AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚ್ಯಾಟ್​ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?

Infosys missed AI opportunity: 2018ರಲ್ಲಿ ಓಪನ್​ಎಐನಲ್ಲಿ ಹೂಡಿಕೆ ಮಾಡಲು ಕನ್ಸಾರ್ಟಿಯಂನಲ್ಲಿ ಇನ್ಫೋಸಿಸ್ ಅನ್ನೂ ಭಾಗವಾಗಿಸಲು ಪ್ರಯತ್ನವಾಗಿತ್ತು. ಅಂದಿನ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಬಹಳ ಆಸಕ್ತರಾಗಿದ್ದರು. ಆದರೆ, ಕಂಪನಿಯ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಇದಕ್ಕೆ ಸಹಮತ ಹೊಂದಿರಲಿಲ್ಲ. ಹೀಗಾಗಿ, ಇನ್ಫೋಸಿಸ್ ಓಪನ್​ಎಐ ಪ್ರಾಜೆಕ್ಟ್​ನಿಂದ ಹೊರಬರುವಂತಾಯಿತು ಎಂದು ಸಿಎವೊಬ್ಬರು ಹೇಳಿದ್ದಾರೆ.

ಚ್ಯಾಟ್​ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?
ಎನ್ ಆರ್ ನಾರಾಯಣಮೂರ್ತಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2025 | 6:56 PM

Share

ಬೆಂಗಳೂರು, ಸೆಪ್ಟೆಂಬರ್ 23: ಚ್ಯಾಟ್​ಜಿಪಿಟಿ (ChatGPT), ಡೀಪ್​ಸೀಕ್ ಇತ್ಯಾದಿ ಎಲ್​ಎಲ್​ಎಂ ಮಾಡಲ್​ಗಳು ಜಾಗತಿಕವಾಗಿ ಧೂಳೆಬ್ಬಿಸುತ್ತಿವೆ. ಚ್ಯಾಟ್​ಜಿಪಿಟಿ ಬಳಸುವವರು ಭಾರತದಲ್ಲೇ ಅತಿಹೆಚ್ಚು. ಚ್ಯಾಟ್ಜಿಪಿಟಿ ಸೃಷ್ಟಿಸಿದ ಓಪನ್​ಎಐನ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್, ಭಾರತದಲ್ಲಿ ಫೌಂಡೇಶನಲ್ ಎಐ ಮಾಡಲ್ ಅನ್ನು ನಿರ್ಮಿಸಲು ಆಗಲ್ಲ ಎಂದು ಇತ್ತೀಚೆಗೆ ಹೇಳಿ ಕಿಚ್ಚೆಬ್ಬಿಸಿದ್ದರು. ಚ್ಯಾಟ್​ಜಿಪಿಟಿ ಮಟ್ಟದ ಎಐ ಮಾಡಲ್​ಗಳನ್ನು ನಿರ್ಮಿಸಲು ಸರ್ಕಾರವೂ ಶತಪ್ರಯತ್ನ ಮಾಡುತ್ತಿದೆ. ಇದೇ ವೇಳೆ, ಮೀನಲ್ ಗೋಯಲ್ (Meenal Goyal) ಎನ್ನುವ ಚಾರ್ಟರ್ಟ್ ಅಕೌಂಟೆಂಟ್​ವೊಬ್ಬರು ಕುತೂಹಲ ಮೂಡಿಸುವ ಒಂದು ಪೋಸ್ಟ್ ಹಾಕಿದ್ದಾರೆ. ಅವರ ಪ್ರಕಾರ, ಚ್ಯಾಟ್​ಜಿಪಿಟಿ ಭಾರತದ್ದೇ ಆಗಿ ಹೋಗುವ ಅವಕಾಶವೊಂದು ಕೈತಪ್ಪಿತ್ತಂತೆ.

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಮನಸ್ಸು ಮಾಡಿದ್ದರೆ ಓಪನ್​ಎಐನಲ್ಲಿ ಭಾಗಿಯಾಗಿರುವ ಕಂಪನಿಗಳಲ್ಲಿ ಇನ್ಫೋಸಿಸ್ ಕೂಡ ಇರುವಂತಾಗುತ್ತಿತ್ತು.

ಇದನ್ನೂ ಓದಿ: ಸಣ್ಣ ಉದ್ದಿಮೆಗಳು ಜಿಎಸ್​ಟಿಗೆ ನೊಂದಾಯಿಸುವುದು ಕಡ್ಡಾಯವಾ? ನಿಯಮವೇನಿದೆ? ಯಾರಿಗೆ ಕಡ್ಡಾಯ?

2018ರಲ್ಲಿ ಇನ್ಫೋಸಿಸ್​ನ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿದ್ದರು. ಆಗಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಮಹತ್ವ ಅರಿತಿದ್ದ ವಿಶಾಲ್ ಅವರು ಇನ್ಫೋಸಿಸ್ ಅನ್ನು ಎಐ ಆದ್ಯತಾ ಕಂಪನಿಯಾಗಿ ರೂಪಿಸಲು ಹೊರಟಿದ್ದರು. ಓಪನ್​ಎಐನ ಪ್ರಾಜೆಕ್ಟ್​ಗಳಲ್ಲಿ ಪಾಲ್ಗೊಳ್ಳಲು ಅಮೇಜಾನ್, ಇಲಾನ್ ಮಸ್ಕ್, ಸ್ಯಾಮ್ ಆಲ್ಟ್​ಮ್ಯಾನ್ ಮೊದಲಾದವರು ಇದ್ದ ಕನ್ಸಾರ್ಟಿಯಂನ ಭಾಗವಾಗಿ ಇನ್ಫೋಸಿಸ್ ಅನ್ನು ಸೇರಿಸಲು ವಿಶಾಲ್ ಸಿಕ್ಕ ಬಯಸಿದ್ದರು.

ಇನ್ಫೋಸಿಸ್ ಒಂದೊಮ್ಮೆ ಓಪನ್​ಎಐನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಆದರೆ ನಾರಾಯಣಮೂರ್ತಿ ಅವರಿಗೆ ಆಗ ಇದು ಸರಿ ಕಾಣಲಿಲ್ಲ. ತಮ್ಮ ಸಾಂಪ್ರದಾಯಿಕ ಐಟಿ ಸರ್ವಿಸ್ ಬ್ಯುಸಿನೆಸ್​ನಲ್ಲೇ ಮುಂದುವರಿಯಬೇಕೆಂಬುದು ಮೂರ್ತಿ ನಿಲುವಾಗಿತ್ತು. ಹೀಗಾಗಿ, ಓಪನ್​ಎಐನಲ್ಲಿ ಮಾಡಿದ್ದ ಹೂಡಿಕೆಯನ್ನು ಇನ್ಫೋಸಿಸ್ ಹಿಂಪಡೆದುಕೊಂಡಿತು.

ಇದನ್ನೂ ಓದಿ: ಮೈಕ್ರೋಸಾಫ್ಟ್, ಗೂಗಲ್​ಗೆ ಸ್ಪರ್ಧೆಯೊಡ್ಡುವ ಭಾರತೀಯ ಸಂಸ್ಥೆ ಝೋಹೋ ಈಗ ಟ್ರೆಂಡಿಂಗ್​ನಲ್ಲಿ; ಹಳ್ಳಿಯಲ್ಲಿರುವ ಈ ಕಂಪನಿಯ ವಿಶೇಷತೆಗಳೇನು?

ಮೀನಲ್ ಗೋಯಲ್ ಆ ಘಟನೆಯನ್ನು ಸ್ಮರಿಸುತ್ತಾ, ಇನ್ಫೋಸಿಸ್ ಅವತ್ತು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರೆ, ಇವತ್ತು ಅದರ ಮೌಲ್ಯ 45 ಬಿಲಿಯನ್ ಡಾಲರ್ ಆಗಿರುತ್ತಿತ್ತು ಎಂದು ಹೇಳಿದ್ದಾರೆ.

ವಿಶಾಲ್ ಸಿಕ್ಕ ಅವರು ಆಗಲೇ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ