ITR Refund: ಹೆಚ್ಚು‘ವರಿ’ಯಾಗಿ ಕಟ್ಟಿದ ತೆರಿಗೆ ಹಣ ಮರುಪಾವತಿಗಾಗಿ ಕಾಯುತ್ತಿರುವಿರಾ? ನಕಲಿ ಸಂದೇಶಗಳಿಗೆ ಮರುಳಾಗಬೇಡಿ..

ಹೆಚ್ಚು‘ವರಿ’ಯಾಗಿ ಕಟ್ಟಿದ ತೆರಿಗೆ ಹಣ ನಾಳೆಯೇ ಮರುಪಾವತಿ ಆಗಿಬಿಡುತ್ತದೆ ಎಂದಲ್ಲ... ಹಾಗಾಗಿ ನೀವು ಐಟಿಆರ್ ರಿಟರ್ನ್ ಸಲ್ಲಿಸಿದ್ದರೆ, ಇ-ವೆರಿಫೈ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಈ ಮಧ್ಯೆ, ಮರುಪಾವತಿ ಸಂದೇಶಕ್ಕಾಗಿ ಕಾಯುತ್ತಿರುವವರು ಕೆಲವು ಫಿಶಿಂಗ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು PIB ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ITR Refund: ಹೆಚ್ಚು‘ವರಿ’ಯಾಗಿ ಕಟ್ಟಿದ ತೆರಿಗೆ ಹಣ ಮರುಪಾವತಿಗಾಗಿ ಕಾಯುತ್ತಿರುವಿರಾ? ನಕಲಿ ಸಂದೇಶಗಳಿಗೆ ಮರುಳಾಗಬೇಡಿ..
ತೆರಿಗೆ ಹಣ ಮರುಪಾವತಿಗಾಗಿ ಕಾಯುತ್ತಿರುವಿರಾ?
Follow us
|

Updated on: Aug 07, 2023 | 6:57 PM

ನೀವು ಐಟಿಆರ್ ರಿಟರ್ನ್ ( Income Tax Return) ದಾಖಲೆ ಸಲ್ಲಿಸಿದ್ದರೂ ಸಹ… ಇ-ವೆರಿಫೈ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ಅಲ್ಲದೆ, ಮರುಪಾವತಿ ಸಂದೇಶಕ್ಕಾಗಿ ಕಾಯುತ್ತಿರುವವರಿಗಾಗಿ ಕೆಲವು ಫಿಶಿಂಗ್ (ನಕಲಿ) ಸಂದೇಶಗಳು ರವಾನೆಯಾಗುತ್ತಿವೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್ (ಪಿಐಬಿ ಫ್ಯಾಕ್ಟ್ ಚೆಕ್) ವರದಿ ಮಾಡಿದೆ. ಈ ಕುರಿತು ಬಂದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ತೆರಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ನಕಲಿ ಸಂದೇಶಗಳನ್ನು ನೀವು ನಂಬಿದರೆ ಮತ್ತು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ (income tax refund status online) ನಿಮಗೆ ಹಣಕಾಸು ಹಾನಿಯಾಗುತ್ತದೆ ಎಂದು ಅದು ಎಚ್ಚರಿಸಿದೆ.

ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ಅನ್ನು ನೀವು ಪೂರ್ಣಗೊಳಿಸಿದ್ದೀರಾ? ನೀವು ಮರುಪಾವತಿಗಾಗಿ ಕಾಯುತ್ತಿದ್ದೀರಾ? ಐಟಿಆರ್ ಸಲ್ಲಿಸಿ ಬಹಳ ಸಮಯವಾಯ್ತು, ಆದರೆ ಇನ್ನೂ ಮರುಪಾವತಿಯಾಗಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಾದರೆ ಮೊದಲು ನೀವು ಒಂದು ವಿಷಯವನ್ನು ಖಚಿತಪಡಿಸಿಕೊಳ್ಳಬೇಕು. ನೀವು ITR ಮರುಪಾವತಿಗೆ ಅರ್ಹರಾಗಿದ್ದರೆ, ನೀವು ಇ-ದೃಢೀಕರಿಸಿದ ITR ಅನ್ನು ಹೊಂದಿದ್ದೀರಾ ಎಂದು ಪರಿಶೀಲಿಸಿ. ನೀವು ಐಟಿಆರ್ ರಿಟರ್ನ್ ಸಲ್ಲಿಸಿದ್ದರೂ ಇ-ವೆರಿಫೈ ಪರಿಶೀಲಿಸದಿದ್ದರೆ ಐಟಿಆರ್ ರಿಟರ್ನ್ ಫೈಲಿಂಗ್ ಅಪೂರ್ಣವಾಗಿ ಉಳಿಯುತ್ತದೆ.

ಹಾಗಾಗಿ ನೀವು ಐಟಿಆರ್ ರಿಟರ್ನ್ ಸಲ್ಲಿಸಿದ್ದರೆ, ಇ-ವೆರಿಫೈ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಅಲ್ಲದೆ, ಮರುಪಾವತಿ ಸಂದೇಶಕ್ಕಾಗಿ ಕಾಯುತ್ತಿರುವವರು ಕೆಲವು ಫಿಶಿಂಗ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಫ್ಯಾಕ್ಟ್ಸ್ ಚೆಕ್ (PIB ಫ್ಯಾಕ್ಟ್ ಚೆಕ್) ವರದಿ ಮಾಡಿದೆ. ಈ ಕುರಿತು ಬಂದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ತೆರಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಸಂದೇಶಗಳನ್ನು ನೀವು ನಂಬಿದರೆ ಮತ್ತು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಿಮಗೆ ಹಾನಿಯಾಗುತ್ತದೆ ಎಂದು ಅದು ಹೇಳಿದೆ. ಮರುಪಾವತಿಗೆ ಸಂಬಂಧಿಸಿದಂತೆ ಯಾವುದೇ ಸಂದೇಶಗಳನ್ನು ನೀಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ನೆನಪಿಸಿದೆ.

ಹೆಚ್ಚು‘ವರಿ’ಯಾಗಿ ಕಟ್ಟಿದ ತೆರಿಗೆ ಹಣ ನಾಳೆಯೇ ಮರುಪಾವತಿ ಆಗಿಬಿಡುತ್ತದೆ ಎಂದಲ್ಲ…

ಐಟಿಆರ್ ಸಲ್ಲಿಸಿದ ತಕ್ಷಣವೇ ಮರುಪಾವತಿ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು. ಆದಾಯ ತೆರಿಗೆ ಇಲಾಖೆಯು ತನ್ನೊಂದಿಗೆ ಲಭ್ಯವಿರುವ ಮಾಹಿತಿಯಿಂದ ಈಗಾಗಲೇ ಪಾವತಿಸಿದ ತೆರಿಗೆಗಳ ವಿವರಗಳನ್ನು ಪರಿಶೀಲಿಸಿದ ನಂತರ ನಿಮಗೆ ಮರುಪಾವತಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ ಈ ಪರಿಶೀಲಿಸಿದ ರಿಟರ್ನ್‌ಗಳಲ್ಲಿ 61% ಅನ್ನು ಈಗಾಗಲೇ ಪ್ರಕ್ರಿಯೆಗೊಳಿಸಲಾಗಿದೆ – ಅಂದರೆ ಪ್ರಕ್ರಿಯೆ, ಮರುಪಾವತಿ ಅಥವಾ ರೂಪಾಂತರಕ್ಕಾಗಿ ಮಾಹಿತಿಯನ್ನು ಕಳುಹಿಸಿರಬೇಕು.

ಕ್ರೆಡಿಟ್ ಮಾಡಿದ ಯಾವುದನ್ನಾದರೂ ಸಾಮಾನ್ಯವಾಗಿ ಮರುಪಾವತಿಸಬೇಕಾಗುತ್ತದೆ. ಪ್ರಕ್ರಿಯೆಗೊಳಿಸಿದ ನಂತರ 10 ದಿನಗಳಿಂದ 2 ವಾರಗಳವರೆಗೆ ಮರುಪಾವತಿಯನ್ನು ನಿಮಗೆ ಕ್ರೆಡಿಟ್ ಮಾಡಲಾಗುತ್ತದೆ. ಸಾಮಾನ್ಯವಾಗಿ, ನಿಮ್ಮ ITR ಅನ್ನು ಸಲ್ಲಿಸಿದ ಮತ್ತು ಪರಿಶೀಲಿಸಿದ ನಂತರ ನೀವು ಮರುಪಾವತಿಯನ್ನು ಸ್ವೀಕರಿಸಲು ಕನಿಷ್ಠ 20 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ತೆರಿಗೆ ಇಲಾಖೆಯು ಲಭ್ಯವಿರುವ ತಂತ್ರಜ್ಞಾನದೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು ವೇಗವರ್ಧಿತವಾಗಿ ಲೆಕ್ಕ ಹಾಕಿದ ಪರಿಣಾಮವಾಗಿ ಸರಾಸರಿ ಪ್ರಕ್ರಿಯೆಯ ಸಮಯ ಕೇವಲ 16 ದಿನಗಳಿಗೆ ಇಳಿದಿದೆ.

ಆನ್‌ಲೈನ್ ರಿಟರ್ನ್ ಮರುಪಾವತಿ ಸ್ಥಿತಿಗತಿಯನ್ನು ಈ ರೀತಿ ಪರಿಶೀಲಿಸಿ

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ.

ನಿಮ್ಮ ಬಳಕೆದಾರ ಐಡಿ (ಪ್ಯಾನ್​ ನಂಬರ್), ಪಾಸ್‌ವರ್ಡ್, ಕ್ಯಾಪ್ಚಾ ಕೋಡ್ ಬಳಸಿ ಲಾಗಿನ್ ಮಾಡಿ.

‘ರಿಟರ್ನ್ಸ್ / ಫಾರ್ಮ್ಸ್’ ಗೆ ಹೋಗಿ.

‘ನಿಮಗೆ ಅಗತ್ಯವಿರುವ ಆಯ್ಕೆಯನ್ನು ಸೆಲೆಕ್ಟ್​ ಮಾಡಿ’ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಕ್ಲಿಕ್ ಮಾಡಿ.

ಮೌಲ್ಯಮಾಪನ ವರ್ಷವನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.

ನಿಮ್ಮ ITR ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಲು ಸಂಬಂಧಿತ ITR ರಶೀದಿ ಸಂಖ್ಯೆಯನ್ನು ಕ್ಲಿಕ್ ಮಾಡಿ.

ಹೆಚ್ಚಿನ ಬಿಸಿನೆಸ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ