AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚ್ಯಾಟ್​ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?

Infosys missed AI opportunity: 2018ರಲ್ಲಿ ಓಪನ್​ಎಐನಲ್ಲಿ ಹೂಡಿಕೆ ಮಾಡಲು ಕನ್ಸಾರ್ಟಿಯಂನಲ್ಲಿ ಇನ್ಫೋಸಿಸ್ ಅನ್ನೂ ಭಾಗವಾಗಿಸಲು ಪ್ರಯತ್ನವಾಗಿತ್ತು. ಅಂದಿನ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಬಹಳ ಆಸಕ್ತರಾಗಿದ್ದರು. ಆದರೆ, ಕಂಪನಿಯ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಇದಕ್ಕೆ ಸಹಮತ ಹೊಂದಿರಲಿಲ್ಲ. ಹೀಗಾಗಿ, ಇನ್ಫೋಸಿಸ್ ಓಪನ್​ಎಐ ಪ್ರಾಜೆಕ್ಟ್​ನಿಂದ ಹೊರಬರುವಂತಾಯಿತು ಎಂದು ಸಿಎವೊಬ್ಬರು ಹೇಳಿದ್ದಾರೆ.

ಚ್ಯಾಟ್​ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?
ಎನ್ ಆರ್ ನಾರಾಯಣಮೂರ್ತಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2025 | 6:56 PM

Share

ಬೆಂಗಳೂರು, ಸೆಪ್ಟೆಂಬರ್ 23: ಚ್ಯಾಟ್​ಜಿಪಿಟಿ (ChatGPT), ಡೀಪ್​ಸೀಕ್ ಇತ್ಯಾದಿ ಎಲ್​ಎಲ್​ಎಂ ಮಾಡಲ್​ಗಳು ಜಾಗತಿಕವಾಗಿ ಧೂಳೆಬ್ಬಿಸುತ್ತಿವೆ. ಚ್ಯಾಟ್​ಜಿಪಿಟಿ ಬಳಸುವವರು ಭಾರತದಲ್ಲೇ ಅತಿಹೆಚ್ಚು. ಚ್ಯಾಟ್ಜಿಪಿಟಿ ಸೃಷ್ಟಿಸಿದ ಓಪನ್​ಎಐನ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್, ಭಾರತದಲ್ಲಿ ಫೌಂಡೇಶನಲ್ ಎಐ ಮಾಡಲ್ ಅನ್ನು ನಿರ್ಮಿಸಲು ಆಗಲ್ಲ ಎಂದು ಇತ್ತೀಚೆಗೆ ಹೇಳಿ ಕಿಚ್ಚೆಬ್ಬಿಸಿದ್ದರು. ಚ್ಯಾಟ್​ಜಿಪಿಟಿ ಮಟ್ಟದ ಎಐ ಮಾಡಲ್​ಗಳನ್ನು ನಿರ್ಮಿಸಲು ಸರ್ಕಾರವೂ ಶತಪ್ರಯತ್ನ ಮಾಡುತ್ತಿದೆ. ಇದೇ ವೇಳೆ, ಮೀನಲ್ ಗೋಯಲ್ (Meenal Goyal) ಎನ್ನುವ ಚಾರ್ಟರ್ಟ್ ಅಕೌಂಟೆಂಟ್​ವೊಬ್ಬರು ಕುತೂಹಲ ಮೂಡಿಸುವ ಒಂದು ಪೋಸ್ಟ್ ಹಾಕಿದ್ದಾರೆ. ಅವರ ಪ್ರಕಾರ, ಚ್ಯಾಟ್​ಜಿಪಿಟಿ ಭಾರತದ್ದೇ ಆಗಿ ಹೋಗುವ ಅವಕಾಶವೊಂದು ಕೈತಪ್ಪಿತ್ತಂತೆ.

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಮನಸ್ಸು ಮಾಡಿದ್ದರೆ ಓಪನ್​ಎಐನಲ್ಲಿ ಭಾಗಿಯಾಗಿರುವ ಕಂಪನಿಗಳಲ್ಲಿ ಇನ್ಫೋಸಿಸ್ ಕೂಡ ಇರುವಂತಾಗುತ್ತಿತ್ತು.

ಇದನ್ನೂ ಓದಿ: ಸಣ್ಣ ಉದ್ದಿಮೆಗಳು ಜಿಎಸ್​ಟಿಗೆ ನೊಂದಾಯಿಸುವುದು ಕಡ್ಡಾಯವಾ? ನಿಯಮವೇನಿದೆ? ಯಾರಿಗೆ ಕಡ್ಡಾಯ?

2018ರಲ್ಲಿ ಇನ್ಫೋಸಿಸ್​ನ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿದ್ದರು. ಆಗಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಮಹತ್ವ ಅರಿತಿದ್ದ ವಿಶಾಲ್ ಅವರು ಇನ್ಫೋಸಿಸ್ ಅನ್ನು ಎಐ ಆದ್ಯತಾ ಕಂಪನಿಯಾಗಿ ರೂಪಿಸಲು ಹೊರಟಿದ್ದರು. ಓಪನ್​ಎಐನ ಪ್ರಾಜೆಕ್ಟ್​ಗಳಲ್ಲಿ ಪಾಲ್ಗೊಳ್ಳಲು ಅಮೇಜಾನ್, ಇಲಾನ್ ಮಸ್ಕ್, ಸ್ಯಾಮ್ ಆಲ್ಟ್​ಮ್ಯಾನ್ ಮೊದಲಾದವರು ಇದ್ದ ಕನ್ಸಾರ್ಟಿಯಂನ ಭಾಗವಾಗಿ ಇನ್ಫೋಸಿಸ್ ಅನ್ನು ಸೇರಿಸಲು ವಿಶಾಲ್ ಸಿಕ್ಕ ಬಯಸಿದ್ದರು.

ಇನ್ಫೋಸಿಸ್ ಒಂದೊಮ್ಮೆ ಓಪನ್​ಎಐನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಆದರೆ ನಾರಾಯಣಮೂರ್ತಿ ಅವರಿಗೆ ಆಗ ಇದು ಸರಿ ಕಾಣಲಿಲ್ಲ. ತಮ್ಮ ಸಾಂಪ್ರದಾಯಿಕ ಐಟಿ ಸರ್ವಿಸ್ ಬ್ಯುಸಿನೆಸ್​ನಲ್ಲೇ ಮುಂದುವರಿಯಬೇಕೆಂಬುದು ಮೂರ್ತಿ ನಿಲುವಾಗಿತ್ತು. ಹೀಗಾಗಿ, ಓಪನ್​ಎಐನಲ್ಲಿ ಮಾಡಿದ್ದ ಹೂಡಿಕೆಯನ್ನು ಇನ್ಫೋಸಿಸ್ ಹಿಂಪಡೆದುಕೊಂಡಿತು.

ಇದನ್ನೂ ಓದಿ: ಮೈಕ್ರೋಸಾಫ್ಟ್, ಗೂಗಲ್​ಗೆ ಸ್ಪರ್ಧೆಯೊಡ್ಡುವ ಭಾರತೀಯ ಸಂಸ್ಥೆ ಝೋಹೋ ಈಗ ಟ್ರೆಂಡಿಂಗ್​ನಲ್ಲಿ; ಹಳ್ಳಿಯಲ್ಲಿರುವ ಈ ಕಂಪನಿಯ ವಿಶೇಷತೆಗಳೇನು?

ಮೀನಲ್ ಗೋಯಲ್ ಆ ಘಟನೆಯನ್ನು ಸ್ಮರಿಸುತ್ತಾ, ಇನ್ಫೋಸಿಸ್ ಅವತ್ತು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರೆ, ಇವತ್ತು ಅದರ ಮೌಲ್ಯ 45 ಬಿಲಿಯನ್ ಡಾಲರ್ ಆಗಿರುತ್ತಿತ್ತು ಎಂದು ಹೇಳಿದ್ದಾರೆ.

ವಿಶಾಲ್ ಸಿಕ್ಕ ಅವರು ಆಗಲೇ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!