AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು

ಜೂನ್ 7, 2021ರಂದು (ಇಂದು) ಆದಾಯ ತೆರಿಗೆ ರಿಟರ್ನ್ಸ್ ಫೀಲಿಂಗ್ - ಪೋರ್ಟಲ್ ಆರಂಭವಾಗಲಿದೆ. ಆದಾಯ ತೆರಿಗೆ ಪಾವತಿದಾರರಿಗೆ ಈ ಬಗ್ಗೆ ಗೊತ್ತಿರಬೇಕಾದ 6 ಫೀಚರ್​ಗಳು ಇಲ್ಲಿವೆ.

ITR Filing:  ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 07, 2021 | 11:26 AM

Share

ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಫೈಲಿಂಗ್ ವೆಬ್​ಸೈಟ್ incometax.gov.in – ಇಂದಿನಿಂದ (ಜೂನ್ 7, 2021) ಆರಂಭವಾಗಲಿದೆ. ಎಲ್ಲ ಬಗೆಯಲ್ಲೂ ಹೊಸದಾದ ಮೊಬೈಲ್ ಆ್ಯಪ್, ಪ್ರೀ ಫಿಲ್ಡ್ (ಅದಾಗಲೇ ಭರ್ತಿ ಮಾಡಿದ) ಆದಾಯ ತೆರಿಗೆ ಮಾಹಿತಿ, ಐಟಿಆರ್​ ಫಾರ್ಮ್ ಮತ್ತು ಸರಳ್ ಆದಾಯ ತೆರಿಗೆ ವ್ಯವಸ್ಥೆ ಇವೆಲ್ಲವೂ ಹೊಸ ಇ-ಫೈಲಿಂಗ್ ಪೋರ್ಟಲ್​ನಲ್ಲಿ ಲಭ್ಯವಿದೆ. ಇ- ಫೈಲಿಂಗ್ ಪೋರ್ಟಲ್ 2.0 ಮೂಲಕ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ ವೈಶಿಷ್ಟ್ಯಗಳನ್ನು ಸಹ ಈ ಪೋರ್ಟಲ್ ಹೊಂದಿದೆ. ಆದಾಯ ತೆರಿಗೆ ಇಲಾಖೆಯು ಈ ವೆಬ್​ಸೈಟ್​ ಅನ್ನು ಐಟಿಆರ್​ ಫೈಲಿಂಗ್​ಗೆ ಮತ್ತು ಆದಾಯ ತೆರಿಗೆ ಪಾವತಿದಾರರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಅಸೆಸ್​ಮೆಂಟ್​ಗಳಿಗೆ, ಮನವಿಗೆ, ದಂಡದಿಂದ ವಿನಾಯಿತಿ ಮನವಿ ಸಲ್ಲಿಸುವುದಕ್ಕೆ ಅಂತ ಬಳಸುತ್ತದೆ. ಇಷ್ಟು ಮಾತ್ರವಲ್ಲದೆ, ಹೊಸ ಇ- ಫೈಲಿಂಗ್ ಪೋರ್ಟಲ್​ನಿಂದ ಈ 6 ಫೀಚರ್​ಗಳು ದೊರೆಯಲಿವೆ.

ಶೀಘ್ರ ರೀಫಂಡ್ ಆದಾಯ ತೆಇಗೆದಾರರಿಗೆ ತಕ್ಷಣ ರೀಫಂಡ್ ಪ್ರೊಸೆಸ್ ಆಗುವಂತೆ ಇನ್​ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.

ಮೊಬೈಲ್ ಅಪ್ಲಿಕೇಷನ್ ಇ- ಪೋರ್ಟಲ್ ಆರಂಭವಾದ ಮೇಲೆ ಮೊಬೈಲ್ ಅಪ್ಲಿಕೇಷನ್ ಶುರುವಾಗಲಿದೆ. ಈ ಮೂಲಕ ಪೋರ್ಟಲ್​ನಲ್ಲಿ ಸಿಗುವಂಥ ಎಲ್ಲ ಕಾರ್ಯ ನಿರ್ವಹಣೆಯು ಮೊಬೈಲ್ ಆ್ಯಪ್​ನಲ್ಲೂ ದೊರೆಯುತ್ತದೆ.

ಹೊಸ ಡ್ಯಾಶ್ ಬೋರ್ಡ್ ಹೊಸ ಇ- ಪೋರ್ಟಲ್ ಒಂದು ಹೊಸ ಸಿಂಗಲ್ ಡ್ಯಾಶ್​ ಬೋರ್ಡ್ ಒದಗಿಸುತ್ತದೆ. ಎಲ್ಲ ಇಂಟರಾಕ್ಷನ್​ಗಳು, ಅಪ್​ಲೋಡ್​ಗಳು ಅಥವಾ ಬಾಕಿ ಕಾರ್ಯಗಳನ್ನು ತೆರಿಗೆ ಪಾವತಿದಾರರಿಗೆ ಅದು ತೋರಿಸುತ್ತದೆ. ಆ ಮೂಲಕ ಯಾವ ಕೆಲಸ ಬಾಕಿ ಇದೆ, ಫಾಲೋ ಅಪ್​ ಅಗತ್ಯ ಇದೆ ಎಂದು ತಿಳಿಯಲು ಅನುಕೂಲ ಆಗುತ್ತದೆ.

ಇಂಟರಾಕ್ಟಿವ್ ಐಟಿಆರ್ ಸಿದ್ಧತೆ ಸಾಫ್ಟ್​ವೇರ್ ಐಟಿಆರ್ ಸಿದ್ಧತೆ ಸಾಫ್ಟ್​ವೇರ್ ಅನ್ನು ಆಫ್​ಲೈನ್ ಹಾಗೂ ಆನ್​ಲೈನ್ ಎರಡಕ್ಕೂ ಉಚಿತವಾಗಿ ತೆರಿಗೆದಾರರಿಗೆ ಒದಗಿಸಲಾಗುತ್ತದೆ. ತೆರಿಗೆದಾರ ಸ್ನೇಹಿ ಸಾಫ್ಟ್​ವೇರ್ ಆದ ಇದರಲ್ಲಿ ಇಂಟರ್​ ಆಕ್ಟಿವ್ ಪ್ರಶ್ನೆಗಳಿದ್ದು, ಇದರಿಂದ ಅನುಕೂಲ ಆಗಲಿದೆ. ತೆರಿಗೆ ಬಗ್ಗೆ ಯಾವುದೇ ಜ್ಞಾನ ಇಲ್ಲದಿದ್ದರೂ ಈ ಪೋರ್ಟಲ್ ಅನ್ನು ರಿಟರ್ನ್ಸ್ ಪ್ರೀ- ಫಿಲ್ಲಿಂಗ್​ಗೆ ಬಳಸಬಹುದು. ಆ ಮೂಲಕ ಐಟಿಆರ್​ನಲ್ಲಿ ಹೆಚ್ಚು ಭರ್ತಿ ಮಾಡಬೇಕು ಅಂತೇನೂ ಇರಲ್ಲ.

ತೆರಿಗೆದಾರರ ಕೊರತೆಗಳಿಗೆ ಉತ್ತರಿಸುವುದು ಸಲೀಸು ಟ್ಯುಟೋರಿಯರಲ್​ಗಳು, ವಿಡಿಯೋಗಳು, ಕಾಲ್​ಸೆಂಟರ್, ಚಾಟ್​ಬಾಟ್ ಅಥವಾ ಲೈವ್ ಏಜೆಂಟ್​ಗಳು ಈ ಸೈಟ್​ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ. ಹೊಸ ಕಾಲ್​ಸೆಂಟರ್ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್ಸ್ (FAQs) ಮೂಲಕ ತೆರಿಗೆದಾರರಿಗೆ ನೆರವಾಗುತ್ತದೆ.

ಹೊಸ ಆನ್​ಲೈನ್ ತೆರಿಗೆ ಪಾವತಿ ಪದ್ಧತಿ ಬಹಳ ಸುಲಭವಾಗಿ ಪಾವತಿಯನ್ನು ಖಾತರಿ ಮಾಡಬೇಕು ಅನ್ನೋ ಕಾರಣಕ್ಕೆ ಹೊಸ ಐಟಿಆರ್ ವೆಬ್​ಸೈಟ್ ತೆರಿಗೆ ಸಂದಾಯ ಮಾಡಲು ಆನ್​ಲೈನ್ ಪಾವತಿ ವ್ಯವಸ್ಥೆಯನ್ನು ಸಹ ಹೊಂದಿದೆ. ನೆಟ್​ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಆರ್​ಟಿಜಿಎಸ್​ ಅಥವಾ ಎನ್​ಇಎಫ್​ಟಿ ಹೀಗೆ ತೆರಿಗೆದಾರರ ಯಾವುದೇ ಖಾತೆಯಿಂದ ಮತ್ತು ಯಾವುದೇ ಬ್ಯಾಂಕ್​ನಿಂದ ತೆರಿಗೆ ಪಾವತಿಸಬಹುದು. ಈಗಿನ ವ್ಯವಸ್ಥೆಯಲ್ಲಿ ಯುಪಿಐ, ಕ್ರೆಡಿಟ್ ಕಾರ್ಡ್ ಮಾತ್ರ ಇತ್ತು.

ಆದಾಯ ತೆರಿಗೆ ಪಾವತಿದಾರರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ತೆರಿಗೆ ಪಾವತಿ ವ್ಯವಸ್ಥೆಯನ್ನು ಜೂನ್ 18, 2021ಕ್ಕೆ ಶುರು ಮಾಡಲಾಗುತ್ತದೆ. ಅದು ಕೂಡ ಮುಂಗಡ ತೆರಿಗೆ ಕಂತಿನ ದಿನಾಂಕದ ನಂತರ. ಇದರಿಂದ ತೆರಿಗೆ ಪಾವತಿದಾರರಿಗೆ ಸಹಾಯ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ

(Income Tax department new e portal launch today. Here are the 6 features tax payers must know)

Published On - 11:24 am, Mon, 7 June 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್