Sanitary Pads: ಜನೌಷಧಿ ಮಳಿಗೆಗಳಲ್ಲಿ ಇದೂವರೆಗೆ ಮಾರಾಟವಾದ ಸ್ಯಾನಿಟರಿ ಪ್ಯಾಡ್ ಎಷ್ಟು?

Jan Aushadhi Sanitary Napkins Sale: 2018ರಿಂದ ಇಲ್ಲಿಯವರೆಗೆ ಜನೌಷಧಿ ಮಳಿಗೆಗಳಲ್ಲಿ ಒಟ್ಟು 34.71 ಕೋಟಿ ಪರಿಸರಸ್ನೇಹಿ ಸ್ಯಾನಿಟರಿ ನ್ಯಾಪ್​ಕಿನ್​ಗಳು ಮಾರಾಟವಾಗಿವೆ ಎಂದು ಕೇಂದ್ರ ಸಚಿವ ಮನ್​ಸುಕ್ ಮಾಂಡವೀಯ ತಿಳಿಸಿದ್ದಾರೆ. ಜನೌಷಧಿ ಕೇಂದ್ರಗಳಲ್ಲಿ ಈ ಪ್ಯಾಡ್​ಗಳು ಕೇವಲ 1 ರೂಗೆ ಮಾರಾಟವಾಗುತ್ತಿವೆ.

Sanitary Pads: ಜನೌಷಧಿ ಮಳಿಗೆಗಳಲ್ಲಿ ಇದೂವರೆಗೆ ಮಾರಾಟವಾದ ಸ್ಯಾನಿಟರಿ ಪ್ಯಾಡ್ ಎಷ್ಟು?
ಜನೌಷಧಿ ಸ್ಯಾನಿಟರಿ ಪ್ಯಾಡ್

Updated on: Feb 21, 2023 | 11:19 AM

ನವದೆಹಲಿ: ಜನೌಷಧಿ ಮಳಿಗೆಗಳಲ್ಲಿ (Jan Aushadhi Centers) ಇದೂವರೆಗೆ 34.71 ಕೋಟಿ ಸ್ಯಾನಿಟರಿ ಪ್ಯಾಡ್​ಗಳು (Sanitary napkins) ಮಾರಾಟವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್​ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. 2018 ಜೂನ್ 4ರಿಂದ ಇಲ್ಲಿಯವರೆಗೆ ಹೆಚ್ಚೂಕಡಿಮೆ 5 ವರ್ಷಗಳಲ್ಲಿ ಮಾರಾಟವಾದ ಸ್ಯಾನಿಟರಿ ಪ್ಯಾಡ್​ಗಳ ಸಂಖ್ಯೆ ಇದು. “ಪ್ಯಾಡ್​ಗೆ ಒಂದು ರೂನಂತೆ 34.71 ಕೋಟಿ ಜನೌಷಧಿ ಸುವಿಧಾ ಸ್ಯಾನಿಟರಿ ಪ್ಯಾಡ್​ಗಳನ್ನು ಮಾರಲಾಗಿದೆ. ಇದರಿಂದ 218.45 ಕೋಟಿ ರೂ ಉಳಿತಾಯಕ್ಕೆ ಕಾರಣವಾಗಿದೆ. ಈ ಪ್ಯಾಡ್​ಗಳು ಹದಿಹರೆಯದ ಯುವತಿಯರು ಮತ್ತು ಮಹಿಳೆಯರ ಬಾಳನ್ನು ಸುಗಮಗೊಳಿಸಿದೆಎಂದು ಸಚಿವರು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ 8,700ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ನಿರ್ವಹಿಸುತ್ತಿದ್ದು, ಅಲ್ಲಿ ಸ್ಯಾನಿಟರಿ ಪ್ಯಾಡ್ ಕೇವಲ 1 ರೂಪಾಯಿಗೆ ಸಿಗುತ್ತದೆ. ಇಂಥದ್ದೇ ಸ್ಯಾನಿಟರಿ ಪ್ಯಾಡಿನ ಮಾರುಕಟ್ಟೆ ದರ 5ರಿಂದ 8 ರೂ ಇದೆ ಎಂದು ಹೇಳಲಾಗುತ್ತದೆ. ಮಹಿಳೆಯರ ಸ್ವಾಸ್ಥ್ಯದ ದೃಷ್ಟಿಯಿಂದ ತೀರಾ ಕಡಿಮೆ ಬೆಲೆಗೆ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳ ಮಾರಾಟ ಮಾಡಲಾಗುತ್ತಿದೆ.


ಭಾರತದ ಕೆಲ ಗ್ರಾಮೀಣ ಭಾಗಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳು ತುಸು ದುಬಾರಿಯಾಗಿರುವುದರಿಂದ ಅಲ್ಲಿನ ಮಹಿಳೆಯರು ಋತುವಿನ ವೇಳೆ ಬಳಸುವುದಿಲ್ಲ. ಹೀಗಾಗಿ, ಕೈಗೆಟುಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್​ಗಳನ್ನು ಸರ್ಕಾರ ಜನೌಷಧಿ ಮಳಿಗೆಗಳ ಮೂಲಕ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ: Nirav Modi: ದೇಶ ತೊರೆದ ನೀರವ್ ಮೋದಿಯ ಚಿನ್ನ, ವಜ್ರ, ಆಭರಣಗಳ ಹರಾಜು ಮುಂದಿನ ತಿಂಗಳು

2018 ಜೂನ್ 4, ವಿಶ್ವ ಪರಿಸರ ದಿನದಂದು ಜನೌಷಧಿ ಸುವಿಧಾ ಸ್ಯಾನಿಟರಿ ನ್ಯಾಪ್​ಕಿನ್ ಅನ್ನು ಸರ್ಕಾರ ಅನಾವರಣಗೊಳಿಸಿತ್ತು. ಈ ಸ್ಯಾನಿಟರಿ ಪ್ಯಾಡ್​ಗಳು ಪರಿಸರಸ್ನೇಹಿ ಆಗಿವೆ. ಅಲ್ಲಿಂದ ಇಲ್ಲಿಯವರೆಗೆ 34 ಕೋಟಿಗೂ ಹೆಚ್ಚು ನ್ಯಾಪ್​ಕಿನ್ ಮಾರಾಟವಾಗಿರುವುದು ಗಮನಾರ್ಹ.

ಸ್ಟಾಟಿಸ್ಟಿಯಾ ಎಂಬ ವೆಬ್​ಸೈಟ್ ಮಾಹಿತಿ ಪ್ರಕಾರ ಭಾರತದಲ್ಲಿ 2021ರಲ್ಲಿ ಮಾರಾಟವಾದ ಒಟ್ಟು ಸ್ಯಾನಿಟರಿ ನ್ಯಾಪ್​ಕಿನ್​ಗಳ ಸಂಖ್ಯೆ ಸುಮಾರು ಒಂದು ಸಾವಿರ ಕೋಟಿಗೂ ಹೆಚ್ಚು ಎನ್ನಲಾಗಿದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ

Published On - 11:19 am, Tue, 21 February 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us