AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Jhunjhunwala: ಷೇರುಪೇಟೆ ವಹಿವಾಟಿನ ಆರಂಭದ 15 ನಿಮಿಷದಲ್ಲಿ ಜುಂಜುನ್​ವಾಲಾರ 900 ಕೋಟಿ ರೂಪಾಯಿ ಉಡೀಸ್

ಜೂನ್ 17ನೇ ತಾರೀಕಿನ ಸೋಮವಾರದ ಷೇರುಪೇಟೆಯ ಅರಂಭದ 15 ನಿಮಿಷದ ಸೆಷನ್​ನಲ್ಲಿ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ ಅವರು 900 ಕೋಟಿ ರೂಪಾಯಿ ನಿವ್ವಳ ಮೌಲ್ಯ ಕಳೆದುಕೊಂಡರು.

Rakesh Jhunjhunwala: ಷೇರುಪೇಟೆ ವಹಿವಾಟಿನ ಆರಂಭದ 15 ನಿಮಿಷದಲ್ಲಿ ಜುಂಜುನ್​ವಾಲಾರ 900 ಕೋಟಿ ರೂಪಾಯಿ ಉಡೀಸ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 17, 2022 | 2:13 PM

Share

ಷೇರುಪೇಟೆಯಲ್ಲಿ ಜೂನ್ 17ನೇ ತಾರೀಕಿನ ಶುಕ್ರವಾರ ಬೆಳಗಿನ ವ್ಯವಹಾರದಲ್ಲಿ ಸತತ ಆರನೇ ನೇರ ಸೆಷನ್‌ನಲ್ಲಿ ಮಾರಾಟದ ಟ್ರೆಂಡ್ ವಿಸ್ತರಣೆ ಆಗಿತ್ತು. ಈ ಮಧ್ಯೆ ಮಾರ್ಕೆಟ್​ನ ಬಿಗ್ ಬುಲ್ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಇಂದಿನ (ಶುಕ್ರವಾರ) ಆರಂಭಿಕ ವಹಿವಾಟಿನ 15 ನಿಮಿಷಗಳಲ್ಲಿ ಸುಮಾರು 900 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಟೈಟಾನ್ ಕಂಪೆನಿ, ಮೆಟ್ರೋ ಬ್ರಾಂಡ್ಸ್ ಮತ್ತು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ನಷ್ಟ ಕಂಡವು.

ಟೈಟಾನ್ ಷೇರು ಬೆಲೆಯಲ್ಲಿ ಕುಸಿತ

ಟೈಟಾನ್ ಕಂಪೆನಿಯ ಷೇರಿನ ಬೆಲೆ ಇಂದು ಕಡಿಮೆ ಮಟ್ಟದಿಂದ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30ರ ಹೊತ್ತಿಗೆ ರೂ. 1997ರ ಹಂತವನ್ನು ತಲುಪಿತು. ಎನ್​ಎಸ್​ಇಯಲ್ಲಿ ಅದರ ಗುರುವಾರದ ಮಟ್ಟ ರೂ. 2060.95ರಿಂದ ಪ್ರತಿ ಷೇರಿಗೆ ರೂ. 63.95 ಕುಸಿತವನ್ನು ದಾಖಲಿಸಿತು.

ಸ್ಟಾರ್ ಹೆಲ್ತ್ ಷೇರು ಬೆಲೆಯಲ್ಲಿ ಇಳಿಕೆ

ಸ್ಟಾರ್ ಹೆಲ್ತ್ ಷೇರಿನ ಬೆಲೆ ಇಂದು ಕುಸಿತದಿಂದಲೇ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30ರ ಹೊತ್ತಿಗೆ ರೂ. 609.05ಕ್ಕೆ ತಲುಪಿತು. ಗುರುವಾರದಂದು ಈ ಸ್ಟಾಕ್ ರೂ. 664.15 ಮಟ್ಟದಲ್ಲಿ ಮುಕ್ತಾಯಗೊಂಡಿದ್ದರಿಂದ ಇಂದು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ರೂ. 55.10 ಕುಸಿತ ಕಂಡಿದೆ.

ಮೆಟ್ರೋ ಬ್ರಾಂಡ್‌ಗಳ ಷೇರು ಬೆಲೆಯಲ್ಲಿ ನಷ್ಟ

ರಾಕೇಶ್ ಜುಂಜುನ್‌ವಾಲಾರ ಇತರ ಎರಡು ಸ್ಟಾಕ್‌ಗಳಂತೆ ಇಂದು ಮೆಟ್ರೋ ಬ್ರಾಂಡ್‌ಗಳ ಷೇರು ಕಡಿಮೆ ಅಂತರದೊಂದಿಗೆ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30 ರ ಹೊತ್ತಿಗೆ ರೂ. 535.35 ಕ್ಕೆ ತಲುಪಿತು. ಆರಂಭಿಕ ಗಂಟೆಯ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 14.30 ಇಳಿಕೆ ಆಯಿತು.

ರಾಕೇಶ್ ಜುಂಜುನ್​ವಾಲಾ ನಿವ್ವಳ ಮೌಲ್ಯದಲ್ಲಿ ಕುಸಿತ

2022ರ ಹಣಕಾಸು ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಟೈಟಾನ್ ಕಂಪೆನಿಯ ಷೇರುದಾರರ ಮಾದರಿ ಪ್ರಕಾರ, ರಾಕೇಶ್ ಜುಂಜುನ್‌ವಾಲಾ 3,53,10,395 ಕಂಪೆನಿ ಷೇರುಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ ರೇಖಾ ಜುಂಜುನ್‌ವಾಲಾ 95,40,575 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಆದ್ದರಿಂದ ಜುಂಜುನ್​ವಾಲಾ ದಂಪತಿ ಒಟ್ಟಾಗಿ 4,48,50,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಇಂದು ಸ್ಟಾಕ್ ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಟೈಟಾನ್ ಷೇರಿನ ಬೆಲೆ 63.95 ಕುಸಿದಿದ್ದು, ಈ ಟಾಟಾ ಸ್ಟಾಕ್‌ನಲ್ಲಿನ ಕುಸಿತದಿಂದಾಗಿ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಸುಮಾರು ರೂ. 287 ಕೋಟಿ (ರೂ. 63.95 x 4,48,50,970) ಕಡಿಮೆ ಆಯಿತು.

ಅದೇ ರೀತಿ ರಾಕೇಶ್ ಜುಂಜುನ್‌ವಾಲಾ ಅವರು 10,07,53,935 ಸ್ಟಾರ್ ಹೆಲ್ತ್ ಷೇರುಗಳನ್ನು ಹೊಂದಿದ್ದಾರೆ. ಅದು ಇಂದು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 55.10 ಕುಸಿದಿದೆ. ಆದ್ದರಿಂದ ರಾಕೇಶ್ ಜುಂಜುನ್‌ವಾಲಾ ಪೋರ್ಟ್‌ಫೋಲಿಯೊದ ಈ ಸ್ಟಾಕ್‌ನಲ್ಲಿನ ಕುಸಿತದಿಂದಾಗಿ ನಿವ್ವಳ ಮೌಲ್ಯವು ಸುಮಾರು ರೂ. 555 ಕೋಟಿ (₹55.10 x 10,07,53,935) ಕುಸಿದಿದೆ.

ರಾಕೇಶ್ ಜುಂಜುನ್‌ವಾಲಾ ಅವರು ತಮ್ಮ ಹೆಂಡತಿ ರೇಖಾ ಜುಂಜುನ್‌ವಾಲಾ ಮೂಲಕ ಮೆಟ್ರೋ ಬ್ರಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಜನವರಿಯಿಂದ ಮಾರ್ಚ್ 2022ರ ತ್ರೈಮಾಸಿಕಕ್ಕೆ ಮೆಟ್ರೋ ಬ್ರಾಂಡ್‌ಗಳ ಷೇರುದಾರರ ಮಾದರಿಯ ಪ್ರಕಾರ, ರೇಖಾ ಜುಂಜುನ್‌ವಾಲಾ ಕಂಪೆನಿಯ 3,91,53,600 ಷೇರುಗಳನ್ನು ಹೊಂದಿದ್ದಾರೆ. ಅದು ಇಂದು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 14.30 ಕುಸಿದಿದೆ. ಆದ್ದರಿಂದ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ರೂ. 56 ಕೋಟಿ (ರೂ. 14.30 x 3,91,53,600) ಕರಗಿತು.

ಹೀಗೆ ಟೈಟಾನ್ ಕಂಪೆನಿ, ಸ್ಟಾರ್ ಹೆಲ್ತ್ ಮತ್ತು ಮೆಟ್ರೋ ಬ್ರಾಂಡ್‌ಗಳ ಷೇರುಗಳನ್ನು ಇಂದಿನ ಮಾರಾಟ ಒತ್ತಡದಲ್ಲಿ ರಾಕೇಶ್ ಜುಂಜುನ್‌ವಾಲಾ ಅವರು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಸುಮಾರು ರೂ. 900 ಕೋಟಿ ಕಳೆದುಕೊಂಡರು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rakesh Jhunjhunwala: 70 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಎದ್ದು ನಿಲ್ಲಲಿದೆ ಬಿಲಿಯನೇರ್​ ರಾಕೇಶ್​ ಜುಂಜುನ್​ವಾಲಾ ಒಡೆತನದ 13 ಅಂತಸ್ತಿನ ಕಟ್ಟಡ

Follow Us
TV9 Web
TV9 Web

TV9 Kannada

Read More
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ