AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ

India's garments exports on rise: ಭಾರತದಲ್ಲಿ ಗಾರ್ಮೆಂಟ್ಸ್ ಉದ್ಯಮವು ಕಳೆದ ಕೆಲ ತಿಂಗಳುಗಳಿಂದ ಉತ್ತಮ ಬೆಳವಣಿಗೆ ಕಾಣುತ್ತಿದೆ. ಈ ಉದ್ಯಮದಿಂದಲೇ ಪ್ರಧಾನ ಆದಾಯ ಮೂಲ ಹೊಂದಿರುವ ಬಾಂಗ್ಲಾದೇಶಕ್ಕೆ ಇದು ಆತಂಕ ತಂದಿದೆ. ಚೀನಾ ಕೂಡ ಆತಂಕಗೊಂಡಿದೆ. ಜಾಗತಿಕ ಉಡುಪು ಉದ್ಯಮವು ಚೀನಾ ಬದಲು ತಮ್ಮ ಪೂರೈಕೆಗೆ ಭಾರತಕ್ಕೆ ಆದ್ಯತೆ ಕೊಡುತ್ತಿರುವಂತಿದೆ.

ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ
ರಫ್ತು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2025 | 1:55 PM

Share

ನವದೆಹಲಿ, ಜೂನ್ 22: ಜಾಗತಿಕ ಜವಳಿ ಉದ್ಯಮದ ಸರಬರಾಜು ಸರಪಳಿಯಲ್ಲಿ ಬದಲಾವಣೆ ಆಗುತ್ತಿದೆ. ಚೀನಾ, ಬಾಂಗ್ಲಾದೇಶಗಳು ಜವಳಿ ವಸ್ತುಗಳ (garments) ಸರಬರಾಜು ವಿಚಾರದಲ್ಲಿ ಪ್ರಬಲವಾಗಿವೆ. ಬಾಂಗ್ಲಾದೇಶದ ಪ್ರಮುಖ ಆದಾಯ ಮೂಲವೇ ಜವಳಿ ಕ್ಷೇತ್ರವಾಗಿದೆ. ಈಗ ಜಾಗತಿಕ ಜವಳಿ ಸರಬರಾಜು ಸರಪಳಿಯಲ್ಲಿ (global supply chain) ಚೀನಾ, ಬಾಂಗ್ಲಾದೇಶದಿಂದ ಭಾರತಕ್ಕೆ ಹಂತ ಹಂತಕ್ಕೆ ಬದಲಾವಣೆ ಆಗತೊಡಗಿದೆ. ಅಂದರೆ, ಜವಳಿ ಆಮದು ಮಾಡಿಕೊಳ್ಳಲು ಚೀನಾ ಮತ್ತು ಬಾಂಗ್ಲಾ ಬದಲು ಭಾರತಕ್ಕೆ ಆದ್ಯತೆ ನೀಡಲಾಗುತ್ತಿದೆ.

ಇಂಥದ್ದೊಂದು ಬೆಳವಣಿಗೆ ಆಗುತ್ತಿದೆ ಎನ್ನುವ ಸುದ್ದಿಗೆ ಇಂಬುಕೊಡುವಂತೆ ಭಾರತದ ಜವಳಿ ಉದ್ಯಮದ ಸಂಘಟನೆಯಾದ ಸಿಐಟಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಭಾರತದಿಂದ ಜವಳಿ ರಫ್ತು ಮೇ ತಿಂಗಳಲ್ಲಿ ಶೇ. 11.3ರಷ್ಟು ಹೆಚ್ಚಳ ಆಗಿದೆ. ಚೀನಾ ಮತ್ತು ಬಾಂಗ್ಲಾದೇಶದ ಜವಳಿ ಉದ್ಯಮವು ಭಾರತದಕ್ಕೆ ಹೋಲಿಸಿದರೆ ಬಹಳ ಪ್ರಬಲವಾಗಿವೆ. ಆದಾಗ್ಯೂ ಭಾರತದಿಂದ ಗಾರ್ಮೆಂಟ್ಸ್ ರಫ್ತು ಗಣನೀಯವಾಗಿ ಏರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಡಿಆರ್​​​ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ

2024ರ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡು ಹೊಸ ಆಡಳಿತ ಬಂದಿದೆ. ಆಗಿನಿಂದ ಅಲ್ಲಿ ರಾಜಕೀಯ ಅಸ್ಥಿರತೆ ನೆಲಸಿದೆ. ಅದರ ಪರಿಣಾಮವಾಗಿ ಮತ್ತು ಭಾರತ ಸರ್ಕಾರದ ಜವಳಿ ಪರ ನೀತಿಗಳಿಂದಾಗಿ ಭಾರತೀಯ ಕಂಪನಿಗಳಿಗೆ ಹೆಚ್ಚೆಚ್ಚು ಗಾರ್ಮೆಂಟ್ಸ್ ಆರ್ಡರ್ ಸಿಗತೊಡಗಿದೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ 2024ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಫ್ತು ಶೇ. 17.3ರಷ್ಟು ಏರಿತ್ತು. ಅಕ್ಟೋಬರ್​​ನಲ್ಲಿ ಶೇ. 24.35ರಷ್ಟು ಏರಿತ್ತು.

ಚೀನಾಗೆ ಹೋಗಬೇಕಿದ್ದ ಆರ್ಡರ್​​ಗಳು ಭಾರತಕ್ಕೆ ಸಿಗುತ್ತಿವೆಯಾ?

ಅಮೆರಿಕ ಸರ್ಕಾರವು ಚೀನಾ ಮೇಲೆ ಹೆಚ್ಚಿನ ಸುಂಕ ವಿಧಿಸಿರುವುದು ಭಾರತದ ಜವಳಿ ಉದ್ಯಮಕ್ಕೆ ಅನುಕೂಲವಾಗಿರಬಹುದು. ಹೆಚ್ಚಿನ ಜಾಗತಿಕ ಉಡುಪು ಉದ್ಯಮಗಳು ತಮ್ಮ ಪೂರೈಕೆಗಾಗಿ ಚೀನಾ ಬದಲು ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತಿರಬಹುದು.

ಇದನ್ನೂ ಓದಿ: ಭಾರತದಲ್ಲಿ ಇನ್ನೈದು ವರ್ಷದಲ್ಲಿ 10 ಪಟ್ಟು ಹೆಚ್ಚಲಿದೆ ಎಲೆಕ್ಟ್ರಿಕ್ ಕಾರ್ ನಿರ್ಮಾಣ ಸಾಮರ್ಥ್ಯ: ವರದಿ

ಚೀನಾ ಮತ್ತು ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮದಷ್ಟು ಉತ್ಪಾದನಾ ಸಾಮರ್ಥ್ಯ ಭಾರತದ ಕಂಪನಿಗಳಿಗೆ ಇಲ್ಲವಾದರೂ, ಹಂತ ಹಂತವಾಗಿ ಕೆಪಾಸಿಟಿ ಏರಿಕೆ ಮಾಡುತ್ತಿವೆ. ಮುಂಬರುವ ವರ್ಷಗಳಲ್ಲಿ ಭಾರತದ ಜಿಡಿಪಿಗೆ ಜವಳಿ ಉದ್ಯಮದ ಕೊಡುಗೆ ಗಣನೀಯವಾಗಿ ಏರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ