AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol

Petrol

ಪೆಟ್ರೋಲ್ ಈ ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಲಭ್ಯ ಇರುವ ಸಂಪನ್ಮೂಲ. ಕಚ್ಚಾ ತೈಲ ಅಥವಾ ಪೆಟ್ರೋಲಿಯಂನಿಂದ ತಯಾರಿಸಲಾಗುವ ಉಪ ಉತ್ಪನ್ನಗಳಲ್ಲಿ ಪೆಟ್ರೋಲ್ ಒಂದು. ಮರಗಿಡ ಇತ್ಯಾದಿ ವಸ್ತುಗಳು ಲಕ್ಷಾಂತರ ವರ್ಷಗಳ ಕಾಲ ಭೂಗರ್ಭದಲ್ಲಿ ಹುದುಗಿ ಡೀಕಂಪೋಸ್ ಆದಾಗ ಪೆಟ್ರೋಲಿಯಂ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಕಚ್ಚಾ ತೈಲವನ್ನು ಹೊರತೆಗೆದು, ಅದನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, ಕೆರೋಸಿನ್, ಎಟಿಎಫ್, ಪ್ಯಾರಾಫಿನ್ ಇತ್ಯಾದಿ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪೆಟ್ರೋಲ್ ಅನ್ನು ಅಮೆರಿಕ ಮೊದಲಾದ ಕೆಲ ದೇಶಗಳಲ್ಲಿ ಗ್ಯಾಸೋಲಿನ್ ಎಂದೂ ಕರೆಯುತ್ತಾರೆ. ವಾಹನಗಳಿಗೆ ಇಂಧನವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ಇವೆರಡಕ್ಕೆ ಬಹಳ ದೊಡ್ಡ ಬೇಡಿಕೆ ಇದೆ. ಅದರಲ್ಲೂ ನೂರು ವರ್ಷಗಳಿಂದ ಪೆಟ್ರೋಲ್ ಅತ್ಯಂತ ಬೇಡಿಕೆ ಹೊಂದಿದ್ದ ಸಂಪನ್ಮೂಲ ಎನಿಸಿದೆ. ಆದರೆ, ಪೆಟ್ರೋಲ್ ಅನ್ನು ಇಂಧನವಾಗಿ ಬಳಕೆ ಮಾಡಿದಾಗ ಪರಿಸರಕ್ಕೆ ಹಾನಿಯಾಗುವ ವಸ್ತುಗಳು ವಾತಾವರಣಕ್ಕೆ ಸೇರುತ್ತವೆ. ಈ ಕಾರಣಕ್ಕೆ ಜಗತ್ತು ಪೆಟ್ರೋಲ್​ನಿಂದ ವಿಮುಖವಾಗಿ ಪರ್ಯಾಯ ಇಂಧನದತ್ತ ವಾಲುತ್ತಿದೆ.

ಇನ್ನೂ ಹೆಚ್ಚು ಓದಿ

ನಾವ್ಯಾಕೆ ತೈಲ ನೀಡಬೇಕು? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ

India refuses to follow calls of IEA to release strategic oil reserves: ತೈಲ ಬಿಕ್ಕಟ್ಟು ನೀಗಿಸಲು ಎಲ್ಲಾ ದೇಶಗಳು ತಮ್ಮ ತೈಲ ಸಂಗ್ರಹವನ್ನು ಬಿಡುಗಡೆ ಮಾಡಬೇಕೆಂದು ಐಎಇ ತಿಳಿಸಿದೆ. ಆದರೆ, ಭಾರತಕ್ಕೆ ಇದಕ್ಕೆ ಒಪ್ಪಿಲ್ಲ. ಈ ಬಿಕ್ಕಟ್ಟು ಸೃಷ್ಟಿಗೆ ತಾವು ಕಾರಣರಲ್ಲ. ಅದಕ್ಕೆ ಕಾರಣರಾದವರನ್ನು ಜವಾಬ್ದಾರರನ್ನಾಗಿಸಿ ಎಂದು ಭಾರತ ಹೇಳಿದೆ. ಇರಾನ್ ಯುದ್ಧದಿಂದಾಗಿ ತೈಲ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗಿರುವುದರಿಂದ ತುರ್ತು ಸ್ಥಿತಿ ಉದ್ಭವಿಸಿದೆ.

ಎಲ್​ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ

PM Narendra Modi holds meeting with Hardeep Singh Puri and Jaishankar: ದೇಶದಲ್ಲಿ ಎಲ್​ಪಿಜಿ ಹಾಗೂ ಇತರ ಅನಿಲ ಸರಬರಾಜು ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲಿಯಂ ಮತ್ತು ವಿದೇಶಾಂಗ ಸಚಿವರುಗಳ ಜೊತೆ ಸಭೆ ನಡೆಸಿದರು. ಎಲ್​ಪಿಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಪರಿಸ್ಥಿತಿ ಅವಲೋಕಿಸಲು ಈ ಸಭೆ ನಡೆಸಲಾಯಿತು.

ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

Crude oil prices at 100-110 USD per barrel: ಇರಾನ್ ಯುದ್ಧದ ಪರಿಣಾಮ ತೈಲ ಬೆಲೆ ಬ್ಯಾರಲ್​ಗೆ 100 ಡಾಲರ್ ದಾಟಿ ಹೋಗಿದೆ. ಕ್ರೂಡ್ ಫ್ಯೂಚರ್ಸ್​ನಲ್ಲಿ ಬೆಲೆ 120 ಡಾಲರ್ ದಾಟಿದೆ. 2008ರಲ್ಲಿ ಡಬ್ಲ್ಯುಟಿಐ ಕ್ರೂಡ್ 147 ಡಾಲರ್ ಮುಟ್ಟಿತ್ತು. ಈ ಬಾರಿ ಬಿಕ್ಕಟ್ಟು ಹೀಗೆ ಮುಂದುವರಿದರೆ ಆ ಮಟ್ಟವನ್ನೂ ದಾಟಿ ಹೋಗಬಹುದು. ತೈಲ ಬೆಲೆ ಹೆಚ್ಚಿದಷ್ಟೂ ಭಾರತದ ಆರ್ಥಿಕ ಹಾಗೂ ಹಣಕಾಸು ಪರಿಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಹಾರ್ಮುಜ್ ಜಲಸಂಧಿ ಅಮೆರಿಕ, ಇಸ್ರೇಲ್, ಯೂರೋಪ್​ಗೆ ಮಾತ್ರ ಬಂದ್; ಬೇರೆ ದೇಶಗಳಿಗಿಲ್ಲ ತಡೆ: ಇರಾನ್ ಸ್ಪಷ್ಟನೆ

Iran Says Hormuz Strait Only Closed To US, Israel, Europe: ಹಾರ್ಮುಜ್ ಜಲಸಂಧಿ ಮೂಲಕ ತೈಲ ಹಡಗುಗಳನ್ನು ಸಾಗಲು ಬಿಡದೆ ತಡೆ ಹಾಕಿದ್ದ ಇರಾನ್ ಇದೀಗ ಒಂದಷ್ಟು ಸಡಿಲಿಕೆ ಮಾಡಿದೆ. ಅಮೆರಿಕ, ಇಸ್ರೇಲ್, ಯೂರೋಪ್ ರಾಷ್ಟ್ರಗಳಿಗೆ ಇಲ್ಲಿಂದ ತೈಲ ಪೂರೈಕೆ ಆಗಲು ಬಿಡುವುದಿಲ್ಲ. ಉಳಿದ ದೇಶಗಳಿಗೆ ಯಾವ ತಡೆ ಇರುವುದಿಲ್ಲ ಎಂದು ಇರಾನ್​ನ ರೆವಲ್ಯೂಶನರಿ ಗಾರ್ಡ್ ಸೇನೆ ತಿಳಿಸಿದೆ.

ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು

India in a very comfortable position in energy security, says govt sources: ಕಚ್ಚಾ ತೈಲ, ಎಲ್​ಪಿಜಿ, ಎಲ್​ಎನ್​ಜಿಗೆ ಯಾವ ಕೊರತೆ ಇಲ್ಲ. ಇವುಗಳಿಗೆ ಭಾರತ ಪರ್ಯಾಯ ಮೂಲಗಳನ್ನು ಅವಲೋಕಿಸುತ್ತಿದೆ ಎಂದು ಮೂಲಗಳು ಹೇಳಿವೆ. ಭಾರತದಲ್ಲಿ ಸದ್ಯ ಸಾಕಷ್ಟು ಇಂಧನ ದಾಸ್ತಾನು ಇದೆ. ಕಳವಳಪಡಬೇಕಾದ ಪರಿಸ್ಥಿತಿ ಇಲ್ಲ. ಎಲ್​ಪಿಇ ಮತ್ತು ಎಲ್​ಎನ್​ಜಿಗಾಗಿ ಬೇರೆ ಬೇರೆ ಮೂಲಗಳನ್ನು ಹುಡುಕಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಪ್ಲಾನ್ ಹಾಕಿದ ಭಾರತ

India Draws Up Oil Contingency Plan Amid US-Iran Turmoil: ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಗೆ ಅಡ್ಡಿಯಾಗಿದೆ. ಗಲ್ಫ್ ರಾಷ್ಟ್ರಗಳಿಂದ ತೈಲ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಾಗಲು ತಡೆಯಾಗಿದೆ. ಭಾರತದ ಬಳಿ ದೀರ್ಘಕಾಲಕ್ಕೆ ಆಗುವಷ್ಟು ತೈಲ, ಪೆಟ್ರೋಲ್, ಎಲ್​ಎನ್​ಜಿ, ಎಲ್​ಪಿಜಿ ಸರಕುಗಳು ಇಲ್ಲ. ಈ ಹಿನ್ನೆಲೆಯಲ್ಲಿ ಭಾರತವು ಪರ್ಯಾಯ ಮಾರ್ಗಗಳನ್ನು ಅವಲೋಕಿಸುತ್ತಿದೆ.

ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

Crude oil prices surge ahead, effects on India and its import bill: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವಂತೆ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಒಂದು ಬ್ಯಾರಲ್ ತೈಲದ ಬೆಲೆ 80 ಡಾಲರ್ ದಾಟಿದೆ. ಇದು ಮತ್ತಷ್ಟು ಏರಿಕೆ ಆಗಲಿದ್ದು ತಜ್ಞರ ಅಂದಾಜಿನ ಪ್ರಕಾರ ಬೆಲೆ 100 ಡಾಲರ್ ದಾಟಬಹುದು. ಬೆಲೆ ಒಂದು ಡಾಲರ್ ಹೆಚ್ಚಿದಂತೆ ಭಾರತಕ್ಕೆ ಆರ್ಥಿಕ ಹೊರೆ ಬಹಳ ಅಧಿಕ ಇರುತ್ತದೆ.

ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

India's strategic petroleum reserves: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತಕ್ಕೆ ಆಗುವ ಪರಿಣಾಮವೇನು? ಬಹಳ ಅಧಿಕ ಪೆಟ್ರೋಲ್ ಬಳಸುವ ಭಾರತವು ಪೆಟ್ರೋಲ್​ಗಾಗಿ ಏನು ಮಾಡಬೇಕು? ಇಲ್ಲಿರುವ ಪೆಟ್ರೋಲ್ ಸಂಗ್ರಹ ಎಷ್ಟು ದಿನಗಳಿಗೆ ಆಗುವಷ್ಟು ಇದೆ? ಈ ಬಗ್ಗೆ ಒಂದು ಮಾಹಿತಿ...

ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

India's strategic petroleum reserves: ಜಾಗತಿಕವಾಗಿ ತುರ್ತು ಸಂದರ್ಭ ಬಂದು ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದಲ್ಲಿರುವ ಪೆಟ್ರೋಲಿಯಂ ಸಂಗ್ರಹ ಎಷ್ಟು ದಿನಗಳ ಬಳಕೆಗೆ ಆಗುವಷ್ಟು ಇದೆ? ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಾರ ಭಾರತದಲ್ಲಿ ಸದ್ಯ 74 ದಿನಗಳಿಗೆ ಆಗುವಷ್ಟು ತೈಲ ಸಂಗ್ರಹ ಇದೆ. ಇದನ್ನು 90 ದಿನಗಳಿಗೆ ಏರಿಸಲಾಗುವುದು ಎಂದಿದ್ದಾರೆ.

ಇಥನಾಲ್ ಬಂದ ನಂತರ ಸಕ್ಕರೆ ಕಾರ್ಖಾನೆಗಳಿಗೆ ಬಂತು ಜೀವ: ನಿತಿನ್ ಗಡ್ಕರಿ

Nitin Gadkari defends ethanol policy: ಇಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆ ಆಗುತ್ತಿದೆ ಎನ್ನುವ ಆರೋಪವನ್ನು ನಿತಿನ್ ಗಡ್ಕರಿ ತಳ್ಳಿಹಾಕಿದ್ದಾರೆ. ಗಡ್ಕರಿ ಮಕ್ಕಳಿಗೆ ಅನುಕೂಲವಾಗಲೆಂದು ಇಥನಾಲ್ ಬಳಕೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನೂ ತಳ್ಳಿಹಾಕಿದ್ದಾರೆ. ಇಥನಾಲ್ ಬಳಕೆಯಿಂದಾಗಿ ಸಕ್ಕರೆ ಉದ್ಯಮ ಜೀವ ಉಳಿಸಿಕೊಂಡಿದೆ ಎಂದಿದ್ದಾರೆ.

Hormuz Strait: ಇರಾನ್​​ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?

Can Iran block Hormuz Strait? ತನ್ನ ಮೂರು ಪರಮಾಣು ಸ್ಥಳಗಳ ಮೇಲೆ ಅಮೆರಿಕ ದಾಳಿ ಮಾಡಿದಕ್ಕೆ ಪ್ರತೀಕಾರವಾಗಿ ಇರಾನ್ ಹಾರ್ಮೂಜ್ ಸ್ಟ್ರೇಟ್ ಅನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದೆ. ಪರ್ಷಿಯಲ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ಮಧ್ಯೆ ಇರುವ ಹಾರ್ಮೂಜ್ ಸ್ಟ್ರೇಟ್ ಕಿರಿದಾದ ಜಲಮಾರ್ಗ ಹೊಂದಿದೆ. ಹಾರ್ಮೂಜ್ ಸ್ಟ್ರೇಟ್​​ನ ಉತ್ತರ ಭಾಗವು ಇರಾನ್ ನಿಯಂತ್ರಣದಲ್ಲಿದೆ. ದಕ್ಷಿಣವು ಓಮನ್ ನಿಯಂತ್ರಣದಲ್ಲಿದೆ. ಭಾರತಕ್ಕೆ ಆಮದಾಗಿ ಬರುವ ಹೆಚ್ಚಿನ ತೈಲವು ಈ ಮಾರ್ಗದಿಂದಲೇ ಬರುತ್ತದೆ ಎಂಬುದು ವಿಶೇಷ.

ಅಂಡಮಾನ್ ಬಳಿ ಎರಡು ಲಕ್ಷ ಕೋಟಿ ಲೀಟರ್ ಕಚ್ಛಾ ತೈಲ ನಿಕ್ಷೇಪ? ಭಾರತದ ಆರ್ಥಿಕ ಬೆಳವಣಿಗೆಗೆ ರಾಕೆಟ್ ವೇಗ ಕೊಡಬಲ್ಲುದು ಈ ಸಂಗ್ರಹ

Petroleum minister Hardeep Singh Puri speaks of possible crude oil reserves at Andaman sea: ಅಂಡಮಾನ್ ಸಮುದ್ರ ಗರ್ಭದೊಳಗೆ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ ಬ್ಯಾರಲ್ ಕಚ್ಛಾ ತೈಲ ಇರುವ ಸುಳಿವು ಸಿಕ್ಕಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಮಾಹಿತಿ ನೀಡಿದ್ದಾರೆ. ಗಯಾನದಲ್ಲಿ ಇತ್ತೀಚೆಗೆ ಸಿಕ್ಕಷ್ಟು ದೊಡ್ಡ ಪ್ರಮಾಣದ ತೈಲ ಸಂಗ್ರಹವು ಅಂಡಮಾನ್​​ನಲ್ಲಿ ಇರಬಹುದು ಎಂದಿದ್ದಾರೆ.

ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು