Sign In

By signing in or creating an account, you agree with Associated Broadcasting Company's Terms & Conditions and Privacy Policy.

Success Story ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ

Raghunandan Kamath: ಮಂಗಳೂರಿನಲ್ಲಿ ಅಪ್ಪನ ಹಣ್ಣಿನ ಅಂಗಡಿಯಲ್ಲಿ ಸಹಾಯ ಮಾಡಿಕೊಂಡು ಇದ್ದ ರಘುನಂದನ್ ಕಾಮತ್ ಮುಂಬೈಗೆ ಹೋಗಿ ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿ ತೆರೆದಿದ್ದರು. ಈಗ ಅದು 300 ಕೋಟಿ ರೂ ವಹಿವಾಟು ಕಾಣುವ ದೊಡ್ಡ ಉದ್ದಿಮೆಯಾಗಿದೆ.

Success Story ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ
ರಘುನಂದನ್ ಕಾಮತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 02, 2023 | 6:14 PM

Naturals Ice Cream Story: ಉದ್ದಿಮೆ, ವ್ಯಾಪಾರದಲ್ಲಿ ಯಶಸ್ಸು ಒಲಿದುಬರುವುದು ಅಷ್ಟು ಸುಲಭವಲ್ಲ. ವರ್ಷಕ್ಕೆ ಕೋಟಿ ಕೋಟಿ ರೂ ಸಂಪಾದನೆ ಮಾಡುವ ವ್ಯವಹಾರಿಗಳನ್ನು ನೋಡಿ, ಇದೇನಪ್ಪ ಇಷ್ಟು ಸುಲಭವಾಗಿ ಹಣ ಸಂಪಾದಿಸುತ್ತಾರಲ್ಲ ಎಂದು ಭಾವಿಸುತ್ತೇವೆ. ಆದರೆ, ಯಾವುದೇ ವ್ಯಾಪಾರ ಅಥವಾ ಉದ್ಯಮ ತತ್​ಕ್ಷಣಕ್ಕೆ ಸಕ್ಸಸ್ ಕಾಣುವುದು ಅಪರೂಪ. ಲಾಭದ ಹಳಿಗೆ ಬರುವ ಮುನ್ನ ಹಲವು ನಷ್ಟ, ಹಿನ್ನಡೆ, ಅಡ್ಡಿ ಆತಂಕಗಳನ್ನು ದಾಟಿ ಹೋಗಿರುತ್ತದೆ. ಒಂದು ವ್ಯವಹಾರವನ್ನು ಸ್ಥಾಪಿಸಿ ತಕ್ಕಮಟ್ಟಿಗೆ ಹಿಡಿದುನಿಲ್ಲಿಸುವುದೇ ದೊಡ್ಡ ಸಾಹಸ. ಕಷ್ಟಗಳಿಗೆ ಜಗ್ಗದೇ ಪಟ್ಟು ಹಿಡಿದು ವ್ಯವಹಾರ ಯಶಸ್ಸು ಮಾಡಿದವರಲ್ಲಿ ಕರ್ನಾಟಕದ ರಘುನಂದನ್ ಶ್ರೀನಿವಾಸ್ ಕಾಮತ್ (Raghunandan Kamath) ಕೂಡ ಒಬ್ಬರು. ಮಂಗಳೂರಿನಲ್ಲಿ ಅಪ್ಪನ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಬೆಳೆದ ಇವರು ಇದೀಗ 300 ಕೋಟಿ ರೂ ಮೌಲ್ಯದ ಐಸ್​ಕ್ರೀಮ್ ಬ್ರ್ಯಾಂಡ್​ನ ಒಡೆಯರಾಗಿದ್ದಾರೆ.

ನ್ಯಾಚುರಲ್ ಐಸ್ ಕ್ರೀಮ್ ಸ್ಥಾಪನೆಯಾದ ಕಥೆ

ರಘುನಂದನ್ ಎಸ್ ಕಾಮತ್ ಅವರು ಮಂಗಳೂರಿನಲ್ಲಿ ಅಪ್ಪನ ಜೊತೆ ಅಂಗಡಿಯಲ್ಲಿ ಹಣ್ಣು ವ್ಯಾಪಾರ ಮಾಡುವಾಗ ಸಾಕಷ್ಟು ಸೂಕ್ಷ್ಮತೆಗಳನ್ನು ಕಲಿತಿದ್ದರು. ಬಳಿಕ ಅವರು ಎಂಬತ್ತರ ದಶಕದಲ್ಲಿ ಮುಂಬೈಗೆ (ಆಗ ಬಾಂಬೆ) ಹೋದರು. ಆಗ ಕರ್ನಾಟಕದಿಂದ, ಅದರಲ್ಲೂ ಕರಾವಳಿ ಭಾಗದಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುವುದು ಟ್ರೆಂಡ್ ಆಗಿದ್ದ ದಿನಗಳು. ಮುಂಬೈನಲ್ಲಿರುವ ಹೋಟೆಲ್ ಉದ್ಯಮ ಬಹುತೇಕ ಮಂಗಳೂರಿನವರೇ ಕೈಯಲ್ಲೇ ಇದೆ. ಮಂಗಳೂರಿನಿಂದ ಮುಂಬೈಗೆ ಹೋದ ಕಾಮತ್ 1984ರಲ್ಲಿ ಜುಹು ಪ್ರದೇಶದಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿಯನ್ನು ತೆರೆದರು.

ಇದನ್ನೂ ಓದಿYouTube Money: ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ

ಆಗ ಇವರ ಅಂಗಡಿಯಲ್ಲಿ ಕೆಲಸಕ್ಕಿದ್ದವರು 4 ಮಂದಿ ಮಾತ್ರ. ಕಾಮತ್ ಹಾಗೂ ಸಿಬ್ಬಂದಿಯೇ ಸೇರಿ ಐಸ್ ಕ್ರೀಮ್​ಗಳನ್ನು ತಯಾರಿಸುತ್ತಿದ್ದರು. ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿಯಲ್ಲಿ 10 ಫ್ಲೇವರ್​ಗಳ ಐಸ್ ಕ್ರೀಮ್ ತಯಾರಾಗುತ್ತಿತ್ತು. ಆದರೆ, ನಿರೀಕ್ಷಿಸಿದಷ್ಟು ವ್ಯಾಪಾರ ಆಗುತ್ತಿರಲಿಲ್ಲ. ಗ್ರಾಹಕರನ್ನು ಸೆಳೆಯಲು ರಘುನಂದನ್ ಶ್ರೀನಿವಾಸ್ ಕಾಮತ್ ಅವರು ಪಾವ್ ಬಾಜಿ ತಿಂಡಿಯನ್ನು ಮೆನು ಲಿಸ್ಟ್​ಗೆ ಹಾಕಿದರು. ಪಾವ್ ಬಾಜಿ ಉತ್ತರ ಭಾರತೀಯರಿಗೆ ಫೇವರಿಟ್ ಎನಿಸಿರುವ ಒಂದು ತಿಂಡಿ. ಪಾವ್ ಬಾಜಿಯನ್ನೇ ಪ್ರಧಾನ ತಿಂಡಿಯಾಗಿ ಮಾಡಿ, ಅದರ ನೆರಳಿನಲ್ಲಿ ಐಸ್ ಕ್ರೀಮ್ ಅನ್ನೂ ಸೇಲ್ ಮಾಡತೊಡಗಿದರು. ಪಾವ್ ಬಾಜಿ, ಐಸ್ ಕ್ರೀಮ್ ಕಾಂಬಿನೇಶ್ ವರ್ಕೌಟ್ ಆಯಿತು. ಜನರಿಗೆ ಇವರ ಐಸ್ ಕ್ರೀಮ್ ಇಷ್ಟವಾಗತೊಡಗಿತು.

ನ್ಯಾಚುರಲ್ ಐಸ್ ಕ್ರೀಮ್ ಮುಂದೆ ಬೆಳೆಯುತ್ತಾ ಹೋಯಿತು. ಫ್ರಾಂಚೈಸಿಗಳನ್ನು ನೀಡಿ ವ್ಯವಹಾರ ಬೆಳೆಸಲಾಯಿತು. ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ನ್ಯಾಚುರಲ್ ಐಸ್ ಕ್ರೀಮ್​ನ 135 ಪಾರ್ಲರ್​ಗಳಿವೆ. ಎಂಟು ಪಾರ್ಲರ್​ಗಳು ಮಾತ್ರ ಇವರ ಕಂಪನಿಯಿಂದ ನೇರವಾಗಿ ಸ್ಥಾಪನೆ ಆಗಿದೆ. ಉಳಿದವರು ಫ್ರಾಂಚೈಸಿ ಮೂಲಕ ನಡೆಯುತ್ತಿವೆ. ಮುಂಬೈನ ಕಾಂಡಿವಲಿ ಬಳಿ ಇವರ ಉತ್ಪಾದನಾ ಘಟಕ ಇದೆ. ಕಾಮತ್ ಅವರ ಈ ಐಸ್ ಕ್ರೀಮ್ ಪಾರ್ಲರ್ ವರ್ಷಕ್ಕೆ 300 ಕೊಟಿ ವಹಿವಾಟು ನಡೆಸುತ್ತದೆ. ಅಮುಲ್, ನಂದಿನಿ, ಅರುಣ್ಸ್ ಇತ್ಯಾದಿ ಪ್ರಬಲ ಬ್ರ್ಯಾಂಡ್​ಗಳ ಎದುರು ಪೈಪೋಟಿ ನಡೆಸಿ ನ್ಯಾಚುರಲ್ಸ್ ಬ್ರ್ಯಾಂಡ್​ಗೆ ಇಷ್ಟು ವ್ಯವಹಾರ ಸಿಗುತ್ತಿರುವುದು ಗಮನಾರ್ಹ.

ಇದನ್ನೂ ಓದಿInspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್

ನ್ಯಾಚುರಲ್ಸ್ ಐಸ್ ಕ್ರೀಮ್​ನ ಫ್ರಾಂಚೈಸಿ ಪಡೆಯುವುದು ಹೇಗೆ?

ನ್ಯಾಚುರಲ್ ಐಸ್ ಕ್ರೀಮ್​ನ ಅಧಿಕೃತ ವೆಬ್​ಸೈಟ್​ನಲ್ಲಿರುವ naturalicecreams.in/franchise-queries ಈ ಲಿಂಕ್ ಕ್ಲಿಕ್ ಮಾಡಿದರೆ, ಫ್ರಾಂಚೈಸಿಗೆ ಅರ್ಜಿ ಸಿಗುತ್ತದೆ. ಆ ಮೂಲಕ ಫ್ರಾಂಚೈಸಿ ಪಡೆಯಲು ಯತ್ನಿಸಬಹುದು. ಇದರ ಫ್ರಾಂಚೈಸಿಗೆ ಅಂದಾಜು 10ರಿಂದ 20 ಲಕ್ಷ ರೂ ಆಗಬಹುದು. ಫ್ರಾಂಚೈಸಿ ಪಡೆಯುವ ವೆಚ್ಚ, ಉಪಕರಣ ವೆಚ್ಚ ಇವೆಲ್ಲವೂ ಇದರಲ್ಲಿ ಒಳಗೊಂಡಿರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Tue, 2 May 23

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ