AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar- PAN Linking: ಆಧಾರ್ ಜತೆ ಪ್ಯಾನ್​ ಕಾರ್ಡ್​ ಮಾರ್ಚ್​ 31ರೊಳಗೆ ಜೋಡಣೆ ಆಗದಿದ್ದಲ್ಲಿ ಹೆಚ್ಚಿನ ಟಿಡಿಎಸ್​

ಮಾರ್ಚ್ 31, 2022ರೊಳಗೆ ಪ್ಯಾನ್ ಕಾರ್ಡ್​ನೊಂದಿಗೆ ಆಧಾರ್ ಜತೆಗೆ ಜೋಡಣೆ ಆಗಿಲ್ಲ ಎಂದಾದಲ್ಲಿ ಹೆಚ್ಚಿನ ಟಿಡಿಎಸ್​ ಪಾವತಿ ಮಾಡಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ

Aadhaar- PAN Linking: ಆಧಾರ್ ಜತೆ ಪ್ಯಾನ್​ ಕಾರ್ಡ್​ ಮಾರ್ಚ್​ 31ರೊಳಗೆ ಜೋಡಣೆ ಆಗದಿದ್ದಲ್ಲಿ ಹೆಚ್ಚಿನ ಟಿಡಿಎಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 14, 2022 | 8:07 PM

ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number) ಅಥವಾ ಪ್ಯಾನ್ ಅನ್ನು ಆಧಾರ್​ ಜೊತೆಗೆ ಜೋಡಣೆ ಮಾಡಿಲ್ಲ ಅಂತಾದಲ್ಲಿ ಮುಂದಿನ ತಿಂಗಳಿಂದ ಹೆಚ್ಚಿನ ಟಿಡಿಎಸ್​ (ಟ್ಯಾಕ್ಸ್​ ಡಿಡಕ್ಟಡ್​ ಅಟ್ ಸೋರ್ಸ್) ಕಟ್ಟಬೇಕಾಗುತ್ತದೆ. ಆಧಾರ್ ಸಂಖ್ಯೆ ಜತೆಗೆ ಪ್ಯಾನ್ ಜೋಡಣೆ ಮಾಡುವುದಕ್ಕೆ ಕೊನೆ ದಿನಾಂಕವನ್ನು ಮಾರ್ಚ್ 31, 2022ಕ್ಕೆ ವಿಸ್ತರಣೆ ಮಾಡಲಾಗಿದೆ. ಈ ಗಡುವಿನೊಳಗಾಗಿ ಎರಡನ್ನೂ ಜೋಡಣೆ ಮಾಡದಿದ್ದಲ್ಲಿ ನಿಮ್ಮ ಡೆಬಿಟ್ ಹಾಗೂ ಕ್ರೆಡಿಟ್​ ಕಾರ್ಡ್ ಪಾವತಿ, ಆನ್​ಲೈನ್ ವಹಿವಾಟುಗಳು, ಎಟಿಎಂಗಳಿಂದ ನಗದು ವಿಥ್​ಡ್ರಾಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಪ್ರಕಾರ, ಜುಲೈ 1, 2017ಕ್ಕೆ ಪ್ಯಾನ್ ಹೊಂದಿರುವ ಮತ್ತು ಆಧಾರ್​ ಪಡೆಯುವುದಕ್ಕೆ ಅರ್ಹರಾದ ಪ್ರತಿಯೊಬ್ಬರು ಎರಡನ್ನೂ ಜೋಡಣೆ ಮಾಡಬೇಕು.

ಕಳೆದ ಮೂರು ವರ್ಷದಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಪ್ಯಾನ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡುವುದರ ಗಡುವು ಹಲವು ಸಲ ವಿಸ್ತರಣೆ ಮಾಡಿದೆ. ನಿಗದಿತ ದಿನಾಂಕದ ಒಳಗಾಗಿ ಪ್ಯಾನ್​ ಕಾರ್ಡ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಪ್ಯಾನ್ ಕಾರ್ಯ ನಿರ್ವಹಿಸುವುದಿಲ್ಲ. ಸೆಕ್ಷನ್ 114ಎಎ(3) ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಹೀಗಾಗುತ್ತದೆ. ಯಾರು ಹೊಸದಾಗಿ ಪ್ಯಾನ್​ ಕಾರ್ಡ್​ ಅಪ್ಲೈ ಮಾಡುತ್ತಿರುವರೋ ಅವರು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139ಎಎ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ.​

ಒಂದು ವೇಳೆ ಪ್ಯಾನ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದಲ್ಲಿ ಪ್ಯಾನ್​ ಸಲ್ಲಿಸಿಲ್ಲ ಎಂದು ಪರಿಗಣಿಸಲಾಗುತ್ತದೆ. ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 206ಎಎ(6) ಅಡಿಯಲ್ಲಿ ಯಾರಿಗೆ ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಆದಾಯ ಇರುತ್ತದೋ ಅಂಥವರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಮಾಹಿತಿ ನೀಡಬೇಕು. ಒಂದು ವೇಳೆ ತೆರಿಗೆ ಪಾವತಿದಾರರು ನೀಡಿದ ಪ್ಯಾನ್ ಸಿಂಧು ಅಲ್ಲ ಎಂದಾದಲ್ಲಿ ಪ್ಯಾನ್ ಮಾಹಿತಿಯನ್ನು ಒದಗಿಸಿಲ್ಲ ಎಂಬಂತೆ ಬಿಂಬಿತ ಆಗುತ್ತದೆ.

ಆದ್ದರಿಂದ ಮಾರ್ಚ್ 31ನೇ ತಾರೀಕಿನೊಳಗೆ ಇರುವ ಗಡುವಿ ಮೀರಿದಲ್ಲಿ ಪ್ಯಾನ್​ ಕಾರ್ಡ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆ ನಂತರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206ಎಎ ಅಡಿಯಲ್ಲಿ ಶೇ 20ರಷ್ಟು ಟಿಡಿಎಸ್​ ಕಡಿತ ಆಗುತ್ತದೆ. ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ, ಡಿವಿಡೆಂಡ್ ಮತ್ತು ಇತರ ಆದಾಯಗಳಿಗೆ ಹೆಚ್ಚಿನ ಟಿಡಿಎಸ್​ ಆಗುತ್ತದೆ. ಒಂದು ವೇಳೆ ಆಧಾರ್ ಜತೆ ಪ್ಯಾನ್ ಜೋಡಣೆ ಆಗದಿದ್ದಲ್ಲಿ ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಕ್ಕೆ ಶೇ 20ರಷ್ಟು ಟಿಡಿಎಸ್​ ಆಗುತ್ತದೆ. ಉದಾಹರಣೆಗೆ ಬಡ್ಡಿ ಆದಾಯವು 40 ಸಾವಿರ ರೂಪಾಯಿ ದಾಟಿದಲ್ಲಿ ಸೆಕ್ಷನ್ 206ಎಎ ಅಡಿಯಲ್ಲಿ ಶೇ 10ರಷ್ಟು ಟಿಡಿಎಸ್​ ಆಗುತ್ತದೆ, ಅದೇ ಒಂದು ವೇಳೆ ಆಧಾರ್ ಅನ್ನು ಪ್ಯಾನ್ ಜತೆ ಜೋಡಣೆ ಮಾಡಿಲ್ಲ ಅಂತಾದಲ್ಲಿ ಶೇ 20ರಷ್ಟು ಟಿಡಿಎಸ್​ ಆಗುತ್ತದೆ.

ಆದಾಯ ತೆರಿಗೆ ಕಾನೂನು ಅನ್ವಯ ಒಂದು ವೇಳೆ ಪ್ಯಾನ್ ಮಾಹಿತಿ ಒದಗಿಸದೆ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272ಬಿ ಅಡಿಯಲ್ಲಿ 10 ಸಾವಿರ ತೆರಿಗೆ ಬೀಳುತ್ತದೆ. ಪ್ರತಿ ನಿಯಮಾವಳಿ ಪಾಲನೆಯಲ್ಲಿ ತಪ್ಪಿದಾಗಲೂ ದಂಡವನ್ನು ವಿಧಿಸಬಹುದು. ಪ್ರತಿ ಬಾರಿ ಪ್ಯಾನ್ ಒದಗಿಸಲು ವಿಫಲವಾದಾಗಲೂ 10 ಸಾವಿರ ದಂಡ ವಿಧಿಸಬಹುದಾಗಿದೆ. ಆಧಾರ್​ ಜತೆಗೆ ಪ್ಯಾನ್​ ಸಂಖ್ಯೆ ಜೋಡಣೆ ಆಗದಿದ್ದಲ್ಲಿ ಪ್ಯಾನ್​ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುವುದರ ಜತೆಗೆ, ಹೆಚ್ಚಿನ ಟಿಡಿಎಸ್​ ದರ ಹಾಗೂ ಮತ್ತಿತರ ಪರಿಣಾಮಗಳು ಆಗುತ್ತವೆ.

ಇದನ್ನೂ ಓದಿ: ಮಾಹಿತಿ ಹೊಂದಾಣಿಕೆಯಾಗದ ಕಾರಣ ಪ್ಯಾನ್-ಆಧಾರ್ ಲಿಂಕ್ ಆಗುತ್ತಿಲ್ಲವಾ?; ಹೀಗೆ ಮಾಡಿ ನೋಡಿ

ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ