AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: ಕರ್ನಾಟಕದಲ್ಲಿ 78 ಕೈಗಾರಿಕಾ ಯೋಜನೆಗಳಿಗೆ ಇಲಾಖೆ ಸಮ್ಮತಿ; 14 ಸಾವಿರದಷ್ಟು ಉದ್ಯೋಗಸೃಷ್ಟಿ ನಿರೀಕ್ಷೆ

Big Industrial Projects Cleared By Karnataka: ಜನವರಿ ತಿಂಗಳಲ್ಲಿ ಮೂರೂವರೆ ಸಾವಿರ ರೂ ಮೊತ್ತದ 59 ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದ ರಾಜ್ಯ ಸರ್ಕಾರ ಇದೀಗ 5 ಸಾವಿರಕ್ಕೂ ಹೆಚ್ಚು ಮೊತ್ತದ 78 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಟ್ಟಿದೆ. ಇವೆರಡರಿಂದಲೂ 32 ಸಾವಿರದಷ್ಟು ಉದ್ಯೋಗಸೃಷ್ಟಿಯ ನಿರೀಕ್ಷೆ ಇದೆ.

Investment: ಕರ್ನಾಟಕದಲ್ಲಿ 78 ಕೈಗಾರಿಕಾ ಯೋಜನೆಗಳಿಗೆ ಇಲಾಖೆ ಸಮ್ಮತಿ; 14 ಸಾವಿರದಷ್ಟು ಉದ್ಯೋಗಸೃಷ್ಟಿ ನಿರೀಕ್ಷೆ
ಮುರುಗೇಶ್ ನಿರಾಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 20, 2023 | 10:52 AM

ಬೆಂಗಳೂರು: ರಾಜ್ಯದಲ್ಲಿ 5,298.69 ಕೋಟಿ ರೂ ಮೊತ್ತದ ಒಟ್ಟು 78 ಹೂಡಿಕೆ ಯೋಜನೆಗಳಿಗೆ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ (Karnataka Industries and Commerce Ministry) ಅನುಮೋದನೆ ನೀಡಿದೆ. ಮಾರ್ಚ್ 19, ಭಾನುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿಯಲ್ಲಿ (State Level Single Window Clearance Committee) 78 ಹೂಡಿಕೆ ಪ್ರಸ್ತಾವಗಳಿಗೆ ಸಮ್ಮತಿ ನೀಡಲಾಯಿತು ಎಂದು ಸಚಿವಾಲಯದಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ. ಈ ಯೋಜನೆಗಳಿದ 13,917 ಉದ್ಯೋಗಗಳು ಸೃಷ್ಟಿಯಾಗಲು ಸಾಧ್ಯ ಇದೆ.

78 ಯೋಜನೆಗಳ ಪೈಕಿ 17 ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳು ಪ್ರಮುಖವಾದುವಾಗಿವೆ. ಈ ಒಂದೊಂದು ಯೋಜನೆಯೂ ಕನಿಷ್ಠ 50 ಕೋಟಿ ರೂ ಮೊತ್ತದ್ದಾಗಿದೆ. 17 ಯೋಜನೆಗಳಿಂದಲೇ 3,552.66 ಕೋಟಿ ರೂ ಮೊತ್ತದ ಹೂಡಿಕೆಗಳಾಗಬಹುದು. ರಾಜ್ಯದ ವಿವಿಧೆಡೆ 6,933 ಕೋಟಿ ಜನರಿಗೆ ಉದ್ಯೋಗ ಅವಕಾಶ ಒದಗಿಸುವ ನಿರೀಕ್ಷೆ ಇದೆ.

ಹಾಗೆಯೇ, 50 ಕೋಟಿ ರೂಗಿಂತ ಕಡಿಮೆ ಇರುವ, ಆದರೆ 15ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆ ಇರುವ 59 ಯೋಜನೆಗಳಿಗೂ ಇಲಾಖೆ ಅಂಕಿತ ಹಾಕಿದೆ. 59 ಯೋಜನೆಗಳಿಂದ 1,542.88 ಕೋಟಿ ರೂ ಹೂಡಿಕೆ ಬರಲಿದ್ದು 6,984 ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಇಲಾಖೆ ನೀಡಿದ ಹೇಳಿಕೆಯಿಂದ ತಿಳಿದುಬಂದಿದೆ.

ಇದನ್ನೂ ಓದಿAdani: ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಕೈಬಿಟ್ಟ ಅದಾನಿ; ಭಾರತಕ್ಕೆ ಮುಂದುವರಿಯಲಿರುವ ಪಿವಿಸಿ ಆಮದು ತಲೆನೋವು

ಇನ್ನೆರಡು ಹಳೆಯ ಯೋಜನೆಗಳಿಗೆ ಹೆಚ್ಚುವರಿ ಹೂಡಿಕೆ ಪ್ರಸ್ತಾವಕ್ಕೆ ಇಲಾಖೆ ಒಪ್ಪಿ ಕೊಟ್ಟಿದೆ. ಇದರಿಂದ 203.15 ಕೋಟಿ ರೂ ಹೂಡಿಕೆ ಬರಲಿದೆ. ಹೆಚ್ಚು ಉದ್ಯೋಗಸೃಷ್ಟಿಯೂ ಆಗಬಹುದು.

ಜನವರಿ ತಿಂಗಳಲ್ಲಿ 59 ಯೋಜನೆಗಳಿಗೆ ಕೈಗಾರಿಕಾ ಇಲಾಖೆ ಅನುಮೋದನೆ

ಇದೇ ಜನವರಿ ಕೊನೆಯ ವಾರದಲ್ಲಿ 3,455.39 ಕೋಟಿ ರೂ ಮೊತ್ತದ 59 ಹೂಡಿಕೆ ಯೋಜನೆಗಳಿಗೆ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆ. ಈ ಯೋಜನೆಗಳಿಂದ 18 ಸಾವಿರಕ್ಕೂ ಹೆಚ್ಚು ಉದ್ಯೋಗಸೃಷ್ಟಿಯಾಗಬಹುದ ಎಂಬ ನಿರೀಕ್ಷೆ ಇದೆ. 59 ಯೋಜನೆಗಳ ಪೈಕಿ 11 ಯೋಜನೆಗಳು ಕನಿಷ್ಠ 50 ಕೋಟಿ ರೂ ಹೂಡಿಕೆ ಇರುವ ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳಾಗಿವೆ.

ಇದನ್ನೂ ಓದಿEconomic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

2023 ಜನವರಿ ತಿಂಗಳಲ್ಲಿ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಪಡೆದ ಸಂಸ್ಥೆಗಳಿವು:

  • ಮೈಸೂರ್ ಸ್ಟೀಲ್ ಲಿ, ಮೈಸೂರು
  • ಎನ್​ಐಡಿಇಸಿ ಇಂಡಸ್ಟ್ರಿಯಲ್ ಆಟೊಮೋಷನ್ ಇಂಡಿಯಾ ಪ್ರೈ ಲಿ, ಬೆಂಗಳೂರು
  • ಸಿಲೋನ್ ಬೆವರೇಜ್ ಕ್ಯಾನ್ ಪ್ರೈ ಲಿ, ಚೆನ್ನೈ
  • ಬಾಲಾಜಿ ವೇಫರ್ಸ್ ಪ್ರೈ ಲಿ, ಅಹ್ಮದಾಬಾದ್
  • ಮಂಜುಶ್ರೀ ಟೆಕ್ನೋಪಾರ್ಕ್ ಲಿ, ಬೆಂಗಳೂರು
  • ಕಸಿರೋಡಾ ಇಂಡಿಯನ್ ಪ್ರೈ ಲಿ, ಬೆಂಗಳೂರು
  • ಮಹಾಮಾನವ್ ಇಸ್ಪಾಟ್ ಪ್ರೈ ಲಿ, ಬಳ್ಳಾರಿ
  • ಎಸಿಆರ್ ಪ್ರಾಜೆಕ್ಟ್ಸ್, ಬೆಂಗಳೂರು
  • ನಿಯೋಬೀ ಸಲ್ಯೂಶನ್ ಪ್ರೈ ಲಿ, ಬೆಂಗಳೂರು
  • ಅಭಯ್ ಆಗ್ರೋ ಫೂಡ್ಸ್ ಪ್ರೈ ಲಿ, ಕೊಪ್ಪಳ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:50 am, Mon, 20 March 23

ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್