AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಗೆ ಈ ಅನುಕೂಲ ಸಿಗಲು ಬಹಳ ವರ್ಷ ಬೇಕಾಯಿತು; ಭಾರತಕ್ಕೆ ಈಗಲೇ ಸಿಕ್ಕಿದೆ: ಆರ್ಥಿಕತೆಯ ಒಳನೋಟ ಬಿಚ್ಚಿಟ್ಟ ಫೇರ್​ಫ್ಯಾಕ್ಸ್ ಮುಖ್ಯಸ್ಥ ಪ್ರೇಮ್ ವತ್ಸ

Fairfax Financial Holdings Chairman: ಭಾರತದ ಮೂರನೇ ಎರಡು ಭಾಗದಷ್ಟು ಆರ್ಥಿಕತೆಯು ಗ್ರಾಹಕ ಕೇಂದ್ರಿತವಾಗಿದೆ. ಇದು ಬಹಳ ದೊಡ್ಡ ಅನುಕೂಲ ಎಂದು ಫೇರ್​ಫ್ಯಾಕ್ಸ್ ಮುಖ್ಯಸ್ಥ ಹೇಳಿದ್ದಾರೆ. ಮೋದಿ ಅವರು ಪ್ರಧಾನಿ ಆಗಿರುವವರೆಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಹೂಡಿಕೆದಾರರಿಗೆ ಚಿಂತೆ ಇದ್ದಂತಿಲ್ಲ ಎಂದು ಪ್ರೇಮ್ ವತ್ಸ ತಿಳಿಸಿದ್ದಾರೆ. ಬಿಐಎಎಲ್​ನಲ್ಲಿ ಶೇ. 64ರಷ್ಟು ಪಾಲು ಹೊಂದಿರುವ ಫೇರ್ ಫ್ಯಾಕ್ಸ್ ಸಂಸ್ಥೆ ಭಾರತದಲ್ಲಿ ಇನ್ನಷ್ಟು ಏರ್ಪೋರ್ಟ್ ಅಭಿವೃದ್ದಿಗೆ ಬಿಡ್ ಸಲ್ಲಿಸಲು ಯೋಜಿಸಿದೆ.

ಚೀನಾಗೆ ಈ ಅನುಕೂಲ ಸಿಗಲು ಬಹಳ ವರ್ಷ ಬೇಕಾಯಿತು; ಭಾರತಕ್ಕೆ ಈಗಲೇ ಸಿಕ್ಕಿದೆ: ಆರ್ಥಿಕತೆಯ ಒಳನೋಟ ಬಿಚ್ಚಿಟ್ಟ ಫೇರ್​ಫ್ಯಾಕ್ಸ್ ಮುಖ್ಯಸ್ಥ ಪ್ರೇಮ್ ವತ್ಸ
ಪ್ರೇಮ್ ವತ್ಸ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2024 | 12:09 PM

Share

ನವದೆಹಲಿ, ಜನವರಿ 12: ಬೆಂಗಳೂರಿನ ಏರ್ಪೋರ್ಟ್ ಸಂಸ್ಥೆ ಬಿಎಐಎಲ್​ನಲ್ಲಿ ಹೂಡಿಕೆ ಹೆಚ್ಚಿಸಿರುವ ಕೆನಡಾ ಮೂಲದ ಫೇರ್​​ಫ್ಯಾಕ್ಸ್ ಸಂಸ್ಥೆಯ (Fairfax Financial Holdings) ಮುಖ್ಯಸ್ಥ ಪ್ರೇಮ್ ವತ್ಸ (Prem Watsa) ಅವರು ಭಾರತದ ಆರ್ಥಿಕತೆ ಪರಿಸ್ಥಿತಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಆರ್ಥಿಕ ಮುನ್ನಡೆಯ ದಾರಿಯಲ್ಲಿರುವ ಅನುಕೂಲತೆ ಬಗ್ಗೆ ವಿಶದ ಪಡಿಸಿದ್ದಾರೆ.

‘ಭಾರತದ ಮೂರನೇ ಎರಡು ಭಾಗದಷ್ಟು ಆರ್ಥಿಕತೆಯು ಗ್ರಾಹಕ ಕೇಂದ್ರಿತವಾಗಿದೆ (consumer oriented). ಇದು ಈ ದೇಶಕ್ಕಿರುವ ಬಹಳ ದೊಡ್ಡ ಅನುಕೂಲ. ಚೀನಾದಂತಹ ದೇಶಗಳಿಗೆ ಈ ಅನುಕೂಲ ಒದಗಿ ಬರಲು ಬಹಳ ಕಾಲ ಹಿಡಿಯಿತು. ಸೌಕರ್ಯ ಅಭಿವೃದ್ಧಿ, ಸರ್ಕಾರೀ ವೆಚ್ಚ ಎಲ್ಲವೂ ಆಗುತ್ತಿದೆ. ಆರ್ಥಿಕತೆ ಆಗಿಷ್ಟು ಈಗಿಷ್ಟು ಕಡಿಮೆ ಆಗಬಹುದಾದರೂ ಒಟ್ಟಾರೆ ಆರ್ಥಿಕತೆಗೆ ಸ್ಥಿರತೆ ತರುತ್ತದೆ’ ಎಂದು ಪ್ರೇಮ್ ವತ್ಸ ಹೇಳಿದ್ದಾರೆ.

ಇದನ್ನೂ ಓದಿ: Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್​ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್

ಮೋದಿ ಇರುವವರೆಗೂ ಭಾರತದ ಆರ್ಥಿಕತೆಯ ಬಗ್ಗೆ ಚಿಂತೆ ಇಲ್ಲ…

ಭಾರತದಲ್ಲಿ ಸಮೀಕ್ಷೆಗಳ ಪ್ರಕಾರ ಪ್ರಧಾನಿ ಮೋದಿ ಮೇಲೆ ಶೇ. 70-80ರಷ್ಟು ಜನರಿಗೆ ವಿಶ್ವಾಸ ಇದೆ. ಹೂಡಿಕೆದಾರರಿಗೆ ಮೋದಿ ಬಗ್ಗೆ ವಿಶ್ವಾಸ ಇದೆ. ಮೋದಿ ಇದ್ದರೆ ಆರ್ಥಿಕ ಬೆಳವಣಿಗೆ ಹೀಗೇ ಮುಂದುವರಿಯುತ್ತದೆ. ವ್ಯವಹಾರ ಸ್ನೇಹಿ ನೀತಿಗಳು ಜಾರಿಯಲ್ಲಿರುತ್ತವೆ. ಅಸಮರ್ಪಕ ತೆರಿಗೆ ವಿಧಿಸುವುದಿಲ್ಲ ಎನ್ನುವ ಭಾವನೆ ಇದೆ,’ ಎಂದು ಫೇರ್​ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯ ಛೇರ್ಮನ್ ಆದ ಅವರು ಅಭಿಪ್ರಾಯಪಟ್ಟಿದ್ದಾರೆ.

15 ವರ್ಷದ ಹಿಂದಿನ ಚೀನಾದಂತಿದೆ ಭಾರತ…

‘ಭಾರತ ಮುನ್ನುಗ್ಗುತ್ತಿದೆ. ಅಮೆರಿಕದಲ್ಲಿ ಆರ್ಥಿಕತೆ ಮಂದಗೊಂಡಿರಬಹುದು. ಚೀನಾದಲ್ಲಿ ಸಾಲದ ಪ್ರಮಾಣ ಹೆಚ್ಚಿದೆ. ರಿಯಲ್ ಎಸ್ಟೇಟ್ ಬಿಕ್ಕಟ್ಟು ಇತ್ಯಾದಿ ಸಮಸ್ಯೆಗಳಿವೆ. ಆದರೆ, ಭಾರತಲ್ಲಿ ಇಂತಹ ಸಮಸ್ಯೆಗಳಿಲ್ಲ. ಇಲ್ಲಿ ಷೇರುಪೇಟೆಯಲ್ಲಿ ಬೆಲೆ ಅಧಿಕವಾಗಿರಬಹುದು. 15 ಅಥವಾ 20 ವರ್ಷಗಳ ಹಿಂದೆ ಚೀನಾ ಇದ್ದಂತಹ ಸ್ಥಿತಿಯಲ್ಲಿ ಭಾರತ ಇದೆ. ಹೀಗಾಗಿ, ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಹಾದಿ ಬಹಳ ದೂರ ಹೋಗಬಹುದು,’ ಎಂದು ಪ್ರೇಮ್ ವತ್ಸ ತಿಳಿಸಿದ್ದಾರೆ.

ಇದನ್ನೂ ಓದಿ: World’s Most Valuable Company: ವಿಶ್ವದ ಅತಿಹೆಚ್ಚು ಮೌಲ್ಯದ ಕಂಪನಿ; ಕ್ಷಣಿಕವಾದರೂ ಆ್ಯಪಲ್ ಅನ್ನು ಮತ್ತೆ ಹಿಂದಿಕ್ಕಿದ ಮೈಕ್ರೋಸಾಫ್ಟ್

ಟೊರಾಂಟೋದಲ್ಲಿ ಮುಖ್ಯಕಚೇರಿ ಹೊಂದಿರುವ ಫೇರ್​ಫ್ಯಾಕ್ಸ್ ಬೆಂಗಳೂರಿನ ಏರ್​ಪೋರ್ಟ್​ನ ಮಾಲೀಕ ಸಂಸ್ಥೆ ಬಿಐಎಎಲ್​ನಲ್ಲಿ ಹೆಚ್ಚಿನ ಷೇರು ಖರೀದಿಸಿದೆ. ಬಿಐಎಎಲ್​ನಲ್ಲಿ ಫೇರ್​ಫ್ಯಾಕ್ಸ್ ಷೇರು ಪ್ರಮಾಣ ಶೇ. 64ಕ್ಕೆ ಏರಿದೆ. ಬೆಂಗಳೂರು ಏರ್​ಪೋರ್ಟ್​ನ ಯಶಸ್ಸನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಇನ್ನಷ್ಟು ಏರ್​ಪೋರ್ಟ್​ಗಳಿಗೆ ಬಿಡ್ ಸಲ್ಲಿಸಲು ಫೇರ್​ಫ್ಯಾಕ್ಸ್ ಆಲೋಚಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ