AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Accenture Employees Bonus: ಆಕ್ಸೆಂಚರ್​ನ 2 ಲಕ್ಷ ಸಿಬ್ಬಂದಿಗೆ ದೊರೆಯಲಿದೆ ಬೋನಸ್

ಆಕ್ಸೆಂಚರ್ ಕಂಪೆನಿಯಿಂದ ಸಿಬ್ಬಂದಿಗೆ ಬೋನಸ್ ನೀಡುವ ಘೋಷಣೆ ಮಾಡಲಾಗಿದೆ. ಇದರಿಂದ ಭಾರತದಲ್ಲಿನ 2 ಲಕ್ಷ ಸಿಬ್ಬಂದಿಗೆ ಅನುಕೂಲ ಆಗುತ್ತದೆ. ಒಂದು ವಾರಕ್ಕೆ ಸಮವಾದ ಮೂಲವೇತನ ಬೋನಸ್ ಆಗಿ ಉದ್ಯೋಗಿಗಳಿಗೆ ಸಿಗುತ್ತದೆ.

Accenture Employees Bonus: ಆಕ್ಸೆಂಚರ್​ನ 2 ಲಕ್ಷ ಸಿಬ್ಬಂದಿಗೆ ದೊರೆಯಲಿದೆ ಬೋನಸ್
ಸಾಂದರ್ಭಿಕ ಚಿತ್ರ
Srinivas Mata
|

Updated on:Mar 19, 2021 | 12:51 PM

Share

ಐಟಿ ಹಾಗೂ ವೃತ್ತಿಪರ ಸೇವೆಗಳನ್ನು ಒದಗಿಸುವ ಆಕ್ಸೆಂಚರ್ ಕಂಪೆನಿಯು ಆಯಾ ಸಿಬ್ಬಂದಿ ಮೂಲವೇತನದ ಒಂದು ವಾರದ ಮೊತ್ತವನ್ನು ಬೋನಸ್ ಆಗಿ ನೀಡಲಿದೆ ಎಂದು ಗುರುವಾರ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಸವಾಲು ಇರುವಾಗಲೂ ಒಂದು ಸಲದ ಈ ಬೋನಸ್ ವಿತರಣೆ ಮಾಡಲಾಗುತ್ತಿದೆ. ಉದ್ಯೋಗಿಗಳು ಕಂಪೆನಿಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಈ ಬೋನಸ್ ನೀಡಲಾಗುತ್ತಿದೆ. ಅಂದ ಹಾಗೆ ಭಾರತದಲ್ಲೇ ಆಕ್ಸೆಂಚರ್ ಕಂಪೆನಿಗೆ ಎರಡು ಲಕ್ಷ ಸಿಬ್ಬಂದಿ ಇದ್ದಾರೆ. ಫೆಬ್ರವರಿ 28, 2021ಕ್ಕೆ ಕೊನೆಯಾದ ಎರಡನೇ ತ್ರೈಮಾಸಿಕದಲ್ಲಿ ಆಕ್ಸೆಂಚರ್ ಕಂಪೆನಿಯು ಆದಾಯದಲ್ಲಿ ಶೇಕಡಾ 8ರಷ್ಟು ಬೆಳವಣಿಗೆ ಕಂಡು, 12.09 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು.

ಕಂಪೆನಿಯ ನಿವ್ವಳ ಆದಾಯವು ಎರಡನೇ ತ್ರೈಮಾಸಿಕದಲ್ಲಿ 1.46 ಬಿಲಿಯನ್ ಡಾಲರ್ ಆಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ 1.25 ಬಿಲಿಯನ್ ಡಾಲರ್ ನಿವ್ವಳ ಲಾಭ ಬಂದಿತ್ತು. “ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಿಂದ ಕೆಳಗಿರುವವರಿಗೆ ಕಂಪೆನಿಯಿಂದ ಒಂದು ವಾರಕ್ಕೆ ಸಮನಾಗುವ ಮೂಲವೇತನದಷ್ಟು ಬೋನಸ್ ಘೋಷಣೆ ಮಾಡಲಾಗಿದೆ. ಈ ಸವಾಲಿನ ವರ್ಷದಲ್ಲಿ ಗ್ರಾಹಕರಿಗೆ ಆಕ್ಸೆಂಚರ್ ಸಿಬ್ಬಂದಿ ತೋರಿದ ಬದ್ಧತೆ ಹಾಗೂ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿದೆ,” ಎಂದು ಹಣಕಾಸು ವರದಿಯಲ್ಲಿ ಕಂಪೆನಿಯು ಹೇಳಿದೆ.

ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದಲ್ಲಿ ಕಂಪೆನಿಯು ಹೊಸ ಬುಕ್ಕಿಂಗ್ 16 ಬಿಲಿಯನ್ ಯುಎಸ್​ಡಿ ತಲುಪುವ ಮೂಲಕ ಶೇ 13ರಷ್ಟು ಏರಿಕೆ ದಾಖಲಿಸಿದೆ. “2021ರ ಹಣಕಾಸು ವರ್ಷದಲ್ಲಿ ಕಂಪೆನಿಯು ಕಾರ್ಯನಿರ್ವಹಣೆ ನಗದು ಹರಿವು 7.65 ಬಿಲಿಯನ್​​ನಿಂದ 8.15 ಬಿಲಿಯನ್ ಯುಎಸ್​ಡಿ ನಿರೀಕ್ಷಿಸುತ್ತಿದೆ. ಈ ಹಿಂದೆ ಆ ಪ್ರಮಾಣ 6.65 ಬಿಲಿಯನ್ ಯುಎಸ್​ಡಿಯಿಂದ 7.15 ಬಿಲಿಯನ್ ಯುಎಸ್​ಡಿ ಇತ್ತು,” ಎಂದು ಆಕ್ಸೆಂಚರ್ ಹೇಳಿದೆ.

ಇದನ್ನೂ ಓದಿ: ಇನ್ಫೋಸಿಸ್ ಸಿಬ್ಬಂದಿ, ಹತ್ತಿರ ಸಂಬಂಧಿಗಳಿಗೆ ಕಂಪೆನಿಯೇ ಭರಿಸಲಿದೆ ಕೊರೊನಾ ಲಸಿಕೆ ವೆಚ್ಚ

Published On - 12:44 pm, Fri, 19 March 21

Follow Us
Srinivas Mata
Srinivas Mata
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?