AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು

ಉದ್ಯಮದ ಅಗತ್ಯಗಳಿಗೆ ಸಾಲ ಪಡೆಯುವುದು ಹೇಗೆ, ಯಾವ ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆ ಕಡಿಮೆ ಬಡ್ಡಿಗೆ ಬಿಜಿನೆಸ್ ಲೋನ್ ನೀಡುತ್ತಿವೆ ಎಂಬುದರ ವಿವರ ಈ ಲೇಖನದಲ್ಲಿ ಇದೆ.

Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Mar 19, 2021 | 3:09 PM

Share

ಉದ್ಯಮಗಳಿಗೆ ಹಣಕಾಸಿನ ಅಗತ್ಯ ಬಾರದೆ ಇರುವುದಕ್ಕೆ ಸಾಧ್ಯವಾ? ಹಲವು ಬ್ಯಾಂಕ್​ಗಳು ಯಾವುದೇ ಅಡಮಾನ ಇಟ್ಟುಕೊಳ್ಳದೆ (ಅನ್​ಸೆಕ್ಯೂರ್ಡ್) ಸಾಲ ನೀಡುತ್ತಿವೆ. ಹೊಸ ಪ್ರಾಜೆಕ್ಟ್ ಶುರು ಮಾಡುವುದಕ್ಕೆ, ಈಗಿರುವ ಉದ್ಯಮದ ವಿಸ್ತರಣೆಗೆ, ಹೊಸ ಸಲಕರಣೆ- ಸಾಧನಗಳ ಖರೀದಿಗೆ, ಕಚೇರಿ ಸ್ಥಳದ ಅಡ್ವಾನ್ಸ್ ಮತ್ತು ಇತರ ಯಾವುದೇ ಉದ್ದೇಶಕ್ಕೆ ಈ ಸಾಲದ ಹಣವನ್ನು ಬಳಸಿಕೊಳ್ಳಬಹುದು. ಆದರೆ ಸಾಲಕ್ಕೆ ಅರ್ಜಿ ಹಾಕಿಕೊಳ್ಳುವ ಮುನ್ನ ಬಡ್ಡಿ ದರ, ಮರುಪಾವತಿ ಅವಧಿ, ಪ್ರೊಸೆಸಿಂಗ್ ಫೀ ಇತರ ಸಂಗತಿಗಳ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳಬೇಕು.

ಇನ್ನು ಬ್ಯಾಂಕ್​ಗಳಿಂದ ಸಹ ಸಾಲ ಪಡೆಯುವವರ ಅರ್ಹತೆಯನ್ನು ನೋಡಿಯೋ ಹಣ ನೀಡಲಾಗುತ್ತದೆ. ನೀವು ಈಗಿನ್ನೂ ಉದ್ಯಮ ಆರಂಭಿಸಿದ್ದೀರಿ ಎಂದಾದಲ್ಲಿ ಸ್ವಲ್ಪ ಪ್ರಮಾಣದ ಸಾಲ ತೆಗೆದುಕೊಂಡು, ಅದನ್ನು ವಾಪಸ್ ಮಾಡಿ. ಹೀಗೆ ನಿಯಮಿತವಾಗಿ ಮಾಡುವ ಮೂಲಕ ಕ್ರೆಡಿಟ್ ಪ್ರೊಫೈಲ್ ರೂಪಿಸಿಕೊಳ್ಳಿ. ಮುಂದೆ ದೊಡ್ಡ ಪ್ರಮಾಣದಲ್ಲಿ ಸಾಲ ಬೇಕಾದಾಗ ಇದರಿಂದ ಸಹಾಯ ಆಗುತ್ತದೆ.

ನೀವು ಉದ್ಯಮಕ್ಕಾಗಿ ಸಾಲ ಪಡೆಯುವುದಕ್ಕೆ ತೆರಳಿದಾಗ ಮುಖ್ಯವಾಗುವ ಅಂಶಗಳು ಹೀಗಿವೆ: 1. ಕ್ರೆಡಿಟ್ ಸ್ಕೋರ್ 2. ಉದ್ಯಮದಲ್ಲಿ ನಿಮ್ಮ ಅನುಭವ 3. ವಾರ್ಷಿಕ ವಹಿವಾಟು 4. ಯಾವ ರೀತಿಯ ಸಾಲ (ಸೆಕ್ಯೂರ್ಡ್ ಅಥವಾ ಅನ್​ಸೆಕ್ಯೂರ್ಡ್) 5. ಬ್ಯಾಂಕ್​ನಿಂದ ಸಾಲ ಪಡೆಯುತ್ತಿದ್ದೀರೋ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯೋ?

ಉದ್ಯಮದ ಸಾಲ ಪಡೆಯಲು ಒದಗಿಸಬೇಕಾದ ದಾಖಲೆ ಮತ್ತು ಅರ್ಹತೆಗಳು 1. 25ರಿಂದ 55 ವರ್ಷದೊಳಗಿನವರನ್ನು ಸಾಲ ಪಡೆಯುವುದಕ್ಕೆ ಪರಿಗಣಿಸಲಾಗುತ್ತದೆ 2. ಕಳೆದ 1 ವರ್ಷದ ಆದಾಯ ತೆರಿಗೆ ರಿಟರ್ನ್ಸ್ 3. ಕಳೆದ ಮೂರು ವರ್ಷದ ಲೆಕ್ಕಪರಿಶೋಧನೆಯಾದ ಅಥವಾ ಪ್ರಾವಿಷನಲ್ ಲೆಕ್ಕಪತ್ರ 4. ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್​ಮೆಂಟ್ 5. ಪ್ರಸಕ್ತ ವರ್ಷದ ಸ್ಥಿತಿಗತಿ ಮತ್ತು ಅಂದಾಜು ವಹಿವಾಟು 6. ಏಕವ್ಯಕ್ತಿ ವ್ಯಾಪಾರಿ ಸಂಸ್ಥೆ ಆಗಿದ್ದಲ್ಲಿ ಆ ಬಗ್ಗೆ ಘೋಷಣಾ ಪತ್ರ ಅಥವಾ ಪಾಲುದಾರ ಸಂಸ್ಥೆಯಾಗಿದ್ದಲ್ಲಿ ಒಪ್ಪಂದ ಪತ್ರ 7. ಮೆಮೊರಂಡಂ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ದೃಢೀಕೃತ ನಕಲು 8. ಕಂಪೆನಿ, ಸಂಸ್ಥೆ ಅಥವಾ ವೈಯಕ್ತಿಕ ಪ್ಯಾನ್ ಕಾರ್ಡ್ 9. ಗುರುತು ದೃಢೀಕರಣ 10. ವಿಳಾಸ ದೃಢೀಕರಣ

ಗಮನಿಸಬೇಕಾದ ಇತರ ಮುಖ್ಯ ಅಂಶಗಳು: 1. ಅಡಮಾನ ಮಾಡಿ ಪಡೆಯುವ ಸೆಕ್ಯೂರ್ಡ್ ಸಾಲಕ್ಕೆ ಬಡ್ಡಿ ದರವು ಸ್ವಲ್ಪ ಕಡಿಮೆ ಇರುತ್ತದೆ. 2. ಯಾವುದೇ ಅಡಮಾನ ಇಲ್ಲದ ಸಾಲಕ್ಕೆ ಅನ್​ಸೆಕ್ಯೂರ್ಡ್ ಲೋನ್ ಎನ್ನಲಾಗುತ್ತದೆ. ಇಂಥ ಸನ್ನಿವೇಶದಲ್ಲಿ ಬ್ಯಾಂಕ್​ಗಳಿಗೆ ಅಪಾಯ ಜಾಸ್ತಿಯಾದ್ದರಿಂದ ಬಡ್ಡಿ ದರವೂ ಜಾಸ್ತಿ ಇರುತ್ತದೆ. 3. ಉದ್ಯಮದ ಸಾಲಕ್ಕೆ ಪ್ರೊಸೆಸಿಂಗ್ ಶುಲ್ಕ ಶೇಕಡಾ 2ರಿಂದ 6ರ ತನಕ ಮಂಜೂರು ಆಗುವ ಮೊತ್ತವನ್ನು ಅವಲಂಬಿಸುತ್ತದೆ. 4. ಬ್ಯಾಂಕ್​ಗಳು ಅಥವಾ ಹಣಕಾಸು ಸಂಸ್ಥೆಗಳು ಕೆಲವು ಕಂಪೆನಿಗಳಿಗೆ ಪ್ರೊಸೆಸಿಂಗ್ ಫೀ ಎಂದು ಒಂದಷ್ಟು ಶುಲ್ಕ ವಿಧಿಸುತ್ತವೆ. 5. ಬಡ್ಡಿ ದರ, ಪ್ರೊಸೆಸಿಂಗ್ ಫೀ, ಅವಧಿಪೂರ್ವ ಪಾವತಿ ಶುಲ್ಕ, ಕಾಗದಪತ್ರಗಳಿಗೆ ಶುಲ್ಕ, ಭಾಗಶಃ ಪಾವತಿಗೆ ಶುಲ್ಕ, ಪಾವತಿಯನ್ನು ತಪ್ಪಿಸಿದಾಗಿನ ಶುಲ್ಕ, ಉದ್ಯಮದ ಸಾಲದ ಮೇಲಿನ ಇತರ ಶುಲ್ಕವನ್ನು ಗಮನಿಸಬೇಕು. 6. ಬ್ಯಾಂಕ್​ಗಳು ಉದ್ಯಮಕ್ಕೆ ಅಗತ್ಯ ಇರುವ ಪೂರ್ಣ ಮೊತ್ತವನ್ನು ನೀಡುವುದಿಲ್ಲ. ಶೇಕಡಾ 10ರಿಂದ ಶೇ 30ರ ತನಕ ಹಣವನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಕಡಿಮೆ ಬಡ್ಡಿ ದರಕ್ಕೆ ಉದ್ಯಮಗಳಿಗೆ ಸಾಲ ಒದಗಿಸುವ ಬ್ಯಾಂಕ್​ಗಳ ಪಟ್ಟಿ 1. ಎಸ್​ಬಿಐ ಶೇ 11.20- ಶೇ 16.30 (ಎಂಸಿಎಲ್​ಆರ್​ಗೆ ಜೋಡಣೆಯಾದಂತೆ) 2. ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇ 14.50 ಮೇಲ್ಪಟ್ಟು 3. ಎಚ್​ಡಿಎಫ್​ಸಿ ಬ್ಯಾಂಕ್ ಶೇ 15ರಿಂದ ಶೇ 21.35 4. ಆಕ್ಸಿಸ್ ಬ್ಯಾಂಕ್ ಶೇ 15.5 ಮೇಲ್ಪಟ್ಟು 5. ಐಸಿಐಸಿಐ ಬ್ಯಾಂಕ್ ಶೇ 16 ಮೇಲ್ಪಟ್ಟು 6. ಕೊಟಕ್ ಬ್ಯಾಂಕ್ ಶೇ 16 7. ಕಾರ್ಪೊರೇಷನ್ ಬ್ಯಾಂಕ್ ಶೇ 13.55 ಮೇಲ್ಪಟ್ಟು 8. ಧನ್​ಲಕ್ಷ್ಮಿ ಬ್ಯಾಂಕ್ ಶೇ 12.90 ಮೇಲ್ಪಟ್ಟು 9. ಆರ್​ಬಿಎಲ್ ಬ್ಯಾಂಕ್ ಶೇ 16.25 10. ಇಂಡಸ್ ಇಂಡ್ ಬ್ಯಾಂಕ್ ಶೇ 14

ಇದನ್ನೂ ಓದಿ: Housing loan: ಶೇ 7ರೊಳಗೆ ಇಳಿಯಿತು ಈ ಬ್ಯಾಂಕ್​​ಗಳ ಗೃಹ ಸಾಲ ಬಡ್ಡಿ ದರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ