AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?

Google vs Apple: ಆ್ಯಪಲ್ ಸಂಸ್ಥೆಗೆ ಗೂಗಲ್ ಒಂದು ವರ್ಷದಲ್ಲಿ ಸರ್ಚ್ ಆದಾಯ ಹಂಚಿಕೆ 10 ಬಿಲಿಯನ್ ಡಾಲರ್​ಗೂ ಹೆಚ್ಚಂತೆ. ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಿಇಒ ಸುಂದರ್ ಪಿಚೈ ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಆ್ಯಪಲ್​ನ ಸಫಾರಿ ಬ್ರೌಸರ್​ನಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿ ಗೂಗಲ್ ಸರ್ಚ್ ಅನ್ನು ಇರಿಸುವುದಕ್ಕೆ ಈ ಹಣ ನೀಡಲಾಗುತ್ತದೆ. ಆ್ಯಪಲ್ ಮಾತ್ರವಲ್ಲ ಎಲ್ಲಾ ಮೊಬೈಲ್ ತಯಾರಕರ ಜೊತೆಗೂ ಗೂಗಲ್ ಈ ರೀತಿ ಒಪ್ಪಂದ ಮಾಡಿಕೊಳ್ಳುತ್ತದೆ.

ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?
ಗೂಗಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2023 | 5:27 PM

Share

ವಾಷಿಂಗ್ಟನ್, ನವೆಂಬರ್ 16: ಗೂಗಲ್​ಗೆ ಹೆಚ್ಚಿನ ಆದಾಯ ಬರುವುದು ಅದರ ಸರ್ಚ್ ಎಂಜಿನ್​ನಿಂದ. ಈ ಆದಾಯದಲ್ಲಿ ಬೇರೆ ಬೇರೆ ಸಂಬಂಧಿತ ವ್ಯಕ್ತಿ, ಕಂಪನಿಗಳಿಗೆ ಪಾಲು ಹಂಚಿಕೆ ಮಾಡುತ್ತದೆ. ಹಾಗೆಯೇ, ಆ್ಯಪಲ್ ಸಂಸ್ಥೆಗೆ ಗೂಗಲ್ ಒಂದು ವರ್ಷದಲ್ಲಿ ಮಾಡುವ ಆದಾಯ ಹಂಚಿಕೆ (revenue sharing) 10 ಬಿಲಿಯನ್ ಡಾಲರ್​ಗೂ (ಸುಮಾರು 83,000 ಕೋಟಿರೂ) ಹೆಚ್ಚಂತೆ. ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಿಇಒ ಸುಂದರ್ ಪಿಚೈ (Sundar Pichai) ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಗೂಗಲ್ ವಿರುದ್ಧ ಕೋರ್ಟ್​ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಸುಂದರ್ ಪಿಚೈ ತಮ್ಮ ಸಂಸ್ಥೆ ಪ್ರತೀ ವರ್ಷ ಆ್ಯಪಲ್​ಗೆ ಸರ್ಚ್ ಆದಾಯ ಎಷ್ಟು ಹಂಚಿಕೆ ಮಾಡುತ್ತದೆ ಎಂಬ ವಿವರ ಬಹಿರಂಗಪಡಿಸಿದ್ದಾರೆ. ಆ್ಯಪಲ್​ನ ಸಫಾರಿ ಬ್ರೌಸರ್​ನಿಂದ ಗೂಗಲ್​ಗೆ ಬರುವ ಆದಾಯದಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್​ಗೆ ಕೊಡುತ್ತಿರುವುದಾಗಿ ಗೂಗಲ್ ಸಿಇಒ ಹೇಳಿದ್ದಾರೆ.

ಗೂಗಲ್ ವಿರುದ್ಧ ಮೊಕದ್ದಮೆ ಸಲ್ಲಿರುವ ಎಪಿಕ್ ಗೇಮ್ಸ್ (Epic Games) ಮಾಧ್ಯಮ ಸಂಸ್ಥೆ ಪ್ರಕಾರ ಗೂಗಲ್ ಸಂಸ್ಥೆ ಆ್ಯಪಲ್​ಗೆ ಒಂದು ವರ್ಷದಲ್ಲಿ ಕೊಡುವ ಹಣ 18 ಬಿಲಿಯನ್ ಡಾಲರ್ (1.5 ಲಕ್ಷ ಕೋಟಿ ರೂ) ಅಂತೆ.

ಇದನ್ನೂ ಓದಿ: ಮುಂದಿನ ವರ್ಷ ಭಾರತದ ಆರ್ಥಿಕತೆಗೆ ಈ ಮೂರು ವಿದ್ಯಮಾನಗಳಿಂದ ಅಪಾಯ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ

ಆ್ಯಪಲ್​ಗೆ ಗೂಗಲ್ ಇಷ್ಟು ಹಣ ಯಾಕೆ ಕೊಡುತ್ತದೆ?

ಆ್ಯಪಲ್​ನ ಸಫಾರಿ ಬ್ರೌಸರ್​ನಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿ ಗೂಗಲ್ ಸರ್ಚ್ ಅನ್ನು ಇರಿಸುವುದಕ್ಕೆ ಈ ಹಣ ನೀಡಲಾಗುತ್ತದೆ. ಆ್ಯಪಲ್ ಮಾತ್ರವಲ್ಲ ಎಲ್ಲಾ ಮೊಬೈಲ್ ತಯಾರಕರ ಜೊತೆಗೂ ಗೂಗಲ್ ಈ ರೀತಿ ಒಪ್ಪಂದ ಮಾಡಿಕೊಳ್ಳುತ್ತದೆ. ಡೀಫಾಲ್ಟ್ ಸರ್ಚ್ ಎಂಜಿನ್ ಆಗಿದ್ದರೆ ಹೆಚ್ಚಿನ ಜನರು ಅದನ್ನು ಬಳಸುತ್ತಾರೆ. ಅದರಿಂದ ಗೂಗಲ್​ಗೆ ಸಾಕಷ್ಟು ಜಾಹೀರಾತು ಆದಾಯ ಸಿಗುತ್ತದೆ. ಇದರಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್ ಕಂಪನಿಗೆ ಒದಗಿಸುತ್ತದೆ.

ಆ್ಯಪಲ್ ಬೇರೆ ಆರೆಂಜ್ ಬೇರೆ

ವಾಷಿಂಗ್ಟನ್​ನಲ್ಲಿ ನಡೆಯುತ್ತಿರುವ ಗೂಗಲ್ ವಿರುದ್ಧದ ಮೊಕದ್ದಮೆಯ ವಿಚಾರಣೆಯಲ್ಲಿ ಎಪಿಕ್ ಗೇಮ್ಸ್ ಸಂಸ್ಥೆಯ ವಕೀಲರು, ಸ್ಯಾಮ್ಸುಂಗ್ ವಿಚಾರವನ್ನು ಪ್ರಸ್ತಾಪಿಸಿ ಗೂಗಲ್​ನಿಂದ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಆ್ಯಪಲ್​ಗೆ ಕೊಡುತ್ತಿರುವಷ್ಟು ಆದಾಯ ಪಾಲನ್ನು ಸ್ಯಾಮ್ಸುಂಗ್​ಗೆ ಕೊಡುತ್ತಿಲ್ಲ ಎಂಬುದು ಆಕ್ಷೇಪ. ಇದಕ್ಕೆ ಗೂಗಲ್ ಸಮಜಾಯಿಷಿ ಕೊಟ್ಟಿದ್ದು, ಆ್ಯಪಲ್ ಮತ್ತು ಆಜೆಂಜ್ ಅನ್ನು ಒಂದೇ ತಕ್ಕಡಿಗೆ ಹಾಕಲು ಆಗುವುದಿಲ್ಲ. ಎರಡಕ್ಕೂ ಬೇರೆ ಮಾನದಂಡಗಳನ್ನು ಬಳಸಲಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್​ಬಿಐನಿಂದ ನಿರ್ಬಂಧ

ಸ್ಯಾಮ್ಸುಂಗ್​ಗೆ ಗೂಗಲ್ ಯಾಕೆ ಕಡಿಮೆ ಹಣ ಕೊಡುತ್ತದೆ?

ಸ್ಯಾಮ್ಸುಂಗ್ ಹ್ಯಾಂಡ್​ಸೆಟ್​ಗಳು ಆಂಡ್ರಾಯ್ಡ್ ತಂತ್ರಾಂಶ ಬಳಸುತ್ತವೆ. ಆಂಡ್ರಾಯ್ಡ್ ಲೈಸೆನ್ಸ್ ಗೂಗಲ್ ಬಳಿ ಇದೆ. ಆಂಡ್ರಾಯ್ಡ್ ಬಳಕೆಗೆ ಪ್ರತಿಯಾಗಿ ಸ್ಯಾಮ್ಸಂಗ್ ಮೊಬೈಲ್​ಗಳಲ್ಲಿ ಗೂಗಲ್​ನದ್ದು ಡೀಫಾಲ್ಟ್ ಸರ್ಚ್ ಎಂಜಿನ್ ಆಗಿರಬೇಕು, ಡೀಫಾಲ್ಟ್ ಪ್ಲೇ ಸ್ಟೋರ್ ಆಗಿರಬೇಕು ಎಂಬಿತ್ಯಾದಿ ಷರತ್ತುಗಳಿರುತ್ತವೆ. ಗೂಗಲ್ ಈ ಕಾರಣಕ್ಕೆ ಆ್ಯಪಲ್​ಗೆ ಕೊಡುವಷ್ಟು ಆದಾಯ ಪಾಲನ್ನು ಸ್ಯಾಮ್ಸುಂಗ್ ಕಂಪನಿಗೆ ಕೊಡುವುದಿಲ್ಲ. ಗೂಗಲ್ ಸಿಇಒ ಸುಂದರ್ ಪಿಚೈ ಈ ವಿಚಾರವನ್ನೂ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ