AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ

ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆಯು ಏಪ್ರಿಲ್​ ತಿಂಗಳಲ್ಲಿ 11 ಲಕ್ಷ ಜಾಸ್ತಿ ಆಗಿದೆ. ಆದರೆ ಒಟ್ಟಾರೆ ಟೇಪಾಸಿಟ್​ಗಳ ಪ್ರಮಾಣ ಮಾತ್ರ ಕಡಿಮೆ ಆಗಿದೆ.

Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 06, 2021 | 4:39 PM

ಕೊರೊನಾ ಎರಡನೇ ಅಲೆ ತೀವ್ರವಾಗಿದ್ದರ ಹೊರತಾಗಿಯೂ 2021ರ ಏಪ್ರಿಲ್​ ತಿಂಗಳಲ್ಲಿ ಜನ್​ ಧನ್ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಸಂಖ್ಯೆ ಹೆಚ್ಚಳವಾಗಿದೆಯಾದರೂ ಇವುಗಳ ಒಟ್ಟಾರೆ ಠೇವಣಿಯಲ್ಲಿ ಇಳಿಕೆ ಆಗಿದೆ ಎಂಬ ಅಂಶ ಸರ್ಕಾರಿ ದತ್ತಾಂಶಗಳಿಂದ ಗೊತ್ತಾಗುತ್ತಿದೆ. ಹಣಕಾಸು ವರ್ಷ 2021ರ ಕೊನೆಗೆ 42.20 ಕೋಟಿಯಷ್ಟಿದ್ದ ಜನ್​ಧನ್ ಖಾತೆದಾರರ ಸಂಖ್ಯೆಯು ಏಪ್ರಿಲ್​ಗೆ 42.31 ಕೋಟಿ ಆಗಿದೆ. ಅಂದರೆ ಒಂದು ತಿಂಗಳಲ್ಲಿ 11 ಲಕ್ಷ ವೈಯಕ್ತಿಕ ಖಾತೆದಾರರ ಹೆಸರು ಸೇರ್ಪಡೆ ಆಗಿದೆ. ಇನ್ನು ಈ ಖಾತೆಗಳಲ್ಲಿನ ಸರಾಸರಿ ಠೇವಣಿ ಮೊತ್ತ ಕೂಡ ಇಳಿಕೆ ಕಂಡಿದ್ದು, ಡೆಬಿಟ್ ಕಾರ್ಡ್ ವಿತರಿಸಿದ್ದವರ ಪಾಲು ಕೂ ಕಡಿಮೆ ಆಗಿದೆ.

6 ಲಕ್ಷ ಡೆಬಿಟ್ ಕಾರ್ಡ್​ಗಳು ಈ ಹೊಸ ಫಲಾನುಭವಿಗಳಿಗೆ ಏಪ್ರಿಲ್​ನಲ್ಲಿ 6 ಲಕ್ಷ ಡೆಬಿಟ್​ ಕಾರ್ಡ್​ಗಳನ್ನು ವಿತರಣೆ ಮಾಡಲಾಗಿದೆ. ಆದರೂ ಕ್ಯುಮುಲೇಟಿವ್ (ಸಂಚಿತ) ಡೆಪಾಸಿಟ್ಸ್​ ಈ ಖಾತೆಗಳಲ್ಲಿ ಮಾರ್ಚ್​ ಕೊನೆಗೆ ಇದ್ದ 145,550 ಕೋಟಿಯಿಂದ ಏಪ್ರಿಲ್ ಅಂತ್ಯಕ್ಕೆ 143,297 ಕೋಟಿ ಆಗಿದೆ. ನಿವ್ವಳವಾಗಿ ಈ ಖಾತೆಯಿಂದ ಹೊರ ಹೋಗಿರುವ ಮೊತ್ತ 2,253 ಕೋಟಿ ರೂಪಾಯಿ.

ಸರಾಸರಿ ಠೇವಣಿ FY21ರಲ್ಲಿ ಜನ್​ಧನ್ ಖಾತೆ ಸರಾಸರಿ ರೂ. 3,449 ಇದ್ದದ್ದು, ಏಪ್ರಿಲ್ ಕೊನೆ ಹೊತ್ತಿಗೆ ರೂ. 3,386.85 ಆಗಿದೆ. ಮಾರ್ಚ್ 31, 2021ರ ತನಕದ ದತ್ತಾಂಶವನ್ನು ವಿಶ್ಲೇಷಣೆ ಮಾಡಿದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಸರಾಸರಿ ಠೇವಣಿ ಇದೆ. ಮೊದಲೇ ಹೇಳಿದ ಹಾಗೆ ಅಖಿಲ ಭಾರತ ಮಟ್ಟದ ಸರಾಸರಿ 3,449 ಇದ್ದರೆ, ಲಕ್ಷದ್ವೀಪದಲ್ಲಿ ಆ ಸರಾಸರಿ 5.4 ಪಟ್ಟು ಹೆಚ್ಚಾಗಿ, 18,684 ರೂಪಾಯಿ ಇದೆ.

ತಳ ಸೇರಿದೆ ಮಣಿಪುರ್ FY21 ಕೊನೆಗೆ ಠೇವಣಿ ವಿಚಾರದಲ್ಲಿ ಮಣಿಪುರ್ ನೆಲ ಕಚ್ಚಿದ್ದು, ಫಲಾನುಭವಿಗೆ ತಲಾ 2,037 ರೂಪಾಯಿ ದಾಖಲಾಗಿದೆ. ಕಳೆದ ವರ್ಷ ಸರಾಸರಿ ಠೇವಣಿ ಲೆಕ್ಕಾಚಾರದಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದ್ದದ್ದು ಕೇಂದ್ರಾಡಳಿತ ಪ್ರದೇಶ ಲಡಾಕ್ ಮತ್ತು ಗೋವಾ. ಆಗ ಲಡಾಕ್​ನಲ್ಲಿ ಸರಾಸರಿ ಠೇವಣಿ ರೂ. 10,931 (ರಾಷ್ಟ್ರೀಯ ಸರಾಸರಿಯ 3.16 ಪಟ್ಟು), ಗೋವಾದಲ್ಲಿ ರೂ. 6.899 (ದೇಶದ ಸರಾಸರಿಯ ಎರಡು ಪಟ್ಟು) ಇತ್ತು.

ಮಾರ್ಚ್ 31, 2021ರ ಕೊನೆಗೆ 12 ರಾಜ್ಯಗಳು ಅಖಿಲ ಭಾರತ ಮಟ್ಟದ ಸರಾಸರಿಯಾದ ರೂ. 3,449ಕ್ಕಿಂತ ಕಡಿಮೆ ಇವೆ. ಇನ್ನು 22 ಆ ಸರಾಸರಿಗಿಂತ ಮೇಲ್ಮಟ್ಟದಲ್ಲಿವೆ.

ಡೆಬಿಟ್ ಕಾರ್ಡ್/ಖಾತೆಯಲ್ಲಿ ಕುಸಿತ FY21 ಕೊನೆ ಹೊತ್ತಿಗೆ 42.2 ಕೋಟಿ ಜನ್​ಧನ್​ ಫಲಾನುಭವಿಗಳಿಗೆ 30.9 ಕೋಟಿ ಡೆಬಿಟ್​ ಕಾರ್ಡ್​ಗಳನ್ನು ವಿತರಿಸಲಾಗಿತ್ತು. ಅಂದರೆ ಶೇ 73.22ರಷ್ಟು ಫಲಾನುಭವಿಗಳು ಡೆಬಿಟ್​ ಕಾರ್ಡ್ ಹೊಂದಿದ್ದು, ಅವರು ಎಟಿಎಂನಲ್ಲಿ ವ್ಯವಹರಿಸಬಹುದು ಮತ್ತು ಆನ್​ಲೈನ್​ ಖರೀದಿ ಮಾಡಬಹುದು. ಏಪ್ರಿಲ್ ಕೊನೆಗೆ ಡೆಬಿಟ್ ಖಾತೆ ಹೊಂದಿರುವ ಜನ್​-ಧನ್ ಫಲಾನುಭವಿಗಳ ಸಂಖ್ಯೆ ಶೇ 73.17 ಆಗಿದೆ.

FY21ರ ಕೊನೆಗೆ ಲಡಾಕ್​ನಲ್ಲಿನ ಶೇ 90ರಷ್ಟು ಜನ್​ಧನ್ ಖಾತೆದಾರರ ಬಳಿ ಡೆಬಿಟ್ ಕಾರ್ಡ್ ಇದ್ದವು. ಅದೇ ಮಣಿಪುರ್ ವಿಚಾರಕ್ಕೆ ಬಂದರೆ ಡೆಬಿಟ್ ಕಾರ್ಡ್ ಪಡೆದ ಜನ್​ಧನ್ ಫಲಾನುಭವಿಗಳ ಪ್ರಮಾಣ ಶೇ 35.14 ಮಾತ್ರ. ಅಂದಹಾಗೆ ಮಿಜೋರಾಂನಲ್ಲಿ ಕೂಡ ಶೇ 35.14ರಷ್ಟು ಖಾತೆದಾರರು ಡೆಬಿಟ್ ಕಾರ್ಡ್ ಹೊಂದಿದ್ದಾರೆ.

2014ರ ಆಗಸ್ಟ್​ನಿಂದ 2014ರ ಆಗಸ್ಟ್​ನಲ್ಲಿ ಪ್ರಧಾನಮಂತ್ರಿ ಜನ್ ಧನ್ ಖಾತೆ ಯೋಜನೆ ಶುರುವಾಯಿತು. ಪ್ರತಿ ಕುಟುಂಬಕ್ಕೂ ಬ್ಯಾಂಕ್ ಖಾತೆ ಇರಬೇಕು ಎಂಬ ಉದ್ದೇಶದಿಂದ ಆರಂಭವಾದದ್ದು, ಈಗ ಪ್ರತಿ ವಯಸ್ಕ ವ್ಯಕ್ತಿಗೂ ಬ್ಯಾಂಕ್ ಖಾತೆ ಇರಬೇಕು ಎಂಬಲ್ಲಿಗೆ ಬಂದಿದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು, ಖಾಸಗಿ ವಲಯದ ಬ್ಯಾಂಕ್​ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು ಇವುಗಳ ಪೈಕಿ ಯಾವುದರಲ್ಲಾದರೂ ಜನ್ ಧನ್ ಖಾತೆ ತೆರೆಯಬಹುದು.

ಈ ಬ್ಯಾಂಕ್ ಖಾತೆಯ ಅತಿ ಮುಖ್ಯವಾದ ಅನುಕೂಲ ಏನೆಂದರೆ, ನೇರ ನಗದು ವರ್ಗಾವಣೆಯು ಯಾವುದೇ ಸೋರಿಕೆ ಇಲ್ಲದಂತೆ ಫಲಾನುಭವಿಗಳನ್ನು ತಲುಪುತ್ತದೆ. ಮಹಿಳಾ ಸಬಲೀಕರಣವು ಇದರ ಮತ್ತೊಂದು ಅತಿ ಮುಖ್ಯ ಉದ್ದೇಶ.

(ಮಾಹಿತಿ: ಮನಿ9.ಕಾಮ್)

ಇದನ್ನೂ ಓದಿ: 7 changes from May: ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳನ್ನು ನಿರೀಕ್ಷಿಸಿ, ಸಿದ್ಧರಾಗಿ

(11 lakh beneficiaries added to Jan Dhan scheme in April 2021)

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?