Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಸುರಕ್ಷಿತವಾಗಿ ಆನ್​ಲೈನ್ ವಹಿವಾಟನ್ನು ನಡೆಸಬಹುದು. ಆನ್​ಲೈನ್ ಶಾಪಿಂಗ್ ಅಥವಾ ವಹಿವಾಟು ನಡೆಸುವ ವೇಳೆ ವಹಿಸಿವೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Dec 14, 2022 | 9:30 AM

ಜನರು ಆನ್‌ಲೈನ್ ಶಾಪಿಂಗ್‌ (Online Shopping) ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಂತೆಯೇ ವಂಚಕರೂ ಆನ್​ಲೈನ್ ತಾಣಗಳ ಮೂಲಕ ಹೊಸ ವಿಧಾನಗಳೊಂದಿಗೆ ಮೋಸಗೊಳಿಸಲು (Online Frauds) ಹೊಂಚುಹಾಕುತ್ತಿರುತ್ತಾರೆ. ವೈಯಕ್ತಿಕ ಮಾಹಿತಿ ಕಳವು ಹಾಗೂ ಇನ್ನಿತರ ಹಲವು ವಿಧಾನಗಳನ್ನು ಬಳಸಿಕೊಂಡು ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಾರೆ. ಹಾಗೆಂದು ಇವುಗಳಿಗೆ ಹೆದರಿ ಆನ್​ಲೈನ್ ವಹಿವಾಟು ಅಥವಾ ಶಾಪಿಂಗ್​ ಅನ್ನೇ ನಿಲ್ಲಿಸುವುದು ಸರಿಯಾದ ಕ್ರಮವಾಗದು. ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಸುರಕ್ಷಿತವಾಗಿ ಆನ್​ಲೈನ್ ವಹಿವಾಟನ್ನು ನಡೆಸಬಹುದು.

ಬಯೋಮೆಟ್ರಿಕ್ ಲಾಗಿನ್​ಗೆ ಆದ್ಯತೆ ನೀಡಿ

ಪಾಸ್​ವರ್ಡ್​​ಗಳನ್ನು ಬಳಸಿ ವಹಿವಾಟು ನಡೆಸುವ ಬದಲು ಬಯೋಮೆಟ್ರಿಕ್ ಆಧಾರಿತ ವ್ಯವಹಾರ ನಡೆಸುವುದು ಒಳ್ಳೆಯದು ಎಂದಿದ್ದಾರೆ ಸೈಬರ್ ಭದ್ರತೆ ತಜ್ಞರು. ಪಾಸ್​ವರ್ಡ್​​ಗಳನ್ನು ಹ್ಯಾಕ್ ಮಾಡುವುದು ಸುಲಭ. ಪದೇ ಪದೇ ಪಾಸ್​ವರ್ಡ್ ಬದಲಾಯಿಸಿಕೊಂಡು ಕಷ್ಟಪಡುವ ಬದಲು ಬಯೋಮೆಟ್ರಿಕ್ ಮತ್ತು ಇ-ಸಿಗ್ನೇಚರ್​ನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಗ್ರಾಹಕರಿಗೆ ರಿಯಲ್​ಟೈಂ ರಕ್ಷಣೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪಾಸ್‌ವರ್ಡ್​​ ದೃಢೀಕರಣಕ್ಕೆ ಕಡಿಮೆ ಆದ್ಯತೆ ನೀಡಲು ಬ್ಯಾಂಕುಗಳು ಆದ್ಯತೆ ನೀಡಬೇಕಾದ ಸಮಯವಿದು ಎಂದು ಅವರು ಹೇಳಿದ್ದಾರೆ.

ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ದುಕೊಳ್ಳಿ

ಆನ್​ಲೈನ್ ವಹಿವಾಟಿಗೆ ಬಹು ಅಂಶ ದೃಢೀಕರಣ ಅಥವಾ ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ಕೆಯನ್ನು ಬ್ಯಾಂಕ್​ಗಳು ಗ್ರಾಹಕರಿಗೆ ಹೆಚ್ಚೆಚ್ಚು ನೀಡಬೇಕಿದೆ. ಗ್ರಾಹಕರೂ ಇಂಥ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಯಾಕೆಂದರೆ, ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಇರುವ ಸಂದರ್ಭದಲ್ಲಿ ವಂಚಕರು ಒಂದು ಪಾಸ್​ವರ್ಡ್​ ಅನ್ನು ಹ್ಯಾಕ್ ಮಾಡಿದರೂ ಅಷ್ಟಕ್ಕೇ ನಿಮ್ಮ ಹಣ ದೋಚಲು ಸಾಧ್ಯವಾಗದು. ಮತ್ತೊಂದು ಹಂತದ ದೃಢೀಕರಣದ ಆಯ್ಕೆ ನಿಮ್ಮ ಬಳಿ ಇರುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅನೇಕ ಬ್ಯಾಂಕ್​ಗಳು ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಇದನ್ನು ಬಳಸಿಕೊಳ್ಳಿ.

ಇದನ್ನೂ ಓದಿ: Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ

ರಿಮೋಟ್ ಆಕ್ಸೆಸ್ ನೀಡಬೇಡಿ

ಯಾರಿಗಾದರೂ ರಿಮೋಟ್ ಆಕ್ಸೆಸ್ ನೀಡಿದರೆ ಅವರು ನಿಮ್ಮ ಮೊಬೈಲ್ ಅಥವಾ ಲ್ಯಾಪ್​ಟಾಪ್​ ಸ್ಕ್ರೀನ್​ನ ಎಲ್ಲ ಚಲನವಲನಗಳನ್ನು ಗಮನಿಸುವುದು ಸಾಧ್ಯವಾಗುತ್ತದೆ. ನಿಮ್ಮ ಅರಿವಿಗೇ ಬಾರದಂತೆ ನಿಮ್ಮ ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ವಿವರ, ಯೂಸರ್​ನೇಮ್, ಪಾಸ್ವರ್ಡ್ ಎಲ್ಲವೂ ವಂಚಕರ ಪಾಲಾಗಬಹುದು. ವಂಚಕರು ನಿಮ್ಮ ಫೋನ್​ ಅನ್ನೇ ಬ್ಲಾಕ್ ಮಾಡಿ ಹಣ ಎಗರಿಸಬಹುದು. ಇದನ್ನು ತಪ್ಪಿಸಲು ಅಪರಿಚಿತ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಬೇಡಿ. ಬೇರೆಯವರಿಗೆ ರಿಮೋಟ್ ಆ್ಯಕ್ಸೆಸ್ ನೀಡಬೇಡಿ.

ಒಟಿಪಿ ಹಂಚಿಕೊಳ್ಳಬೇಡಿ

ಆನ್​ಲೈನ್ ವಹಿವಾಟಿನ ಸಂದರ್ಭದಲ್ಲಿ ಬರುವ ಒಟಿಪಿಯನ್ನು ಯಾರ ಜತೆಗೂ, ಆನ್​ಲೈನ್​ನಲ್ಲಂತೂ ಹಂಚಿಕೊಳ್ಳಲೇಬೇಡಿ. ವಂಚಕರು ಹಲವು ಸುಳ್ಳು ನೆಪಗಳನ್ನು ಹೇಳಿ, ಗ್ರಾಹಕರು ನಂಬುವಂತೆ ಮಾಡಿ ಒಟಿಪಿ ತಿಳಿಯಲು ಯತ್ನಿಸುತ್ತಾರೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು, ಪಿನ್, ಒಟಿಪಿಯನ್ನು ಯಾವುದೇ ಕಾರಣಕ್ಕೂ ಯಾರ ಜತೆಗೂ ಹಂಚಿಕೊಳ್ಳಬೇಡಿ.

ಸಾರ್ವಜನಿಕ ಅಥವಾ ಉಚಿತ ವೈಫೈ ಬಳಸುವಾಗ ಎಚ್ಚರ

ಸಾರ್ವಜನಿಕ ಮತ್ತು ಉಚಿತವಾಗಿ ಸಿಗುವ ವೈಫೈ ಸಂಪರ್ಕ ಪಡೆಯುವುದು ಒಳ್ಳೆಯದಲ್ಲ. ಇಂಥ ವೈಫೈಗಳು ಗೌಪ್ಯ ಮಾಹಿತಿ ಕದಿಯುವ ಸಾಧ್ಯತೆ ಇದೆ. ಆನ್​ಲೈನ್ ವಹಿವಾಟಿಗೆ ನಿಮ್ಮದೇ ಡಿವೈಸ್​ ಹಾಗೂ ನೆಟ್​ವರ್ಕ್ ಬಳಸಿ.

ಆನ್‌ಲೈನ್ ವಹಿವಾಟುಗಳು ದೈನಂದಿನ ಜೀವನದ ಅನಿವಾರ್ಯ ಭಾಗವಾಗಿರುವುದರಿಂದ, ಸೈಬರ್ ವಂಚನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೂಕ್ತ ಮುನ್ನೆಚ್ಚರಿಕೆ ವಹಿಸುವ ಮೂಲಕ ನಮ್ಮ ಹಣವನ್ನು, ದತ್ತಾಂಶಗಳನ್ನು ರಕ್ಷಿಸಿಕೊಳ್ಳಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ