ಭಾರತದಲ್ಲಿ ಮೊಬೈಲ್ ತಯಾರಿಕಾ ಘಟಕಗಳ ಸಂಖ್ಯೆ 10 ವರ್ಷದಲ್ಲಿ 2ರಿಂದ 300ಕ್ಕೆ ಹೆಚ್ಚಳ: ಪ್ರಗತಿ ಕಥೆ ಬಿಚ್ಚಿಟ್ಟ ವೈಷ್ಣವ್

Union minister Dr Ashwini Vaishnaw on Indian manufacturing sector: ಭಾರತದಲ್ಲಿ ಕಳೆದ 10 ವರ್ಷದಲ್ಲಿ ಮೊಬೈಲ್ ತಯಾರಿಕಾ ಕಾರ್ಯ ಬಹಳ ಪ್ರಗತಿ ಕಂಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಎ ವೈಷ್ಣವ್ ಹೇಳಿದ್ದಾರೆ. ಎಕ್ಸ್ ಅಕೌಂಟ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಹಾಕಿರುವ ಅವರು, 2014ರಲ್ಲಿ ಇದ್ದ ಸ್ಥಿತಿಗೂ ಈಗ ಇರುವ ಸ್ಥಿತಿಗೂ ಹೋಲಿಕೆ ಮಾಡಿದ್ದಾರೆ. 2014ರಲ್ಲಿ ದೇಶದಲ್ಲಿ ಎರಡು ಮಾತ್ರವೇ ಮೊಬೈಲ್ ತಯಾರಿಕಾ ಘಟಕಗಳಿದ್ದವು. ಇವತ್ತು 300ಕ್ಕೂ ಹೆಚ್ಚು ಮ್ಯಾನುಫ್ಯಾಕ್ಚರಿಂಗ್ ಯೂನಿಟ್​​ಗಳಿವೆ ಎಂದಿದ್ದಾರೆ.

ಭಾರತದಲ್ಲಿ ಮೊಬೈಲ್ ತಯಾರಿಕಾ ಘಟಕಗಳ ಸಂಖ್ಯೆ 10 ವರ್ಷದಲ್ಲಿ 2ರಿಂದ 300ಕ್ಕೆ ಹೆಚ್ಚಳ: ಪ್ರಗತಿ ಕಥೆ ಬಿಚ್ಚಿಟ್ಟ ವೈಷ್ಣವ್
ಅಶ್ವಿನಿ ವೈಷ್ಣವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2025 | 6:10 PM

ನವದೆಹಲಿ, ಫೆಬ್ರುವರಿ 4: ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಾದಾಗಿನಿಂದ ಹೆಚ್ಚು ಕೇಳಿಬರುತ್ತಿರುವ ಮೂಲ ಮಂತ್ರ ಎಂದರೆ ಅದು ಮ್ಯಾನುಫ್ಯಾಕ್ಚರಿಂಗ್​ನದ್ದು. ಪಿಎಲ್​ಐ ಇತ್ಯಾದಿ ಹಲವು ಸ್ಕೀಮ್​ಗಳು ದೇಶದ ಉತ್ಪಾದನಾ ವಲಯಕ್ಕೆ ಭರ್ಜರಿ ಪುಷ್ಟಿ ಕೊಟ್ಟಿವೆ. 13 ಸೆಕ್ಟರ್​ಗಳಲ್ಲಿ ಪಿಎಲ್​ಐ ಸ್ಕೀಮ್ ಇದೆ. ಅದರಲ್ಲೂ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಸರ್ಕಾರ ಬಹಳ ಮುತುವರ್ಜಿ ತೋರಿದೆ. ಇದರಿಂದ ಭಾರತದಲ್ಲಿ ಮೊಬೈಲ್ ಫೋನ್ ತಯಾರಿಕೆಯ ಪ್ರಯತ್ನ ಬಹುತೇಕ ಪೂರ್ಣವಾಗಿ ಯಶಸ್ವಿಯಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವನಿ ವೈಷ್ಣವ್ ಅವರು ಮೊಬೈಲ್ ಮ್ಯಾನುಫ್ಯಾಕ್ಚರಿಂಗ್​ನ ಯಶಸ್ಸಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

‘ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಭಾರತ ಗಣನೀಯ ಪ್ರಗತಿ ತೋರಿದೆ. 2014ರಲ್ಲಿ ಎರಡನೇ ಎರಡು ಮೊಬೈಲ್ ತಯಾರಿಕಾ ಘಟಕಗಳಿದ್ದವು. ಇವತ್ತು 300ಕ್ಕೂ ಹೆಚ್ಚು ಘಟಕಗಳಿವೆ. ಈ ಸೆಕ್ಟರ್ ಬಹಳ ವೇಗದಲ್ಲಿ ಬೆಳೆದಿದೆ’ ಎಂದು ಎ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಿಟ್​ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು

2013-14ರಲ್ಲಿ ಭಾರತದಲ್ಲಿ ತಯಾರಾದ ಮೊಬೈಲ್ ಫೋನ್​ಗಳ ಮೌಲ್ಯ 18,900 ಕೋಟಿ ರೂ. ಈಗ 2023-24ರಲ್ಲಿ 4.22 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಫೋನ್​ಗಳ ಮ್ಯಾನುಫ್ಯಾಕ್ಚರಿಂಗ್ ಭಾರತದಲ್ಲಿ ಆಗಿದೆ. 2014ರಲ್ಲಿ ಭಾರತದಿಂದ ರಫ್ತಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ ನಗಣ್ಯವಾಗಿತ್ತು. ಈಗ ಇವುಗಳ ರಫ್ತು ಮೌಲ್ಯ 1.29 ಲಕ್ಷ ಕೋಟಿ ರೂ ಆಗಿದೆ’ ಎಂದು ಸಚಿವರು ಅಂಕಿ ಅಂಶಗಳ ಸಮೇತ ಹೇಳಿದ್ದಾರೆ.

ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್​ನಿಂದ 12 ಲಕ್ಷ ಉದ್ಯೋಗ ಸೃಷ್ಟಿ…

ಕಳೆದ 10 ವರ್ಷದಲ್ಲಿ ಮೊಬೈಲ್ ಫೋನ್ ತಯಾರಿಕಾ ಘಟಕಗಳಿಂದ ದೇಶದಲ್ಲಿ 12 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದ ಅವರು, ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತದಲ್ಲಿ ತಯಾರಾಗುತ್ತಿರುವ ಎಲೆಕ್ಟ್ರಾನಿಕ್ ಐಟಂಗಳ ಪಟ್ಟಿ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದ DOGE ಇಲಾಖೆಗೆ 22 ವರ್ಷದ ಆಕಾಶ್ ಬೋಬ್ಬಾ; ಇಲಾನ್ ಮಸ್ಕ್ ನಡೆಗೆ ನೆಟ್ಟಿಗರು ಅಚ್ಚರಿ

ಸಚಿವರು ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಚಾರ್ಜರ್​ಗಳು, ಬ್ಯಾಟರಿ ಪ್ಯಾಕ್​ಗಳು, ಯುಎಸ್​ಬಿ ಕೇಬಲ್, ಕೀಪ್ಯಾಡ್, ಡಿಸ್​ಪ್ಲೇ ಅಸೆಂಬ್ಲಿ, ಕ್ಯಾಮರಾ ಮಾಡ್ಯೂಲ್, ಲಿಥಿಯಂ ಅಯಾನ್ ಸೆಲ್, ಸ್ಪೀಕರ್, ಮೈಕ್ರೋಫೋನ್, ಮೆಕ್ಯಾನಿಕ್ಸ್ ಹೀಗೆ ಹಲವು ಎಲೆಕ್ಟ್ರಾನಿಕ್ ಐಟಂಗಳು ನಿರ್ಮಾಣ ಆಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಅರ್ಜಿ ವಜಾಗೊಂಡರೂ ಸಿದ್ದರಾಮಯ್ಯ ವಿರುದ್ಧದ ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ
ಅರ್ಜಿ ವಜಾಗೊಂಡರೂ ಸಿದ್ದರಾಮಯ್ಯ ವಿರುದ್ಧದ ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ