LIC Investments: ಅದಾನಿ ಗ್ರೂಪ್​ನಿಂದ ಮ್ಯೂಚುವಲ್ ಫಂಡ್​ಗಳು ಹೊರಬಿದ್ದರೂ ಹೂಡಿಕೆ ಹೆಚ್ಚಿಸಿದ ಎಲ್​ಐಸಿ

Adani Group and LIC: ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್​ಪ್ರೈಸಸರ್ ಮತ್ತು ಅದಾನಿ ಟ್ರಾನ್ಸ್​ಮಿಶನ್ ಕಂಪನಿಗಳಲ್ಲಿನ ತನ್ನ ಪಾಲನ್ನು ಎಲ್​ಐಸಿ ಹೆಚ್ಚಿಸಿಕೊಂಡಿದೆ. ಅದೇ ವೇಳೆ, ಅದಾನಿ ಗ್ರೂಪ್​ನ ಇನ್ನೆರಡು ಕಂಪನಿಗಳಾದ ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್​ನಲ್ಲಿನ ತನ್ನ ಪಾಲಿನ ಕೆಲ ಷೇರುಗಳನ್ನು ಎಲ್​ಐಸಿ ಮಾರಾಟ ಮಾಡಿದೆ.

LIC Investments: ಅದಾನಿ ಗ್ರೂಪ್​ನಿಂದ ಮ್ಯೂಚುವಲ್ ಫಂಡ್​ಗಳು ಹೊರಬಿದ್ದರೂ ಹೂಡಿಕೆ ಹೆಚ್ಚಿಸಿದ ಎಲ್​ಐಸಿ
ಎಲ್​ಐಸಿ
Follow us
|

Updated on:Apr 12, 2023 | 6:06 PM

ನವದೆಹಲಿ: ಹಿಂಡನ್ಬರ್ಗ್ ರೀಸರ್ಚ್ ವರದಿ ಪ್ರಕಟವಾದ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ಅದಾನಿ ಗ್ರೂಪ್​ಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ(LIC- Life Insurance Corporation) ಬೆಂಬಲ ಮುಂದುವರಿಯುತ್ತಿರುವಂತಿದೆ. ಅದಾನಿ ಗ್ರೂಪ್​ಗೆ ಸೇರಿದ ನಾಲ್ಕು ಕಂಪನಿಗಳ ಇನ್ನಷ್ಟು ಷೇರುಗಳನ್ನು ಎಲ್​ಐಸಿ ಖರೀದಿಸಿರುವುದು ತಿಳಿದುಬಂದಿದೆ. ಹಿಂಡನ್ಬರ್ಗ್ ವರದಿ ಬಳಿಕ ಹೂಡಿಕೆದಾರರು ಅದಾನಿ ಕಂಪನಿಗಳ ಷೇರುಗಳ ಮಾರಾಟ ಭರಾಟೆಯಲ್ಲಿ ತೊಡಗಿಸಿಕೊಂಡ ಹೊತ್ತಿನಲ್ಲಿ ಎಲ್​ಐಸಿ ಖರೀದಿಯಲ್ಲಿ ಮಗ್ನವಾಗಿತ್ತು. ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕದಲ್ಲಿ ಅದಾನಿ ಗ್ರೂಪ್​ನ ಕಂಪನಿಗಳ ಪೈಕಿ ನಾಲ್ಕರಲ್ಲಿ ಎಲ್​ಐಸಿ ತನ್ನ ಹೂಡಿಕೆ ಮೊತ್ತವನ್ನು ಹೆಚ್ಚಿಸಿ ಗಮನ ಸೆಳೆದಿದೆ. ಇತ್ತ ಎಲ್​ಐಸಿಗೆ ಕಡಿಮೆ ಬೆಲೆಗೆ ಷೇರುಗಳು ಸಿಕ್ಕಂತಾಗಿದೆ. ಅತ್ತ ಅದಾನಿ ಗ್ರೂಪ್​ಗೆ ಒಂದಷ್ಟು ಸ್ಥೈರ್ಯ ತುಂಬಲು ಎಲ್​ಐಸಿ ನಡೆ ಕಾರಣವಾಗಿದೆ.

ವರದಿಗಳ ಪ್ರಕಾರ, ಅದಾನಿ ಗ್ರೂಪ್​ಗೆ (Adani Group) ಸೇರಿದ ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್​ಪ್ರೈಸಸ್ ಮತ್ತು ಅದಾನಿ ಟ್ರಾನ್ಸ್​ಮಿಶನ್ ಕಂಪನಿಗಳಲ್ಲಿನ ತನ್ನ ಪಾಲನ್ನು ಎಲ್​ಐಸಿ ಹೆಚ್ಚಿಸಿಕೊಂಡಿದೆ. ಅದೇ ವೇಳೆ, ಅದಾನಿ ಗ್ರೂಪ್​ನ ಇನ್ನೆರಡು ಕಂಪನಿಗಳಾದ ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್​ನಲ್ಲಿನ ತನ್ನ ಪಾಲಿನ ಕೆಲ ಷೇರುಗಳನ್ನು ಎಲ್​ಐಸಿ ಮಾರಾಟ ಮಾಡಿದೆ. ಉದ್ಯಮಿ ಗೌತಮ್ ಅದಾನಿ (Gautam Adani) ಮಾಲಿಕತ್ವದ ಮತ್ತೊಂದು ಸಿಮೆಂಟ್ ಕಂಪನಿ ಎಸಿಸಿಯಲ್ಲಿನ ತನ್ನ ಪಾಲಿನ ಷೇರುಗಳನ್ನು ಎಲ್​ಐಸಿ ಯಥಾಸ್ಥಿತಿಯಲ್ಲಿ ಇರಿಸಿದೆ. ಎಸಿಸಿ ಕಂಪನಿಯಲ್ಲಿ ಎಲ್​ಐಸಿ ಹೊಂದಿರುವ ಷೇರುಗಳ ಸಂಖ್ಯೆ 1.20 ಕೋಟಿ. ಆ ಕಂಪನಿಯ ಶೇ. 6.41ರಷ್ಟು ಪಾಲು ಎಲ್​ಐಸಿಗೆ ಇದೆ.

ಇದನ್ನೂ ಓದಿTwitter: ಟ್ವಿಟ್ಟರ್ ಕಳೆದುಹೋಗಿದೆ, ಎಕ್ಸ್ ನುಂಗಿಹಾಕಿದೆ; ಕೋರ್ಟ್​ನಲ್ಲಿ ಮೊಕದ್ದಮೆ; ಎಲಾನ್ ಮಸ್ಕ್ ಕೂಡ ನಿಗೂಢ ಟ್ವೀಟ್

ಅದಾನಿ ಗ್ರೂಪ್​ನಲ್ಲಿ ಎಲ್​ಐಸಿ ಪಾಲು ಎಷ್ಟು ಹೆಚ್ಚಳವಾಗಿದೆ?

ಅದಾನಿ ಎಂಟರ್​ಪ್ರೈಸಸ್ ಕಂಪನಿಯಲ್ಲಿ ಎಲ್​ಐಸಿ ಹೊಂದಿರುವ ಷೇರು ಶೇ. 4.26 ಇದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ. 4.23 ಮಾತ್ರ ಇತ್ತು.

ಇನ್ನು, ಅದಾನಿ ಗ್ರೀನ್ ಎನರ್ಜಿಯಲ್ಲಿ ಎಲ್​ಐಸಿ ಹೊಂದಿದ್ದ ಷೇರುಪಾಲು ಶೇ. 1.28ರಿಂದ 1.36ಕ್ಕೆ ಹೆಚ್ಚಾಗಿದೆ. ಈ ಕಂಪನಿಯ 2.14 ಕೋಟಿ ಷೇರುಗಳನ್ನು ಖರೀದಿಸಿ ಎಲ್​ಐಸಿ ಹೂಡಿಕೆ ಮಾಡಿದೆ.

ಅದಾನಿ ಟೋಟಲ್ ಗ್ಯಾಸ್ ಕಂಪನಿಯಲ್ಲಿ ಎಲ್​ಐಸಿ ಪಾಲು ಶೇ. 5.96ರಿಂದ ಶೇ. 6.02ಕ್ಕೆ ಹೆಚ್ಚಾಗಿದೆ. ಹಾಗೆಯೇ, ಅದಾನಿ ಟ್ರಾನ್ಸ್​ಮಿಶನ್ ಕಂಪನಿಯಲ್ಲಿ ಎಲ್​ಐಸಿ ಪಾಲು ಶೇ. 3.65ರಿಂದ ಶೇ. 3.68ಕ್ಕೆ ಏರಿದೆ.

ಎರಡು ಅದಾನಿ ಕಂಪನಿಗಳಲ್ಲಿ ಎಲ್​ಐಸಿ ಹೂಡಿಕೆ ಎಷ್ಟು ಕಡಿಮೆ ಆಗಿದೆ?

ಅದಾನಿ ಗ್ರೂಪ್​ಗೆ ಸೇರಿದ ಅಂಬುಜಾ ಸಿಮೆಂಟ್ಸ್ ಕಂಪನಿಯಲ್ಲಿ ಎಲ್​ಐಸಿ ಹೊಂದಿರುವ ಷೇರುಗಳ ಪ್ರಮಾಣ ಶೇ. 6.33ರಿಂದ ಶೇ. 6.30ಗೆ ಇಳಿದಿದೆ. ಅದಾನಿ ಪೋರ್ಟ್ಸ್ ಅಂಡ್ ಎಸ್​ಇಝಡ್ ಕಂಪನಿಯಲ್ಲಿ 2 ಮೂಲಾಂಕಗಳಷ್ಟು ಪ್ರಮಾಣದಲ್ಲಿ ಷೇರುಗಳನ್ನು ಎಲ್​ಐಸಿ ಮಾರಿದೆ. ಆದರೂ ಈ ಕಂಪನಿಯಲ್ಲಿ ಎಲ್​ಐಸಿ ಪಾಲು ಈಗಲೂ ಶೇ. 9.12ರಷ್ಟು ಇದೆ.

ಇದನ್ನೂ ಓದಿIMF: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆಯಾದರೂ ವಿಶ್ವದಲ್ಲೇ ಬೆಸ್ಟ್; ಚೀನಾಗಿಂತಲೂ ಬೆಟರ್; ಐಎಂಎಫ್ ಅಂದಾಜು

ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿರುವ ಎಲ್​ಐಸಿ ಬಳಿ ಇರುವುದು ಬಹುತೇಕ ಇನ್ಷೂರೆನ್ಸ್ ಪಾಲಿಸಿದಾರರ ಹಣವಾಗಿದೆ. ಈ ಹಣವನ್ನು ಎಲ್​ಐಸಿ ದೇಶದ ಷೇರು ಮಾರುಕಟ್ಟೆಗಳಲ್ಲಿ ವಿವಿಧ ಕಂಪನಿಗಳ ಷೇರುಗಳು, ಮ್ಯೂಚುವಲ್ ಫಂಡ್​ಗಳ ಮೇಲೆ ಹೂಡಿಕೆ ಮಾಡುತ್ತದೆ. ಅದರಿಂದ ಬರುವ ಲಾಭ ಎಲ್​ಐಸಿಯ ಆದಾಯಕ್ಕೆ ಒಂದು ಮೂಲವೂ ಆಗಿದೆ.

ಎಲ್​ಐಸಿಯ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಷೇರುಮಾರುಕಟ್ಟೆ ಲಿಂಕ್ ಆಗಿರುವ ಸ್ಕೀಮ್ ಬಹಳ ಕಡಿಮೆ. ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿ ಮಾತ್ರವೇ ಎಲ್​ಐಸಿಯ ಮಾರುಕಟ್ಟೆ ಜೋಡಿತ ಯೋಜನೆಯಾಗಿದೆ. ಹೀಗಾಗಿ, ಪಾಲಿಸಿದಾರರು ಎಲ್​ಐಸಿಯ ಹೂಡಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತಿಲ್ಲ ಎನ್ನುತ್ತಾರೆ ತಜ್ಞರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Wed, 12 April 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್