AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol

Petrol

ಪೆಟ್ರೋಲ್ ಈ ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಲಭ್ಯ ಇರುವ ಸಂಪನ್ಮೂಲ. ಕಚ್ಚಾ ತೈಲ ಅಥವಾ ಪೆಟ್ರೋಲಿಯಂನಿಂದ ತಯಾರಿಸಲಾಗುವ ಉಪ ಉತ್ಪನ್ನಗಳಲ್ಲಿ ಪೆಟ್ರೋಲ್ ಒಂದು. ಮರಗಿಡ ಇತ್ಯಾದಿ ವಸ್ತುಗಳು ಲಕ್ಷಾಂತರ ವರ್ಷಗಳ ಕಾಲ ಭೂಗರ್ಭದಲ್ಲಿ ಹುದುಗಿ ಡೀಕಂಪೋಸ್ ಆದಾಗ ಪೆಟ್ರೋಲಿಯಂ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಕಚ್ಚಾ ತೈಲವನ್ನು ಹೊರತೆಗೆದು, ಅದನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, ಕೆರೋಸಿನ್, ಎಟಿಎಫ್, ಪ್ಯಾರಾಫಿನ್ ಇತ್ಯಾದಿ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪೆಟ್ರೋಲ್ ಅನ್ನು ಅಮೆರಿಕ ಮೊದಲಾದ ಕೆಲ ದೇಶಗಳಲ್ಲಿ ಗ್ಯಾಸೋಲಿನ್ ಎಂದೂ ಕರೆಯುತ್ತಾರೆ. ವಾಹನಗಳಿಗೆ ಇಂಧನವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ಇವೆರಡಕ್ಕೆ ಬಹಳ ದೊಡ್ಡ ಬೇಡಿಕೆ ಇದೆ. ಅದರಲ್ಲೂ ನೂರು ವರ್ಷಗಳಿಂದ ಪೆಟ್ರೋಲ್ ಅತ್ಯಂತ ಬೇಡಿಕೆ ಹೊಂದಿದ್ದ ಸಂಪನ್ಮೂಲ ಎನಿಸಿದೆ. ಆದರೆ, ಪೆಟ್ರೋಲ್ ಅನ್ನು ಇಂಧನವಾಗಿ ಬಳಕೆ ಮಾಡಿದಾಗ ಪರಿಸರಕ್ಕೆ ಹಾನಿಯಾಗುವ ವಸ್ತುಗಳು ವಾತಾವರಣಕ್ಕೆ ಸೇರುತ್ತವೆ. ಈ ಕಾರಣಕ್ಕೆ ಜಗತ್ತು ಪೆಟ್ರೋಲ್​ನಿಂದ ವಿಮುಖವಾಗಿ ಪರ್ಯಾಯ ಇಂಧನದತ್ತ ವಾಲುತ್ತಿದೆ.

ಇನ್ನೂ ಹೆಚ್ಚು ಓದಿ

Nitin Gadkari on E20 Fuel: ಇ20 ಪೆಟ್ರೋಲ್ ಹಳೆಯ BS-III ವಾಹನಗಳ ರಬ್ಬರ್ ಭಾಗಗಳಿಗೆ ಹಾನಿ ಮಾಡಬಹುದು:ನಿತಿನ್ ಗಡ್ಕರಿ

ಹಳೆಯ ಬಿಎಸ್-III ವಾಹನಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಇ20 ಪೆಟ್ರೋಲ್‌ನಲ್ಲಿ ಚಲಾಯಿಸುವಾಗ ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಏಪ್ರಿಲ್ 1, 2005 ರಿಂದ ಜಾರಿಗೆ ಬಂದು, 2016 ಕ್ಕಿಂತ ಮೊದಲು ತಯಾರಾದ BS-III (ಭಾರತ್ ಸ್ಟೇಜ್-3) ವಾಹನಗಳಲ್ಲಿ ಇ20 ಇಂಧನ ಬಳಸುವಾಗ, ಅವುಗಳ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.

ಇ20 ಪೆಟ್ರೋಲ್‌ನಿಂದ ವಾಹನದ ಎಂಜಿನ್‌ಗೆ ಹಾನಿ, ಮೈಲೇಜ್ ಇಳಿಯುತ್ತೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ:ನಿತಿನ್ ಗಡ್ಕರಿ ಸ್ಪಷ್ಟನೆ

E20 ಪೆಟ್ರೋಲ್‌ನಿಂದ ವಾಹನದ ಎಂಜಿನ್‌ಗೆ ಹಾನಿ ಅಥವಾ ಮೈಲೇಜ್ ಇಳಿಕೆ ಕುರಿತ ಆತಂಕಗಳಿಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ವ್ಯಾಪಕ ಅಧ್ಯಯನಗಳು, ಕ್ಷೇತ್ರ ಪ್ರಯೋಗಗಳ ನಂತರವೇ E20 ಜಾರಿಗೆ ತರಲಾಗಿದೆ. ಹಳೆಯ BS-III ವಾಹನಗಳ ಕೆಲವು ಭಾಗಗಳಿಗೆ ಮಾತ್ರ ಬದಲಾವಣೆ ಬೇಕಾಗಬಹುದು. ಮೈಲೇಜ್ ಅನೇಕ ಅಂಶಗಳನ್ನು ಅವಲಂಬಿಸಿದೆ, ಇಂಧನ ಪ್ರಕಾರವನ್ನು ಮಾತ್ರವಲ್ಲ.

ಅಡುಗೆ ಇಂಧನವಾಗಿ ಎಥನಾಲ್; ಎಲ್​ಪಿಜಿಗೆ ಮತ್ತೊಂದು ಪರ್ಯಾಯಕ್ಕೆ ಸರ್ಕಾರ ಯತ್ನ; ಸಕ್ಕರೆ ಬಗ್ಗೆ ಆವತ್ತು ಮೋದಿ ಹೇಳಿದ್ದರ ಅರ್ಥ ಇದಾ?

Govt thinks of using ethanol as cooking gas: ಎಥನಾಲ್ ಮಿಶ್ರಿತ ಪೆಟ್ರೋಲ್ ಕುರಿತ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸುವಂತೆ ಮಾಡಲು ಸರ್ಕಾರ ಯೋಚಿಸುತ್ತಿದೆ. ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಎಥನಾಲ್ ಅನ್ನು ಬಳಸಲು ಸರ್ಕಾರ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿರಬಹುದು. ಎಥನಾಲ್ ಅನ್ನು ಎಲ್​ಪಿಜಿ ರೀತಿಯಲ್ಲಿ ಅಡುಗೆ ಇಂಧನವಾಗಿ ಬಳಸಬಹುದು. ಆದರೆ, ಅದಕ್ಕೆ ಅದರದ್ದೇ ವಿಶೇಷ ಸ್ಟೌವ್ ಬೇಕಾಗುತ್ತದೆ.

ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

Ethanol Blended Petrol EBP Programme implemented scientifically, says Govt: ಪೆಟ್ರೋಲ್​ಗೆ ಎಥನಾಲ್ ಮಿಶ್ರಣ ಮಾಡುವ ಇಬಿಪಿ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ. ಇ20 ಇಂಧನದ ಅಳವಡಿಕೆಯನ್ನು ಗುರಿಗಿಂತ 5 ವರ್ಷ ಮುಂದೆಯೇ ತಲುಪಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ಎಥನಾಲ್ ಮಿಶ್ರಿತ ಇಂಧನದಿಂದ ವಾಹನದ ಎಂಜಿನ್​ಗೆ ಹಾನಿಯಾಗಿರುವ ಬಗ್ಗೆ ಯಾವ ವರದಿಯೂ ಇಲ್ಲ ಎಂದು ಪೆಟ್ರೋಲಿಂ ಖಾತೆ ರಾಜ್ಯ ಸಚಿವರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಟೋಲ್​ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು?

Hormuz Strait USA Iran toll war: ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಸರಕುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ. 20ರಷ್ಟು ತೆರಿಗೆ ವಿಧಿಸಲು ಉದ್ದೇಶಿಸಿರುವುದು ಭಾರತದ ಮೇಲೆ ನೇರ ಪರಿಣಾಮ ಆಗಲಿದೆ. ಗಲ್ಫ್ ರಾಷ್ಟ್ರಗಳಿಂದ ಭಾರತ ಹೆಚ್ಚಿನ ತೈಲ ಆಮದು ಮಾಡಿಕೊಳ್ಳುವುದರಿಂದ ಈ ಬೆಳವಣಿಗೆಯು ಭಾರತಕ್ಕೆ ಆತಂಕ ಮೂಡಿಸಿದೆ.

ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್

Govt FAQs on E20 petrol: ಎಥನಾಲ್ ಮಿಶ್ರಿತ ಇಂಧನವಾದ ಇ20 ಬಗ್ಗೆ ವಾಹನ ಮಾಲಿಕರು ಭಯಗೊಂಡಿದ್ದಾರೆ. ಇ20 ಪೆಟ್ರೋಲ್​ನಿಂದ ವಾಹನದ ಭಾಗಗಳು ಹಾಳಾಗುತ್ತವೆ, ಮೈಲೇಜ್ ಕಡಿಮೆ ಆಗುತ್ತದೆ ಎಂಬ ಆತಂಕ ಇದೆ. ಆದರೆ, ಸರ್ಕಾರ ಈ ಎಲ್ಲಾ ಸಂದೇಹಗಳನ್ನು ತಳ್ಳಿಹಾಕಿದ್ದು, ಈ ಇಂಧನ ಯಾಕೆ ಹಾನಿಕರ ಅಲ್ಲ ಎಂಬುದನ್ನು ವಿವರಿಸಿದೆ.

ವಿಶ್ವದ ಹಲವು ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್ ಅಗ್ಗ; ಇದು ಹೇಗೆ ಸಾಧ್ಯವಾಯಿತು? ಸಚಿವ ಹರ್ದೀಪ್ ಸಿಂಗ್ ಪುರಿ ಬಿಚ್ಚಿಟ್ಟ ಸತ್ಯ

Petroleum minister Hardeep Singh Puri says petrol price in India is among lowest: ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದ ಜಾಗತಿಕ ತೈಲ ಬಿಕ್ಕಟ್ಟು ಉದ್ಭವಿಸಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಹೆಚ್ಚೇನೂ ಏರಲಿಲ್ಲ. ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯೇ ಇದೆ. ಇದಕ್ಕೆ ಕಾರಣವೇನು ಎಂಬುದನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ.

ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಇಂಜಿನ್​ಗೆ ಹಾನಿಯಾಗದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಸರ್ಕಾರದ ನೀತಿಯ ಕುರಿತು ಎದ್ದಿರುವ ವಿವಾದವು ಕೇವಲ ತಪ್ಪು ವ್ಯಾಖ್ಯಾನಗಳಿಂದ ಕೂಡಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇ20 ಇಂಧನವು ಇಂಜಿನ್‌ಗಳನ್ನು ಹಾಳುಮಾಡುತ್ತದೆ ಮತ್ತು ಕೀಟಗಳನ್ನು ಆಕರ್ಷಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳು ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲು, ಇಂಗಾಲದ ಹೊರಸೂಸುವಿಕೆಯನ್ನು ಕುಗ್ಗಿಸಲು ಮತ್ತು ದೇಶೀಯ ಕೃಷಿ ಆರ್ಥಿಕತೆಗೆ ಬೆಂಬಲ ನೀಡಲು ಸರ್ಕಾರ ಎಥನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ

India's Ethanol blended fuel program: ಭಾರತದಲ್ಲಿ ಶೇ. 20 ಎಥನಾಲ್ ಮಿಶ್ರಣ ಇರುವ ಇ20 ಪೆಟ್ರೋಲ್ ಅನ್ನು ಪೂರೈಸುವ ಗುರಿ ಇಡಲಾಗಿದೆ. ಇದೇ ವೇಳೆ, ಎಥನಾಲ್ ಮಿಶ್ರಿತ ಇಂಧನದ ಬಗ್ಗೆ ದೇಶದಲ್ಲಿ ಸಾಕಷ್ಟು ನೆಗಟಿವ್ ವಿಚಾರಗಳು ಹಬ್ಬಿವೆ. ಎಂಜಿನ್​ಗೆ ಧಕ್ಕೆಯಾಗುತ್ತದೆ ಎನ್ನುವುದು ಪ್ರಮುಖ ಆರೋಪ. ಸರ್ಕಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದೆ.

ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್

Why petrol price not reduced despite crude oil rates coming down: ಇರಾನ್ ಯುದ್ಧದಿಂದ ನಾಲ್ಕು ತಿಂಗಳು ಬಿಕ್ಕಟ್ಟು ಉದ್ಭವಿಸಿ, ತೈಲ ಬೆಲೆ ಗಗನಕ್ಕೇರಿತ್ತು. ಇದೀಗ ತೈಲ ಬೆಲೆ ಯುದ್ಧಕ್ಕೆ ಪೂರ್ವದ ಸ್ಥಿತಿಗೆ ಮರಳಿದೆ. ಆದರೆ, ತೈಲ ಬೆಲೆ ಇಳಿದರೂ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆಗಳನ್ನು ಇಳಿಸಿಲ್ಲ. ನಯಾರಾದ ಪೆಟ್ರೋಲ್ ಬೆಲೆ ಇಳಿದರೂ ಇವು ದರ ಕಡಿಮೆ ಮಾಡದಿರಲು ಏನು ಕಾರಣ? ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ.

ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ

Nayara slashes petrol price by Rs 5 per litre: ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ವಿವಿಧ ಇಂಧನ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಖಾಸಗಿ ನಯಾರ ಎನರ್ಜಿ ಕಂಪನಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಸಿದೆ. ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು ಎಟಿಎಫ್ ಇಂಧನದ ಬೆಲೆ ತಗ್ಗಿಸಿವೆ. ಕಮರ್ಷಿಯಲ್ ಎಲ್​ಪಿಜಿ ಬೆಲೆಗಳೂ ಇಳಿದಿವೆ.

ಪೆಟ್ರೋಕೆಮಿಕಲ್ ಉದ್ಯಮ ನಿರಾಳ; ಪ್ರಮುಖ ಕಚ್ಛಾವಸ್ತುಗಳ ಆಮದಿಗೆ ಜುಲೈ 15ರವರೆಗೆ ಕಸ್ಟಮ್ಸ್ ಡ್ಯೂಟಿ ವಿನಾಯಿತಿ

Zero customs duty on key petrochemicals till July 15th: ಕ್ರಿಟಿಕಲ್ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಶೂನ್ಯ ಕಸ್ಟಮ್ಸ್ ಡ್ಯೂಟಿ ಏಪ್ರಿಲ್ 2ರಿಂದ ಜಾರಿಯಲ್ಲಿದೆ. ಇದನ್ನು ಜುಲೈ 15ರವರೆಗೆ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಸರಬರಾಜು ಸರಪಳಿ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ