AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Relief: ಕರ್ನಾಟಕ ಹೈಕೋರ್ಟ್ ತೀರ್ಪಿಂದ ಗೇಮ್ಸ್​ಕ್ರಾಫ್ಟ್ ನಿರಾಳ; ತಪ್ಪಿತು 21,000 ಕೋಟಿ ರೂ ತೆರಿಗೆ ಭೀತಿ

GamesKraft Technology Tax Evasion: 2017ರಿಂದ 2022 ಜೂನ್ 30ರವರೆಗಿನ ಅವಧಿಯಲ್ಲಿ ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ 21,000 ಕೋಟಿ ರೂನಷ್ಟು ಜಿಎಸ್​ಟಿ ಪಾವತಿಸಿಲ್ಲ ಎಂಬುದು ಜಿಎಸ್​ಟಿ ಇಂಟೆಲಿಜೆನ್ಸ್ ಯೂನಿಟ್​ನ ಆರೋಪ. ಆದರೆ, ಕರ್ನಾಟಕ ಹೈಕೋರ್ಟ್ ಇದೀಗ ಗೇಮಿಂಗ್ ಕಂಪನಿ ಪರವಾಗಿ ತೀರ್ಪು ಕೊಟ್ಟಿದೆ.

Big Relief: ಕರ್ನಾಟಕ ಹೈಕೋರ್ಟ್ ತೀರ್ಪಿಂದ ಗೇಮ್ಸ್​ಕ್ರಾಫ್ಟ್ ನಿರಾಳ; ತಪ್ಪಿತು 21,000 ಕೋಟಿ ರೂ ತೆರಿಗೆ ಭೀತಿ
ಕರ್ನಾಟಕ ಹೈಕೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 11, 2023 | 6:02 PM

Share

ಬೆಂಗಳೂರು: ಭಾರತದ ಗೇಮಿಂಗ್ ಉದ್ಯಮಕ್ಕೆ (Gaming Industry) ಸಕಾರಾತ್ಮಕವಾಗಿ ಪರಿಣಮಿಸುವ ಮತ್ತು ಸ್ಪಷ್ಟತೆ ಕೊಡುವ ಬೆಳವಣಿಗೆಯಲ್ಲಿ ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿಗೆ (GTPL- GamesKraft Technology Pvt Ltd) ನೀಡಿದ ಜಿಎಸ್​ಟಿ ತೆರಿಗೆ ನೋಟೀಸ್ ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದು ಮಾಡಿದೆ. 21,000 ಕೋಟಿ ರೂನಷ್ಟು ತೆರಿಗೆಯನ್ನು ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಪಾವತಿಸಿಲ್ಲ ಎಂದು ಜಿಎಸ್​​ಟಿ ಇಂಟೆಲಿಜೆನ್ಸ್ ಯೂನಿಟ್ 2022ರ ಸೆಪ್ಟಂಬರ್​ನಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಮೂಲದ ಈ ಗೇಮಿಂಗ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಜಿಎಸ್​ಟಿ ನೋಟೀಸ್ (GST Notice) ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿಗೆ ನಿರಾಳತೆ ತಂದಿದೆ. 2017ರಿಂದ 2022 ಜೂನ್ 30ರವರೆಗಿನ ಅವಧಿಯಲ್ಲಿ ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ 20,000 ಕೋಟಿ ರೂನಷ್ಟು ಜಿಎಸ್​ಟಿ ಪಾವತಿಸಿಲ್ಲ ಎಂಬುದು ಜಿಎಸ್​ಟಿ ಇಂಟೆಲಿಜೆನ್ಸ್ ಯೂನಿಟ್​ನ ಆರೋಪ. ಭಾರತದ ಇತಿಹಾಸದಲ್ಲಿ ಯಾವುದೇ ಕಂಪನಿ ವಿರುದ್ಧ ಇಷ್ಟೊಂದು ಮೊತ್ತದ ಜಿಎಸ್​ಟಿ ಬಾಕಿ ಬಗ್ಗೆ ನೋಟೀಸ್ ಜಾರಿ ಆಗಿದ್ದು ಅದೇ ಮೊದಲು.

ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಕಂಪನಿಯು ಕಾರ್ಡ್, ರಮ್ಮಿ ಕಲ್ಚರ್, ಗೇಮ್​ಜಿ, ರಮ್ಮಿ ಟೈಮ್ ಇತ್ಯಾದಿ ಮೂಲಕ ಆನ್​ಲೈನ್ ಬೆಟ್ಟಿಂಗ್​ಗೆ ಪ್ರಚೋದನೆ ಕೊಡುತ್ತಿದೆ. ಗ್ರಾಹಕರಿಗೆ ಇನ್ವಾಯ್ಸ್ ಕೊಡುತ್ತಿಲ್ಲ ಎಂಬಿತ್ಯಾದಿ ಆರೋಪಗಳೂ ಇವೆ. ಜಿಎಸ್​ಟಿ ಅಧಿಕಾರಿಗಳು ಗೇಮ್ಸ್​ಕ್ರಾಫ್ಟ್ ಪ್ಲಾಟ್​ಫಾರ್ಮ್​ಗಳಲ್ಲಿ ದಾಖಲಾದ ಆನ್​ಲೈನ್ ಬೆಟ್ಟಿಂಗ್ ಮೊತ್ತದ ಮೇಲೆ ಶೇ. 28ರಷ್ಟು, ಅಂದರೆ 77,000 ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆಯನ್ನು ಹೇರಿತ್ತು.

ಇದನ್ನೂ ಓದಿGo First: ಗೋ ಫಸ್ಟ್ ಭವಿಷ್ಯ ಅಭಿಲಾಷ್ ಲಾಲ್ ಕೈಯಲ್ಲಿ; ಇವರ ಬೆಂಗಳೂರು ಕನೆಕ್ಷನ್ ಬಗ್ಗೆ ಒಂದು ಮಾಹಿತಿ

ಅಷ್ಟೇ ಅಲ್ಲ, ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಸಂಸ್ಥೆಯ ದಾಖಲೆಗಳ ಫೋರೆನ್ಸಿಕ್ ಪರೀಕ್ಷೆ ಮಾಡಿದಾಗ ನಕಲಿ ಇನ್ವಾಯ್ಸ್ ಮತ್ತು ಹಿಂದಿನ ದಿನಾಂಕಗಳ ಇನ್ವಾಯ್ಸ್​ಗಳನ್ನು ಸಲ್ಲಿಸಿದ್ದು ಕಂಡುಬಂದಿತ್ತು ಎಂದೂ ಜಿಎಸ್​ಟಿ ಅಧಿಕಾರಿಗಳು ಆರೋಪಿಸಿದ್ದರು.

ಆದರೆ, ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಕಂಪನಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ತಮ್ಮದು ಕೌಶಲ್ಯ ಆಧಾರಿತ ಗೇಮಿಂಗ್ ನಡೆಸುತ್ತಿದ್ದೇವೆ. ಈ ಸೇವೆಗೆ ಜಿಎಸ್​ಟಿ ಶೇ. 18 ಮಾತ್ರ ಇದೆ. ಗೇಮ್ ಆಡುವ ಆಟಗಾರರ ಪ್ರವೇಶ ಶುಲ್ಕದಿಂದ ಈ ಜಿಎಸ್​ಟಿ ಮುರಿದುಕೊಳ್ಳಲಾಗುತ್ತದೆ ಎಂದು ಈ ಕಂಪನಿ ಪರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ವಾದಿಸಿದ್ದರು.

ಇದನ್ನೂ ಓದಿMicrosoft: ಬೋನಸ್ ಇಲ್ಲ, ಸಂಬಳ ಹೆಚ್ಚಳವೂ ಇಲ್ಲ; 10 ಸಾವಿರ ಲೇ ಆಫ್ ಕಂಡ ಮೈಕ್ರೋಸಾಫ್ಟ್ ಉದ್ಯೋಗಿಗಳ ಗಾಯಕ್ಕೆ ಇನ್ನೊಂದು ಬರೆ

2017ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಗೇಮ್ಸ್​ಕ್ರಾಫ್ಟ್ ಸಂಸ್ಥೆ ಆನ್​ಲೈನ್​ನಲ್ಲಿ ಹಲವು ರಮ್ಮಿ ಗೇಮ್​ಗಳು, ಲುಡೋ, ಫ್ಯಾಂಟಸಿ ಸ್ಪೋರ್ಟ್ಸ್ ಇತ್ಯಾದಿಯನ್ನು ನಡೆಸುತ್ತದೆ. ಇದೀಗ ಅಪಾರ ಪ್ರಮಾಣದ ಜಿಎಸ್​ಟಿ ತೆರಿಗೆ ಹೊರೆಯಿಂದ ತನ್ನನ್ನು ಬಚಾವ್ ಮಾಡಿದ ಹೈಕೋರ್ಟ್ ತೀರ್ಪನ್ನು ಗೇಮ್ಸ್​ಕ್ರಾಫ್ಟ್ ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿದ ಕಂಪನಿ ಪರ ವಕೀಲ ಜಾಯ್​ಜ್ಯೋತಿ ಮಿಶ್ರ, ನಮ್ಮ ಬ್ಯುಸಿನೆಸ್ ಮಾಡಲ್ ನ್ಯಾಯಯುತವಾಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ನಮಗೆ ಮೊದಲಿಂದಲೂ ನಂಬಿಕೆ ಇತ್ತು. ಮುಂದೆಯೂ ಇರುತ್ತದೆ. ಈ ನ್ಯಾಯತೀರ್ಪಿನಿಂದ ಮುಂದಿನ ದಿನಗಳಲ್ಲಿ ಜಿಎಸ್​ಟಿ ಅಧಿಕಾರಿಗಳೊಂದಿಗೆ ಸಕಾರಾತ್ಮಕ ಸಂವಾದಕ್ಕೆ ದಾರಿ ಸಿಕ್ಕು, ಗೇಮಿಂಗ್ ಕ್ಷೇತ್ರದಲ್ಲಿ ಪ್ರಗತಿಪರ ಜಿಎಸ್​ಟಿ ಕಾಯ್ದೆಗಳು ರಚನೆ ಆಗಲು ಅನುಕೂಲವಾಗಬಹುದು ಎಂದು ಹೇಳಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ