AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲ್ಡೀವ್ಸ್​ನಲ್ಲಿ ರುಪೇ ಸರ್ವಿಸ್; ಭಾರತದ ವಿರುದ್ಧವೇ ತೊಡೆ ತಟ್ಟುತ್ತಲೇ ಗಿಫ್ಟ್​ಗಳನ್ನು ಪಡೆಯುತ್ತಿರುವ ದ್ವೀಪ ದೇಶ

Maldives getting benefits from India: ಮಾಲ್ಡೀವ್ಸ್ ದೇಶ ಶೀಘ್ರದಲ್ಲೇ ಭಾರತದ ರುಪೇ ಸರ್ವಿಸ್ ನೆಟ್ವರ್ಕ್ ಅಳವಡಿಸಲಿದೆ. ಇದರಿಂದ ಮಾಲ್ಡೀವ್ಸ್ ಕರೆನ್ಸಿಗೆ ಪುಷ್ಟಿ ಸಿಗಲಿದೆ. ಆಮದು ಮಾಡಿಕೊಂಡ ವಸ್ತುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಹಣ ಪಾವತಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೊಂಡಿದ್ದಾರೆ. ಈ ಕ್ರಮದಿಂದ ಮಾಲ್ಡೀವ್ಸ್​ಗೆ ಆಮದು ವೆಚ್ಚದಲ್ಲಿ ಗಣನೀಯ ಉಳಿತಾಯವಾಗಲಿದೆ.

ಮಾಲ್ಡೀವ್ಸ್​ನಲ್ಲಿ ರುಪೇ ಸರ್ವಿಸ್; ಭಾರತದ ವಿರುದ್ಧವೇ ತೊಡೆ ತಟ್ಟುತ್ತಲೇ ಗಿಫ್ಟ್​ಗಳನ್ನು ಪಡೆಯುತ್ತಿರುವ ದ್ವೀಪ ದೇಶ
ಮಾಲ್ಡೀವ್ಸ್ ಪ್ರಧಾನಿ ಮೊಹಮ್ಮದ್ ಮುಯಿಜು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2024 | 11:54 AM

Share

ನವದೆಹಲಿ, ಮೇ 24: ಭಾರತ ವಿರೋಧಿ ಧೋರಣೆಯಿಂದ ಗುರುತಾಗಿರುವ ಈಗಿನ ಮಾಲ್ಡೀವ್ಸ್ ಸರ್ಕಾರ ಭಾರತದಿಂದ ವಿನಾಯಿತಿಗಳನ್ನು ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತಾ ಬಂದಿದೆ. ಇತ್ತೀಚೆಗೆ ಭಾರತ ಮಾಲ್ಡೀವ್ಸ್ ದೇಶಕ್ಕೆ ಹೆಚ್ಚು ಆಹಾರ ವಸ್ತುಗಳನ್ನು ರಫ್ತು ಮಾಡಿದೆ. ಶೀಘ್ರದಲ್ಲೇ ಮಾಲ್ಡೀವ್ಸ್​ನಲ್ಲಿ ಭಾರತದ ರುಪೇ ಸರ್ವಿಸ್ (RuPay Service) ಚಾಲನೆಗೊಳ್ಳಲಿದೆ. ಭಾರತದಿಂದ ಆಮದು ಮಾಡಿಕೊಳ್ಳಲಾಗುವ ವಸ್ತುವಿಗೆ ಮಾಲ್ಡೀವ್ಸ್ ದೇಶ ತನ್ನಸ್ಥಳೀಯ ರುಫಿಯಾದಲ್ಲೇ (Maldivian Rufiyaa) ಹಣ ಪಾವತಿಸಲು ಭಾರತ ಅವಕಾಶ ಕೊಡುತ್ತಿದೆ. ಆರ್ಥಿಕವಾಗಿ ನಲುಗುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ.

ಅತ್ತ ಮಾಲ್ಡೀವ್ಸ್ ದೇಶ ಭಾರತದಿಂದ ಲಾಭ ಮಾಡಿಕೊಳ್ಳುತ್ತಲೇ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸುತ್ತಿದೆ. ಮಾಲ್ಡೀವ್ಸ್​ನಲ್ಲಿದ್ದ ಬೆರಳೆಣಿಕೆಯ ಭಾರತೀಯ ಸೈನಿಕರನ್ನು ವಾಪಸ್ ಕಳುಹಿಸಿದೆ. ಚೀನಾ ಜೊತೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಇತ್ತೀಚೆಗೆ ಟರ್ಕಿ ದೇಶದಿಂದ ಬಯ್ರಾಕ್ತರ್ ಟಿಬಿ2 ಡ್ರೋನ್​ಗಳನ್ನು (Bayraktar TB2 drone) ಖರೀದಿಸಿದೆ. ಭಾರತದ ಡಾರ್ನಿಯರ್ ಹೆಲಿಕಾಪ್ಟರ್​ಗೆ ಬದಲಾಗಿ ಈ ಡ್ರೋನ್​ಗಳನ್ನು ರಾಷ್ಟ್ರೀಯ ಭದ್ರತೆ ಮತ್ತು ಸಾಗರ ಕಾವಲು ಕಾರ್ಯಕ್ಕೆ ಬಳಸಲಿದೆ.

ಇದನ್ನೂ ಓದಿ: ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ

ಭಾರತ ವಿರೋಧಿ ಶಕ್ತಿಗಳೆಂದು ಗುರುತಿಸಲಾಗಿರುವ ಚೀನಾ ಮತ್ತು ಟರ್ಕಿ ದೇಶಗಳಿಗೆ ಮಾಲ್ಡೀವ್ಸ್ ನೆಲೆ ಕಲ್ಪಿಸುತ್ತಿದೆಯಾ ಎನಿಸಬಹುದು. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ ನಿಧಾನವಾಗಿ ನೆಲೆಗಳನ್ನು ಆಕ್ರಮಿಸಿಕೊಳ್ಳುವ ಹಾದಿಯಲ್ಲಿದೆ. ಮಾಲ್ಡೀವ್ಸ್ ಕೂಡ ಚೀನಾ ತೆಕ್ಕೆಗೆ ಜಾರುತ್ತಿದೆ. ಇದು ಭಾರತದ ಭದ್ರತೆಗೆ ಅಪಾಯ ತಂದಂತೆ. ಟರ್ಕಿ ದೇಶದ ಡ್ರೋನ್​ಗಳು ಭಾರತದ ಭದ್ರತಾ ವ್ಯವಸ್ಥೆಯನ್ನು ಕದ್ದು ನೋಡಲು ಬಳಕೆ ಆಗಬಹುದು.

ಆಮದುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಹಣ ಪಾವತಿ

ಆಮದು ಮಾಡಿಕೊಂಡ ವಸ್ತುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಪಾವತಿಸಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಕೊಂಡಿವೆ ಎಂದು ಮಾಲ್ಡೀವ್ಸ್​ನ ಆರ್ಥಿಕ ಅಭಿವೃದ್ಧಿ ಸಚಿವ ಮೊಹಮ್ಮದ್ ಸಯೀದ್ ಹೇಳಿದ್ದಾರೆ. ಈ ಎರಡು ದೇಶಗಳಿಂದ ಮಾಲ್ಡೀವ್ಸ್ ಒಂದ ವರ್ಷದಲ್ಲಿ 1.5 ಮಿಲಿಯನ್ ಡಾಲರ್​ನಷ್ಟು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಭಾರತ ಮತ್ತು ಚೀನಾ ಪಾಲು ಸಮಸಮ ಇದೆ. ಈಗ ಸ್ಥಳೀಯ ಕರೆನ್ಸಿಯಲ್ಲಿ ಹಣ ಪಾವತಿಸಿದರೆ ಮಾಲ್ಡೀವ್ಸ್ ದೇಶಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ.

ಇದನ್ನೂ ಓದಿ: ಸೆನ್ಸೆಕ್ಸ್​ನಲ್ಲಿ ವಿಪ್ರೋ ಸ್ಥಾನಕ್ಕೆ ಏರಲಿರುವ ಅದಾನಿ ಎಂಟರ್ಪ್ರೈಸಸ್; ಏನಿದರ ಪರಿಣಾಮ?

ರುಪೇ ಸರ್ವಿಸ್​ನಿಂದ ಮಾಲ್ಡೀವ್ಸ್​ಗೆ ಏನು ಪ್ರಯೋಜನ?

ಭಾರತದ ರುಪೇ ನೆಟ್ವರ್ಕ್ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ. ಕೆಲ ದೇಶಗಳು ಈಗಾಗಲೇ ಇದನ್ನು ಬಳಸುತ್ತಿವೆ. ಮಾಲ್ಡೀವ್ಸ್ ದೇಶವು ರುಪೇ ಅಳವಡಿದರೆ ಅದರ ಕರೆನ್ಸಿ ಮೌಲ್ಯಕ್ಕೆ ಪುಷ್ಟಿ ಸಿಗುತ್ತದೆ. ಹಾಗೆಯೇ, ಭಾರತದಿಂದ ಮಾಲ್ಡೀವ್ಸ್​ಗೆ ಹೋಗುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೂ ಸಹಾಯಕವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?