Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್

AbhiBus Offer for Dasara Season: ದಸರಾದಿಂದ ದೀಪಾವಳಿಯವರೆಗೂ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಹಬ್ಬದ ಸೀಸನ್ ಇದೆ. ಬಹಳಷ್ಟು ಮಂದಿ ರಜೆ ಪಡೆದು ಊರುಗಳಿಗೆ ಮತ್ತು ಪ್ರವಾಸಗಳಿಗೆ ಹೋಗುತ್ತಾರೆ. ಈ ವೇಳೆ ಪ್ರಯಾಣಿಕರ ಸಂಖ್ಯೆ ಅಧಿಕ. ಬಸ್ಸು, ರೈಲು ಮತ್ತು ವಿಮಾನಗಳಿಗೆ ಬೇಡಿಕೆ ಹೆಚ್ಚು. ಈ ಸೀಸನ್​ನಲ್ಲಿ ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ಸಂಸ್ಥೆಗಳು ಭರ್ಜರಿ ಆಫರ್​ಗಳನ್ನು ಪ್ರಯಾಣಿಕರಿಗೆ ನೀಡುತ್ತಿವೆ. ಈ ಬಗ್ಗೆ ಒಂದು ವರದಿ.

ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್
ಬಸ್ ಪ್ರಯಾಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 17, 2023 | 1:02 PM

ಹಬ್ಬದ ಸೀಸನ್ ನಡೆಯುತ್ತಿದೆ. ದಸರಾ ಹಬ್ಬ ಚಾಲನೆಯಲ್ಲಿದೆ. ದೀಪಾವಳಿ ಮುಗಿಯುವವರೆಗೂ ಭಾರತೀಯರಿಗೆ ಹಬ್ಬದ ಸಡಗರ, ಗಡಿಬಿಡಿ, ಓಡಾಟ ಇದ್ದೇ ಇರುತ್ತದೆ. ಊರಿಗೆ ಹೋಗಿ ಬರುವವರ ಸಂಖ್ಯೆ ಈ ಅವಧಿಯಲ್ಲಿ ಹೆಚ್ಚು. ಹಬ್ಬದ ಸೀಸನ್​ನಲ್ಲಿ (festival season) ಶಾಪಿಂಗ್ ಜೊತೆಗೆ ಊರಿಗೆ ಹೋಗಿಬರುವವರ ಸಂಖ್ಯೆ ಹೆಚ್ಚು. ಅಂತೆಯೇ, ಬಸ್ಸು, ರೈಲು ಮತ್ತು ವಿಮಾನಗಳಿಗೆ ಈ ಅವಧಿಯಲ್ಲಿ ಬೇಡಿಕೆ ಹೆಚ್ಚು. ಶಾಪಿಂಗ್​ನಲ್ಲಿ ವ್ಯಾಪಾರ ಹೆಚ್ಚಿದಂತೆ ಡಿಸ್ಕೌಂಟ್ ಸಿಗುತ್ತದೆ. ಆದರೆ, ಸಾರಿಗೆ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ಇಲ್ಲಿ ಟಿಕೆಟ್ ಬೆಲೆ ದುಬಾರಿ ಆಗುತ್ತದೆ. ಇಂಥ ಸಂದರ್ಭದಲ್ಲಿ ಕೆಲ ಸಂಸ್ಥೆಗಳು ಗ್ರಾಹಕರಿಗಾಗಿ ಕೆಲ ಕೊಡುಗೆ ನೀಡುತ್ತವೆ. ಆನ್​ಲೈನ್ ಬಸ್ ಟಿಕೆಟ್ ಪ್ಲಾಟ್​ಫಾರ್ಮ್ ಎನಿಸಿರುವ ಅಭಿಬಸ್ (AbhiBus) ಭರ್ಜರಿ ಘೋಷಣೆ ಮಾಡಿ ಗಮನ ಸೆಳೆದಿದೆ.

ಅಭಿಬಸ್; ಎಲ್ಲೇ ಹೋಗಿ 1 ರೂ ಟಿಕೆಟ್

ಬಸ್ ಟಿಕೆಟ್ ಬುಕಿಂಗ್ ಆ್ಯಪ್ ಅಭಿಬಸ್ ಈ ಬಾರಿ ಹಬ್ಬದ ಸೀಸನ್​ಗಾಗಿ ಸಖತ್ ಗಿಫ್ಟ್ ಪ್ರಕಟಿಸಿದೆ. ಯಾವುದೇ ಸ್ಥಳಕ್ಕೆ ಟಿಕೆಟ್ ಬುಕ್ ಮಾಡಿ, ಬೆಲೆ ಕೇವಲ 1 ರೂ ಮಾತ್ರ. ಅಕ್ಟೋಬರ್ 19ರಿಂದ ಅಕ್ಟೋಬರ್ 25ರವರೆಗೆ ಏಳು ದಿನಗಳವರೆಗೆ ಮಾತ್ರ ಅವಕಾಶ.

ಇದನ್ನೂ ಓದಿ: ಕೇವಲ 699 ರುಪಾಯಿಗೆ 10 ಸಿನಿಮಾ ನೋಡಿ; ಪಿವಿಆರ್ ಐನಾಕ್ಸ್​ನಿಂದ ಆಕರ್ಷಕ ಸಬ್​ಸ್ಕ್ರಿಪ್ಷನ್ ಆಫರ್

ಕೆಎಸ್ಸಾರ್ಟಿಸಿ ದಸರಾ ಆಫರ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಸರಾ ಪ್ರಯುಕ್ತ ವಿಶೇಷ ದರ್ಶನ ಪ್ಯಾಕೇಜ್ ನಡೆಸುತ್ತಿದೆ. ಧಾರ್ಮಿಕ ಸ್ಥಳಗಳ ದರ್ಶನ ಮಾಡಿಸಲಾಗುತ್ತಿದೆ. ಪಂಚದುರ್ಗೆಯರ ದರ್ಶನ, ಮಂಗಳೂರು, ಕೊಲ್ಲೂರು, ಮಡಿಕೇರಿ ಇತ್ಯಾದಿ ವಿವಿಧೆಡೆ ಇರುವ ಧಾರ್ಮಿಕ ಸ್ಥಳಗಳ ದರ್ಶನಕ್ಕೆ ವಿವಿಧ ಪ್ಯಾಕೇಜ್​ಗಳಿದ್ದು, ವೋಲ್ವೋ ಇತ್ಯಾದಿ ಬಸ್ಸುಗಳನ್ನು ಬಳಸಲಾಗುತ್ತಿದೆ. ಅಕ್ಟೋಬರ್ 15ರಂದು ಆರಂಭವಾದ ಈ ವಿಶೇಷ ಸೇವೆ ಅಕ್ಟೋಬರ್ 25ರವರೆಗೂ ಇರುತ್ತದೆ.

ಆಂಧ್ರ ಬಸ್ಸಿನಲ್ಲಿ ಡಿಸ್ಕೌಂಟ್

ಆಂಧ್ರ ರಸ್ತೆ ಸಾರಿಗೆ ಸಂಸ್ಥೆ ಎಪಿಎಸ್ಸಾರ್ಟಿಸಿಯ 5,500 ಬಸ್ಸುಗಳನ್ನು ಹಬ್ಬದ ಸೀಸನ್​ಗಾಗಿ ಅಣಿಗೊಳಿಸಲಾಗಿದೆ. ಅಕ್ಟೋಬರ್ 13ರಿಂದ 26ರವರೆಗೂ ಆಂಧ್ರದ ವಿವಿಧ ಸ್ಥಳಗಳಲ್ಲಿ ಬಸ್ಸುಗಳು ಸಂಚರಿಸಲಿವೆ. ಬೆಂಗಳೂರು ಮತ್ತು ಚೆನ್ನೈ ಇತ್ಯಾದಿ ನಗರಗಳಿಗೂ ಆಂಧ್ರ ಬಸ್ಸುಗಳು ಓಡಾಡುತ್ತವೆ. ವಿಶೇವೆಂದರೆ ರಿಟರ್ನ್ ಟಿಕೆಟ್ ಬುಕ್ ಮಾಡಿದರೆ ಎರಡೂ ಟಿಕೆಟ್ ಮೇಲೆ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

30 ವಿಶೇಷ ರೈಲುಗಳು

ರೈಲುಗಳಿಗೆ ವಿಶೇಷ ಬೇಡಿಕೆ ಇರುವುದರಿಂದ ಸೆಂಟ್​ರಲ್ ರೈಲ್ವೆ 30 ವಿಶೇಷ ರೈಲುಗಳನ್ನು ನವೆಂಬರ್​ವರೆಗೂ ನಿಯೋಜಿಸಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

ಏರ್ ಇಂಡಿಯಾ ಆಫರ್

ಹಬ್ಬದ ಸೀಸನ್​ಗೆ ರಜೆ ಪಡೆದುಕೊಂಡು ವಿದೇಶಗಳಿಗೆ ಪ್ರವಾಸ ಹೋಗುವವರಿಗೆ ಖುಷಿ ಸುದ್ದಿ ಇದೆ. ಏರ್ ಇಂಡಿಯಾ ಸಂಸ್ಥೆ ಯೂರೋಪ್​ಗೆ ರೌಂಡ್ ಟ್ರಿಪ್ ಫ್ಲೈಟ್ ಸೇವೆಗಳನ್ನು ನೀಡುತ್ತಿದ್ದು, ಕೇವಲ 40,000 ರೂನಿಂದ ಇದು ಶುರುವಾಗುತ್ತದೆ. ಪ್ಯಾರಿಸ್, ಮಿಲಾನ್, ಲಂಡನ್, ಕೋಪನ್​ಹೇಗನ್ ಇತ್ಯಾದಿ ಯೂರೋಪ್​ನ ಪ್ರಮುಖ ಸ್ಥಳಗಳಿಗೆ ಟಿಕೆಟ್ ಬೆಲೆ ಕೇವಲ 25,000 ರೂ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ