AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial changes: ಜುಲೈ ತಿಂಗಳಿಂದ ಈ 6 ಬದಲಾವಣೆಗಳು ನಿರೀಕ್ಷಿಸಿ; ಅವು ಯಾವುವು ಎಂಬುದನ್ನು ತಿಳಿಯಿರಿ

ಜುಲೈನಲ್ಲಿ ಈ 6 ಹಣಕಾಸು ವಿಚಾರದ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಈ ಪೈಕಿ ನಿಮ್ಮ ಮೇಲೆ ಪರಿಣಾಮ ಬೀರಬಹುದಾದ ಸಂಗತಿಗಳು ಯಾವುವು ಎಂಬುದನ್ನು ನೋಡಿಕೊಳ್ಳಿ.

Financial changes: ಜುಲೈ ತಿಂಗಳಿಂದ ಈ 6 ಬದಲಾವಣೆಗಳು ನಿರೀಕ್ಷಿಸಿ; ಅವು ಯಾವುವು ಎಂಬುದನ್ನು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 28, 2021 | 10:33 PM

Share

ನಾವೀಗ ಜೂನ್ ತಿಂಗಳ ಕೊನೆಯಲ್ಲಿದ್ದೀವಿ. ಇನ್ನೆರಡು ದಿನ ಕಳೆದರೆ ಜುಲೈ ಕಣ್ಣೆದುರು ನಿಂತು, ಸ್ವಾಗತಿಸುತ್ತದೆ. ಹೊಸ ತಿಂಗಳು ಬರುತ್ತಿದ್ದಂತೆ ಹೊಸ ನಿಯಮಗಳು ಬರುತ್ತವೆ. ಹಲವು ಸಂಗತಿಗಳು ಜುಲೈ 1ನೇ ತಾರೀಕಿನಿಂದ ಬದಲಾವಣೆ ಕಾಣುತ್ತವೆ. ಮುಂದಿನ ತಿಂಗಳಿಂದ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಮುಂಚಿತವಾಗಿ ತಿಳಿಯುವುದು ಉತ್ತಮ. ಅದಕ್ಕೂ ಮುಂಚೆ ಒಂದು ಮಾತು, 6 ಬದಲಾವಣೆಗಳ ಪಟ್ಟಿಯನ್ನು ನಿಮ್ಮೆದುರು ಇಡಲಾಗುತ್ತಿದೆ. ಈ ಪೈಕಿ ಯಾವ್ಯಾವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿಕೊಳ್ಳಿ.

1. ಪ್ರತಿ ತಿಂಗಳ ಮೊದಲ ದಿನ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ದರದಲ್ಲಿ ಬದಲಾವಣೆ ಕಾಣುತ್ತದೆ. ಇದೇ ಸಂಗತಿ ಜುಲೈ 1ನೇ ತಾರೀಕಿನಂದು ಸಹ ಆಗಬಹುದು. ಅದೇ ವೇಳೆ, ಕೆಲವು ಸಲ ದರದಲ್ಲಿ ಯಾವುದೇ ಪರಿಷ್ಕರಣೆ ಆಗದೆ ಸಹ ಉಳಿಯುತ್ತದೆ.

2. ಭಾರತದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ. ಈ ಬ್ಯಾಂಕ್​ ಹೊಸ ನಿಯಮಾವಳಿಗಳನ್ನು ತರುತ್ತಿದೆ. ಚೆಕ್​ಬುಕ್ ಮತ್ತು ಎಟಿಎಂನಿಂದ ನಗದು ವಿಥ್​ಡ್ರಾ ಮಾಡುವ ನಿಯಮಾವಳಿಗಳ ಬದಲಾವಣೆ ಆಗಲಿದೆ. ಶುಲ್ಕದಲ್ಲಿ ಏರಿಕೆ ಆಗಲಿದೆ. ಬೇಸಿಕ್ ಸೇವಿಂಗ್ಸ್ ಅಕೌಂಟ್ಸ್​ಗೆ ಈ ನಿಯಮಾವಳಿಗಳು ಅನ್ವಯ ಆಗಲಿವೆ.

3. ಪೋಸ್ಟ್​ ಆಫೀಸ್ ಯೋಜನೆಗಳ ಬಡ್ಡಿ ದರಗಳು ಜುಲೈ 1ರಿಂದ ಪರಿಷ್ಕರಣೆ ಆಗಬಹುದು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿ ದರದ ಪರಿಶೀಲನೆ ನಡೆಸಲಾಗುತ್ತದೆ. ಈಗ ಏಪ್ರಿಲ್​ನಿಂದ ಜೂನ್​ ತನಕದ ತ್ರೈಮಾಸಿಕ ಪೂರ್ತಿ ಆಗುವುದರಿಂದ ಅಂಚೆ ಕಚೇರಿ ಬಡ್ಡಿ ದರಗಳ ಪರಿಷ್ಕರಣೆ ಸಾಧ್ಯತೆ ಇದೆ. ಹಾಗಂತ ಆಗೇ ಆಗುತ್ತದೆ ಎಂದೇನೂ ಇಲ್ಲ.

4. ಜುಲೈನಲ್ಲಿ ಮಾರುತಿ ಸುಜುಕಿ ಇಂಡಿಯಾ ಹಾಗೂ ಹೀರೋ ಮೋಟೋಕಾರ್ಪ್ ವಾಹನಗಳ ಬೆಲೆಯಲ್ಲಿ ಏರಿಕೆ ಆಗಲಿದೆ. ಈ ಬೆಲೆ ಏರಿಕೆ ಘೋಷಣೆಯನ್ನು ಈಗಾಗಲೇ ಹೀರೋ ಮೋಟೋಕಾರ್ಪ್ ಮಾಡಿದೆ. ಮಾರುತಿ ಸುಜುಕಿ ಇಂಡಿಯಾ ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಏರಿಕೆ ಆಗಲಿದೆ.

5. ಸಿಂಡಿಕೇಟ್​ ಬ್ಯಾಂಕ್, ಆಂಧ್ರಾ ಬ್ಯಾಂಕ್, ಕಾರ್ಪೊರೇಷನ್​ ಬ್ಯಾಂಕ್​ ಬ್ಯಾಂಕ್​ಗಳ ಐಎಫ್​ಎಸ್​ಸಿ ಕೋಡ್​ಗಳಲ್ಲಿ ಬದಲಾವಣೆ ಆಗಲಿದೆ. ಈಗಾಗಲೇ ಈ ಬಗ್ಗೆ ಗ್ರಾಹಕರಿಗೆ ಸಂದೇಶಗಳು ಬರಲು ಆರಂಭ ಆಗಿದೆ. ಸಿಂಡಿಕೇಟ್​ ಬ್ಯಾಂಕ್​ ಈಗಾಗಲೇ ಕೆನರಾ ಬ್ಯಾಂಕ್​ ಜತೆಗೂ ಮತ್ತು ಆಂಧ್ರಾ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್​ ಜತೆಗೂ ವಿಲೀನ ಆಗಿದೆ.

6. ಇನ್ನು ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆ ಮಾಡದವರಿಗೆ ಮುಂದಿನ ತಿಂಗಳಿಂದ ಟಿಡಿಎಸ್​ ಹೆಚ್ಚಿಸುವುದಕ್ಕೆ ತೀರ್ಮಾನಿಸಲಾಗಿದೆ. ಅದೇ ರೀತಿ ಪ್ರತಿ ವರ್ಷ 50 ಸಾವಿರಕ್ಕಿಂತ ಹೆಚ್ಚಿನ ಟಿಡಿಎಸ್​ ಕಡಿತ ಆಗುವವರ ಪಾಲಿಗೂ ಕಟ್ಟಬೇಕಾದ ಮೊತ್ತ ಹೆಚ್ಚಾಗಲಿದೆ.

ಇದನ್ನೂ ಓದಿ: SBI ATM, Cheque Book: ಎಸ್​ಬಿಐ ಎಟಿಎಂ ನಗದು ವಿಥ್​ ಡ್ರಾ ನಿಯಮಗಳು, ಚೆಕ್​ಬುಕ್ ಶುಲ್ಕಗಳು ಜುಲೈನಿಂದ ಬದಲಾವಣೆ

(Here are the 6 personal finance financial changes expect in July month)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ