AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI YONO Account: ಪ್ಯಾನ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆಯೇ?

‘ಪ್ಯಾನ್ ಕಾರ್ಡ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆ. ಎಸ್​ಬಿಐ ಯೊನೊ ಖಾತೆಯನ್ನು ಮರಳಿ ಆ್ಯಕ್ಟಿವೇಟ್ ಮಾಡಲು ಪ್ಯಾನ್ ವಿವರಗಳನ್ನು ಅಪ್​ಡೇಟ್ ಮಾಡಿ’ ಎಂಬ ಸಂದೇಶ ಇತ್ತೀಚೆಗೆ ಅನೇಕರ ಮೊಬೈಲ್​ಗೆ ಬಂದಿತ್ತು.

SBI YONO Account: ಪ್ಯಾನ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆಯೇ?
ಎಸ್​ಬಿಐ ಯೊನೊ ಖಾತೆಗೆ ಸಂಬಂಧಿಸಿದ ಸುಳ್ಳು ಮಾಹಿತಿಯಿಂದ ಕೂಡಿದ ಸಂದೇಶ (ಕೃಪೆ; ಪಿಐಬಿ ಫ್ಯಾಕ್ಟ್​ಚೆಕ್)
TV9 Web
| Edited By: |

Updated on: Dec 21, 2022 | 11:58 AM

Share

ನವದೆಹಲಿ: ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಹಾಕಲು (Banking Frauds) ಇತ್ತೀಚಿನ ದಿನಗಳಲ್ಲಿ ವಂಚಕರು ಆನ್​ಲೈನ್ ತಾಣಗಳ (Online Frauds) ಮೂಲಕ ಹೊಸ ಹೊಸ ಹಾದಿಗಳನ್ನು ಹುಡುಕುತ್ತಿರುತ್ತಾರೆ. ಎಸ್​ಬಿಐ ಯೊನೊ ಖಾತೆಗೆ (SBI YONO Account) ಸಂಬಂಧಿಸಿದ ಸಂದೇಶವೊಂದು ಇತ್ತೀಚೆಗೆ ಹರಿದಾಡಿದ್ದು, ಅದು ಸುಳ್ಳು ಮಾಹಿತಿ ಎಂಬುದನ್ನು ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ತಾಣ ‘ಪಿಐಬಿ ಫ್ಯಾಕ್ಟ್​ಚೆಕ್’ ಬಯಲಿಗೆಳೆದಿದೆ. ಸುಳ್ಳು ಹಾಗೂ ನಕಲಿ ಸಂದೇಶಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ಅಪರಿಚಿತ ಮೂಲಗಳಿಂದ ಬಂದ ಸಂದೇಶಗಳನ್ನು ನಂಬಬಾರದು ಮತ್ತು ಲಿಂಕ್​ಗಳನ್ನು ಕ್ಲಿಕ್​ ಮಾಡಬಾರದು. ಇದರಿಂದ ಹಣ ಕಳೆದುಕೊಳ್ಳುವ ಅಪಾಯವಿದೆ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ಎಚ್ಚರಿಕೆ ನೀಡಿದೆ.

‘ಪ್ಯಾನ್ ಕಾರ್ಡ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆ. ಎಸ್​ಬಿಐ ಯೊನೊ ಖಾತೆಯನ್ನು ಮರಳಿ ಆ್ಯಕ್ಟಿವೇಟ್ ಮಾಡಲು ಪ್ಯಾನ್ ವಿವರಗಳನ್ನು ಅಪ್​ಡೇಟ್ ಮಾಡಿ’ ಎಂಬ ಸಂದೇಶ ಇತ್ತೀಚೆಗೆ ಅನೇಕರ ಮೊಬೈಲ್​ಗೆ ಬಂದಿತ್ತು. ಇದು ಸುಳ್ಳು ಸಂದೇಶ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ತಿಳಿಸಿದೆ. ಇಂಥ ಸ್ಕ್ಯಾಮ್ ಲಿಂಕ್​ಗಳನ್ನು ಕ್ಲಿಕ್ ಮಾಡುವುದರಿಂದ ಬ್ಯಾಂಕ್ ಖಾತೆಯಿಂದ ಹಣ ಕಳವಾಗಬಹುದು. ವೈಯಕ್ತಿಕ ದತ್ತಾಂಶಗಳೂ ಸೋರಿಕೆಯಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

‘ಯೊನೊ ಖಾತೆ ಬ್ಲಾಕ್ ಆಗಿದೆ ಎಂಬ ಸಂದೇಶ ಎಸ್​ಬಿಐ ಕಚೇರಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಬರುತ್ತದೆ. ಇ-ಮೇಲ್ ಅಥವಾ ಎಸ್​ಎಂಎಸ್ ಮೂಲಕ ಇಂಥ ಸಂದೇಶದ ಬಂದಲ್ಲಿ ಪ್ರತಿಕ್ರಿಯಿಸಬೇಡಿ. ಬ್ಯಾಂಕಿಂಗ್ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಇಂಥ ಸಂದೇಶ ನಿಮಗೆ ಬಂದಲ್ಲಿ ತಕ್ಷಣವೇ report.phishing@sbi.co.in ಗೆ ಮೇಲ್ ಮಾಡಿ’ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ಸಲಹೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ