ಗೊತ್ತಾಗಿದೆ. ಇದು ಜಾಗತಿಕ ಕೇಂದ್ರ ಬ್ಯಾಂಕ್​ಗಳಿಗೂ ಆತಂಕಕ್ಕೆ ಕಾರಣ ಆಗಬಹುದು. ಇತ್ತೀಚಿನ ಎರಡನೇ ಸುತ್ತಿನ ಬೆಲೆ ಏರಿಕೆಯು ನೀತಿಯನ್ನು ಮತ್ತಷ್ಟು ವೇಹವಾಗಿ ಬಲಗೊಳಿಸುವಂತೆ ಒತ್ತಡ ಹಾಕಬಹುದು.

ಸಮೀಕ್ಷೆಯಲ್ಲಿ ತೋರಿಸಿರುವಂತೆ, ವೇತನದ ಒತ್ತಡ ತಂತ್ರಜ್ಞಾನ ವಲಯದಲ್ಲಿ ಹೆಚ್ಚಾಗಿದೆ. ಅಲ್ಲಿ ಶೇ 44ರಷ್ಟು ಸಿಬ್ಬಂದಿ ವೇತನ ಹೆಚ್ಚಳಕ್ಕೆ ಕೇಳುವ ಯೋಜನೆಯಲ್ಲಿ ಇದ್ದಾರೆ. ಸಾಋ್ವಜನಿಕ ವಲಯದಲ್ಲಿ ಈ ಸಂಖ್ಯೆ ಕೇವಲ ಶೇ 25ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Local Circles Survey: ಕಳೆದ ಮೂರು ತಿಂಗಳಲ್ಲಿ ಕುಟುಂಬಗಳ ವೆಚ್ಚ ಶೇ 10ರಷ್ಟು ಹೆಚ್ಚಳ ಎನ್ನುತ್ತಿದೆ ಈ ಸಮೀಕ್ಷೆ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ