AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾತನ 30 ವರ್ಷ ಹಿಂದಿನ ಎಸ್​ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ… ಈಗೆಷ್ಟಿದೆ ನೋಡಿ ಅದರ ಮೌಲ್ಯ

SBI shares of Rs 500 In 1994: ಡಾ. ತನ್ಮಯ್ ಮೋತಿವಾಲ ಎಂಬ ವ್ಯಕ್ತಿಯೊಬ್ಬರು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ತಮ್ಮ ತಾತನ 30 ವರ್ಷದ ಹಿಂದಿನ ಎಸ್​ಬಿಐ ಷೇರು ಸರ್ಟಿಫಿಕೇಟ್ ಸಿಕ್ಕಿದ ವಿಚಾರವನ್ನು ಹಂಚಿಕೊಂಡಿದ್ದಾರೆ. ಎಸ್​ಬಿಐ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಒಂದು ವರ್ಷ ನಂತರ ತನ್ಮಯ್ ಅವರ ತಾತ 500 ರೂ ಮೌಲ್ಯದ ಎಸ್​ಬಿಐ ಷೇರುಗಳನ್ನು ಖರೀದಿಸಿದ್ದರು. ಅದರ ಷೇರು ಸರ್ಟಿಫಿಕೇಟ್ ತೆಗೆದುಕೊಂಡ ಬಳಿಕ ಮರೆತೇ ಹೋಗಿದ್ದರು. ಈಗ ಮೊಮ್ಮಗನಿಗೆ ಅದು ಸಿಕ್ಕಿದೆ. ಈ 500 ರೂ ಷೇರುಗಳ ಮೌಲ್ಯ ಈಗ 3.76 ಲಕ್ಷ ರೂ ಆಗಿದೆ ಎಂದು ತನ್ಮಯ್ ಹೇಳಿಕೊಂಡಿದ್ದಾರೆ.

ತಾತನ 30 ವರ್ಷ ಹಿಂದಿನ ಎಸ್​ಬಿಐ ಷೇರು ಸರ್ಟಿಫಿಕೇಟ್ ಅಚಾನಕ್ಕಾಗಿ ಸಿಕ್ಕಿದಾಗ... ಈಗೆಷ್ಟಿದೆ ನೋಡಿ ಅದರ ಮೌಲ್ಯ
ಎಸ್​ಬಿಐ ಷೇರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 02, 2024 | 2:44 PM

ನವದೆಹಲಿ, ಏಪ್ರಿಲ್ 2: ಹಿಂದೆ ಕ್ರಿಪ್ಟೋಕರೆನ್ಸಿ ಇನ್ನೂ ಹೊಸದಾಗಿರುವಾಗ ಕೆಲವರು ಬಿಟ್​ಕಾಯಿನ್​ಗಳನ್ನು ಖರೀದಿಸಿ ಹಾಗೇ ಬಿಟ್ಟಿದ್ದರು. ಆಗ ಬಹಳ ಕಡಿಮೆ ಬೆಲೆ. ಆದರೆ, ಆರೇಳು ವರ್ಷಗಳ ಹಿಂದೆ ಕ್ರಿಪ್ಟೋ ಜಗತ್ತು ತೆರೆದುಕೊಂಡಿತು. ಆರಂಭದಲ್ಲಿ ಬಿಟ್​ಕಾಯಿನ್ ಪಡೆದಿದ್ದವರು ದಿಢೀರ್ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗಿ ಹೋದರು. ಬಹಳಷ್ಟು ಷೇರು ಸಂಪತ್ತು ಕೂಡ ಹೀಗೆ ಹೆಚ್ಚುವುದುಂಟು. ಚಂಡೀಗಡದ ವೈದ್ಯರೊಬ್ಬರು ತಮ್ಮ ಅಜ್ಜ ಮತ್ತು ಅಜ್ಜಿಗೆ (grandparents) ಸೇರಿದ್ದ 500 ರೂ ಮೌಲ್ಯದ ಎಸ್​ಬಿಐ ಷೇರುಗಳ ಸರ್ಟಿಫಿಕೇಟ್ (share certificate) ಸಿಕ್ಕಿದ್ದು, ಮತ್ತು ಅದರ ಈಗಿನ ಮೌಲ್ಯದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೀಡಿಯಾಟ್ರಿಕ್ ಸರ್ಜನ್ ಆಗಿರುವ ಡಾ. ತನ್ಮಯ್ ಮೋತಿವಾಲ (Pediatric Surgeon Dr. Tanmay Motiwala) ಅವರ ಅಜ್ಜ ಮತ್ತು ಅಜ್ಜಿ 1994ರಲ್ಲಿ 500 ರೂ ಮೌಲ್ಯದ ಎಸ್​ಬಿಐ ಷೇರುಗಳನ್ನು ಖರೀದಿಸಿದ್ದರು. ಅದರ ಸರ್ಟಿಫಿಕೇಟ್ ಪಡೆದು ಇಟ್ಟುವರು ನಂತರ ಮರೆತೇ ಹೋಗಿದ್ದರು. ತನ್ಮಯ್ ತನ್ನ ಮನೆಯಲ್ಲಿದ್ದ ಹಳೆಯ ವಸ್ತು ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡುವಾಗ ಈ ಷೇರ್ ಸರ್ಟಿಫಿಕೇಟ್​ ಕಂಡಿದ್ದಾರೆ.

ಈ ಷೇರುಗಳ ಈಗಿನ ಮೌಲ್ಯ ಎಷ್ಟಿರಬಹುದು ಎಂದು ಎಕ್ಸ್ ಪೋಸ್ಟ್​ನಲ್ಲಿ ಒಬ್ಬರು ಕೇಳಿದ್ದಾರೆ. ಡಿವಿಡೆಂಡ್ ಹೊರತುಪಡಿಸಿ ಈಗ ಇದರ ಮೌಲ್ಯ 3.76 ಲಕ್ಷ ರೂ ಆಗುತ್ತದೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಆದರೆ, ಇದು ಹೆಚ್ಚು ಮೊತ್ತವಲ್ಲವಾದರೂ 30 ವರ್ಷದಲ್ಲಿ 750 ಪಟ್ಟು ಬೆಳೆದಿರುವುದು ದೊಡ್ಡ ಸಂಗತಿಯೇ ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: ಷೇರು ಮಾರುಕಟ್ಟೆ ಹೊಸ ದಾಖಲೆ ಮಟ್ಟಕ್ಕೆ; ಯಾಕಿಷ್ಟು ಜೋರಾಗಿದೆ ಈ ಬುಲ್​ರನ್? ಮೂರ್ಖರ ದಿನಕ್ಕೆ ಮಾತ್ರ ಸೀಮಿತವಾಗುತ್ತಾ ಈ ಓಟ?

ಈ ಷೇರು ಸರ್ಟಿಫಿಕೇಟ್ ಭೌತಿಕ ರೂಪದಲ್ಲಿದೆ. ಈಗ ಷೇರುಗಳನ್ನು ಡೀಮ್ಯಾಟ್ ಅಕೌಂಟ್​ನಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಇಡಲಾಗುತ್ತದೆ. ಡಾ. ತನ್ಮಯ್ ಅವರ ಅಜ್ಜನ ಎಸ್​ಬಿಐ ಷೇರು ಭೌತಿಕ ರೂಪದಲ್ಲಿದ್ದು, ಅದನ್ನು ಡೀಮ್ಯಾಟ್ ಅಕೌಂಟ್​ಗೆ ವರ್ಗಾಯಿಸಿದ್ದಾರೆ. ಈ ಪ್ರಕ್ರಿಯೆ ಎಷ್ಟು ಕ್ಲಿಷ್ಟಕರ ಎಂಬುದನ್ನೂ ಅವರು ವಿವರಿಸಿದ್ದಾರೆ.

ಅವರು ಮಾಡಿದ ಟ್ವೀಟ್ ಇದು

ಲಕ್ಷಕ್ಕೆ 50 ಲಕ್ಷ

ತನ್ಮಯ್ ಅವರ ಅಜ್ಜ ಎಸ್​ಬಿಐನ ಷೇರು ಖರೀದಿಸಿದ್ದು 1994ರಲ್ಲಿ. ಸ್ಟೇಟ್ ಬ್ಯಾಂಕ್ ಇಂಡಿಯಾ ಷೇರುಮಾರುಕಟ್ಟೆಗೆ ಪ್ರವೇಶ ಮಾಡಿದ್ದು 1993ರಲ್ಲಿ. 1995ರಲ್ಲಿ ಇದರ ಬೆಲೆ 14.39 ರೂನಿಂದ 21.94 ರೂವರೆಗೆ ಇತ್ತು. ಇವತ್ತು ಅದರ ಷೇರುಬೆಲೆ 763 ರೂ ಆಗಿದೆ. ಒಂದು ವೇಳೆ ನೀವು 1995ರಲ್ಲಿ ಎಸ್​ಬಿಐ ಷೇರುಗಳ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಷೇರುಸಂಪತ್ತು 53 ಲಕ್ಷ ರೂ ಆಗಿರುತ್ತಿತ್ತು. ವರ್ಷಕ್ಕೆ ಶೇ. 12ರಿಂದ 14ರ ದರದಲ್ಲಿ ಎಸ್​ಬಿಐ ಷೇರುಬೆಲೆ ಹೆಚ್ಚುತ್ತಾ ಬಂದಿದೆ. ಎಸ್​ಬಿಐ ಷೇರು ಮೂರು ದಶಕದಲ್ಲಿ ಅಪ್ಪಟ ಮಲ್ಟಿಬ್ಯಾಗರ್ ಎನಿಸಿದೆ.

ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

2020ರ ಸೆಪ್ಟಂಬರ್​ನಲ್ಲಿ ಇದರ ಷೇರುಬೆಲೆ ಕೇವಲ 182 ರೂ ಇತ್ತು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಮೂರು ವರ್ಷದಲ್ಲಿ 4.19 ಲಕ್ಷ ರೂ ಲಾಭ ಮಾಡುತ್ತಿದ್ದರು. ಅಂದರೆ ಕೇವಲ ಮೂರು ವರ್ಷದಲ್ಲಿ ನಾವು ಹಾಕಿದ ಬಂಡವಾಳ ನಾಲ್ಕು ಪಟ್ಟು ಹೆಚ್ಚಾಗಿರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ