AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office Savings Scheme: ಪೋಸ್ಟ್​ ಆಫೀಸ್​ನ ಈ SCSS ಯೋಜನೆಯಡಿ ತಿಂಗಳಿಗೆ ರೂ. 8,334 ಉಳಿಸಿದರೆ 5 ವರ್ಷದಲ್ಲಿ 7 ಲಕ್ಷ ರೂ.

ಅಂಚೆ ಕಚೇರಿಯ ಈ ಹಿರಿಯ ನಾಗರಿಕರ ಯೋಜನೆಯಲ್ಲಿ ತಿಂಗಳಿಗೆ ರೂ. 8334 ಠೇವಣಿ ಮಾಡಿದಲ್ಲಿ ಮೆಚ್ಯೂರಿಟಿ ಆಗುವಾಗ 5 ವರ್ಷದಲ್ಲಿ 7 ಲಕ್ಷ ರೂಪಾಯಿ ದೊರೆಯುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Post Office Savings Scheme: ಪೋಸ್ಟ್​ ಆಫೀಸ್​ನ ಈ SCSS ಯೋಜನೆಯಡಿ ತಿಂಗಳಿಗೆ ರೂ. 8,334 ಉಳಿಸಿದರೆ 5 ವರ್ಷದಲ್ಲಿ 7 ಲಕ್ಷ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 24, 2022 | 11:53 AM

ಭಾರತದಲ್ಲಿ ಹಿರಿಯ ನಾಗರಿಕರಿಗೆ ಇನ್ನೂ ಡಿಜಿಟಲ್ ತಂತ್ರಜ್ಞಾನ ಅಷ್ಟೇನೂ ರೂಢಿಯಾಗಿಲ್ಲ. ಏಕೆಂದರೆ ತಂತ್ರಜ್ಞಾನ ಕಲಿಕೆ ಬಗ್ಗೆ ಆಸಕ್ತಿ ಇಲ್ಲ ಎಂಬ ಸಾಮಾನ್ಯ ಉತ್ತರ ಧುತ್ತನೆ ಎದುರಾಗುತ್ತದೆ. ಈ ಕಾರಣಕ್ಕೆ ಇತರರಿಗೆ ಹೋಲಿಸಿದರೆ ಹಿರಿಯ ನಾಗರಿಕರ ಮಧ್ಯೆ ಪೋಸ್ಟ್​ ಆಫೀಸ್ ಉಳಿತಾಯ ಯೋಜನೆಗಳು (Post Office Savings Scheme) ಜನಪ್ರಿಯವಾಗಿವೆ. ಇಂಡಿಯಾ ಪೋಸ್ಟ್​ ಹಲವಾರು ಉಳಿತಾಯ ಯೋಜನೆಗಳನ್ನು ಆಫರ್ ಮಾಡುತ್ತಿದ್ದು, ದೇಶದಲ್ಲಿ ಅವು ಬಹು ಜನಪ್ರಿಯವಾದ ಅಪಾಯದಿಂದ ಮುಕ್ತವಾದ ಉಳಿತಾಯ ಯೋಜನೆಗಳು. ಭಾರತದಲ್ಲಿ ಸರಾಸರಿ ಮಧ್ಯಮ ವರ್ಗದ ನಾಗರಿಕರಿಗೆ ಉತ್ತಮ ಯೋಜನೆಗಳಲ್ಲಿ ನಿಶ್ಚಿತ ಹಾಗೂ ಉತ್ತಮ ಬಡ್ಡಿ ದರ ಪಡೆಯುವುದು ಪ್ರಮುಖ ಆದ್ಯತೆಯಾಗಿದೆ. ತಮ್ಮ ನಿವೃತ್ತಿ ನಂತರ ಉಳಿತಾಯ ಗಳಳಿಸುವುದಕ್ಕೆ ಬಯಸುವ ಹಿರಿಯ ನಾಗರಿಕರಿಗೂ ಇದೇ ಅನ್ವಯ ಆಗುತ್ತದೆ. ಹಿರಿಯ ನಾಗರಿಕರಿಗೆ ನಿವೃತ್ತಿ ನಂತರ ನಿಶ್ಚಿತ ಆದಾಯ ದೊರೆಯುವಂತೆ ಮಾಡಲು ಅಂಚೆ ಕಚೇರಿಯಿಂದ ಹಿರಿಯ ನಾಗರಿಕರ ಉಳಿತಾಯ ಖಾತೆ ಅಥವಾ SGSS ಇದೆ.

ಹೆಸರೇ ಹೇಳುವಂತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ಇಂಡಿಯಾ ಪೋಸ್ಟ್ ಪರಿಚಯಿಸಿದೆ. ಇದು 60 ವರ್ಷ ಮೇಲ್ಪಟ್ಟ ಭಾರತೀಯರಿಗಾಗಿ ಇದೆ. ಇದರರ್ಥ ಏನೆಂದರೆ, ಈ ಯೋಜನೆಗಳನ್ನು ಆರಂಭಿಸುವಾಗ ಚಂದಾದಾರರ ವಯಸ್ಸು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟಿರಬೇಕು. ಷರತ್ತುಗಳ ಅನ್ವಯ ಆಗುವಂತೆ ಕೆಲವು ಫಲಾನುಭವಿಗಳಿಗೆ ರಿಸರ್ವೇಷನ್ಸ್​ ಇರುತ್ತದೆ. ಈ ಮೂಲಕ ಚಂದಾದಾರರು ನಿಶ್ಚಿತ ಹಾಗೂ ಗೌರವಯುತವಾದ ರಿಟರ್ನ್ಸ್​ ಅನ್ನು ಅಂಚೆ ಕಚೇರಿಯಿಂದ ಪಡೆಯುತ್ತಾರೆ.

ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕ್ಯಾಲ್ಕುಲೇಟರ್ ಈ ಪಾಲಿಸಿಯಲ್ಲಿ ಪ್ರತಿ ತಿಂಗಳು ರೂ. 8,334 ಠೇವಣಿ ಮಾಡಿದಲ್ಲಿ ಆ ಖಾತೆ ಮೆಚ್ಯೂರ್​ ಆಗುವ ಅವಧಿಯಾದ 5 ವರ್ಷದ ಹೊತ್ತಿಗೆ 7 ಲಕ್ಷ ರೂಪಾಯಿ ದೊರೆಯುತ್ತದೆ. ತಿಂಗಳಿಗೆ 8,334 ರೂಪಾಯಿ ಅಂದರೆ ಚಂದಾದಾರರು 5 ವರ್ಷದಲ್ಲಿ 5 ಲಕ್ಷ ರೂಪಾಯಿ ಠೇವಣಿ ಮಾಡಿರುತ್ತಾರೆ. ಬಡ್ಡಿಯು ಸೇರಿಕೊಂಡು ಮೊತ್ತವು 7 ಲಕ್ಷ ರೂಪಾಯಿ ಆಗುತ್ತದೆ. ಈ ತನಕ ಯೋಜನೆಯಲ್ಲಿ ಬಡ್ಡಿ ದರ ಶೇ 7.4ರಷ್ಟಿದ್ದು, ಅದರ ಆಧಾರದಲ್ಲಿ ಇಷ್ಟು ಮೊತ್ತ ಬರುತ್ತದೆ. ಅಂದ ಹಾಗೆ ಈ ದರದಲ್ಲಿ ಲೆಕ್ಕಾಚಾರ ಗಮನಿಸಿದರೆ ಬಡ್ಡಿ 1.85 ಲಕ್ಷ ಆಗುತ್ತದೆ. ಆದ್ದರಿಂದ ಗ್ರಾಸ್ ಮೊತ್ತವು ಈ ಐದು ವರ್ಷಗಳಲ್ಲಿ 6,85,000 ರೂಪಾಯಿ ಆಗುತ್ತದೆ. ಈ ಯೋಜನೆ ಅಡಿಯಲ್ಲಿ ಬಡ್ಡಿಯನ್ನು ತ್ರೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ. ಫಲಾನುಭವಿ ಪ್ರತಿ ತ್ರೈಮಾಸಿಕದಲ್ಲಿ ರೂ. 9250 ಬಡ್ಡಿ ಪಡೆಯುತ್ತಾರೆ. ಪಿಪಿಎಫ್​ ಖಾತೆಯ ರೀತಿಯಲ್ಲೇ ಬಟ್ಟಿ ದರ ನೀಡಲಾಗುತ್ತದೆ.

ಮೆಚ್ಯೂರಿಟಿ ಅವಧಿ ಹಾಗೂ ಬಡ್ಡಿ ದರ ಈಗಾಗಲೇ ತಿಳಿಸಿದಂತೆ ಈ ಯೋಜನೆ ಅಡಿಯಲ್ಲಿ ಬಡ್ಡಿ ದರ ಶೇ 7.4ರಷ್ಟು. ಮೆಚ್ಯೂರಿಟಿ ಅವಧಿ 5 ವರ್ಷಗಳು. ಅದರ ಆಚೆಗೂ ಅವಧಿಯನ್ನು ವಿಸ್ತರಣೆ ಮಾಡಬಹುದು. ಫಲಾನುಭವಿ ಆದವರು ಒಂದು ಸಲದ ಮೂರು ವರ್ಷದ ವಿಸ್ತರಣೆಗೆ ಅಪ್ಲೈ ಮಾಡಬಹುದು. ಆದರೆ ಹಾಗೆ ಅಪ್ಲೈ ಮಾಡುವುದಿದಲ್ಲಿ ಮೆಚ್ಯೂರ್ ಆದ ಒಂದು ವರ್ಷದ ಅವಧಿಯೊಳಗೆ ಆಗಬೇಕು.

ಅರ್ಹತೆ ಪೋಸ್ಟ್​ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ 60 ವರ್ಷ ಅತವಾ ಅದಕ್ಕಿಂತ ಹೆಚ್ಚು ವಯಸ್ಸಿನವರು ಖಾತೆಯನ್ನು ತೆರೆಯಬಹುದು. ಆದರೂ 55 ವರ್ಷ ಮೇಲ್ಪಟ್ಟವರು ತಮ್ಮ ನಿವೃತ್ತಿ ಬೆನಿಫಿಟ್​ಗಳನ್ನು ಪಡೆದ ಒಂದು ತಿಂಗಳ ಒಳಗೆ ಎಸ್​ಸಿಎಸ್​ಎಸ್​ ಖಾತೆಯನ್ನು ತೆರೆಯಬಹುದು. ರಕ್ಷಣಾ ಸಿಬ್ಬಂದಿಗೆ ಮಿತಿ 50 ವರ್ಷಗಳು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ವರ್ಸಸ್ ಎಸ್​ಬಿಐ ಎಫ್​ಡಿ; ಯಾವುದರ ಬಡ್ಡಿ ದರ ಎಷ್ಟಿದೆ?

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?