ಅಮೆರಿಕದ ಇನ್ವೆಸ್ಕೋ ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮನ; ಇದರಲ್ಲಿ ನೀವು ಮಾಡಿದ ಹೂಡಿಕೆ ಏನಾಗುತ್ತೆ?

Hinduja Group Acquires MF India Business of Invesco: ಅಮೆರಿಕದ ಇನ್ವೆಸ್ಕೋ ಸಂಸ್ಥೆ ತನ್ನ ಭಾರತೀಯ ಮ್ಯೂಚುವಲ್ ಫಂಡ್ ವ್ಯವಹಾರವನ್ನು ಹಿಂದೂಜಾ ಗ್ರೂಪ್​ನ ಐಐಎಚ್​ಎಲ್​ಗೆ ಬಿಟ್ಟುಕೊಡುತ್ತಿದೆ. ಶೇ. 60ರಷ್ಟು ಪಾಲನ್ನು ಏಪ್ರಿಲ್ 9ರಂದು ಐಐಎಚ್​ಎಲ್​ಗೆ ಮಾರಲು ಒಪ್ಪಂದ ಮಾಡಿಕೊಂಡಿರುವುದು ತಿಳಿದುಬಂದಿದೆ. ಒಂದೂವರೆ ವರ್ಷದ ಬಳಿಕ ಇನ್ನುಳಿದ ಶೇ. 40 ಪಾಲನ್ನು ಮಾರುವ ಅವಕಾಶ ಇನ್ವೆಸ್ಕೋಗೆ ಇದೆ. ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಇಂಡಿಯಾ ಭಾರತದಲ್ಲಿ 86,000 ಕೋಟಿ ರೂ ಮೊತ್ತದ ಮ್ಯೂಚುವಲ್ ಫಂಡ್ ಬಿಸಿನೆಸ್ ಹೊಂದಿದೆ.

ಅಮೆರಿಕದ ಇನ್ವೆಸ್ಕೋ ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮನ; ಇದರಲ್ಲಿ ನೀವು ಮಾಡಿದ ಹೂಡಿಕೆ ಏನಾಗುತ್ತೆ?
ಮ್ಯೂಚುವಲ್ ಫಂಡ್
Follow us
|

Updated on: Apr 11, 2024 | 12:09 PM

ಮುಂಬೈ, ಏಪ್ರಿಲ್ 11: ಭಾರತದಲ್ಲಿ ಮ್ಯೂಚುವಲ್ ಫಂಡ್ ಬಿಸಿನೆಸ್ ಹೊಂದಿರುವ ಅಮೆರಿಕದ ಇನ್ವೆಸ್ಕೋ ಪೂರ್ಣವಾಗಿ ನಿರ್ಗಮಿಸುತ್ತಿದೆ. ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಇಂಡಿಯಾ ಸಂಸ್ಥೆಯಲ್ಲಿ (Invesco Asset Management India) ತನ್ನ ಶೇ. 60ರಷ್ಟು ಪಾಲನ್ನು ಭಾರತದ ಐಐಎಚ್​ಎಲ್​ಗೆ ಮಾರಿರುವುದಾಗಿ ಇನ್ವೆಸ್ಕೋ ಸಂಸ್ಥೆ ಮೊನ್ನೆ ಮಂಗಳವಾರ (ಏಪ್ರಿಲ್ 9) ಪ್ರಕಟಿಸಿದೆ. ಇನ್ನುಳಿದ ಶೇ. 40ರಷ್ಟು ಪಾಲನ್ನು 18 ತಿಂಗಳ ಬಳಿಕ ಮಾರುವ ಸಾಧ್ಯತೆ ಇದೆ. ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆ ಭಾರತದಲ್ಲಿ ಸುಮಾರು 86,000 ಕೋಟಿ ರೂ ಮೊತ್ತದ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ನಿರ್ವಹಣೆ ಮಾಡುತ್ತಿದೆ. ಎಷ್ಟು ಮೊತ್ತಕ್ಕೆ ಇನ್ವೆಸ್ಕೋದ ಭಾರತೀಯ ಬಿಸಿನಸ್ ಅನ್ನು ಐಐಎಚ್​ಎಲ್ ಖರೀದಿಸಿದೆ ಎಂಬುದು ಗೊತ್ತಾಗಿಲ್ಲ. ಆದರೆ, ಈ ಫಂಡ್ ಸಂಸ್ಥೆಯ ಮೌಲ್ಯವನ್ನು 2,100ರಿಂದ 2,500 ರೂ ಎಂದು ಗಣಿಸಲಾಗಿದೆ.

ಇನ್ವೆಸ್ಕೋ ಸಂಸ್ಥೆ ವಿಶ್ವಾದ್ಯಂತ 1.6 ಟ್ರಲಿಯನ್ ಡಾಲರ್ ಮೌಲ್ಯದ ಫಂಡ್​ಗಳನ್ನು ನಿರ್ವಹಿಸುತ್ತದೆ. ಹುಲುಸಾಗಿ ಬೆಳೆಯುತ್ತಿರುವ ಭಾರತದ ಮ್ಯೂಚುವಲ್ ಫಂಡ್ ಮಾರುಕಟ್ಟೆಯನ್ನು ಇದು ಬಿಟ್ಟು ಹೋಗುತ್ತಿರುವುದು ಕುತೂಹಲದ ಸಂಗತಿಯಾದರೂ ಅನಿರೀಕ್ಷಿತವೇನಲ್ಲ. ಈ ಹಿಂದೆ ಅಮೆರಿದ ದೈತ್ಯ ಕಂಪನಿಗಳಾದ ಗೋಲ್ಡ್​ಮನ್ ಸ್ಯಾಕ್ಸ್, ಮಾರ್ಗನ್ ಸ್ಟಾನ್ಲೀ, ಫಿಡೆಲಿಟಿ ಮೊದಲಾದ ಸಂಸ್ಥೆಗಳು ಭಾರತದ ಮ್ಯೂಚುವಲ್ ಫಂಡ್ ಬಿಸಿನೆಸ್​ನಿಂದ ನಿರ್ಗಮಿಸಿದ್ದವು. ಜಪಾನ್​ನ ನಿಪ್ಪೋನ್ ಈಗ ಭಾರತದಲ್ಲಿ ಈ ಕ್ಷೇತ್ರದಲ್ಲಿ ವ್ಯವಹಾರ ಇರುವ ಪ್ರಮುಖ ವಿದೇಶೀ ಕಂಪನಿ ಎನಿಸಿದೆ.

ಇದನ್ನೂ ಓದಿ: ಏವಿಯೇಶನ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಇಂಡಿಗೋ ಏರ್ಲೈನ್ಸ್ ವಿಶ್ವದ ನಂಬರ್ 3

ಇನ್ವೆಸ್ಕೋದಿಂದ ಮ್ಯೂಚುವಲ್ ಫಂಡ್ ಬಿಸಿನೆಸ್ ಖರೀದಿಸಿದ ಐಐಎಚ್​ಎಲ್ ಹಿಂದೂಜಾ ಗ್ರೂಪ್ ಮಾಲಕತ್ವದ ಕಂಪನಿಯಾಗಿದೆ. ಇಂಡಸ್​ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಲಿ ಮಾರಿಷಸ್ ಮೂಲದ ಹೂಡಿಕೆ ಸಂಸ್ಥೆಯಾಗಿದೆ. ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕ್ಯಾಪಿಟಲ್ ಕಂಪನಿಯನ್ನು ಇತ್ತೀಚೆಗೆ ಖರೀದಿಸಿತ್ತು. ಇಂಡಸ್​ಇಂಡ್ ಬ್ಯಾಂಕ್ ಕೂಡ ಇದೇ ಸಂಸ್ಥೆಯದ್ದಾಗಿದೆ.

ಇದೀಗ ಐಐಎಚ್​ಎಲ್​ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಇನ್ವೆಸ್ಕೋ ಸಂಸ್ಥೆ ಎರಡು ವರ್ಷ ಕಾಲ ಭಾರತದಲ್ಲಿ ಮ್ಯೂಚುವಲ್ ಫಂಡ್ ಬಿಸಿನೆಸ್ ಆರಂಭಿಸುವಂತಿಲ್ಲ. ಎರಡು ವರ್ಷದ ಬಳಿಕ ಮರುಪ್ರವೇಶ ಮಾಡಲು ಅವಕಾಶಗಳಿವೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಹಿನ್ನಡೆ; ಡೆಲ್ಲಿ ಮೆಟ್ರೋಗೆ 8,000 ಕೋಟಿ ರೂ ಮರಳಿಸುವಂತೆ ರಿಲಾಯನ್ಸ್ ಇನ್​ಫ್ರಾಗೆ ಸುಪ್ರೀಂಕೋರ್ಟ್ ನಿರ್ದೇಶನ

ಇನ್ವೆಸ್ಕೋದಲ್ಲಿ ಹೂಡಿಕೆ ಮಾಡಿದ್ದವರಿಗೆ ಸಮಸ್ಯೆಯಾಗುತ್ತಾ?

ಇನ್ವೆಸ್ಕೋ ಅಸೆಟ್ ಮ್ಯಾನೇಜ್ಮೆಂಟ್ ಇಂಡಿಯಾ ಸಂಸ್ಥೆ 86,000 ಕೋಟಿ ರೂ ಮೊತ್ತದ ಹೂಡಿಕೆಗಳನ್ನು ನಿರ್ವಹಿಸುತ್ತಿದೆ. ಕಂಪನಿ ಮಾರಾಟವಾಗುವುದರಿಂದ ಈ ಹೂಡಿಕೆಗಳ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಮಾಲಕತ್ವ ಮಾತ್ರವೇ ಬದಲಾಗುತ್ತದೆ. ಹೂಡಿಕೆ ನಿರ್ವಹಣೆಯನ್ನು ಐಐಎಚ್​ಎಲ್ ಮಾಡುತ್ತದೆ. ಹೀಗಾಗಿ, ಹೂಡಿಕೆದಾರರು ತಮ್ಮ ಹಣದ ಬಗ್ಗೆ ಚಿಂತೆಪಡುವ ಅವಶ್ಯಕತೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ