AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್ 3ಕ್ಕೆ ಆರ್​ಬಿಐನ ಎಂಪಿಸಿ ಸಭೆ ಶುರು; ಬಡ್ಡಿದರ ಈ ಬಾರಿಯೂ ಹೆಚ್ಚಳ ಇಲ್ಲವಾ? ಸಭೆಯಿಂದ ನಿರೀಕ್ಷೆಗಳಿವು

RBI MPC Meet from Arpil 3rd: ಆರ್​ಬಿಐನ ಎಂಪಿಸಿ ಸಭೆ ಏಪ್ರಿಲ್ 3ರಂದು ಆರಂಭವಾಗಲಿದೆ. ಏಪ್ರಿಲ್ 5ರಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಭೆಯ ನಿರ್ಧಾರಗಳನ್ನು ತಿಳಿಸಲಿದ್ದಾರೆ. ಗವರ್ನರ್ ದಾಸ್ ಅವರೂ ಸೇರಿ ಆರು ಮಂದಿ ಸದಸ್ಯರಿರುವ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಮಹತ್ವದ ರೆಪೋ ರೇಟ್ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಏಪ್ರಿಲ್ 3ಕ್ಕೆ ಆರ್​ಬಿಐನ ಎಂಪಿಸಿ ಸಭೆ ಶುರು; ಬಡ್ಡಿದರ ಈ ಬಾರಿಯೂ ಹೆಚ್ಚಳ ಇಲ್ಲವಾ? ಸಭೆಯಿಂದ ನಿರೀಕ್ಷೆಗಳಿವು
ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 01, 2024 | 6:26 PM

Share

ನವದೆಹಲಿ, ಏಪ್ರಿಲ್ 1: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ (RBI MPC) ಈ ಆರ್ಥಿಕ ವರ್ಷದ ಮೊದಲ ಸಭೆ ಏಪ್ರಿಲ್ 3ರಂದು ಆರಂಭಿಸಲಿದೆ. ಆರ್ಥಿಕತೆ ಸಕಾರಾತ್ಮಕವಾಗಿದ್ದರೂ ಹಣದುಬ್ಬರ ತೀರಾ ಆಶಾದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಎಲ್ಲರ ಕುತೂಹಲ ಇದೆ. ಏಪ್ರಿಲ್ 3ರಿಂದ 5ರವರೆಗೆ ನಡೆಯಲಿರವ ಎಂಪಿಸಿ ಸಭೆಯಲ್ಲಿ ಆರ್​ಬಿಐನ ಪ್ರಮುಖ ಪಾಲಿಸಿಗಳನ್ನು ಮುಂದುವರಿಸಲು ನಿರ್ಧರಿಸುವ ಸಾಧ್ಯತೆ ಇದೆ. ಸಾಲ ಮತ್ತು ಠೇವಣಿಯ ಬಡ್ಡಿದರ (Repo and Reverse Repo Rates), ಹಣದ ಹರಿವು ಸಂಕುಚಿತಗೊಳಿಸುವುದು (Withdrawal of Accommodation) ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಎಂಪಿಸಿ ಸಭೆ ನಿರ್ಧರಿಸಬಹುದು ಎನ್ನಲಾಗಿದೆ.

ಹಣದುಬ್ಬರ ಆರ್​ಬಿಐನ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ. ಅದು ನಿಗದಿ ಮಾಡಿರುವ ತಾಳಿಕೆ ಮಿತಿಯಾದ ಶೇ. 6ರ ಒಳಗೆ ಇದೆಯಾದರೂ ಹಣದುಬ್ಬರವನ್ನು ಶೇ. 4ರ ಸಮೀಪಕ್ಕೆ ತರುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ. ಹಣದುಬ್ಬರ ನಿಯಂತ್ರಣಕ್ಕೆ ಆರ್​​ಬಿಐ ಬಳಿ ಇರುವ ಪ್ರಮುಖ ಅಸ್ತ್ರಗಳಲ್ಲಿ ರೆಪೋ ದರ ಏರಿಕೆ ಮಾಡುವುದು ಮತ್ತು ಹಣದ ಹರಿವು ಕಡಿಮೆ ಮಾಡುವುದು ಪ್ರಮುಖವಾದುವು.

ಇದನ್ನೂ ಓದಿ: ವಂಚಕ ಲೋನ್ ಆ್ಯಪ್​ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ

ರೆಪೋ ದರ ಏರಿಸಿದರೆ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ದರ ಇಳಿಸಿದರೆ ಹಣದುಬ್ಬರ ಹೆಚ್ಚುತ್ತದೆ. ಹೀಗಾಗಿ, ಆರ್​ಬಿಐ ವಿತ್​ಡ್ರಾಯಲ್ ಆಫ್ ಅಕಾಮೊಡೇಶನ್ ನೀತಿಯನ್ನು ಮುಂದುವರಿಸಿಕೊಂಡು ಹೋಗಬಹುದು. ವೇರಿಯಬಲ್ ರೇಟ್ ರಿವರ್ಸ್ ರೆಪೋ (ವಿಆರ್​ಆರ್​ಆರ್) ಹರಾಜುಗಳನ್ನು ಬಳಸಿ ಆರ್​ಬಿಐ ಹಣದ ಸರಬರಾಜನ್ನು ಕಡಿಮೆಗೊಳಿಸುತ್ತದೆ. ಈ ನೀತಿಯಲ್ಲಿ ಬ್ಯಾಂಕುಗಳಿಂದ ಆರ್​ಬಿಐ ಕಿರು ಅವಧಿ ಸಾಲ ಪಡೆಯುತ್ತದೆ. ಬ್ಯಾಂಕುಗಳ ಬಳಿ ಸಾರ್ವಜನಿಕರಿಗೆ ನೀಡಲು ಹೆಚ್ಚು ಫಂಡ್ ಇಲ್ಲದಂತೆ ಮಾಡುವುದು ಆರ್​ಬಿಐ ಗುರಿ. ಇದು ತಾತ್ಕಾಲಿಕ ಮಾತ್ರ. ಹಣದುಬ್ಬರ ನಿಯಂತ್ರಣಕ್ಕೆ ಬಂದ ಬಳಿಕ ಈ ನೀತಿಯನ್ನು ಸಡಿಲಗೊಳಿಸಲಾಗುತ್ತದೆ.

ಸದ್ಯ ಎಂಪಿಸಿ ಸಭೆಯಲ್ಲಿ ರೆಪೋ ದರ ಮತ್ತು ವಿತ್​ಡ್ರಾಯಲ್ ಆಫ್ ಅಕಾಮಡೇಶನ್ ಈ ಎರಡು ನೀತಿಯನ್ನು ಮುಂದುವರಿಸಬಹುದು. ಇವಲ್ಲದೇ ಎಂಪಿಸಿ ಸಭೆಯಲ್ಲಿ ಆರ್ಥಿಕತೆ ಬಗ್ಗೆ ಆರ್​ಬಿಐನ ನಿರೀಕ್ಷೆ, ಅಂದಾಜು, ಒಟ್ಟಾರೆ ನೋಟ ಇವೆಲ್ಲವೂ ಚರ್ಚೆಗೆ ಬರಲಿವೆ. 2023-24ರ ಹಣಕಾಸು ವರ್ಷದ ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಜಿಡಿಪಿ ನಿರೀಕ್ಷೆಮೀರಿ ಉತ್ತಮವಾಗಿದೆ. ಕೊನೆಯ ಕ್ವಾರ್ಟರ್​ನ ಅಂಕಿ ಅಂಶ ಬರಬೇಕಿದೆ. ಈ ಹಣಕಾಸು ವರ್ಷ ಮತ್ತು ಮುಂಬರುವ ಹಣಕಾಸು ವರ್ಷಕ್ಕೆ ಜಿಡಿಪಿ ಎಷ್ಟು ಬೆಳೆಯಬಹುದು ಎಂದು ಆರ್​ಬಿಐ ಅಂದಾಜು ಮಾಡಬಹುದು.

ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ

ಏಪ್ರಿಲ್ 3, ಬುಧವಾರ ಆರಂಭವಾಗಿ ಎಪ್ರಿಲ್ 5, ಶುಕ್ರವಾರದವರೆಗೂ ಎಂಪಿಸಿ ಸಭೆ ನಡೆಯಲಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಬಹಿರಂಗಪಡಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?