AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ

ಆಧಾರ್ ನೋಂದಣಿ ಹಾಗೂ ಅಪ್​ಡೇಟ್ ಸಲೀಸಾಗಿ ಆಗುವ ಉದ್ದೇಶದಿಂದ ಯುಐಡಿಎಐ ಆಧಾರ್​ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.

Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 02, 2021 | 1:27 PM

Share

ಆಧಾರ್ ಅಪ್​ಡೇಟ್ ಹಾಗೂ ನೋಂದಣಿಯನ್ನು ಇನ್ನಷ್ಟು ಸಲೀಸು ಮಾಡುವ ಉದ್ದೇಶದಿಂದ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದಿಂದ (UIDAI) ಇನ್ನಷ್ಟು ಸಂಖ್ಯೆಯಲ್ಲಿ ಆಧಾರ್​ಗಷ್ಟೇ ಮೀಸಲಾದ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಆಧಾರ್​ ನೋಂದಣಿ ಹಾಗೂ ಅಪ್​ಡೇಟ್​ಗಂತಲೇ ಮೀಸಲಾಗಿ ಇಡಲಾಗುತ್ತದೆ. ಭಾರತದ 122 ನಗರಗಳಲ್ಲಿ ಇಂಥ 166 ಕೇಂದ್ರಗಳನ್ನು ಆರಂಭಿಸುವುದಾಗಿ UIDAI ಘೋಷಿಸಿದೆ. ಇದರಿಂದಾಗಿ ಭಾರತೀಯ ನಾಗರಿಕರು ಹೊಸದಾಗಿ ಆಧಾರ್​ ಕಾರ್ಡ್​ಗೆ ಅಪ್ಲೈ ಮಾಡುವುದಕ್ಕೆ ಮತ್ತು ಈಗಾಗಲೇ ಇರುವ ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವುದಕ್ಕೆ ಸುಲಭ ಆಗುತ್ತದೆ.​ UIDAIನಿಂದ 55 ಸೇವಾ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇದು 166 ಕೇಂದ್ರಗಳ ಆರಂಭದ ಭಾಗವಾಗಿ ಶುರು ಮಾಡಲಾಗಿದೆ. ಈಗಾಗಲೇ ಬ್ಯಾಂಕ್​ಗಳು, ಪೋಸ್ಟ್​ ಆಫೀಸ್​ಗಳು ಮತ್ತು ರಾಜ್ಯ ಸರ್ಕಾರಗಳಿಂದ 52,000 ಆಧಾರ್​ ನೋಂದಣಿ ಕೇಂದ್ರಗಳನ್ನು ನಡೆಸಲಾಗುತ್ತದೆ. ಈ ಆಧಾರ್​ ಸೇವಾ ಕೇಂದ್ರಗಳನ್ನು (ASK) ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಈವರೆಗೆ ದಿವ್ಯಾಂಗ ವ್ಯಕ್ತಿಗಳೂ ಸೇರಿ 70 ಲಕ್ಷ ನಿವಾಸಿಗಳಿಗೆ ಸೇವೆ ನೀಡಲಾಗಿದೆ.

ಈ ಕೇಂದ್ರಗಳಲ್ಲಿ 1000 ಮಂದಿ ನೋಂದಣಿ ಮತ್ತು ಅಪ್​ಡೇಟ್ ಮಾಡುವಷ್ಟು ಸಾಮರ್ಥ್ಯ ಇರುವುದಕ್ಕೆ ಮಾಡೆಲ್-ಎ ಆಧಾರ್​ ಸೇವಾ ಕೇಂದ್ರಗಳು, 500ರ ತನಕ ಇರುವುದಕ್ಕೆ ಮಾಡೆಲ್ ಬಿ ಆಧಾರ್​ ಸೇವಾ ಕೇಂದ್ರ ಮತ್ತು 250 ನೋಂದಣಿ ಮತ್ತು ಅಪ್​ಡೇಟ್​ ಮನವಿ ಮಾಡುವುದಕ್ಕೆ ಮಾಡೆಲ್-ಸಿ ಆಧಾರ್​ ಸೇವಾ ಕೇಂದ್ರಗಳೆಂದು ವಿಭಜಿಸಲಾಗಿದೆ. ಈ ಸೇವಾ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರ ತನಕ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.

ಆಧಾರ್ ನೋಂದಣಿ ಉಚಿತವಾಗಿದ್ದು, ಉಳಿದಂತೆ ಹೆಸರು ಮತ್ತಿತರ ಬದಲಾವಣೆಗೆ 50 ರೂಪಾಯಿ ಬಯೋಮೆಟ್ರಿಕ್ ಅಪ್​ಡೇಟ್​ ಹಾಗೂ/ಅಥವಾ ಹೆಸರು ಮತ್ತಿತರ ಬದಲಾವಣೆಗಳಿಗೆ 100 ರೂಪಾಯಿ ವಿಧಿಸಲಾಗುತ್ತದೆ. ಆಧಾರ್​ ಸೇವಾ ಕೇಂದ್ರಗಳಿಗೆ ಆನ್​ಲೈನ್ ಅಪಾಯಿಂಟ್​ಮೆಂಟ್​ ವ್ಯವಸ್ಥೆ ಇದ್ದು, ಟೋಕನ್ ಮ್ಯಾನೇಜ್​ಮೆಂಟ್ ಸಿಸ್ಟಮ್​ ಇದೆ. ಇದು ನಿವಾಸಿಗಳಿಗೆ ಅಡೆ-ತಡೆ ಇಲ್ಲದ ನೋಂದಣಿ ಮಾಡುವುದಕ್ಕೆ ವಿವಿಧ ಹಂತಗಳಿಗೆ ಮಾರ್ಗದರ್ಶನ ನೀಡುತ್ತದೆ.

ಇದನ್ನೂ ಓದಿ: Aadhaar Authentication: ಆಧಾರ್​ ದೃಢೀಕರಣದ ದರ ಇಳಿಕೆ ಮಾಡಿದ ಸರ್ಕಾರ; ಇಲ್ಲಿದೆ ಸಂಪೂರ್ಣ ವಿವರ

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?