Sign In

By signing in or creating an account, you agree with Associated Broadcasting Company's Terms & Conditions and Privacy Policy.

Chitra Ramakrishna: ಎನ್​ಎಸ್​ಇ ಹಗರಣದ ಪ್ರಮುಖ ಆರೋಪಿ ಚಿತ್ರಾ ರಾಮಕೃಷ್ಣ 14 ದಿನಗಳ ನ್ಯಾಯಾಂಗ ಬಂಧನಕ್ಕೆ

ಎನ್​ಎಸ್​ಇ ಹಗರಣದಲ್ಲಿ ಮಾಜಿ ಎಂ.ಡಿ. ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು 14 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲಾಗಿದೆ.

Chitra Ramakrishna: ಎನ್​ಎಸ್​ಇ ಹಗರಣದ ಪ್ರಮುಖ ಆರೋಪಿ ಚಿತ್ರಾ ರಾಮಕೃಷ್ಣ 14 ದಿನಗಳ ನ್ಯಾಯಾಂಗ ಬಂಧನಕ್ಕೆ
ಚಿತ್ರಾ ರಾಮಕೃಷ್ಣ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Mar 14, 2022 | 5:22 PM

ಭಾರತದ ಅತಿ ದೊಡ್ಡ ಷೇರು ಮಾರುಕಟ್ಟೆಯಲ್ಲಿ ಗಂಭೀರ ಲೋಪ ಎಸಗಿದ್ದಾರೆ ಹಾಗೂ “ಹಿಮಾಲಯನ್ ಯೋಗಿ” ಎಂದು ಕರೆದಿರುವ ವ್ಯಕ್ತಿಯೊಂದಿಗೆ ಗೋಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. 2013 ರಿಂದ ಎನ್‌ಎಸ್‌ಇ ಮುಖ್ಯಸ್ಥರಾಗಿದ್ದ 59 ವರ್ಷದ ಚಿತ್ರಾ ರಾಮಕೃಷ್ಣ ಅವರನ್ನು ಮಾರುಕಟ್ಟೆ ತಿರುಚಿದ ಹಗರಣ ಎಂದು ಕರೆಯುವುದರಲ್ಲಿ ಕೆಲ ದಿನಗಳ ವಿಚಾರಣೆಯ ನಂತರ, ಫೆಬ್ರವರಿ 24ರಂದು ಕೇಂದ್ರೀಯ ತನಕ ದಳ (CBI) ಬಂಧಿಸಿತ್ತು. ಕೆಲವು ದಲ್ಲಾಳಿಗಳಿಗೆ ವ್ಯಾಪಾರದಲ್ಲಿ ಅನ್ಯಾಯ ಮಾರ್ಗದಲ್ಲಿ ಲಾಭವನ್ನು ಮಾಡಲು ಅವಕಾಶ ಕೊಟ್ಟ ಪ್ರಕರಣವನ್ನು 2018ರಲ್ಲಿ ದಾಖಲಿಸಲಾಗಿದೆ. ಏಜೆನ್ಸಿಯು ಮಾರುಕಟ್ಟೆ ವಿನಿಮಯ ಕೇಂದ್ರಗಳ ಕಂಪ್ಯೂಟರ್ ಸರ್ವರ್‌ಗಳಿಂದ ಸ್ಟಾಕ್ ಬ್ರೋಕರ್‌ಗಳಿಗೆ “ಕೋ- ಲೊಕೇಷನ್ ಸ್ಕ್ಯಾಮ್” ಎಂದು ಕರೆಯುವ ಮಾಹಿತಿ ಸೋರಿಕೆ ಆರೋಪಗಳನ್ನು ತನಿಖೆ ನಡೆಸುತ್ತಿದೆ.

ಚಿತ್ರಾ ರಾಮಕೃಷ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸಂಸ್ಥೆಯು ತನ್ನ ಕಸ್ಟಡಿಯನ್ನು ಇನ್ನು ಮುಂದೆ ಕೇಳುವಂತಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ ಸಿಬಿಐ ಇದನ್ನು ವಿರೋಧಿಸಿದ್ದು, ಆಕೆ ಪ್ರಭಾವಿ ವ್ಯಕ್ತಿಯಾಗಿದ್ದು, ವಿದೇಶಿ ಭೇಟಿಗಳು ಮತ್ತು ಪ್ರಕರಣದ ಇತರ ಅಂಶಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದಿತು. “ಆದ್ದರಿಂದ ನಾವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕೆಂದು ಬಯಸುತ್ತೇವೆ” ಎಂದು ವಾದಿಸಿತು. ನ್ಯಾಯಾಲಯವು ಜೈಲು ಕಸ್ಟಡಿಯನ್ನು ಅನುಮೋದಿಸಿತು ಮತ್ತು ನಂತರ ಆ ಮನೆಯ ಆಹಾರ ಮತ್ತು ಇತರ ಸೌಕರ್ಯಗಳಿಗಾಗಿ ಚಿತ್ರಾ ರಾಮಕೃಷ್ಣ ಸಲ್ಲಿಸಿದ ಕೋರಿಕೆಯನ್ನು ತಿರಸ್ಕರಿಸಿತು.

“ಪ್ರತಿಯೊಬ್ಬ ಕೈದಿಯೂ ಒಂದೇ ಆಗಿದ್ದಾರೆ. ಆದ್ದುದರಿಂದ ಚಿತ್ರಾ ಅವರು ವಿಐಪಿ ಕೈದಿಯಾಗಲು ಸಾಧ್ಯವಿಲ್ಲ. ನಿಯಮಗಳನ್ನು ಬದಲಾಯಿಸಲಾಗುವುದಿಲ್ಲ,” ಎಂದು ನ್ಯಾಯಾಧೀಶ ಸಂಜೀವ್ ಅಗರ್​ವಾಲ್ ಹೇಳಿದರು, ಜೈಲಿನೊಳಗೆ ವಿಶೇಷ ಸೌಲಭ್ಯಗಳಿಗಾಗಿ ಚಿತ್ರಾ ಪರ ವಕೀಲರು ಒತ್ತಾಯಿಸಿದರು. ಆದರೆ, ನ್ಯಾಯಾಲಯವು ಚಿತ್ರಾ ಅವರ ಕೋರಿಕೆ ಪೈಕಿ ಪ್ರಾರ್ಥನಾ ಪುಸ್ತಕಗಳಾದ ಹನುಮಾನ್ ಚಾಲೀಸಾ ಮತ್ತು ಭಗವದ್ಗೀತೆಯ ಪ್ರತಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿತು.

ದೆಹಲಿ ಮೂಲದ ಸ್ಟಾಕ್ ಬ್ರೋಕರ್ ವಿರುದ್ಧ ಸುಮಾರು ನಾಲ್ಕು ವರ್ಷಗಳ ತನಿಖೆಯ ನಂತರ ಚಿತ್ರಾ ರಾಮಕೃಷ್ಣರನ್ನು ಸಿಬಿಐ ಬಂಧಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ವರದಿಯನ್ನು ಬಿಡುಗಡೆ ಮಾಡಿದ ನಂತರ ಈ ಬಂಧನವು ಎನ್‌ಎಸ್‌ಇಯ ಉನ್ನತ ಮಂಡಳಿಯಿಂದ ಅಧಿಕಾರದ ದುರುಪಯೋಗವನ್ನು ಸೂಚಿಸುತ್ತದೆ. ಚಿತ್ರಾ ರಾಮಕೃಷ್ಣ ಅವರು ಸುಮಾರು 20 ವರ್ಷಗಳ ಕಾಲ ಎಲ್ಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಗೂಢ “ಹಿಮಾಲಯನ್ ಯೋಗಿ” ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿ ಹೇಳಿದೆ. ಆ ನಂತರ “ಯೋಗಿ”ಯೇ ಆನಂದ್ ಸುಬ್ರಮಣಿಯನ್ ಎಂದು ಬಹಿರಂಗಪಡಿಸಲಾಗಿದ್ದು, ಮಾರುಕಟ್ಟೆ ತಿರುಚಿದ ಪ್ರಕರಣದಲ್ಲಿ ವಿನಿಮಯ ಕೇಂದ್ರದ ಮಾಜಿ ಅಧಿಕಾರಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮುಖವೇ ಗೊತ್ತಿಲ್ಲದ ಯೋಗಿಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿದ್ದ ಎನ್​ಎಸ್​ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?