AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಕಂಪನಿಗಳಿಗೆ ಪ್ರಸಕ್ತ ಕ್ವಾರ್ಟರ್​ನಲ್ಲಿ ಶೇ. 7-8ರಷ್ಟು ಆದಾಯವೃದ್ಧಿ ನಿರೀಕ್ಷೆ: ಐಸಿಆರ್​ಎ

ICRA projection of revenue growth for India Inc in Q4: 2025ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಕಂಪನಿಗಳ ಆದಾಯ ಶೇ. 7ರಿಂದ 8ರಷ್ಟು ಹೆಚ್ಚಬಹುದು ಎಂದು ಐಸಿಆರ್​ಎ ನಿರೀಕ್ಷಿಸಿದೆ. ಗ್ರಾಮೀಣ ಬೇಡಿಕೆ ಮತ್ತು ಸರ್ಕಾರದ ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಆಗಿರುವುದರಿಂದ ಕಂಪನಿಗಳ ಸರಾಸರಿ ಆದಾಯದಲ್ಲಿ ಏರಿಕೆಯಾಗಬಹುದು ಎನ್ನಲಾಗಿದೆ. ಹಿಂದಿನ ಕ್ವಾರ್ಟರ್​ನಂತೆ ಈ ಬಾರಿಯೂ ಕಂಪನಿಗಳ ಪ್ರಾಫಿಟ್ ಮಾರ್ಜಿನ್ ಶೇ. 18ರ ಆಸುಪಾಸಿನಲ್ಲಿ ಇರಬಹುದು.

ಭಾರತೀಯ ಕಂಪನಿಗಳಿಗೆ ಪ್ರಸಕ್ತ ಕ್ವಾರ್ಟರ್​ನಲ್ಲಿ ಶೇ. 7-8ರಷ್ಟು ಆದಾಯವೃದ್ಧಿ ನಿರೀಕ್ಷೆ: ಐಸಿಆರ್​ಎ
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2025 | 5:44 PM

Share

ನವದೆಹಲಿ, ಫೆಬ್ರುವರಿ 24: ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ, ಅಂದರೆ 2025ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಭಾರತೀಯ ಕಾರ್ಪೊರೇಟ್ ಕಂಪನಿಗಳು ಶೇ. 7-8ರಷ್ಟು ಆದಾಯ ವೃದ್ಧಿ ಕಾಣಬಹುದು ಎಂದು ರೇಟಿಂಗ್ ಸಂಸ್ಥೆಯಾದ ಐಸಿಆರ್​ಎ ಅಂದಾಜು ಮಾಡಿದೆ. ಗ್ರಾಮೀಣ ಮಾರುಕಟ್ಟೆಗಳಲ್ಲಿ ಹೆಚ್ಚಿದ ಬೇಡಿಕೆ (Rural demand), ಹಾಗೂ ಸರ್ಕಾರದಿಂದ ಹೆಚ್ಚಿದ ಬಂಡವಾಳ ವೆಚ್ಚದಿಂದಾಗಿ ಉದ್ಯಮ ವಲಯಕ್ಕೆ ಉತ್ತಮ ಬೆಳವಣಿಗೆ ಸಿಗುವ ಅವಕಾಶ ದಟ್ಟವಾಗಿದೆ ಎಂಬುದು ಈ ಏಜೆನ್ಸಿಯ ಅನಿಸಿಕೆ.

ಹಿಂದಿನ ಕ್ವಾರ್ಟರ್​ನಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್) ಭಾರತೀಯ ಕಂಪನಿಗಳ ಲಾಭದ ಮಾರ್ಜಿನ್ (ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್) ಉತ್ತಮವಾಗಿತ್ತು. ಈ ಕ್ವಾರ್ಟರ್​ನಲ್ಲಿ ಶೇ. 18.2ರಿಂದ ಶೇ. 18.4ರ ಮಾರ್ಜಿನ್ ಮುಂದುವರಿಯಬಹುದು ಎಂದು ಐಸಿಆರ್​ಎ ನಿರೀಕ್ಷಿಸಿದೆ.

ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ

‘ಮುಂಗಾರು ಬೆಳೆಗಳ ಉತ್ತಮ ಫಸಲಿನಿಂದ ಮಾರ್ಚ್ ಕ್ವಾರ್ಟರ್​ನಲ್ಲಿ ಗ್ರಾಮೀಣ ಬೇಡಿಕೆ ಉತ್ತಮವಾಗಿರುವ ನಿರೀಕ್ಷೆ ಇದೆ. ಸದ್ಯ ಚಾಲನೆಯಲ್ಲಿರುವ ಹಿಂಗಾರು ಬೆಳೆಗಳ (Rabi season) ಫಸಲು ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ. 2025ರಲ್ಲಿ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇದ್ದರೆ ಆಹಾರ ಉತ್ಪಾದನೆ ಮತ್ತು ಗ್ರಾಮೀಣ ಬೇಡಿಕೆ ಉತ್ತಮವಾಗಿರಬಹುದು,’ ಎಂದು ಐಸಿಆರ್​ಎ ಸೀನಿಯರ್ ವೈಸ್ ಪ್ರೆಸಿಡೆಂಟ್ ಕಿಂಜಲ್ ಶಾ ಹೇಳಿದ್ದಾರೆ.

ಐಸಿಆರ್​​ಎ ಪ್ರಕಾರ, ಎಲೆಕ್ಟ್ರಿಕ್ ವಾಹನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್​ನಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ (Sunrise sectors) ಸರ್ಕಾರದ ಪಿಎಲ್​ಐ ಸ್ಕೀಮ್​ನಿಂದ ಉತ್ತೇಜಿತಗೊಂಡು ಹೂಡಿಕೆಗಳು ಹೆಚ್ಚುವುದು ಮುಂದುವರಿಯಬಹುದು ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

ಇದನ್ನೂ ಓದಿ: ಸತತ 5 ತಿಂಗಳು ಷೇರುಪೇಟೆ ಕುಸಿತ; 29 ವರ್ಷಗಳಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲು

ಜಾಗತಿಕ ಆರ್ಥಿಕ ಮತ್ತು ರಾಜಕೀಯ ಚಿತ್ರಣದಲ್ಲಿ ಪರಿವರ್ತನೆ, ವಿದೇಶ ವಿನಿಮಯ ದರಗಳಲ್ಲಿನ (foreign exchange rate) ಚಲನೆ, ಹೊಸ ಅಮೆರಿಕ ಅಧ್ಯಕ್ಷರ ನೀತಿಗಳ ಪರಿಣಾಮ, ಭಾರತ ಸರ್ಕಾರದ ವೆಚ್ಚದಲ್ಲಿ ಹೆಚ್ಚಳ, ದೇಶೀಯ ನಗರ ಬೇಡಿಕೆಯಲ್ಲಿ ಚೇತರಿಕೆ, ಈ ಅಂಶಗಳು ಸದ್ಯೋಭವಿಷ್ಯದಲ್ಲಿ ಗಮನಾರ್ಹ ಎನಿಸಲಿವೆ ಎಂದು ಐಸಿಆರ್​ಎ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!