AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid: ಬಕ್ರೀದ್ ಹಬ್ಬದಂದು ಷೇರುಮಾರುಕಟ್ಟೆಗಳಿಗೆ ರಜೆ; ಆದರೆ, ಜೂನ್ 28 ಬದಲು ಮರುದಿನ ಬಂದ್

Share Market During Bakr Eid: ಈದ್ ಉಲ್ ಜುಹಾ ಅಥವಾ ಬಕ್ರೀದ್ ಹಬ್ಬಕ್ಕೆ ಬಿಎಸ್​ಇ, ಎನ್​​ಎಸ್​ಇ, ಎಂಸಿಎಕ್ಸ್, ಫಾರೆಕ್ಸ್ ಇತ್ಯಾದಿ ಹಣಕಾಸು ಮಾರುಕಟ್ಟೆಗಳಿಗೆ ರಜೆ ಇರಲಿದೆ. ಇದೂ ಸೇರಿ ಡಿಸೆಂಬರ್​ವರೆಗೆ ಇನ್ನೂ 8 ದಿನಗಳ ಕಾಲ ಷೇರುಪೇಟೆಗೆ ರಜೆ ಇರುತ್ತದೆ.

Eid: ಬಕ್ರೀದ್ ಹಬ್ಬದಂದು ಷೇರುಮಾರುಕಟ್ಟೆಗಳಿಗೆ ರಜೆ; ಆದರೆ, ಜೂನ್ 28 ಬದಲು ಮರುದಿನ ಬಂದ್
ಷೇರುಪೇಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 12:04 PM

Share

ನವದೆಹಲಿ: ನಾಳೆ (ಜೂನ್ 28) ಮುಸ್ಲಿಮರ ಪವಿತ್ರ ಈದ್ ಉಲ್ ಜುಹಾ (Eid Ul-Zuha) ಇರುವುದರಿಂದ ದೇಶದ ಬಹುತೇಕ ಎಲ್ಲೆಡೆ ರಜೆ ಇದೆ. ಬಕ್ರೀದ್ ಪ್ರಯುಕ್ತ ಭಾರತದ ಷೇರು ಮಾರುಕಟ್ಟೆಗಳಿಗೂ ಬುಧವಾರ ರಜೆ ನಿಗದಿಯಾಗಿತ್ತು. ಆದರೆ, ಇಂದು ಅಚಾನಕ್ಕಾಗಿ ರಜಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೂನ್ 28 ಬದಲು ಮರುದಿನ ರಜೆ ಕೊಡಲು ನಿರ್ಧರಿಸಲಾಗಿದೆ. ಅಂದರೆ ಜೂನ್ 29, ಗುರುವಾದಂದು ಷೇರುಪೇಟೆಗಳು ಬಂದ್ ಆಗಿರುತ್ತವೆ. ಬುಧವಾರ ಯಥಾ ಪ್ರಕಾರ ಕಾರ್ಯನಿರ್ವಹಿಸಲಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (BSE), ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ಮತ್ತಿತರ ಷೇರು ಎಕ್ಸ್​ಜೇಂಜ್ ಕೇಂದ್ರಗಳಿಗೆ (Stock Exchange Markets) ರಜೆ ಇದೆ. ವಿದೇಶೀ ಕರೆನ್ಸಿ ವಿನಿಮಯ ಮಾರುಕಟ್ಟೆಯೂ ಇರುವುದಿಲ್ಲ. ಜೂನ್ 29ರಂದು ಯಾವುದೇ ಷೇರು ವಹಿವಾಟು, ಬಾಂಡ್ ಮಾರಾಟ, ಫಾರೆಕ್ ವಹಿವಾಟುಗಳು ನಡೆಯುವುದಿಲ್ಲ. ನಾಳೆ ಬುಧವಾರ ಸಂಜೆ ಬಂದ್ ಆಗುವ ಷೇರುಪೇಟೆ ಮತ್ತೆ ಬಾಗಿಲು ತೆರೆಯುವುದು ಜೂನ್ 30ರ ಬೆಳಗ್ಗೆಯೇ.

ಬಹು ಸರಕು ವಿನಿಯಮ ಮಾರುಕಟ್ಟೆ ಎನಿಸಿದ ಎಂಸಿಎಕ್ಸ್ (MCX- Multi Commodity Exchange) ಜೂನ್ 29ರಂದು ಸಂಜೆಯವರೆಗೂ ಬಂದ್ ಆಗಿರುತ್ತದೆ. ಸಂಜೆ 5ರ ಬಳಿಕ ಮಧ್ಯರಾತ್ರಿಯವರೆಗೂ ಅದು ತೆರೆದಿರುತ್ತದೆ. ಕಮಾಡಿಟಿ ಡಿರೈವೇಟಿವ್ ಸೆಗ್ಮೆಂಟ್​ನಲ್ಲೂ ಸಂಜೆಯ ಬಳಿಕ ವಹಿವಾಟು ಇರುತ್ತದೆ.

ಇದನ್ನೂ ಓದಿAadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು

ಷೇರು ಮಾರುಕಟ್ಟೆಗಳಿಗೆ ಈ ವರ್ಷದ ಮುಂದಿನ ರಜಾ ದಿನಗಳ ಪಟ್ಟಿ

  • ಜೂನ್ 29: ಬಕ್ರೀದ್ ಹಬ್ಬ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಸೆಪ್ಟಂಬರ್ 19: ಗಣೇಶ ಹಬ್ಬ
  • ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
  • ಅಕ್ಟೋಬರ್ 24: ದಸರಾ ಹಬ್ಬ
  • ನವೆಂಬರ್ 14: ದೀಪಾವಳಿ ಹಬ್ಬ
  • ನವೆಂಬರ್ 27: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಮಂಗಳವಾರ ಷೇರುಪೇಟೆ ಮಿಂಚಿನ ಆರಂಭ

ಜೂನ್ 27, ಮಂಗಳವಾರದಂದು ಭಾರತದ ಬಿಎಸ್​ಇ ಮತ್ತು ಎನ್​ಎಸ್​ಇ ಷೇರು ವಿನಿಮಯ ಕೇಂದ್ರಗಳು ಭರ್ಜರಿ ವಹಿವಾಟು ಕಾಣುತ್ತಿವೆ. ಸೆನ್ಸೆಕ್ಸ್ ಬೆಳ್ಳಂಬೆಳಗ್ಗೆಯೇ 100 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಮತ್ತೆ 18,700 ಅಂಕಗಳ ಮಟ್ಟಕ್ಕಿಂತ ಮೇಲೇರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!