AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance- Future Deal: ಸುಪ್ರೀಮ್​ ಕೋರ್ಟ್​ನಲ್ಲಿ ಅಮೆಜಾನ್​ ಪರ ಆದೇಶ; ರಿಲಯನ್ಸ್​- ಫ್ಯೂಚರ್​ ಡೀಲ್​ಗೆ ಕಲ್ಲು

ಫ್ಯೂಚರ್ ರೀಟೇಲ್- ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ಭಾರೀ ಹಿನ್ನಡೆ ಆಗಿದೆ. ಅಮೆಜಾನ್​ ಪಾಲಿಗೆ ಇದು ದೊಡ್ಡ ಗೆಲುವು. ಪ್ರಮುಖ ಬೆಳವಣಿಗೆಗಳನ್ನು 10 ಅಂಶಗಳಲ್ಲಿ ವಿವರಿಸಲಾಗಿದೆ.

Reliance- Future Deal: ಸುಪ್ರೀಮ್​ ಕೋರ್ಟ್​ನಲ್ಲಿ ಅಮೆಜಾನ್​ ಪರ ಆದೇಶ; ರಿಲಯನ್ಸ್​- ಫ್ಯೂಚರ್​ ಡೀಲ್​ಗೆ ಕಲ್ಲು
ಸುಪ್ರೀಂ​ ಕೋರ್ಟ್
TV9 Web
| Edited By: |

Updated on: Aug 06, 2021 | 2:04 PM

Share

ಅಮೆಜಾನ್​ ಕಂಪೆನಿಗೆ ಸುಪ್ರೀಂ ಕೋರ್ಟ್​ನಲ್ಲಿ ಶುಕ್ರವಾರ ಭಾರೀ ವಿಜಯ ಸಿಕ್ಕಿದೆ. ಫ್ಯೂಚರ್ ಸಮೂಹದ ರೀಟೇಲ್ ಆಸ್ತಿಯನ್ನು ಖರೀದಿ ಮಾಡುವ 340 ಕೋಟಿ ಅಮೆರಿಕನ್ ಡಾಲರ್ ವ್ಯವಹಾರವನ್ನು ಮುಂದುವರಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಧ್ಯಸ್ಥಿಕೆ ಕೋರ್ಟ್​ನ ತೀರ್ಪನ್ನು ಬೆಂಬಲಿಸಿರುವ ಸುಪ್ರೀಂ ಕೋರ್ಟ್​, ಜೆಫ್​ ಬೆಜೋಸ್ ವರ್ಸಸ್ ಮುಕೇಶ್ ಅಂಬಾನಿ ಕಾನೂನು ಸಮರದಲ್ಲಿ ಖರೀದಿ ವ್ಯವಹಾರಕ್ಕೆ ತಡೆ ನೀಡಿದೆ. ಈ ದೊಡ್ಡ ಕಾನೂನು ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿದ್ಯಮಾನಗಳನ್ನು 10 ಅಂಶಗಳಲ್ಲಿ ವಿವರಿಸುವುದಾದರೆ ಹೀಗಿರುತ್ತದೆ:

1. ಕಳೆದ ವರ್ಷ ರಿಲಯನ್ಸ್​ ಇಂಡಸ್ಟ್ರೀಸ್​ಗೆ ತನ್ನ ಆಸ್ತಿಯನ್ನು 24,731 ಕೋಟಿ ರೂಪಾಯಿಗೆ ಮಾರಾಟ ಮಾಡಲು ಮುಂದಾಗುವ ಮೂಲಕ ಫ್ಯೂಚರ್​ ಸಮೂಹ ತನ್ನೊಂದಿಗಿನ ಒಪ್ಪಂದವನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ, ಅಮೆಜಾನ್​ನಿಂದ ಕೋರ್ಟ್​ ಮೆಟ್ಟಿಲೇರಲಾಗಿತ್ತು.

2. ಸಿಂಗಾಪೂರ್​ನ ತುರ್ತು ಮಧ್ಯಸ್ಥಿಕೆ ಕೇಂದ್ರವು 2020ರ ಅಕ್ಟೋಬರ್​ನಲ್ಲಿ ಆದೇಶ ನೀಡಿ, ಫ್ಯೂಚರ್​ ರೀಟೇಲ್​ ಅನ್ನು ರಿಲಯನ್ಸ್​ ರೀಟೇಲ್​ ಜತೆಗೆ ಸೇರ್ಪಡೆ ಮಾಡುವುದಕ್ಕೆ ತಡೆ ನೀಡಿತ್ತು. ಆ ಆದೇಶವು ಸಿಂಧುವಾಗಿದೆ ಹಾಗೂ ಜಾರಿಗೆ ಬರಬೇಕು ಎಂದು ಇಂದು ಸುಪ್ರೀಂ ಕೋರ್ಟ್ ಹೇಳಿದೆ.

3. ಮೂವರು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಧೀಕರಣದಿಂದ ಪ್ರಕರಣದ ಅಹವಾಲು ಆಲಿಸಿದ್ದು, ರಿಲಯನ್ಸ್- ಫ್ಯೂಚರ್ ವಹಿವಾಟಿನಲ್ಲಿ ಅಂತಿಮ ನಿರ್ಧಾರ ಹೇಳಬೇಕಿದೆ.

4. ಮಧ್ಯಸ್ಥಗಾರರು ನೀಡಿದ್ದ ಆದೇಶವನ್ನು ಅಮಲುಗೊಳಿಸಬೇಕು ಎಂದು ಕೋರಿ ಅಮೆಜಾನ್​ನಿಂದ ದೆಹಲಿ ಹೈ ಕೋರ್ಟ್​ಗೆ ಮನವಿ ಮಾಡಲಾಗಿತ್ತು. ಏಕವ್ಯಕ್ತಿ ನ್ಯಾಯಮೂರ್ತಿಗಳ ಪೀಠವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿತ್ತು. ಕಿಶೋರ್​ ಬಿಯಾನಿ ನೇತೃತ್ವದ ಆಸ್ತಿಯನ್ನು ವಶಕ್ಕೆ ಪಡೆಯಬೇಕು ಹಾಗೂ ಅವರಿಗೆ ಏಕೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಬಾರದು ಎಂದು ಕೇಳಿತ್ತು.

5. ಫೆಬ್ರವರಿಯಲ್ಲಿ ಅದಕ್ಕೂ ಮೇಲ್ಮಟ್ಟದ ದೆಹಲಿ ಹೈಕೋರ್ಟ್​ ಪೀಠವು ಏಕವ್ಯಕ್ತಿ ನ್ಯಾಯಮೂರ್ತಿಗಳ ಆದೇಶಕ್ಕೆ ತಡೆ ನೀಡಿ, ರಿಲಯನ್ಸ್​- ಫ್ಯೂಚರ್ ವ್ಯವಹಾರಕ್ಕೆ ಇದ್ದ ತಡೆ ನಿವಾರಣೆ ಮಾಡಿತ್ತು. ಆ ನಂತರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು ಅಮೆಜಾನ್.

6. ದೆಹಲಿ ಹೈಕೋರ್ಟ್ ಆದೇಶ “ಕಾನೂನು ಬಾಹಿರ” ಮತ್ತು ನಿರಕುಂಶವಾದದ್ದು. ಕಂಪೆನಿಯು ಭಾರತದಲ್ಲಿ 650 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶ ಮಾಡದಿದ್ದಲ್ಲಿ ತುಂಬಲಾರದ ಹಾನಿ ಆಗುತ್ತದೆ ಎಂದು ಅಮೆಜಾನ್ ಹೇಳಿತ್ತು.

7. ಫ್ಯೂಚರ್ ಆಸ್ತಿಗಾಗಿ ವಿಶ್ವದ ಶ್ರೀಮಂತರಿಬ್ಬರ ಮಧ್ಯದ ಕದನವಾಗಿ ಇದು ಏರ್ಪಟ್ಟಿತು. ಭಾರತದ ರೀಟೇಲ್ ವಲಯದ ಮೇಲೆ ಹಿಡಿತ ಸಾಧಿಸಲು ಇದು ನಿರ್ಣಾಯಕ ಹೋರಾಟ ಎನಿಸಿತ್ತು.

8. ಅಮೆಜಾನ್​ ಪ್ರಕಾರವಾಗಿ, 2019ರಲ್ಲಿ ತಾನು ಮಾಡಿಕೊಂಡ ಒಪ್ಪಂದದ ಅನ್ವಯ, ಯಾವುದೇ “ನಿರ್ಬಂಧಿತ ವ್ಯಕ್ತಿಗಳ” ಪಟ್ಟಿಯಲ್ಲಿ ಇರುವವರಿಗೆ ಫ್ಯೂಚರ್​ನಿಂದ ಆಸ್ತಿಯನ್ನು ಮಾರಲು ಸಾಧ್ಯವಿಲ್ಲ. ಅದರಲ್ಲಿ ರಿಲಯನ್ಸ್ ಕೂಡ ಇದೆ. ಅಮೆಜಾನ್​ಗೆ ಫ್ಯೂಚರ್​ ಕೂಪನ್ಸ್​ ಲಿಮಿಟೆಡ್​ನಲ್ಲಿ ಶೇ 49ರಷ್ಟು ಪಾಲಿದೆ. ಇದು ಫ್ಯೂಚರ್ ರೀಟೇಲ್​ನಲ್ಲಿ ಶೇ 9.82ರಷ್ಟು ಆಗುತ್ತದೆ.

9. ಭಾರತದ ಎರಡನೇ ಅತಿ ದೊಡ್ಡ ರೀಟೇಲರ್​ ಫ್ಯೂಚರ್​ಗೆ ಭಾರತದಲ್ಲಿ 1700ರಷ್ಟು ಮಳಿಗೆಗಳಿವೆ. ಒಂದು ವೇಳೆ ರಿಲಯನ್ಸ್ ಜತೆಗೆ ವ್ಯವಹಾರ ಮುರಿದುಬಿದ್ದಲ್ಲಿ ಅವುಗಳನ್ನೆಲ್ಲ ಮುಚ್ಚಬೇಕಾಗುತ್ತದೆ.

10. ಭಾರತದ ಆ್ಯಂಟಿ ಟ್ರಸ್ಟ್ ನಿಯಂತ್ರಕರು ಆರೋಪ ಮಾಡುವಂತೆ, 2019ರಲ್ಲಿ ಫ್ಯೂಚರ್​ನಲ್ಲಿ ಹೂಡಿಕೆ ಮಾಡುವಾಗ ಕೆಲವು ಅಂಶಗಳನ್ನು ಅಮೆಜಾನ್ ಮರೆಮಾಚಿದೆ ಎಂದಿದೆ ಎಂಬುದಾಗಿ ಕಳೆದ ತಿಂಗಳು ರಾಯಿಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ: Future Group- Reliance Deal: ಫ್ಯೂಚರ್ ರೀಟೇಲ್- ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರ ಕುದುರದಿದ್ದಲ್ಲಿ 11 ಲಕ್ಷದಷ್ಟು ಉದ್ಯೋಗ ನಷ್ಟ

ಇದನ್ನೂ ಓದಿ: Reliance- Future deal: ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಫ್ಯೂಚರ್ ರೀಟೇಲ್​ಗೆ ನಿರಾಳ

(Big Blow To Future Retail And Reliance Deal In Supreme Court Here Is The 10 Points Explainer About Amazon Victory)

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು