AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing bell: ಸತತ ಎರಡನೇ ದಿನ ಸೆನ್ಸೆಕ್ಸ್ 272 ಪಾಯಿಂಟ್, ನಿಫ್ಟಿ 107 ಪಾಯಿಂಟ್ ಏರಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ ಕಂಡಿವೆ. ಸತತವಾಗಿ ಎರಡನೇ ದಿನ ಕೂಡ ಮಾರ್ಕೆಟ್ ಮೇಲೇರಿದೆ. ನಿಫ್ಟಿಯಲ್ಲಿ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಕಂಪೆನಿ ಷೇರುಗಳು ಇಲ್ಲಿವೆ.

Closing bell: ಸತತ ಎರಡನೇ ದಿನ ಸೆನ್ಸೆಕ್ಸ್ 272 ಪಾಯಿಂಟ್, ನಿಫ್ಟಿ 107 ಪಾಯಿಂಟ್ ಏರಿಕೆ
ಸಾಂದರ್ಭಿಕ ಚಿತ್ರ
Srinivas Mata
|

Updated on:May 06, 2021 | 6:03 PM

Share

ಭಾರತದ ಷೇರುಪೇಟೆಯಲ್ಲಿನ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗುರುವಾರದಂದು (ಮೇ 6, 2021) ಸತತ ಎರಡನೇ ದಿನ ಏರಿಕೆ ದಾಖಲಿಸಿವೆ. ಬಿಎಸ್​ಇ ಸೆನ್ಸೆಕ್ಸ್ 272 ಪಾಯಿಂಟ್​ ಹೆಚ್ಚಳ ಮೇಲೇರಿ 48,949.76 ಪಾಯಿಂಟ್​ನೊಂದಿಗೆ ದಿನದ ವಹಿವಾಟನ್ನು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 106.90 ಪಾಯಿಂಟ್ ಹೆಚ್ಚಳವಾಗಿ 14,724.80 ಪಾಯಿಂಟ್​ನೊಂದಿಗೆ ವ್ಯವಹಾರವನ್ನು ಚುಕ್ತಾಗೊಳಿಸಿದೆ. ಬಿಎಸ್​ಇಯಲ್ಲಿ ಎಲ್ಲ ವಲಯಗಳು ಐ.ಟಿ., ಲೋಹ, ತೈಲ ಮತ್ತು ಅನಿಲ ಹಾಗೂ ವಾಹನ ಸೂಚ್ಯಂಕಗಳು ತಲಾ ಶೇ 1ರಿಂದ 2.7ರಷ್ಟು ಏರಿಕೆ ಕಂಡಿವೆ. ಬಿಎಸ್​ಇಯಲ್ಲಿ ವಿಪ್ರೋ, ಮಾರಿಕೋ, ಲುಪಿನ್ ಸೇರಿದಂತೆ 250ಕ್ಕೂ ಹೆಚ್ಚು ಕಂಪೆನಿಗಳ ಷೇರು ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.

ಕೋವಿಡ್-19 ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕನ್ನು ಮನ್ನಾ ಮಾಡುವುದಕ್ಕೆ ಅಮೆರಿಕ ನಿರ್ಧರಿಸಿರುವುದರಿಂದ ಐ.ಟಿ. ಮತ್ತು ಹಣಕಾಸು ವಲಯದ ಷೇರುಗಳಲ್ಲಿ ಖರೀದಿ ಕಂಡುಬಂದಿದೆ. ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾದರೂ ಜಾಗತಿಕ ಮಟ್ಟದ ಸಕಾರಾತ್ಮಕ ಪ್ರಭಾವವು ದೇಶೀಯ ಮಾರುಕಟ್ಟೆ ಮೇಲೆ ಸಕಾರಾತ್ಮಕವಾದಂಥ ಪ್ರಭಾವವನ್ನೇ ಬೀರಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹಿಂಡಾಲ್ಕೋ ಶೇ 5.13 ಹೀರೋ ಮೋಟೋಕಾರ್ಪ್ ಶೇ 4.49 ವಿಪ್ರೋ ಶೇ 4.42 ಟಾಟಾ ಮೋಟಾರ್ಸ್ ಶೇ 3.34 ಐಷರ್ ಮೋಟಾರ್ಸ್ ಶೇ 2.99

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಪವರ್​ಗ್ರಿಡ್ ಕಾರ್ಪೊರೇಷನ್ ಶೇ -2.80 ಯುಪಿಎಲ್ ಶೇ -1.20 ಎನ್​ಟಿಪಿಸಿ ಶೇ -0.85 ಬಜಾಜ್ ಫಿನ್​ಸರ್ವ್ ಶೇ -0.78 ಒಎನ್​ಜಿಸಿ ಶೇ -0.77

ಇದನ್ನೂ ಓದಿ: ಐಡಿಬಿಐ ಬ್ಯಾಂಕ್ ಷೇರು ಶೇ 14ರಷ್ಟು ಏರಿಕೆ ದಾಖಲೆ; ರೂ. 40ರ ಮೇಲೆ ವಹಿವಾಟು

(Indian stock market index sensex, nifty increased on May 6, 2021. Global cues supported domestic equity market)

Published On - 6:01 pm, Thu, 6 May 21

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು