AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Currency Exchange Rate: ಕುವೈತ್​ನ 1 ದಿನಾರ್​ ಭಾರತದ 249 ರೂಪಾಯಿಗೆ ಸಮ; ಪ್ರಮುಖ, ನೆರೆಹೊರೆಯ ಕರೆನ್ಸಿ ಮೌಲ್ಯ ಇಲ್ಲಿದೆ

ಪ್ರಮುಖ ದೇಶಗಳ ಕರೆನ್ಸಿ ವಿರುದ್ಧ ಭಾರತದ ರೂಪಾಯಿ ಮೌಲ್ಯ ಎಷ್ಟು ಎಂದು ತಿಳಿಸುವ ಲೇಖನ ಇದು. ಏಪ್ರಿಲ್ 13ನೇ ತಾರೀಕಿಗೆ ಇದ್ದ ಮೌಲ್ಯದ ವಿವರ ಇಲ್ಲಿದೆ.

Currency Exchange Rate: ಕುವೈತ್​ನ 1 ದಿನಾರ್​ ಭಾರತದ 249 ರೂಪಾಯಿಗೆ ಸಮ; ಪ್ರಮುಖ, ನೆರೆಹೊರೆಯ ಕರೆನ್ಸಿ ಮೌಲ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 14, 2022 | 7:11 AM

Share

ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ದೇಶದ ಕರೆನ್ಸಿಗೆ ಮಾನ್ಯತೆ ಇದೆ ಗೊತ್ತಾ? ಅದು ಅಮೆರಿಕದ ಡಾಲರ್. ಆದರೆ ಮೌಲ್ಯ ಅನ್ನೋ ವಿಚಾರಕ್ಕೆ ಬಂದಾಗ ಇತರ ದೇಶ, ವಲಯದ ಕರೆನ್ಸಿಗಳಿಗೆ ಬೆಲೆ ಜಾಸ್ತಿ. ಈಗ ಭಾರತದ ರೂಪಾಯಿಯಲ್ಲೇ ನೋಡುತ್ತಾ ಕೆಲವು ದೇಶಗಳ ಕರೆನ್ಸಿಗೆ ಎಷ್ಟು ನೀಡಬೇಕಾಗುತ್ತದೆ ಎಂಬುದನ್ನು ಗಮನಿಸೋಣ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿರುವವರು, ಕುತೂಹಲಕ್ಕಾದರೂ ವಿವಿಧ ಕರೆನ್ಸಿಗಳಿಗೆ ಭಾರತದ ರೂಪಾಯಿ ಮೌಲ್ಯ ಎಷ್ಟಿದೆ ಎಂದು ತಿಳಿದುಕೊಳ್ಳುವುದಕ್ಕೆ ಬಯಸುವವರಿಗೆ ಏಪ್ರಿಲ್ 13ನೇ ತಾರೀಕಿನ ಬುಧವಾರದ ವಿನಿಮಯ ದರ (Exchange Rate) ತಿಳಿಸಲಾಗುತ್ತಿದೆ. ಇನ್ನು ಹೆಚ್ಚಿನ ಪೀಠಿಕೆ ಇಲ್ಲದೆ ನೋಡೋಣವಾ? ಮೊದಲ ಸಾಲಿನಲ್ಲಿ ನೀಡುವುದು ವಿವಿಧ ದೇಶಗಳ ಕರೆನ್ಸಿಗಳು ಮತ್ತು ಅದರ ಎದುರಿಗೆ ಭಾರತದ ರೂಪಾಯಿ ಮೌಲ್ಯ ನೀಡಲಾಗುತ್ತಿದೆ.

ಅಮೆರಿಕ ಯುಎಸ್​ಡಿ 1ಕ್ಕೆ= 76.07000 ಭಾರತದ ರೂಪಾಯಿ

ಬ್ರಿಟಿಷ್​ ಪೌಂಡ್ ಸ್ಟರ್ಲಿಂಗ್​​ಗೆ= 99.65100 ಭಾರತದ ರೂಪಾಯಿ

ಯುರೋಗೆ= 82.76400 ಭಾರತದ ರೂಪಾಯಿ

ಚೀನಾದ ಯುವಾನ್= 11.93980 ಭಾರತದ ರೂಪಾಯಿ

ಜಪಾನ್​ನ ಯೆನ್= 0.60607 (60 ಪೈಸೆ)

ಕುವೈತ್​ ದಿನಾರ್= 249.3400 ಭಾರತದ ರೂಪಾಯಿ

ಇರಾನ್​ನ ರಿಯಾಲ್= 0.00180 ಪೈಸೆ

ಬಾಂಗ್ಲಾದೇಶ್​ ಟಾಕಾ= 0.88655 (88 ಪೈಸೆ)

ಶ್ರೀಲಂಕಾ ರೂಪಾಯಿ= 0.23611 (23 ಪೈಸೆ)

ಪಾಕಿಸ್ತಾನದ ರೂಪಾಯಿ= 0.41895 (41 ಪೈಸೆ)

ನೇಪಾಳದ ರೂಪಾಯಿ= 0.62743 (62 ಪೈಸೆ)

ರಷ್ಯಾದ ರೂಬೆಲ್= 0.94373 (94 ಪೈಸೆ)

ಸಾಮಾನ್ಯವಾಗಿ ಅಂತರರಾಷ್ಟ್ರೀಯ ವಹಿವಾಟುಗಳು, ಅಂದರೆ ತೈಲ ಖರೀದಿ ಸೇರಿದಂತೆ ಮೊದಲಾದವುಗಳಿಗೆ ಅಮೆರಿಕನ್ ಡಾಲರ್​ ಬಳಸಲಾಗುತ್ತದೆ. ಆದರೆ ಯುನೈಟೆಡ್​ ಕಿಂಗ್​ಡಮ್​ನ ಪೌಂಡ್​ ಸ್ಟರ್ಲಿಂಗ್, ಯುರೋಪ್​ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್​ ದಿನಾರ್​ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.

(ಮಾಹಿತಿ ಮೂಲ: goodreturns.in)

ಇದನ್ನೂ ಓದಿ: Japan Currency Yen: ಅಮೆರಿಕ ಡಾಲರ್ ವಿರುದ್ಧ ಜಪಾನ್ ಕರೆನ್ಸಿ ಇಪ್ಪತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ

Follow Us
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು