AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ

ಆಧಾರ್ ನೋಂದಣಿ ಹಾಗೂ ಅಪ್​ಡೇಟ್ ಸಲೀಸಾಗಿ ಆಗುವ ಉದ್ದೇಶದಿಂದ ಯುಐಡಿಎಐ ಆಧಾರ್​ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.

Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 02, 2021 | 1:27 PM

Share

ಆಧಾರ್ ಅಪ್​ಡೇಟ್ ಹಾಗೂ ನೋಂದಣಿಯನ್ನು ಇನ್ನಷ್ಟು ಸಲೀಸು ಮಾಡುವ ಉದ್ದೇಶದಿಂದ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದಿಂದ (UIDAI) ಇನ್ನಷ್ಟು ಸಂಖ್ಯೆಯಲ್ಲಿ ಆಧಾರ್​ಗಷ್ಟೇ ಮೀಸಲಾದ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಆಧಾರ್​ ನೋಂದಣಿ ಹಾಗೂ ಅಪ್​ಡೇಟ್​ಗಂತಲೇ ಮೀಸಲಾಗಿ ಇಡಲಾಗುತ್ತದೆ. ಭಾರತದ 122 ನಗರಗಳಲ್ಲಿ ಇಂಥ 166 ಕೇಂದ್ರಗಳನ್ನು ಆರಂಭಿಸುವುದಾಗಿ UIDAI ಘೋಷಿಸಿದೆ. ಇದರಿಂದಾಗಿ ಭಾರತೀಯ ನಾಗರಿಕರು ಹೊಸದಾಗಿ ಆಧಾರ್​ ಕಾರ್ಡ್​ಗೆ ಅಪ್ಲೈ ಮಾಡುವುದಕ್ಕೆ ಮತ್ತು ಈಗಾಗಲೇ ಇರುವ ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವುದಕ್ಕೆ ಸುಲಭ ಆಗುತ್ತದೆ.​ UIDAIನಿಂದ 55 ಸೇವಾ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇದು 166 ಕೇಂದ್ರಗಳ ಆರಂಭದ ಭಾಗವಾಗಿ ಶುರು ಮಾಡಲಾಗಿದೆ. ಈಗಾಗಲೇ ಬ್ಯಾಂಕ್​ಗಳು, ಪೋಸ್ಟ್​ ಆಫೀಸ್​ಗಳು ಮತ್ತು ರಾಜ್ಯ ಸರ್ಕಾರಗಳಿಂದ 52,000 ಆಧಾರ್​ ನೋಂದಣಿ ಕೇಂದ್ರಗಳನ್ನು ನಡೆಸಲಾಗುತ್ತದೆ. ಈ ಆಧಾರ್​ ಸೇವಾ ಕೇಂದ್ರಗಳನ್ನು (ASK) ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಈವರೆಗೆ ದಿವ್ಯಾಂಗ ವ್ಯಕ್ತಿಗಳೂ ಸೇರಿ 70 ಲಕ್ಷ ನಿವಾಸಿಗಳಿಗೆ ಸೇವೆ ನೀಡಲಾಗಿದೆ.

ಈ ಕೇಂದ್ರಗಳಲ್ಲಿ 1000 ಮಂದಿ ನೋಂದಣಿ ಮತ್ತು ಅಪ್​ಡೇಟ್ ಮಾಡುವಷ್ಟು ಸಾಮರ್ಥ್ಯ ಇರುವುದಕ್ಕೆ ಮಾಡೆಲ್-ಎ ಆಧಾರ್​ ಸೇವಾ ಕೇಂದ್ರಗಳು, 500ರ ತನಕ ಇರುವುದಕ್ಕೆ ಮಾಡೆಲ್ ಬಿ ಆಧಾರ್​ ಸೇವಾ ಕೇಂದ್ರ ಮತ್ತು 250 ನೋಂದಣಿ ಮತ್ತು ಅಪ್​ಡೇಟ್​ ಮನವಿ ಮಾಡುವುದಕ್ಕೆ ಮಾಡೆಲ್-ಸಿ ಆಧಾರ್​ ಸೇವಾ ಕೇಂದ್ರಗಳೆಂದು ವಿಭಜಿಸಲಾಗಿದೆ. ಈ ಸೇವಾ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರ ತನಕ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.

ಆಧಾರ್ ನೋಂದಣಿ ಉಚಿತವಾಗಿದ್ದು, ಉಳಿದಂತೆ ಹೆಸರು ಮತ್ತಿತರ ಬದಲಾವಣೆಗೆ 50 ರೂಪಾಯಿ ಬಯೋಮೆಟ್ರಿಕ್ ಅಪ್​ಡೇಟ್​ ಹಾಗೂ/ಅಥವಾ ಹೆಸರು ಮತ್ತಿತರ ಬದಲಾವಣೆಗಳಿಗೆ 100 ರೂಪಾಯಿ ವಿಧಿಸಲಾಗುತ್ತದೆ. ಆಧಾರ್​ ಸೇವಾ ಕೇಂದ್ರಗಳಿಗೆ ಆನ್​ಲೈನ್ ಅಪಾಯಿಂಟ್​ಮೆಂಟ್​ ವ್ಯವಸ್ಥೆ ಇದ್ದು, ಟೋಕನ್ ಮ್ಯಾನೇಜ್​ಮೆಂಟ್ ಸಿಸ್ಟಮ್​ ಇದೆ. ಇದು ನಿವಾಸಿಗಳಿಗೆ ಅಡೆ-ತಡೆ ಇಲ್ಲದ ನೋಂದಣಿ ಮಾಡುವುದಕ್ಕೆ ವಿವಿಧ ಹಂತಗಳಿಗೆ ಮಾರ್ಗದರ್ಶನ ನೀಡುತ್ತದೆ.

ಇದನ್ನೂ ಓದಿ: Aadhaar Authentication: ಆಧಾರ್​ ದೃಢೀಕರಣದ ದರ ಇಳಿಕೆ ಮಾಡಿದ ಸರ್ಕಾರ; ಇಲ್ಲಿದೆ ಸಂಪೂರ್ಣ ವಿವರ

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ