AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG Composite Cylinder: ಇಂಡೇನ್ ಸ್ಮಾರ್ಟ್​ ಸಿಲಿಂಡರ್​ ಜೊತೆ ಹಳೇ ಎಲ್​ಪಿಜಿ ಸಿಲಿಂಡರ್ ಎಕ್ಸ್​ಚೇಂಜ್ ಮಾಡೋದು ಹೇಗೆ?

LPG Cylinder Price: ಇಂಡೇನ್ ಗ್ಯಾಸ್​ನ ಈ ಕಾಂಪೋಸಿಟ್ ಸಿಲಿಂಡರ್ ಅನ್ನು ನಿಮ್ಮ ಮನೆಯಲ್ಲಿರುವ ಹಳೇ ಎಲ್​ಪಿಜಿ ಸಿಲಿಂಡರ್ ಜೊತೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. 

LPG Composite Cylinder: ಇಂಡೇನ್ ಸ್ಮಾರ್ಟ್​ ಸಿಲಿಂಡರ್​ ಜೊತೆ ಹಳೇ ಎಲ್​ಪಿಜಿ ಸಿಲಿಂಡರ್ ಎಕ್ಸ್​ಚೇಂಜ್ ಮಾಡೋದು ಹೇಗೆ?
ಸ್ಮಾರ್ಟ್​ ಎಲ್​ಪಿಜಿ ಸಿಲಿಂಡರ್
TV9 Web
| Edited By: |

Updated on:Jul 17, 2021 | 2:16 PM

Share

ಆಧುನಿಕ ಜಗತ್ತಿನಲ್ಲಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬಳಸದವರು ಯಾರಿದ್ದಾರೆ? ಎಲ್ಲೋ ಒಂದು ವರ್ಗದವರು ಎಲೆಕ್ಟ್ರಿಕ್ ಸ್ಟೌವ್, ಮೈಕ್ರೋವೇವ್​ಗಳ ಮೊರೆಹೋಗಿರಬಹುದು. ಆದರೆ, ಈ ದೇಶದ ಬಹುಪಾಲು ಜನರು ಎಲ್​ಪಿಜಿ ಸಿಲಿಂಡರ್​ಗಳ (LPG Gas Cylinder) ಮೇಲೆ ಅವಲಂಬಿತರಾಗಿದ್ದಾರೆ. ಹಳ್ಳಿಗಳಲ್ಲೂ ಈಗ ಸೌದೆ ಒಲೆಯ ಜಾಗದಲ್ಲಿ ಸಿಲಿಂಡರ್​ಗಳು ಬಂದು ಕುಳಿತಿವೆ. ಆದರೆ, ಈ ಎಲ್​ಪಿಜಿ ಸಿಲಿಂಡರ್​ಗಳು ಖಾಲಿಯಾಯಿತೆಂದರೆ ಗೊತ್ತಾಗುವುದು ಹೇಗೆ? ಎಷ್ಟೋ ಬಾರಿ ಮನೆಗೆ ನೆಂಟರು ಬಂದಾಗಲೋ ಅಥವಾ ಅರ್ಜೆಂಟ್​ ಇದ್ದಾಗಲೋ ಎಲ್​ಪಿಜಿ ಸಿಲಿಂಡರ್ ಖಾಲಿಯಾಗಿ ತಲೆನೋವು ತಂದಿಟ್ಟ ಅನುಭವ ಎಲ್ಲ ಮಹಿಳೆಯರಿಗೂ ಆಗಿರುತ್ತದೆ. ಹಾಗಾದರೆ, ನಿಮ್ಮ ಮನೆಯ ಎಲ್​ಪಿಜಿ ಸಿಲಿಂಡರ್​ನಲ್ಲಿ ಎಷ್ಟು ದಿನಗಳಿಗಾಗುವಷ್ಟು ಗ್ಯಾಸ್ ಉಳಿದಿದೆ ಎಂದು ಮೊದಲೇ ತಿಳಿದುಕೊಳ್ಳುವುದು ಹೇಗೆ? ಇದಕ್ಕೆ ಪರಿಹಾರವಾಗಿ ಸ್ಮಾರ್ಟ್​ ಸಿಲಿಂಡರ್ (Indane Composite Cylinder)  ಅನ್ನು ಮಾರುಕಟ್ಟೆಗೆ ತರಲಾಗಿದೆ. 

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​​ನಿಂದ ಹೊಸ ಬ್ರ್ಯಾಂಡ್​ನ ಎಲ್​ಪಿಜಿ ಸಿಲಿಂಡರ್​ ಅನ್ನು ಪರಿಚಯಿಸಲಾಗಿದೆ. ಇಂಡೇನ್ ಕಾಂಪೋಸಿಟ್ ಸಿಲಿಂಡರ್ ಎಂಬ ಈ ಸ್ಮಾರ್ಟ್​ ಎಲ್​ಪಿಜಿ ಸಿಲಿಂಡರ್​ನಲ್ಲಿ ಎಷ್ಟು ಗ್ಯಾಸ್​ ಬಾಕಿ ಉಳಿದಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಮಾಮೂಲಿ ಕಬ್ಬಿಣದ ಸಿಲಿಂಡರ್​ಗಳ ಬದಲಾಗಿ ಸ್ಮಾರ್ಟ್​ ಆಗಿರಲಿರುವ ಈ ಸಿಲಿಂಡರ್​ಗಳು ಹಲವು ವಿಶೇಷವಾದ ಆಯ್ಕೆಗಳನ್ನು ಹೊಂದಿದೆ. ಮಾಮೂಲಿ ಸಿಲಿಂಡರ್​ಗಳಿಗಿಂತಲೂ ಇಂಡೇನ್ ಗ್ಯಾಸ್​ನ ಈ ಕಾಂಪೋಸಿಟ್ ಸಿಲಿಂಡರ್ ಬಹಳಷ್ಟು ಸೇಫ್ ಆಗಿರಲಿದೆ. ಈ ಸಿಲಿಂಡರ್ ಅನ್ನು ನಿಮ್ಮ ಮನೆಯಲ್ಲಿರುವ ಹಳೇ ಎಲ್​ಪಿಜಿ ಸಿಲಿಂಡರ್ ಜೊತೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು.

ಈ ಸ್ಮಾರ್ಟ್​ ಕಂಪೋಸಿಟ್ ಸಿಲಿಂಡರ್​ಗಾಗಿ ಗ್ರಾಹಕರು ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. 10 ಕೆಜಿ ಸಿಲಿಂಡರ್‌ಗೆ ಭದ್ರತಾ ಠೇವಣಿ 3,350 ರೂ., 5 ಕೆಜಿ ಸಿಲಿಂಡರ್‌ಗೆ ಭದ್ರತಾ ಠೇವಣಿ 2,150 ರೂ. ಪಾವತಿಸಬೇಕಾಗುತ್ತದೆ. ನೀವು ಇಂಡೇನ್ ಗ್ರಾಹಕರಾಗಿದ್ದರೆ, ನಿಮ್ಮ ಮನೆಯಲ್ಲಿ ಈಗಾಗಲೇ ಇರುವ ಹಳೇ ಇಂಡೇನ್ ಎಲ್​ಪಿಜಿ ಸಿಲಿಂಡರ್ ಅನ್ನು ಹೊಸ ಕಾಂಪೋಸಿಟ್ ಸಿಲಿಂಡರ್ ನೊಂದಿಗೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ಇದಕ್ಕಾಗಿ, ಭದ್ರತಾ ಠೇವಣಿಯ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಹೊಸ ಸ್ಮಾರ್ಟ್​ ಸಿಲಿಂಡರ್​ಗಳನ್ನು ಕೂಡ ಬೇರೆ ಸಿಲಿಂಡರ್​ಗಳಂತೆ ಹೋಂ ಡೆಲಿವರಿ ನೀಡಲಾಗುತ್ತದೆ.

ಮೂರು ಲೇಯರ್​ಗಳಲ್ಲಿ ತಯಾರಿಸಲಾಗಿರುವ ಇಂಡೇನ್ ಕಾಂಪೋಸಿಟ್ ಸಿಲಿಂಡರ್ ಬ್ಲೋ ಮೌಲ್ಡ್​ ಹೈ ಡೆನ್ಸಿಟಿ ಪಾಲೆಥೀನ್​ನ ಇನ್ನರ್ ಲೈನರ್, ಪಾಲಿಮರ್​ನಿಂದ ಸುತ್ತಲ್ಪಟ್ಟ ಫೈಬರ್​ ಗ್ಲಾಸ್​ ಮತ್ತು ಹೊರಭಾಗದಲ್ಲಿ ಹೆಚ್​ಡಿಪಿಇ ಜಾಕೆಟ್ ಅನ್ನು ಒಳಗೊಂಡಿರುತ್ತದೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಈ ಸ್ಮಾರ್ಟ್​ ಸಿಲಿಂಡರ್​ ನಿಮ್ಮ ಮನೆಯಲ್ಲಿ ಈಗಾಗಲೇ ಬಳಸುತ್ತಿರುವ ಮಾಮೂಲಿ ಸಿಲಿಂಡರ್​ಗಿಂತಲೂ ಬಹಳ ಹಗುರವಾಗಿರುತ್ತದೆ. ಅರಾಮಾಗಿ ಒಬ್ಬರೇ ಈ ಸಿಲಿಂಡರ್ ಅನ್ನು ಎತ್ತಿಕೊಂಡು ಹೋಗಲು ಸಾಧ್ಯವಿದೆ. ಹಾಗೇ, ಈ ಸ್ಮಾರ್ಟ್​ ಸಿಲಿಂಡರ್​ನ ಕೆಲವು ಭಾಗ ಪಾರದರ್ಶಕವಾಗಿರಲಿದೆ. ಇದರಿಂದ ಸಿಲಿಂಡರ್​ನಲ್ಲಿ ಇನ್ನೂ ಎಷ್ಟು ಗ್ಯಾಸ್​ ಉಳಿದಿದೆ ಎಂಬುದನ್ನು ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಬಹುದು.

ಹಾಗೇ, ಈ ಹೊಸ ಸ್ಮಾರ್ಟ್​ ಸಿಲಿಂಡರ್ ತುಕ್ಕು ಹಿಡಿಯುವುದಿಲ್ಲ. ಇದಕ್ಕೆ ಯಾವುದೇ ಮೆಟಲ್ ಬಳಸದ ಕಾರಣದಿಂದ ಈ ಸಿಲಿಂಡರ್​ಗೆ ತುಕ್ಕು ಹಿಡಿಯುವುದಿಲ್ಲ, ಹಾಗೇ ಸ್ಕ್ರಾಚ್​ ಕೂಡ ಆಗುವುದಿಲ್ಲ. ಸದ್ಯಕ್ಕೆ 5 ಕೆಜಿ ಮತ್ತು 10 ಕೆಜಿ ಗಾತ್ರದಲ್ಲಿ ಈ ಕಾಂಪೋಸಿಟ್ ಸಿಲಿಂಡರ್​ಗಳು ಲಭ್ಯ ಇವೆ. ದೆಹಲಿ, ಗುರುಗ್ರಾಮ, ಹೈದರಾಬಾದ್, ಫರೀದಾಬಾದ್, ಲುಧಿಯಾನಾದಲ್ಲಿ ಈ ಸಿಲಿಂಡರ್​ಗಳು ಲಭ್ಯ ಇವೆ. ಮುಂದಿನ ವಾರದಿಂದ ಇಡೀ ದೇಶಾದ್ಯಂತ ಈ ಸ್ಮಾರ್ಟ್​ ಸಿಲಿಂಡರ್​ಗಳು ಲಭ್ಯವಾಗಲಿವೆ.

ಇದನ್ನೂ ಓದಿ: LPG Cylinder Price: ಗೃಹಬಳಕೆ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರ

ಇದನ್ನೂ ಓದಿ: LPG gas: ಎಲ್​ಪಿಜಿ ಗ್ಯಾಸ್​ ರೀಫಿಲ್​ ಬುಕ್ಕಿಂಗ್ ಯಾವ ವಿತರಕರಿಂದಾದರೂ ಮಾಡಿಸಬಹುದು ಎಂಬ ನಿಯಮ ಶೀಘ್ರದಲ್ಲಿ

(Indane Smart LPG Composite cylinder how to exchange with old Gas Cylinder)

Published On - 2:14 pm, Sat, 17 July 21

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು