AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iPhone 12: ಆಪಲ್ ಐಫೋನ್​ ಖರೀದಿಗೆ ಪುಕ್ಕಟೆ ಏರ್​ಪಾಡ್ಸ್ ಅಥವಾ ಏರ್​ಪಾಡ್ಸ್​ ಪ್ರೊಗೆ ಭಾರೀ ರಿಯಾಯಿತಿ

ಆಪಲ್ ಕಂಪೆನಿಯ ಐಫೋನ್ 12 ಹಾಗೂ 12 ಮಿನಿ ಮೇಲೆ ಭಾರೀ ಡಿಸ್ಕಾಂಟ್ ಘೋಷಣೆ ಮಾಡಲಾಗಿದೆ. ಏನು ಆ ಹೊಸ ಆಫರ್ ಎಂಬುದುರ ಬಗ್ಗೆ ವಿವರ ಇಲ್ಲಿದೆ.

Apple iPhone 12: ಆಪಲ್ ಐಫೋನ್​ ಖರೀದಿಗೆ ಪುಕ್ಕಟೆ ಏರ್​ಪಾಡ್ಸ್ ಅಥವಾ ಏರ್​ಪಾಡ್ಸ್​ ಪ್ರೊಗೆ ಭಾರೀ ರಿಯಾಯಿತಿ
ಆಪ ಐಫೋನ್
TV9 Web
| Updated By: Srinivas Mata|

Updated on: Oct 09, 2021 | 4:37 PM

Share

ಆಪಲ್​ನಿಂದ ಕಳೆದ ವರ್ಷದ ಐಫೋನ್ 12ರ ಮೇಲೆ ವಿಶೇಷ ದೀಪಾವಳಿ ಆಫರ್ ಘೋಷಣೆ ಮಾಡಲಾಗಿದೆ. ಐಫೋನ್ 12 ಮತ್ತು ಐಫೋನ್ 12 ಮಿನಿ ಖರೀದಿದಾರರು ಈ ಆಫರ್​ಗೆ ಅರ್ಹರು. ಆಪಲ್ ಐಫೋನ್ 12 ಮತ್ತು ಐಫೋನ್ 12 ಮಿನಿ ಖರೀದಿ ಜತೆಗೆ ಏರ್​​ಪಾಡ್​ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಂಪೆನಿಯ ಅಧಿಕೃತ ವೆಬ್​ಸೈಟ್​ ಮೂಲಕವಾಗಿ ಆಪಲ್​ ಖರೀದಿದಾರರು ಈ ಹೊಸ ಆಫರ್ ಪಡೆಯಬಹುದು. ಐಫೋನ್ 12ರ ಪುಟಕ್ಕೆ ತೆರಳಿ ತಮ್ಮ ಆಯ್ಕೆಯ, ಅಂದರೆ 64GB, 128GB ಅಥವಾ 256GB ಪೈಕಿ ಒಂದನ್ನು ಹಾಗೂ ಅದೇ ರೀತಿ ಆರು ಬಣ್ಣಗಳಲ್ಲಿ (ನೇರಳೆ, ನೀಲಿ, ಹಸಿರು, ಬಿಳಿ, ಕಪ್ಪು ಮತ್ತು ಕೆಂಪು) ಈ ಪೈಕಿ ಒಂದನ್ನು ಆರಿಸಿಕೊಳ್ಳಬೇಕು.

ಹೀಗೆ ಆಯ್ಕೆ ಮಾಡಿದ ಮೇಲೆ Continue ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಆ ನಂತರ ತೆರೆದುಕೊಳ್ಳುವ ಪುಟದಲ್ಲಿ ತಮ್ಮ ಆಯ್ಕೆಯ ಆಫರ್​ ಅನ್ನು ಆರಿಸಿಕೊಳ್ಳಬಹುದು. ಮೊದಲನೆಯದು, ಏರ್​ಪಾಡ್ಸ್ ಹಾಗೂ ಜತೆಗೆ ಚಾರ್ಜಿಂಗ್ ಕೇಸ್. ಇದಕ್ಕೆ ಖರೀದಿದಾರರು ಏನನ್ನೂ ಪಾವತಿಸುವ ಅಗತ್ಯ ಇಲ್ಲ. ಎರಡನೆಯದು, ಏರ್​ಪಾಡ್ಸ್ ಜತೆಗೆ ವಯರ್​ಲೆಸ್ ಚಾರ್ಜಿಂಗ್. ಇದಕ್ಕಾಗಿ ಖರೀದಿದಾರರು 4000 ರೂಪಾಯಿ ಪಾವತಿಸಬೇಕು. ಇನ್ನು ಏರ್​ಪಾಡ್ಸ್ ಪ್ರೊಗಾಗಿ ಖರೀದಿಯ ಸಂದರ್ಭದಲ್ಲಿ ಹೆಚ್ಚುವರಿಯಾಗಿ 10,000 ರೂಪಾಯಿ ಕೊಡಬೇಕಾಗುತ್ತದೆ. ಅಂತಿಮ ಹಂತವು ಖರೀದಿಸಿದ ಉತ್ಪನ್ನಗಳಿಗೆ ಪಾವತಿ ಮಾಡುವುದಾಗಿದೆ.

ಆಪಲ್ ಐಫೋನ್ 12 ಅನ್ನು ಫ್ಲಿಪ್​ಕಾರ್ಟ್​ನಲ್ಲಿ ರಿಯಾಯಿತಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಭಾರೀ ದರ ಕಡಿತವನ್ನು ಮಾಡಲಾಗಿದೆ. 64GBಯ ಫೋನ್​ಗೆ 52,999 ರೂಪಾಯಿ ಇದ್ದರೆ, 128GB ಫೋನ್ 57,999ಕ್ಕೆ ಮಾರಲಾಗುತ್ತಿದೆ. ಇದರ ಜತೆಗೆ ಫ್ಲಿಪ್​ಕಾರ್ಟ್​ನಿಂದ ವಿನಿಮಯ ಮೌಲ್ಯ ರೂ. 15,600ರ ತನಕ ಆಫರ್​ ಮಾಡಲಾಗುತ್ತಿದೆ. ಕ್ಯಾಶ್​ಬ್ಯಾApfmಕ್​ ಕೂಡ ಸಿಗುತ್ತಿರುವುದರಿಂದ ಮತ್ತಷ್ಟು ಬೆಲೆ ಕಡಿತದ ಆಯ್ಕೆಗಳಿವೆ. ​

ಇದನ್ನೂ ಓದಿ:Apple iPhone 13: ಆಪಲ್​ ಐಫೋನ್​ 13 ಖರೀದಿಸಲು ಯಾವ ದೇಶದ ಜನ ಎಷ್ಟು ಸಮಯ ದುಡಿಯಬೇಕು ಗೊತ್ತಾ?

ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ