AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್​, ಮದ್ಯ, ಆಹಾರ ಸಬ್ಸಿಡಿಗೆ ತಮ್ಮ ಹೆಸರಲ್ಲಿ ಬಂದ ಸುಳ್ಳು ಸುದ್ದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸ್ಪಷ್ಟನೆ ನೀಡಿದ ರತನ್ ಟಾಟಾ

ಮಧ್ಯ, ಆಹಾರ ಸಬ್ಸಿಡಿ ಹಾಗೂ ಆಧಾರ್ ಕಾರ್ಡ್ ಬಗ್ಗೆ ತಮ್ಮ ಹೆಸರಲ್ಲಿ ಸುತ್ತಾಡುತ್ತಿರುವ ಸುಳ್ಳು ಸುದ್ದಿಯ ಬಗ್ಗೆ ಉದ್ಯಮಿ ರತನ್ ಟಾಟಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ನಕಲಿ ಖಾತೆಯಲ್ಲಿ ಹಬ್ಬಿರುವ ಸುದ್ದಿಯನ್ನು ತಾವು ಹೇಳಿಲ್ಲ ಎಂಬುದನ್ನೂ ತಿಳಿಸಿದ್ದಾರೆ.

ಆಧಾರ್​, ಮದ್ಯ, ಆಹಾರ ಸಬ್ಸಿಡಿಗೆ ತಮ್ಮ ಹೆಸರಲ್ಲಿ ಬಂದ ಸುಳ್ಳು ಸುದ್ದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸ್ಪಷ್ಟನೆ ನೀಡಿದ ರತನ್ ಟಾಟಾ
ರತನ್ ಟಾಟಾ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 03, 2021 | 7:29 PM

Share

ನೀವು ಇಂಟರ್​ನೆಟ್​ನಲ್ಲಿ ನೋಡುವ ಎಲ್ಲವನ್ನೂ ಎಂದಿಗೂ ನಂಬಬೇಡಿ. – ಹೀಗೆ ಅದೆಷ್ಟನೇ ಸಲಕ್ಕೆ ಹೇಳಿದರೂ ನಂಬುವುದನ್ನು ಜನರು ಬಿಡುವಂತೆ ಕಾಣುವುದಿಲ್ಲ. ಈಗ ಏನಾಗಿದೆ ಅಂದರೆ, ಹಿರಿಯ ಉದ್ಯಮಿ ರತನ್ ಟಾಟಾ ಅವರ ಹೆಸರಲ್ಲಿ ಹರಡುತ್ತಿದ್ದ ಸುಳ್ಳು ಸುದ್ದಿಯನ್ನು ಇಂದು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅವರೇ ಹಂಚಿಕೊಂಡಿದ್ದಾರೆ. ಆಧಾರ್, ಮದ್ಯ ಮತ್ತು ಆಹಾರ ಸಬ್ಸಿಡಿಗಳ ಕುರಿತು ಒಂದು ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹೆಸರು ಮತ್ತು ಚಿತ್ರದೊಂದಿಗೆ ಪ್ರಸಾರವಾಗುತ್ತಿರುವುದು ನಿಜಕ್ಕೂ ನಕಲಿ ಸುದ್ದಿಯಾಗಿದೆ ಎಂದು ಟಾಟಾ ಸನ್ಸ್ ಗೌರವ ಅಧ್ಯಕ್ಷರಾದ ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆಯಲ್ಲಿರುವ ಪೋಸ್ಟ್ ಫೇಸ್‌ಬುಕ್‌ನಲ್ಲಿ ಅದು ಕಾಣಿಸಿಕೊಂಡಿತು, ಅದರ ಸ್ಕ್ರೀನ್‌ಶಾಟ್ ಶುಕ್ರವಾರ ರತನ್ ಟಾಟಾ ಹಂಚಿಕೊಂಡಿದ್ದಾರೆ. “ಆಧಾರ್ ಕಾರ್ಡ್ ಮೂಲಕ ಮದ್ಯ ಮಾರಾಟ ಮಾಡಬೇಕು” ಎಂದು ಅವರು ತಪ್ಪಾಗಿ ಉಲ್ಲೇಖಿಸಿದ್ದಾರೆ. ಮದ್ಯ ಖರೀದಿದಾರರಿಗೆ ಸರ್ಕಾರದ ಆಹಾರ ಸಬ್ಸಿಡಿಗಳನ್ನು ನಿಲ್ಲಿಸಬೇಕು. ಆಲ್ಕೋಹಾಲ್ ಖರೀದಿಸುವ ಸೌಲಭ್ಯ ಹೊಂದಿರುವವರು ಖಂಡಿತವಾಗಿಯೂ ಆಹಾರವನ್ನು ಖರೀದಿಸಬಹುದು. ನಾವು ಅವರಿಗೆ ಉಚಿತ ಆಹಾರವನ್ನು ನೀಡಿದಾಗ ಅವರು ಹಣ ಪಾವತಿಸುತ್ತಾರೆ ಮತ್ತು ಮದ್ಯವನ್ನು ಖರೀದಿಸುತ್ತಾರೆ.” ಎಂದಿದೆ.

ವಿಚಿತ್ರವೆಂದರೆ, ಈ ಪೋಸ್ಟ್ ಪ್ರಖ್ಯಾತ ಉದ್ಯಮಿಯ ಮೊದಲ ಹೆಸರನ್ನು “ರಥನ್” (Rathan) ಎಂದು ತಪ್ಪಾಗಿ ಬರೆದಿದೆ. ಅವರು ಆ ಪಠ್ಯದ ಕೊನೆಯಲ್ಲಿ ಮೂರು ಹೃದಯದ ಇಮೋಜಿಗಳನ್ನು ಸೇರಿಸಿದ್ದು, ನಂತರ ರತನ್ ಟಾಟಾ ಅವರ ಚಿತ್ರ ಇದೆ. ರತನ್ ಟಾಟಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ನ ಸ್ಕ್ರೀನ್ ಗ್ರಾಬ್ ಅನ್ನು ಅದರ ಹಿಂದಿನ ವ್ಯಕ್ತಿ ಅಥವಾ ಗುಂಪಿನ ಹೆಸರನ್ನು ಬಹಿರಂಗಪಡಿಸದೆ ಹಂಚಿಕೊಂಡಿದ್ದಾರೆ. ಅವರು ಸರಳವಾಗಿ ಶೀರ್ಷಿಕೆ ನೀಡಿದ್ದು, “ಇದನ್ನು ನಾನು ಹೇಳಿಲ್ಲ. ಧನ್ಯವಾದ.” ಎಂದಿದ್ದಾರೆ.

ಇದನ್ನೂ ಓದಿ: LPG Subsidy: ಎಲ್​ಪಿಜಿ ಸಬ್ಸಿಡಿ ಪಾವತಿಸದ ಕೇಂದ್ರ ಸರ್ಕಾರದಿಂದ 27,255 ಕೋಟಿ ರೂ. ಉಳಿತಾಯ

EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?

Published On - 7:28 pm, Fri, 3 September 21

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ