Sign In

By signing in or creating an account, you agree with Associated Broadcasting Company's Terms & Conditions and Privacy Policy.

ED Arrest: ಚೀನಾದ ವಿವೋ ಇಂಡಿಯಾದ ಸಿಇಒ ಸೇರಿ ಮೂವರು ಟಾಪ್ ಎಕ್ಸಿಕ್ಯೂಟಿವ್​ಗಳನ್ನು ಬಂಧಿಸಿದ ಜಾರಿ ನಿರ್ದೇನಾಲಯ

Money Laundering Charges: ಮನಿ ಲಾಂಡರಿಂಗ್ ಆರೋಪ ಮೇಲೆ ವಿವೊ ಇಂಡಿಯಾದ ಮಧ್ಯಂತರ ಸಿಇಒ ಸೇರಿ ಮೂವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಎರಡು ತಿಂಗಳ ಹಿಂದೆ ವಿವೊ ಇಂಡಿಯಾದ ಉದ್ಯೋಗಿ ಹಾಗು ಚೀನೀ ಪ್ರಜೆ ಸೇರಿ ನಾಲ್ವರು ವ್ಯಕ್ತಿಗಳನ್ನು ಇಡಿ ಬಂಧಿಸಿತ್ತು. ತನ್ನ ಟಾಪ್ ಎಕ್ಸಿಕ್ಯೂಟಿವ್​ಗಳ ಬಂಧನಕ್ಕೆ ವಿವೊ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದೆ. ಇದು ಪ್ರಾಧಿಕಾರಗಳಿಂದ ನಡೆಯುತ್ತಿರುವ ಕಿರುಕುಳ ಎಂದು ಬಣ್ಣಿಸಿದೆ.

ED Arrest: ಚೀನಾದ ವಿವೋ ಇಂಡಿಯಾದ ಸಿಇಒ ಸೇರಿ ಮೂವರು ಟಾಪ್ ಎಕ್ಸಿಕ್ಯೂಟಿವ್​ಗಳನ್ನು ಬಂಧಿಸಿದ ಜಾರಿ ನಿರ್ದೇನಾಲಯ
ಮನಿ ಲಾಂಡರಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 24, 2023 | 1:10 PM

ನವದೆಹಲಿ, ಡಿಸೆಂಬರ್ 24: ಚೀನಾದ ಸ್ಮಾರ್ಟ್​ಫೋನ್ ಕಂಪನಿ ವಿವೊ ಇಂಡಿಯಾದ ಮಧ್ಯಂತರ ಸಿಇಒ (Interim CEO) ಸೇರಿದಂತೆ ಮೂವರು ಉನ್ನತ ಮಟ್ಟದ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ (ED- Enforcement Directorate) ಬಂಧಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಪಿಟಿಐ ಸುದ್ದಿ ಸಂಸ್ಥೆ ವರದಿ ಪ್ರಕಾರ ಅಕ್ರಮ ಹಣ ವರ್ಗಾವಣೆ ಅಥವಾ ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಈ ಕ್ರಮ ಕೈಗೊಂಡಿದೆ. ವಿವೊ ಇಂಡಿಯಾದ ಇಂಟರಿಂ ಸಿಇಒ ಹೋಂಗ್ ಕ್ಸುಕುವಾನ್, ವಿವೋ ಸಿಎಫ್​ಒ ಹರೀಂದರ್ ದಾಹಿಯಾ ಮತ್ತು ಕನ್ಸಲ್ಟೆಂಟ್ ಹೇಮಂತ್ ಮುಂಜಲ್ ಅವರು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಮೂವರು. ಇವರನ್ನು ಶನಿವಾರ ಬಂಧಿಸಲಾಗಿದ್ದು, ಕೋರ್ಟ್ ಮೂರು ದಿನಗಳ ಕಾಲ ಇವರನ್ನು ಇಡಿ ಕಸ್ಟಡಿಗೆ ಒಪ್ಪಿಸಿದೆ.

ಎರಡು ತಿಂಗಳ ಹಿಂದಷ್ಟೇ ಈ ಉದ್ಯಮದ ನಾಲ್ವರು ಎಕ್ಸಿಕ್ಯೂಟಿವ್​ಗಳನ್ನು ಇಡಿ ಬಂಧಿಸಿತ್ತು. ವಿವೋ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚೀನೀ ಪ್ರಜೆ ಆಂಡ್ರ್ಯೂ ಕುವಾಂಗ್, ಲಾವಾ ಇಂಟರ್ನ್ಯಾಷನಲ್ ಎಂಡಿ ಹರಿ ಓಂ ರಾಯ್, ಚಾರ್ಟರ್ಡ್ ಅಕೌಂಟೆಂಟ್​ಗಳಾದ ನಿತಿನ್ ಗರ್ಗ್ ಮತ್ತು ರಾಜನ್ ಮಲಿಕ್ ಅವರನ್ನು ಬಂಧಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನಿನ್ನೆ ವಿವೋ ಇಂಡಿಯಾದ ಮೂವರು ಟಾಪ್ ಎಕ್ಸಿಕ್ಯೂಟಿವ್​ಗಳ ಬಂಧನವಾಗಿರುವ ಸುದ್ದಿ ಗಮನಾರ್ಹ ಎನಿಸಿದೆ.

ಇದನ್ನೂ ಓದಿ: RBI: ನಿರ್ದೇಶಕರಿಗೆ ಸಾಲ ಕೊಟ್ಟು ನಿಯಮ ಉಲ್ಲಂಘನೆ; ಟಿಡಿಸಿಸಿ ಬ್ಯಾಂಕ್​ಗೆ ದಂಡ ವಿಧಿಸಿದ ಆರ್​ಬಿಐ

ಬಂಧನಕ್ಕೆ ಆಘಾತ ವ್ಯಕ್ತಪಡಿಸಿದ ವಿವೊ

ತನ್ನ ಮೂವರು ಉನ್ನತ ಅಧಿಕಾರಿಗಳನ್ನು ಇಡಿ ಬಂಧಿಸಿರುವುದಕ್ಕೆ ವಿವೊ ಆಘಾತ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ. ಪ್ರಾಧಿಕಾರಿಗಳ ಈ ಕ್ರಮದಿಂದ ಆತಂಕಗೊಂಡಿರುವುದಾಗಿ ಅದು ಹೇಳಿಕೆ ನೀಡಿದೆ.

‘ಕಿರುಕುಳಗಳು ಮುಂದುವರಿಯುತ್ತಿರುವುದಕ್ಕೆ ಇತ್ತೀಚೆಗೆ ಮಾಡಲಾಗಿರುವ ಬಂಧನಗಳ ಸಾಕ್ಷಿಯಾಗಿವೆ. ಇದು ಅನಿಶ್ಚಿತ ವಾತಾವರಣ ತುಂಬುತ್ತಿದೆ. ಈ ಆರೋಪಗಳನ್ನು ಎದುರಿಸಲು ಎಲ್ಲಾ ಕಾನೂನು ಮಾರ್ಗ ಅವಲೋಕಿಸಲು ನಾವು ನಿರ್ಣಯಿಸಿದ್ದೇವೆ,’ ಎಂದು ವಿವೋ ಸಂಸ್ಥೆಯ ವಕ್ತಾರ ಹೇಳಿರುವುದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ

2020ರಲ್ಲಿ ಭಾರತದ ಗಡಿಭಾಗದಲ್ಲಿ ಚೀನೀ ಸೈನಿಕರು ಉಗ್ರ ದಾಳಿ ಮಾಡಿದ ಘಟನೆ ಬಳಿಕ ಭಾರತ ಮತ್ತು ಚೀನಾ ನಡುವಿನ ವ್ಯಾವಹಾರಿಕ ಸಂಬಂಧ ಸೂಕ್ಷ್ಮಗೊಂಡಿದೆ. ಚೀನಾದ ಹಲವಾರು ಆ್ಯಪ್​ಗಳನ್ನು ಸರ್ಕಾರ ನಿಷೇಧಿಸಿದೆ. ಅದರ ಸ್ಮಾರ್ಟ್​ಫೋನ್ ಕಂಪನಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತೆ ಚೀನೀ ಸ್ಮಾರ್ಟ್​ಫೋನ್​ಗಳು ಭಾರತೀಯ ಬಳಕೆದಾರರ ದತ್ತಾಂಶಗಳನ್ನು ಕದ್ದು ತಮ್ಮ ದೇಶಕ್ಕೆ ರವಾನಿಸುತ್ತಿರಬಹುದು ಎನ್ನುವಂತಹ ಆರೋಪಗಳೂ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Sun, 24 December 23

ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ