AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salary Hike: 2022ರಲ್ಲಿ ಎಷ್ಟು ವೇತನ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯನ್ನು ತಿಳಿಸುತ್ತಿದೆ ಈ ವರದಿ

ಭಾರತದಲ್ಲಿ 2022ನೇ ಇಸವಿಯಲ್ಲಿ ಹೆಚ್ಚಿನ ಸಂಬಳ ಹಾಗೂ ಶೇ 9.3ರಷ್ಟು ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು ಎಂದು ವರದಿಯೊಂದು ತಿಳಿಸಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Salary Hike: 2022ರಲ್ಲಿ ಎಷ್ಟು ವೇತನ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯನ್ನು ತಿಳಿಸುತ್ತಿದೆ ಈ ವರದಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 20, 2021 | 6:24 PM

Share

ಒಂದು ವರದಿಯ ಪ್ರಕಾರ, ಭಾರತದಲ್ಲಿ ಮತ್ತೆ ಹೆಚ್ಚಿನ ಸಂಬಳ ದೊರೆಯುತ್ತಿದೆ. 2022ನೇ ಇಸವಿಯಲ್ಲಿ ಅಂದಾಜು ಶೇ 9.3ರಷ್ಟು ವೇತನ ಹೆಚ್ಚಳದ ನಿರೀಕ್ಷೆ ಮಾಡಲಾಗಿದೆ. ಅಂದಹಾಗೆ 2021ನೇ ಇಸವಿಯಲ್ಲಿ ಇದು ಶೇಕಡಾ 8ರಷ್ಟಿತ್ತು. ಉದ್ಯೋಗಿಗಳ ನೇಮಕಾತಿ ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಉದ್ಯೋಗದಾತರು ಸಿಬ್ಬಂದಿಗೆ ಹೆಚ್ಚಿನ ವೇತನ ಏರಿಕೆ ನೀಡಲು ತಯಾರಿ ನಡೆಸುತ್ತಿದ್ದಾರೆ. ಜಾಗತಿಕ ಸಲಹೆ, ಬ್ರೋಕಿಂಗ್ ಮತ್ತು ಸಲ್ಯೂಷನ್ ಸಂಸ್ಥೆಗಳಾದ ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಅವರ ‘ಸಂಬಳ ಬಜೆಟ್ ಯೋಜನೆ ವರದಿ’ ಪ್ರಕಾರ, 2021ರಲ್ಲಿ ಶೇ 8ರಷ್ಟು ವಾಸ್ತವಿಕ ಹೆಚ್ಚಳಕ್ಕೆ ಹೋಲಿಸಿದರೆ, ಮುಂದಿನ ವರ್ಷ (2022) ವೇತನಗಳು ಶೇ 9.3ರಷ್ಟು ಏರಿಕೆ ಆಗುವ ನಿರೀಕ್ಷೆಯಿದೆ. ಸಮೀಕ್ಷೆಯ ಪ್ರಕಾರ, ಮುಂಬರುವ ವರ್ಷದಲ್ಲಿ ಭಾರತದ ನಿರೀಕ್ಷಿತ ವೇತನ ಹೆಚ್ಚಳ ಏಷ್ಯಾ-ಪೆಸಿಫಿಕ್‌ನಲ್ಲೇ ಅತಿ ದೊಡ್ಡದಾಗಿದೆ. ಏಕೆಂದರೆ ಮುಂಬರುವ 12 ತಿಂಗಳಲ್ಲಿ ಪ್ರಬಲ ವ್ಯಾಪಾರ ದೃಷ್ಟಿಕೋನದ ಆಶಾವಾದವು ಬಲವಾಗಿದೆ.

ಸಂಬಳ ಬಜೆಟ್ ಯೋಜನಾ ವರದಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅದು 2021ರ ಮೇ ಮತ್ತು ಜೂನ್ ನಡುವೆ ಆನ್‌ಲೈನ್‌ನಲ್ಲಿ ನಡೆದಿದ್ದು, 13 ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳ 1,405 ಸಂಸ್ಥೆಗಳು ಹಾಗೂ 435 ಕಂಪೆನಿಗಳು ಇದರಲ್ಲಿ ಒಳಗೊಂಡಿವೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಇದ್ದ ಶೇ 37ಕ್ಕಿಂತ ಹೆಚ್ಚಿನ ಭಾರತೀಯ ಉದ್ಯಮಗಳು (ಶೇ 52.2) ಮುಂದಿನ 12 ತಿಂಗಳಲ್ಲಿ ಅನುಕೂಲಕರವಾದ ಕಂಪೆನಿಯ ಆದಾಯದ ಮುನ್ನೋಟವನ್ನು ಮುನ್ಸೂಚನೆ ನೀಡಿವೆ ಎಂದು ವರದಿಯು ಸೂಚಿಸುತ್ತದೆ. ಇದು ಬಹು ನಿರೀಕ್ಷಿತ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ. ಇದರಿಂದಾಗಿ ಸಂಸ್ಥೆಗಳಾದ್ಯಂತ ಹೆಚ್ಚಿನ ನೇಮಕಾತಿಗೆ ಕಾರಣವಾಗುತ್ತದೆ. ಶೇ 30ರಷ್ಟು ಕಂಪೆನಿಗಳು ಮುಂದಿನ 12 ತಿಂಗಳಲ್ಲಿ ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಸಮೀಕ್ಷೆಯ ಪ್ರಕಾರ, ಇದು 2020ನೇ ಇಸವಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಎಂಜಿನಿಯರಿಂಗ್ (ಶೇ 57.5), ಮಾಹಿತಿ ತಂತ್ರಜ್ಞಾನ (ಶೇ 53.4), ತಾಂತ್ರಿಕವಾಗಿ ನುರಿತ ಕರಕುಶಲ ವಸ್ತುಗಳು (ಶೇ 34.2), ಮತ್ತು ಮಾರಾಟ (ಶೇ 34.2) ನಂತಹ ಪ್ರಮುಖ ಕಾರ್ಯಗಳು ಕೈಗಾರಿಕೆಗಳಾದ್ಯಂತ ನೇಮಕಾತಿಯ ಗಣನೀಯ ಭಾಗವನ್ನು ಹೊಂದಿರುತ್ತವೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ, ಭಾರತದ ಸ್ವಯಂಪ್ರೇರಿತ ಮತ್ತು ಅನೈಚ್ಛಿಕ ಅಟ್ರಿಷನ್ (ಕೆಲಸ ಬಿಡುವ) ದರಗಳು ಈ ಪ್ರಾದೇಶಿಕ ಭಾಗದ ಇತರ ದೇಶಗಳಿಗಿಂತ ಕಡಿಮೆಯಾಗಿದೆ. ಸ್ವಯಂಪ್ರೇರಿತ ಅಟ್ರಿಷನ್ ದರವು ಶೇ 8.9 ಮತ್ತು ಅನೈಚ್ಛಿಕ ಅಟ್ರಿಷನ್ ದರವು ಶೇ 3.3ರಷ್ಟು ಎಂದು ಸಹ ಅದು ಹೇಳಿದೆ.

“ಹೆಚ್ಚಿನ ಕಂಪೆನಿ ಆಶಾವಾದವು ಹೆಚ್ಚಿದ ವೇತನ ಬಜೆಟ್ ಮತ್ತು ನೇಮಕಾತಿ ಚಟುವಟಿಕೆಗಳಲ್ಲಿ ವ್ಯಕ್ತವಾಗುತ್ತಿದೆ. ಸಾಂಕ್ರಾಮಿಕ ರೋಗವು ತಮ್ಮ ಉದ್ಯೋಗಿಗಳಿಗೆ ಉದ್ಯಮದ ಬಜೆಟ್​ನಲ್ಲಿ ಒಂದು ಮಹತ್ವದ ತಿರುವು,” ಎಂದು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಕನ್ಸಲ್ಟಿಂಗ್‌ನ ರಾಜುಲ್ ಮಾಥುರ್ ಹೇಳಿದ್ದಾರೆ. “ಈ ಪ್ರವೃತ್ತಿಯು ಭವಿಷ್ಯದಲ್ಲಿ ಭಾರತದಲ್ಲಿ ಒಟ್ಟು ಪ್ರತಿಫಲಗಳ ಬಗ್ಗೆ, ವ್ಯಕ್ತಿಗಳು ಖರ್ಚು ಮಾಡುವ ಮತ್ತು ಯೋಚಿಸುವ ವಿಧಾನವನ್ನು ಪರಿವರ್ತಿಸುವ ಸಾಧ್ಯತೆಯಿದೆ,” ಎಂದು ಮಾಥುರ್ ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಹೈಟೆಕ್ ವಲಯದ ಸಂಬಳವು 2022ರಲ್ಲಿ ಶೇ 9.9, ನಂತರ ಗ್ರಾಹಕ ಉತ್ಪನ್ನಗಳು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಶೇ 9.5 ಮತ್ತು ಉತ್ಪಾದನೆಯಲ್ಲಿ ಶೇ 9.30ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ