AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್​ಗಳನ್ನು ಅನಾವರಣಗೊಳಿಸಿದ ಸರ್ಕಾರ

Integrated Logistics plan: ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಕೇಂದ್ರ ಸರ್ಕಾರ ಏಕೀಕೃತ ಲಾಜಿಸ್ಟಿಕ್ಸ್ ಪ್ಲಾನ್ ಅನ್ನು ಅನಾವರಣಗೊಳಿಸಿದೆ. ಸೆ. 19ರಂದು ಪೀಯೂಶ್ ಗೋಯಲ್ ಅವರು ಎಚ್​ಎಸ್​ಎನ್ ಕೋಡ್​ಗಳ ಕೈಪಿಡಿ ಸೇರಿದಂತೆ ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದರು. ವಿವಿಧ ಸಚಿವಾಲಯ ಮತ್ತು ಇಲಾಖೆಗಳೊಂದಿಗೆ ಉದ್ಯಮ ವಲಯ ಸಮನ್ವಯತೆ ಸಾಧಿಸಲು 12,000ಕ್ಕೂ ಅಧಿಕ ಎಚ್​ಎಸ್​ಎನ್ ಕೋಡ್​ಗಳಿವೆ.

ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್​ಗಳನ್ನು ಅನಾವರಣಗೊಳಿಸಿದ ಸರ್ಕಾರ
ಲಾಜಿಸ್ಟಿಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2025 | 2:47 PM

Share

ನವದೆಹಲಿ, ಸೆಪ್ಟೆಂಬರ್ 23: ಭಾರತೀಯ ಉದ್ಯಮ ವಲಯದಲ್ಲಿ ಸಾಗಣೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಮೊನ್ನೆ ಏಕೀಕೃತ ಲಾಜಿಸ್ಟಿಕ್ಸ್ ಪ್ಲಾನ್​ಗಳನ್ನು (Integrated Logistics Plan) ಅನಾವರಣಗೊಳಿಸಿದರು. ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಈ ನಗರಗಳಲ್ಲಿ ಈಗಾಗಲೇ ಇರುವ ಲಾಜಿಸ್ಟಿಕ್ಸ್ ಸೌಕರ್ಯವನ್ನು ಪರಿಶೀಲಿಸುವುದು, ಲೋಪವಿದ್ದರೆ ಗುರುತಿಸುವುದು, ವ್ಯವಸ್ಥೆ ಬಲಪಡಿಸುವ ಮತ್ತು ವೆಚ್ಚ ಕಡಿಮೆ ಮಾಡುವ ಬಗೆಯನ್ನು ಶೋಧಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸದ್ಯ, ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಈ ಲಾಜಿಸ್ಟಿಕ್ಸ್ ಪ್ಲಾನ್​ಗಳನ್ನು ಜಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ಎಲ್ಲೆಡೆ ವಿಸ್ತರಿಸುವ ಗುರಿ ಇಡಲಾಗಿದೆ.

ಲಾಜಿಸ್ಟಿಕ್ಸ್ ವ್ಯವಸ್ಥೆ ಯಾಕೆ ಮುಖ್ಯ?

ಬ್ಯುಸಿನೆಸ್​ಗಳು ಸರಾಗವಾಗಿ ನಡೆಯಲು ಲಾಜಿಸ್ಟಿಕ್ಸ್ ಬಹಳ ಮುಖ್ಯ. ಇದು ಮುಖ್ಯವಾಗಿ ಸಾಗಣೆ ವ್ಯವಸ್ಥೆಯಾಗಿದೆ. ಕಾರ್ಖಾನೆಯಲ್ಲಿ ತಯಾರಾದ ಒಂದು ಉತ್ಪನ್ನವು ಬೇರೆ ಬೇರೆ ಪ್ರದೇಶಗಳನ್ನು ತಲುಪುವಂತೆ ಮಾಡುವುದೇ ಲಾಜಿಸ್ಟಿಕ್ಸ್ ವ್ಯವಸ್ಥೆ. ವಿದೇಶಗಳಿಗೆ ಕಳುಹಿಸುವುದಾದರೆ ಸರಕುಗಳನ್ನು ಟ್ರಕ್​ಗಳಲ್ಲೋ, ಅಥವಾ ಗೂಡ್ಸ್ ರೈಲುಗಳಲ್ಲೋ ತುಂಬಿ, ನಂತರ ಹಡಗುಗಳಿಗೆ ಹಾಕಿ, ಅಲ್ಲಿಂದ ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ. ಕೆಲ ಸರಕುಗಳು ವಿಮಾನಗಳಲ್ಲೂ ಸಾಗಣೆ ಆಗುವುದುಂಟು.

ಇದನ್ನೂ ಓದಿ: ಜಿಎಸ್​ಟಿ ಇಳಿಕೆ ದಿನವೇ ಕಾರುಗಳ ಬಂಪರ್ ಸೇಲ್; ಒಂದೇ ದಿನದಲ್ಲಿ ಮಾರುತಿಯ 30,000, ಹ್ಯೂಂಡಾಯ್​ನ 11,000 ಕಾರುಗಳ ಮಾರಾಟ

ಭಾರತದಲ್ಲಿ ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಇರುವ ಲೋಪಗಳಿಂದ ಸಾಕಷ್ಟು ಸೋರಿಕೆ ಆಗುತ್ತದೆ. ಹಿಂದೆ ಮಾಡಿದ ಅಂದಾಜು ಪ್ರಕಾರ ಲಾಜಿಸ್ಟಿಕ್ಸ್ ವೆಚ್ಚವೇ ಜಿಡಿಪಿಯ ಶೇ. 13-14ರಷ್ಟಾಗುತ್ತದೆ. ಇದೀಗ ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಎಣಿಸಲು ಹೊಸ ವೈಜ್ಞಾನಿಕ ವಿಧಾನವೊಂದನ್ನು ಅಳವಡಿಸಲಾಗಿದ್ದು, ಅದರ ಪ್ರಕಾರ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚ ಜಿಡಿಪಿಯ ಶೇ. 7.97ರಷ್ಟಾಗಬಹುದು.

ಎಚ್​ಎಸ್​ಎನ್ ಕೋಡ್​ಗಳ ಸಮಗ್ರ ಕೈಪಿಡಿ

ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಸೆ. 21ರಂದು ಎಚ್​ಎಸ್​ಎನ್ (ಹಾರ್ಮೋನೈಸ್ಡ್ ಸಿಸ್ಟಂ ಆಫ್ ನಾಮೆಂಕ್ಲೇಚರ್) ಕೋಡ್​ಗಳ ಸಮಗ್ರ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದರು. ಇದರಲ್ಲಿ 31 ಸಚಿವಾಲಯಗಳು ಹಾಗೂ ಇಲಾಖೆಗಳಾದ್ಯಂತ 12,167 ಕೋಡ್​ಗಳನ್ನು ಒಳಗೊಳ್ಳಲಾಗಿದೆ.

ಹೆಚ್​ಎಸ್​ಎನ್ ಕೋಡ್ ಎಂಬುದು ಸರಕುಗಳನ್ನು ತೆರಿಗೆ, ಸುಂಕ ಇತ್ಯಾದಿ ನಿರ್ದಿಷ್ಟ ಉದ್ದೇಶಗಳಿಗೆ ವರ್ಗೀಕರಿಸಲು ಬಳಸಲಾಗುತ್ತದೆ. ಅಂತಾರಾಷ್ಟ್ರೀಯವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆ ಇದು. ಈ ಕೋಡ್​ಗಳಿಂದ ಉದ್ಯಮಗಳಿಗೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಅಕೌಂಟ್​ನಲ್ಲಿ ಹೆಚ್ಚುವರಿ ಹಣಕ್ಕೆ ಶೇ. 6.5 ಬಡ್ಡಿ; ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್​ನ ಆಫರ್

ಲಾಜಿಸ್ಟಿಕ್ಸ್ ಡಾಟಾ ಬ್ಯಾಂಕ್ 2.0

ಪೀಯೂಶ್ ಗೋಯಲ್ ಇದೇ ವೇಳೆ ಲಾಜಿಸ್ಟಿಕ್ಸ್ ಡಾಟಾ ಬ್ಯಾಂಕ್​ನ ಪರಿಷ್ಕೃತ ಆವೃತ್ತಿಯನ್ನು ಅನಾವರಣಗೊಳಿಸಿದರು. ಸರಕುಗಳನ್ನು ಸಾಗಿಸಲಾಗುತ್ತಿರುವ ಹಡಗುಗಳನ್ನು ರಿಯಲ್ ಟೈಮ್​ನಲ್ಲಿ ಟ್ರ್ಯಾಕ್ ಮಾಡಲು ಇದು ನೆರವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ