ಮೇಡ್ ಇನ್ ಇಂಡಿಯಾ ರೆಡಿಮೇಡ್ ಸ್ಟೀಲ್ ಬ್ರಿಡ್ಜ್; ಬುಲೆಟ್ ಟ್ರೈನ್ ಮಾರ್ಗದಲ್ಲಿ ಐದನೇ ಉಕ್ಕು ಸೇತುವೆ ಅಳವಡಿಕೆ

Steel bridges in Mumbai-Ahmedabad high speek rail project: ಅಹ್ಮದಾಬಾದ್ ಮತ್ತು ಮುಂಬೈನ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಕಾಮಗಾರಿ ಭರ್ಜರಿಯಾಗಿ ಸಾಗಿದೆ. ಈ ಮಾರ್ಗದಲ್ಲಿ 28 ಉಕ್ಕಿನ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇವೆಲ್ಲವೂ ರೆಡಿಮೇಡ್ ಬ್ರಿಡ್ಜ್ ಆಗಿವೆ. ಬೇರೆ ಕಡೆ ಇವನ್ನು ತಯಾರಿಸಿ ಬಳಿಕ ನಿಗದಿತ ಸ್ಥಳದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಈವರೆಗೆ ಇಂಥ ಐದು ಬ್ರಿಡ್ಜ್​ಗಳನ್ನು ಸ್ಥಾಪಿಸಲಾಗಿದೆ.

ಮೇಡ್ ಇನ್ ಇಂಡಿಯಾ ರೆಡಿಮೇಡ್ ಸ್ಟೀಲ್ ಬ್ರಿಡ್ಜ್; ಬುಲೆಟ್ ಟ್ರೈನ್ ಮಾರ್ಗದಲ್ಲಿ ಐದನೇ ಉಕ್ಕು ಸೇತುವೆ ಅಳವಡಿಕೆ
ಉಕ್ಕಿನ ಸೇತುವೆ
Follow us
|

Updated on: Oct 24, 2024 | 12:03 PM

ವಡೋದರಾ, ಅಕ್ಟೋಬರ್ 24: ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಭಾಗವಾಗಿ ವಡೋದರಾದಲ್ಲಿ 60 ಮೀಟರ್ ಉದ್ದದ ಉಕ್ಕಿನ ಸೇತುವೆಯನ್ನು ನಿರ್ಮಿಸಲಾಗಿದೆ. ಬಾಜ್ವಾ ಮತ್ತು ಛಾಯಾಪುರಿ ಮಾರ್ಗದಲ್ಲಿ ಈ ಸ್ಟೀಲ್ ಬ್ರಿಡ್ನ್ ಅನ್ನು ಅಳವಡಿಸಲಾಗಿದೆ. ಮುಂಬೈ ಅಹ್ಮದಾಬಾದ್ ಕಾರಿಡಾರ್​ನಲ್ಲಿ ಇಂಥ ಒಟ್ಟು 28 ಸ್ಟೀಲ್ ಸೇತುವೆಗಳನ್ನು ಯೋಜಿಸಲಾಗಿದ್ದು, ನಿನ್ನೆ ನಿರ್ಮಿಸಲಾಗಿರುವುದು ಐದನೆಯದ್ದಾಗಿದೆ.

60 ಮೀಟರ್ ಉದ್ದದ ಈ ಸೇತುವೆ 12.5 ಮೀಟರ್ ಎತ್ತರ ಹಾಗೂ 14.7 ಮೀಟರ್ ಅಗಲ ಇದ್ದು, 645 ಮೆಟ್ರಿಕ್ ಟನ್​ಗಳ ತೂಕ ಇದೆ. ಇದನ್ನು ಕಚ್ಛ್ ಜಿಲ್ಲೆಯ ಬಚಾವು ನಗರದಲ್ಲಿ ತಯಾರಿಸಿ, ಆ ಬಳಿಕ ವಡೋದರಾಗೆ ಸಾಗಿಸಿ ಅಲ್ಲಿ ಸ್ಥಾಪಿಸಲಾಗಿದೆ. ಜಪಾನೀ ತಂತ್ರಜ್ಞರ ಸಹಾಯ ಪಡೆದು ಈ ಯೋಜನೆ ಮಾಡಲಾಗಿದೆ. ಈ ರೀತಿಯ ರೆಡಿಮೇಡ್ ಸ್ಟೀಲ್ ಬ್ರಿಡ್ಜ್ ಅನ್ನು ಭಾರತದಲ್ಲೇ ತಯಾರಿಸಿರುವುದು ಇದೇ ಮೊದಲು.

ಇದನ್ನೂ ಓದಿ: ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್​ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್

ಕೆಲ ತಿಂಗಳ ಹಿಂದೆ ಇದೇ ವಡೋದರಾದಲ್ಲಿ 130 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ಅನ್ನು ಕೇವಲ 24 ಗಂಟೆ ಅವಧಿಯಲ್ಲಿ ಅಸೆಂಬಲ್ ಮಾಡಲಾಗಿತ್ತು. ಮಹಾರಾಷ್ಟ್ರದ ವಾರ್ಧಾದಲ್ಲಿ ಆ ಉಕ್ಕಿನ ಸೇತುವೆಯನ್ನು ತಯಾರಿಸಿ ಆ ಬಳಿಕ ವಡೋದರಾದ ನಿಗದಿತ ಸ್ಥಳಕ್ಕೆ ಸಾಗಿಸಿ ಅಲ್ಲಿ ಸ್ಥಾಪಿಸಲಾಗಿತ್ತು. ಸೂರತ್​ನಲ್ಲಿ ರಾ.ಹೆ. 53ರಲ್ಲಿ ಈ ರೀತಿಯ ಮೊದಲ ಉಕ್ಕಿನ ಸೇತುವೆ ನಿರ್ಮಿಸಲಾಗಿದೆ. ವಡೋದರಾ-ಅಹ್ಮದಾಬಾದ್ ರೈಲ್ವೆ ಲೈನ್​ನಲ್ಲಿ ಎರಡನೇ ಸ್ಟೀಲ್ ಬ್ರಿಡ್ಜ್ ನಿರ್ಮಿಸಲಾಗಿತ್ತು.

ಅಹ್ಮದಾಬಾದ್ ಮತ್ತು ಮುಂಬೈ ನಡುವಿನ ಈ ಹೈಸ್ಪೀಡ್ ರೈಲ್ ಮಾರ್ಗದಲ್ಲಿ ಬುಲೆಟ್ ಟ್ರೈನ್​ವೊಂದು ಗಂಟೆಗೆ 320 ಕಿಮೀ ವೇಗದಲ್ಲಿ ಹೋಗಬಹುದು. ಮುಂಬೈನಿಂದ ಅಹ್ಮದಾಬಾದ್ ತಲುಪಲು ಕೇವಲ 2ರಿಂದ 2.5 ಗಂಟೆ ಸಾಕಾಗಬಹುದು. 2027ಕ್ಕೆ ಇಲ್ಲಿ ಮೊದಲ ಬುಲೆಟ್ ರೈಲು ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮೋದಿಯ ಆ ಮಾತು ಸರಿ ಅನಿಸಿತು… ಭಾರತದೊಂದಿಗೆ ಸೇರಿ ಚಿಪ್ ತಯಾರಿಸಲು ಸಜ್ಜಾದ ವಿಶ್ವ ದೈತ್ಯ ನಿವಿಡಿಯಾ

ಭಾರತದಲ್ಲಿ ನಡೆಯುತ್ತಿರುವ ಈ ಪ್ರಯೋಗದ ಅನುಭವವು ಮುಂದಿನ ದಿನಗಳಲ್ಲಿ ಬುಲೆಟ್ ರೈಲು ಯೋಜನೆಗಳನ್ನು ಸರಾಗವಾಗಿ ನಡೆಸಲು ಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಕೊನೆಗೊಳ್ಳದು
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಸಮಸ್ಯೆ ಕೊನೆಗೊಳ್ಳದು
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ