AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nirav Modi: ದೇಶ ತೊರೆದ ನೀರವ್ ಮೋದಿಯ ಚಿನ್ನ, ವಜ್ರ, ಆಭರಣಗಳ ಹರಾಜು ಮುಂದಿನ ತಿಂಗಳು

e-Auction of Precious Items Belonging To Nirav Modi: ಭಾರತದ ಅತಿದೊಡ್ಡ ಬ್ಯಾಂಕಿಂಗ್ ವಂಚಕರಲ್ಲಿ ಒಬ್ಬರೆನಿಸಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ ಚಿನ್ನ, ವಜ್ರ, ಪ್ಲಾಟಿನಂ ಇತ್ಯಾದಿ ಅಮೂಲ್ಯ ವಸ್ತುಗಳನ್ನು ಮಾರ್ಚ್ 25ರಂದು ಇ-ಹರಾಜಿನಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

Nirav Modi: ದೇಶ ತೊರೆದ ನೀರವ್ ಮೋದಿಯ ಚಿನ್ನ, ವಜ್ರ, ಆಭರಣಗಳ ಹರಾಜು ಮುಂದಿನ ತಿಂಗಳು
ನೀರವ್ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 21, 2023 | 10:38 AM

Share

ನವದೆಹಲಿ: ಬ್ಯಾಂಕುಗಳಿಂದ ಸಾಲ ಪಡೆದು ತೀರಸದೇ ದೇಶ ಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಗೆ (Diamond Businessman Nirav Modi) ಸೇರಿದ ಕೆಲ ಆಸ್ತಿಗಳ ಹರಾಜು (e Auction) ಮಾಡಲು ಸಿದ್ಧತೆ ನಡೆದಿದೆ. ನೀರವ್ ಮೋದಿ ಮಾಲಿಕತ್ವದ ಫಯರ್ ಸ್ಟಾರ್ ಡೈಮಂಡ್ ಇಂಟರ್​ನ್ಯಾಷನಲ್ ಸಂಸ್ಥೆಗೆ ಸೇರಿದ ಚಿನ್ನ, ವಜ್ರ, ಪ್ಲಾಟಿನಂ ಹಾಗು ಇತರೆ ಆಭರಣಗಳನ್ನು ಮುಂದಿನ ತಿಂಗಳು, ಅಂದರೆ 2023 ಮಾರ್ಚ್ 25ರಂದು ಹರಾಜಿ ಹಾಕಲಾಗುತ್ತಿದೆ. ಈ ಬಗ್ಗೆ ನೋಟೀಸ್ ಕೂಡ ಹೊರಡಿಸಲಾಗಿದೆ.

ವಜ್ರ, ಚಿನ್ನ ಮತ್ತು ಪ್ಲಾಟಿನಂ ಆಭರಣಗಳನ್ನು ಮಾರ್ಚ್ 25ರಂದು ಇಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಈ ವಸ್ತುಗಳ ಮೂಲ ಬೆಲೆಯನ್ನು (Reserve Price) ಹರಾಜಿನ ದಿನ ಪ್ರಕಟಿಸಲಾಗುತ್ತದೆ. ಕಲರ್ ಸ್ಟೋನ್, ಬೆಳ್ಳಿ ಇತ್ಯಾದಿ ಬೆಲೆಬಾಳುವ ಎಲ್ಲಾ ವಸ್ತುಗಳನ್ನೂ ಹರಾಜಿನಲ್ಲಿ ಮಾರಾಟಕ್ಕಿಡಲಾಗಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಮುಂಬೈ ವಿಭಾಗೀಯ ನ್ಯಾಯಪೀಠವು 2020 ಫೆಬ್ರುವರಿ ತಿಂಗಳಲ್ಲಿ ಸಾಂತನು ಟಿ ರೇ ಅವರನ್ನು ಫಯರ್​ಸ್ಟಾರ್ ಡೈಮಂಡ್ ಇಂಟರ್​ನ್ಯಾಷನಲ್ ಸಂಸ್ಥೆಯ ಲಿಕ್ವಿಡೇಟರ್ ಆಗಿ ನೇಮಕ ಮಾಡಿತ್ತು. ಶಾಂತನು ರೇ ಅವರ ಉಸ್ತುವಾರಿಯಲ್ಲೇ ಮುಂದಿನ ತಿಂಗಳು ಇ ಹರಾಜು ನಡೆಯಲಿದೆ. ನೀರವ್ ಮೋದಿ ಮಾಲಕತ್ವದ ಈ ಕಂಪನಿಯಲ್ಲಿರುವ ಚಿನ್ನ, ಬೆಳ್ಳಿ, ವಜ್ರ ಇತ್ಯಾದಿ ಅಮೂಲ್ಯ ವಸ್ತುಗಳ ಬೆಲೆ ಎಷ್ಟೆಂದು ತಿಳಿಯಲು ಜೆಮ್ಮಾಲಾಜಿಕಲ್ ಇನ್ಸ್​ಟಿಟ್ಯೂಟ್​ಗೆ ಜವಾಬ್ದಾರಿ ಕೊಡಲಾಗಿದೆ. ಈ ವಸ್ತುಗಳ ಈಗಿನ ಮೌಲ್ಯ ಎಷ್ಟೆಂದು ತೀರ್ಮಾನವಾದ ಬಳಿಕ ಮೂಲ ಬೆಲೆಯನ್ನು ನಿರ್ಧರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: UPI PayNow payments : ಸಿಂಗಾಪುರ-ಭಾರತೀಯ ವಲಸಿಗರಿಗೆ ವರದಾನ! ಯುಪಿಐ ಮೂಲಕವೂ ಗಡಿಯಾಚೆ ಹಣ ಪಾವತಿಸುವುದಕ್ಕೆ ಮಂಗಳವಾರದಿಂದ ಅಂಕಿತ

14 ಸಾವಿರ ಕೋಟಿ ರೂ ವಂಚನೆ

ಭಾರತದ ಅತಿದೊಡ್ಡ ಬ್ಯಾಂಕ್ ಅಪರಾಧ ಪ್ರಕರಣಗಳಲ್ಲಿ ನೀರವ್ ಮೋದಿಯದ್ದೂ ಒಂದು. ವಜ್ರೋದ್ಯಮಿಯಾದ ನೀರವ್ ಮೋದಿ ಮತ್ತವರ ಸಂಬಂಧಿ ಮೆಹುಲ್ ಚೋಕ್ಸಿ ಇಬ್ಬರೂ ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ 14 ಸಾವಿರ ಕೋಟಿ ರೂ ಸಾಲ ಪಡೆದಿದ್ದರು. ಇದರಲ್ಲಿ ಬ್ಯಾಂಕ್​ನ ಕೆಲ ಅಧಿಕಾರಿಗಳೂ ಶಾಮೀಲಾಗಿದ್ದರು.

ಈ ಪ್ರಕರಣ ಬೆಳಕಿಗೆ ಬರುತ್ತಲೇ ನೀರವ್ ಮೋದಿ 2018ರಲ್ಲಿ ಭಾರತವನ್ನು ತೊರೆದುಹೋಗಿದ್ದರು. ನಂತರ ಅವರ ವಿರುದ್ಧ ಪ್ರಕರಣ ದಾಖಲಾಯಿತು. ಭಾರತದಲ್ಲಿನ ನೀರವ್ ಮೋದಿ ಅವರಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ನೀರವ್ ಮೋದಿ ಸದ್ಯ ಬ್ರಿಟನ್ ದೇಶದ ಜೈಲೊಂದರಲ್ಲಿ ಇದ್ದಾರೆ. ಇವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯಗಳು ಒಪ್ಪಿಕೊಂಡಿವೆ. ಆದರೂ ಕೆಲ ಕಾನೂನು ತೊಡಕಿನಿಂದ ಅವರನ್ನು ಇನ್ನೂ ಕೂಡ ಭಾರತಕ್ಕೆ ಕರೆತರಲು ಆಗಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Tue, 21 February 23

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್