AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ; 2 ದಿನ ಮಾತ್ರ ಬ್ಯಾಂಕ್‌ ಓಪನ್- ಗಮನಿಸಿ

ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಆದ್ದರಿಂದ ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರಲಿದೆ. ಹೀಗಾಗಿ ಒಟ್ಟಾರೆ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ.

Bank Holidays: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ; 2 ದಿನ ಮಾತ್ರ ಬ್ಯಾಂಕ್‌ ಓಪನ್- ಗಮನಿಸಿ
Bank Holidays
TV9 Web
| Updated By: ganapathi bhat|

Updated on:Mar 23, 2022 | 9:22 AM

Share

ಬೆಂಗಳೂರು: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ವಾರದಲ್ಲಿ 2 ದಿನ ಮಾತ್ರ ಬ್ಯಾಂಕ್‌ಗಳು ಓಪನ್ ಇರಲಿದೆ. ಮಾರ್ಚ್ 27 ರಿಂದ 29ರ ವರೆಗೆ ಬ್ಯಾಂಕ್ ನೌಕರರ ಮುಷ್ಕರ ಇರಲಿದೆ. ಹೀಗಾಗಿ ಸೋಮವಾರ, ಮಂಗಳವಾರ ಬ್ಯಾಂಕ್ ಕ್ಲೋಸ್ ಆಗಿರಲಿದೆ. ನಡುವೆ ಮಾರ್ಚ್ 30 ಮತ್ತು 31 ರಂದು ಬ್ಯಾಂಕ್ ಓಪನ್ ಇರಲಿದೆ. ಬಳಿಕ ಮತ್ತೆ ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಹಿನ್ನೆಲೆ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಆದ್ದರಿಂದ ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರಲಿದೆ. ಹೀಗಾಗಿ ಒಟ್ಟಾರೆ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ.

ಬ್ಯಾಂಕ್ ಸೇವೆಗಳು ಜನಸಾಮಾನ್ಯರಿಗೆ ಅತಿ ಮುಖ್ಯವಾಗಿ ಇರುತ್ತದೆ. ಹಣ ಪಡೆದುಕೊಳ್ಳಲು, ಕಳುಹಿಸಲು, ಸಾಲ, ಇತರ ವ್ಯವಹಾರ ನಡೆಸಲು ಬ್ಯಾಂಕ್ ಸೇವೆ ಅಗತ್ಯ ಇರುತ್ತದೆ. ಈ ಮಧ್ಯೆ, ಸಾಲು ಸಾಲು ಬ್ಯಾಂಕ್ ರಜೆ ಇರುವುದರಿಂದ ತುರ್ತು ಕೆಲಸಗಳನ್ನು ಶೀಘ್ರ ಪೂರೈಸುವುದು ಒಳ್ಳೆಯದು. ಮುಂದಿನ ವಾರ ಎರಡು ದಿನ ಮಾತ್ರವೇ ಬ್ಯಾಂಕ್ ಓಪನ್ ಇರುವುದರಿಂದ ಈಗಲೇ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಮತ್ತು ಮುಂದಿನ ವಾರಕ್ಕೆ ಬ್ಯಾಂಕ್ ಕೆಲಸಗಳನ್ನು ಉಳಿಸದೇ ಇರಬಹುದು.

ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಬ್ಯಾಂಕ್ ಕಚೇರಿಗೆ ರಜೆ ಇದ್ದರೂ ಆನ್​ಲೈನ್ ಸೇವೆಗಳ ಮೂಲಕ ಬ್ಯಾಂಕ್ ಕೆಲಸಗಳನ್ನು ಮಾಡಬಹುದು. ಡಿಜಿಟಲ್ ವಿಧಾನದಲ್ಲಿ ನೆಟ್ ಬ್ಯಾಂಕಿಂಗ್ ಸೇವೆಯನ್ನು ನಡೆಸಬಹುದು. ಈ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದು ಅಗತ್ಯ. ಬ್ಯಾಂಕ್​ಗೆ ಹೋಗದೆ, ಫಾರ್ಮ್ ತುಂಬಿಸದೆ ಕೇವಲ ನೆಟ್ ಬ್ಯಾಂಕಿಂಗ್ ಮೂಲಕವೂ ಈಗ ಕೆಲಸ ಪೂರೈಸಬಹುದು. ಅದಕ್ಕೆ ಬ್ಯಾಂಕ್ ರಜೆಗಳು ಸಮಸ್ಯೆ ಆಗುವುದಿಲ್ಲ.

2022ರ ಮಾರ್ಚ್​ನ ಬ್ಯಾಂಕ್ ರಜಾದಿನಗಳ ವಿಸ್ತೃತ ಪಟ್ಟಿ ಹೀಗಿದೆ:

ಮಹಾಶಿವರಾತ್ರಿ (ಮಹಾ ವದ್-14): ಮಾರ್ಚ್ 1

ಲೋಸರ್: ಮಾರ್ಚ್ 3

ಚಪ್ಚರ್ ಕುಟ್: ಮಾರ್ಚ್ 4

ಹೋಲಿಕಾ ದಹನ್: ಮಾರ್ಚ್ 17

ಹೋಳಿ/ಹೋಳಿ ಎರಡನೇ ದಿನ – ಧುಲೇಟಿ/ಡೋಲ್​ಜಾತ್ರಾ: ಮಾರ್ಚ್ 18

ಹೋಳಿ/ಯೋಸಾಂಗ್ 2ನೇ ದಿನ: ಮಾರ್ಚ್ 19

ಬಿಹಾರ ದಿವಸ್: ಮಾರ್ಚ್ 22

ಆರ್​ಬಿಐ ತಿಳಿಸಿದ ಮೇಲಿನ ರಜಾದಿನಗಳನ್ನು ಹೊರತುಪಡಿಸಿ ವಾರಾಂತ್ಯಗಳಲ್ಲಿ ಬ್ಯಾಂಕ್​ಗಳು ಮುಚ್ಚುತ್ತವೆ.

ಭಾನುವಾರ: ಮಾರ್ಚ್ 6

ಎರಡನೇ ಶನಿವಾರ: ಮಾರ್ಚ್ 12

ಭಾನುವಾರ: ಮಾರ್ಚ್ 13

ಭಾನುವಾರ: ಮಾರ್ಚ್ 20

ನಾಲ್ಕನೇ ಶನಿವಾರ: ಮಾರ್ಚ್ 26

ಭಾನುವಾರ: ಮಾರ್ಚ್ 27

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರಜಾದಿನಗಳನ್ನು ಮೂರು ಬ್ರಾಕೆಟ್​ಗಳ ಅಡಿಯಲ್ಲಿ ಇರಿಸುತ್ತದೆ – ನೆಗೋಷಿಯೇಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜಾದಿನ; ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ; ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು. ಆದರೂ ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತವೆ ಮತ್ತು ಎಲ್ಲ ಬ್ಯಾಂಕಿಂಗ್ ಕಂಪೆನಿಗಳು ವಿವಿಧ ರಾಜ್ಯಗಳಲ್ಲಿ ಅನುಸರಿಸುವುದಿಲ್ಲ ಎಂದು ಗಮನಿಸಬೇಕು. ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Axis Bank FD Interest Rate: ಮಾರ್ಚ್​ 21ರಿಂದ ಅನ್ವಯಿಸುವಂತೆ ಆಕ್ಸಿಸ್​ ಬ್ಯಾಂಕ್​ ಎಫ್​ಡಿ ಬಡ್ಡಿ ದರ ಪರಿಷ್ಕರಣೆ

ಇದನ್ನೂ ಓದಿ: State Bank Of India: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಶ್ರೀಲಂಕಾಗೆ 7613 ಕೋಟಿ ರೂಪಾಯಿ ಸಾಲ

Published On - 9:21 am, Wed, 23 March 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್