ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

Ethanol Blended Petrol EBP Programme implemented scientifically, says Govt: ಪೆಟ್ರೋಲ್​ಗೆ ಎಥನಾಲ್ ಮಿಶ್ರಣ ಮಾಡುವ ಇಬಿಪಿ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ. ಇ20 ಇಂಧನದ ಅಳವಡಿಕೆಯನ್ನು ಗುರಿಗಿಂತ 5 ವರ್ಷ ಮುಂದೆಯೇ ತಲುಪಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ಎಥನಾಲ್ ಮಿಶ್ರಿತ ಇಂಧನದಿಂದ ವಾಹನದ ಎಂಜಿನ್​ಗೆ ಹಾನಿಯಾಗಿರುವ ಬಗ್ಗೆ ಯಾವ ವರದಿಯೂ ಇಲ್ಲ ಎಂದು ಪೆಟ್ರೋಲಿಂ ಖಾತೆ ರಾಜ್ಯ ಸಚಿವರು ಹೇಳಿದ್ದಾರೆ.

ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ
ಸುರೇಶ್ ಗೋಪಿ
Image Credit source: PTI

Updated on: Jul 20, 2026 | 6:51 PM

ನವದೆಹಲಿ, ಜುಲೈ 20: ಎಥನಾಲ್ ಮಿಶ್ರಿತ ಪೆಟ್ರೋಲ್ ಇಂಧನದ ಯೋಜನೆಯನ್ನು (ಇಬಿಪಿ) ವೈಜ್ಞಾನಿಕವಾಗಿ ಮತ್ತು ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ತಿಳಿಸಿದ್ದಾರೆ. ರಾಜ್ಯಸಭೆಗೆ ಇಂದು ಸೋಮವಾರ ನೀಡಿದ ಲಿಖಿತ ಉತ್ತರದಲ್ಲಿ ಅವರು, ಇ20 ಗುರಿಯನ್ನು ಸರ್ಕಾರ ಐದು ವರ್ಷ ಮುಂಚೆಯೇ ಮುಟ್ಟಿರುವುದನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಶೇ. 20ಕ್ಕಿಂತ ಹೆಚ್ಚು ಎಥನಾಲ್ ಅನ್ನು ಮಿಶ್ರಣ ಮಾಡುವ ಇರಾದೆ ಸರ್ಕಾರಕ್ಕಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಭಾರತವು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿಯೇ ಶೇ. 20 ರಷ್ಟು ಎಥನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಸದ್ಯಕ್ಕೆ ಈ ಪ್ರಮಾಣವನ್ನು ಶೇ. 20 ಕ್ಕಿಂತ ಹೆಚ್ಚಿಸುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ. ಮುಂದಿನ ದಿನಗಳಲ್ಲಿ ತಜ್ಞರ ಸಮಿತಿಯ ವರದಿ ಹಾಗೂ ಆಟೋಮೊಬೈಲ್ ಉದ್ಯಮದ ಸಹಮತಿಯ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್​ನಲ್ಲಿ ತಮ್ಮನ್ನು ಹೊಗಳಿದ ಪ್ರಧಾನಿಗೆ ಸ್ಕೈರೂಟ್ ಏರೋಸ್ಪೇಸ್ ಧನ್ಯವಾದ

ಎಥನಾಲ್​ನಿಂದ ವಾಹನಗಳಿಗೆ ತೊಂದರೆ ಆಗಿದ್ದು ಕಂಡುಬಂದಿಲ್ಲ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಎಥನಾಲ್ ಮಿಶ್ರಿತ ಪೆಟ್ರೋಲ್’ (EBP) ಯೋಜನೆಯಡಿ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣವಿರುವ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಎಂಜಿನ್ ಜಖಂಗೊಳ್ಳುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು ಹೇಳಿದ್ದಾರೆ.

ಇ-20 ಇಂಧನ ಬಳಕೆಯಿಂದಾಗಿ ದೇಶದಲ್ಲಿ ಯಾವುದೇ ರೀತಿಯ ವ್ಯಾಪಕ ಎಂಜಿನ್ ವೈಫಲ್ಯಗಳು ವರದಿಯಾಗಿಲ್ಲ. ಇ-20 ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳಲ್ಲಿ ಇಂಧನ ಪಂಪ್ ತುಕ್ಕು ಹಿಡಿಯುವುದು ಅಥವಾ ಎಂಜಿನ್ ಬ್ರೇಕ್‌ಡೌನ್ ಆಗುತ್ತಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಇ-10 ಇಂಧನಕ್ಕೆ ತಕ್ಕಂತೆ ತಯಾರಾದ ಹಳೆಯ ವಾಹನಗಳಲ್ಲಿ ಇ-20 ಬಳಸಿದಾಗ ಮೈಲೇಜ್‌ನಲ್ಲಿ ಕೇವಲ ಶೇ. 3 ರಿಂದ ಶೇ. 5 ರಷ್ಟು ಮಾತ್ರ ಅತ್ಯಲ್ಪ ಕುಸಿತ ಕಂಡುಬರಬಹುದು ಎಂದಿದ್ದಾರೆ.

ಎಎನ್​ಐ ಸುದ್ದಿ ಸಂಸ್ಥೆಯ ಟ್ವೀಟ್

ಎಥನಾಲ್ ಮಿಶ್ರಣ ಪ್ರಮಾಣವನ್ನು ಶೇ. 20ಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ತಜ್ಞರ ಸಮಿತಿಯ ವರದಿ ಹಾಗೂ ಆಟೋಮೊಬೈಲ್ ಉದ್ಯಮದ ಸಹಮತಿಯ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶ್ ಗೋಪಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಇಬಿಪಿ ಯೋಜನೆಯಿಂದ ದೇಶಕ್ಕೆ ಬೃಹತ್ ಆರ್ಥಿಕ ಉಳಿತಾಯ

2014 ರಿಂದ ಈ ಯೋಜನೆಯಿಂದಾಗಿ ದೇಶಕ್ಕೆ ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಜೊತೆಗೆ 3.16 ಕೋಟಿ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿಮೆಯಾಗಿದೆ ಎಂಬ ಸಂಗತಿಯನ್ನು ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಪರಿಸರ ಮತ್ತು ರೈತರಿಗೆ ಲಾಭ

ಈ ಇಬಿಪಿ ಯೋಜನೆಯಿಂದಾಗಿ 9.52 ಕೋಟಿ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ದೇಶದ ರೈತರಿಗೆ ಎಥನಾಲ್ ಪೂರೈಕೆಯಿಂದಾಗಿ ₹1.66 lakh ಕೋಟಿಗೂ ಅಧಿಕ ಹೆಚ್ಚುವರಿ ಆದಾಯ ಲಭಿಸಿದೆ. ರೈತರ ಹಿತದೃಷ್ಟಿಯಿಂದ ಕಬ್ಬಿನ ಜೊತೆಗೆ ಜೋಳ, ನವಣೆ ಹಾಗೂ ಹೆಚ್ಚುವರಿ ಧಾನ್ಯಗಳಿಂದಲೂ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us