AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIDBI report: ವೆಚ್ಚ ಹೆಚ್ಚಳದಲ್ಲೂ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಭಾರತದ ಎಂಎಸ್​ಎಂಇಗಳು: ಸಿಡ್ಬಿ ವರದಿ

SIDBI MSME quarterly survey report: ಮೂರನೇ ಒಂದು ಭಾಗದಷ್ಟು ಎಂಎಸ್​​ಎಂಇಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹೊರಟಿವೆ. ಶೇ. 37ರಷ್ಟು ಎಂಎಸ್​​ಎಂಇಗಳು ಮತ್ತಷ್ಟು ಹೂಡಿಕೆ ಮಾಡಲು ಹೊರಟಿವೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಆದ ಸಿಡ್ಬಿಯ ಎಂಎಸ್​​ಎಂಇ ಔಟ್​​ಲುಕ್ ಸಮೀಕ್ಷೆಯ ಎರಡನೆ ವರದಿಯಲ್ಲಿ ಹೇಳಲಾಗಿದೆ.

SIDBI report: ವೆಚ್ಚ ಹೆಚ್ಚಳದಲ್ಲೂ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಭಾರತದ ಎಂಎಸ್​ಎಂಇಗಳು: ಸಿಡ್ಬಿ ವರದಿ
ಎಂಎಸ್​​ಎಂಇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 08, 2025 | 5:05 PM

Share

ಮುಂಬೈ, ಏಪ್ರಿಲ್ 8: ಭಾರತದಲ್ಲಿರುವ ಶೇ. 37ರಷ್ಟು ಎಂಎಸ್​​ಎಂಇಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಯೋಜಿಸುತ್ತಿವೆ ಎಂದು ಸಿಡ್ಬಿ ಎಂಎಸ್​​ಎಂಇ ಔಟ್​​ಲುಕ್ ಸರ್ವೆಯೊಂದು (SIDBI MSME Outlook Survey) ಹೇಳಿದೆ. ಹಾಗೆಯೇ, ಇಷ್ಟೇ ಪ್ರಮಾಣದ ಎಂಎಸ್​​ಎಂಇಗಳು ಮುಂದಿನ ವರ್ಷ ಹೆಚ್ಚುವರಿ ಹೂಡಿಕೆಗಳನ್ನು ಮಾಡಲು ಹೊರಟಿವೆ ಎಂದು ಎರಡನೇ ಆವೃತ್ತಿಯ ಈ ಸಮೀಕ್ಷೆಯಲ್ಲಿ ಹೇಳಲಾಗಿದೆ. ‘ಬಂಡವಾಳ ವೆಚ್ಚದ ಉದ್ದೇಶ ಕಾಣುತ್ತಿದೆ. ಶೇ. 37ರಷ್ಟು ಎಂಎಸ್​​ಎಂಇಗಳು ಪ್ರಸಕ್ತ ಅವದಿಯಲ್ಲಿ ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಾಗಿ ಹೇಳಿವೆ. ಇಷ್ಟೇ ಪ್ರಮಾಣದ ಸಂಸ್ಥೆಗಳು ಮುಂಬರುವ ವರ್ಷದಲ್ಲಿ ಹೆಚ್ಚುವರಿ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿವೆ,’ ಎಂದು ಸಿಡ್ಬಿ ವರದಿ ತಿಳಿಸಿದೆ.

ತಯಾರಿಕೆ ಮತ್ತು ಸೇವಾ ಸೆಕ್ಟರ್​​ನಲ್ಲಿರುವ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಪೈಕಿ ಶೇ. 40ರಷ್ಟು ಸಂಸ್ಥೆಗಳು ಸೌರಫಲಕ, ಎಲೆಕ್ಟ್ರಿಕ್ ವಾಹನ ಇತ್ಯಾದಿ ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸುವತ್ತ ಗಮನ ಹರಿಸುತ್ತಿವೆಯಂತೆ.

ಇದನ್ನೂ ಓದಿ: ಸೌರಶಕ್ತಿ ಮತ್ತು ವಾಯುಶಕ್ತಿ ಉತ್ಪಾದನೆಯಲ್ಲಿ ಜರ್ಮನಿಯನ್ನು ಹಿಂದಿಕ್ಕಿದ ಭಾರತ; ಈಗ ನಾವೇ ವಿಶ್ವದ ನಂ. 3

ಇದನ್ನೂ ಓದಿ
Image
ರಿನಿವಬಲ್ ಎನರ್ಜಿಯಲ್ಲಿ ಜರ್ಮನಿ ಮೀರಿಸಿದ ಭಾರತ
Image
9ನೇ ಕ್ಲಾಸ್ ಓದಿದ ರುಕ್ಮಿಣಿ ಸಿಇಒ ಆದ ಕಥೆ
Image
ಟೆಸ್ಲಾ ಬಂದರೆ ಇವಿ ಮಾರುಕಟ್ಟೆ ಹಿಗ್ಗುತ್ತೆ: ಬಿಎಂಡಬ್ಲ್ಯು
Image
ಸ್ಟಾರ್ಟಪ್​​ಗಳ ನೆರವಿಗಾಗಿ ಬೃಹತ್ ಫಂಡ್ ಘೋಷಿಸಿದ ಸರ್ಕಾರ

‘ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಎಂಎಸ್​​ಎಂಇಗಳು ಗಮನಾರ್ಹವೆನಿಸುವ ಪ್ರತಿರೋಧ ಶಕ್ತಿ ತೋರಿವೆ, ಅಭಿವೃದ್ಧಿಪರ ಧೋರಣೆ ಹೊಂದಿವೆ. ಬಂಡವಾಳ ವೆಚ್ಚ, ಉದ್ಯೋಗ ಹೆಚ್ಚಿಸುವ, ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಲು ಅವುಗಳು ಯೋಜಿಸಿರುವುದು ದೇಶದ ಆರ್ಥಿಕತೆಗೆ ಶುಭ ಸೂಚನೆಯಾಗಿದೆ’ ಎಂದು ಸಿಡ್​ಬಿ ಛೇರ್ಮನ್ ಮತ್ತು ಎಂಡಿ ಮನೋಜ್ ಮಿಟ್ಟಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಈ ಸಿಡ್ಬಿಯ ತ್ರೈಮಾಸಿಕ ಸಮೀಕ್ಷಾ ವರದಿಯ ಪ್ರಕಾರ ಎಂಎಸ್​​ಎಂಇಗಳು ಬ್ಯುಸಿನೆಸ್ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿವೆ. ಬೇಡಿಕೆ ಹೆಚ್ಚಳ, ಉತ್ಪಾದನೆ ಹೆಚ್ಚಳ, ಹೆಚ್ಚಿನ ಮಾರಾಟ ದರದಿಂದಾಗಿ ಬ್ಯುಸಿನೆಸ್ ಸಾಕಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ಎಂಎಸ್​​ಎಂಇಗಳಿವೆ. ನಾಲ್ಕನೇ ಕ್ವಾರ್ಟರ್​​​ನಲ್ಲಿ (2025ರ ಜನವರಿಯಿಂದ ಮಾರ್ಚ್) ಹೆಚ್ಚಿನ ಎಂಎಸ್​​ಎಂಇಗಳು ಲಾಭ ಹೆಚ್ಚಳದ ನಿರೀಕ್ಷೆಯಲ್ಲಿವೆ. ಉತ್ಪಾದನೆಯ ವೆಚ್ಚ ಮತ್ತು ಸಂಬಳ ವೆಚ್ಚ ಹೆಚ್ಚಾಗಿದ್ದರೂ ಕೂಡ ಲಾಭ ಹೆಚ್ಚಳದ ನಿರೀಕ್ಷೆ ಇರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಆರ್​​ಬಿಐನಿಂದ 25 ಪಾಯಿಂಟ್ ಬಡ್ಡಿದರ ಇಳಿಕೆ ಆಗುತ್ತಾ? ಎಂಪಿಸಿ ಸಭೆ ನಿರ್ಧಾರದತ್ತ ಎಲ್ಲರ ಚಿತ್ತ

ಈ ಸಮೀಕ್ಷೆಯ ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ದೇಶದ ಹೆಚ್ಚಿನ ಎಂಎಸ್​​ಎಂಇಗಳು ಉದ್ಯೋಗಾವಕಾಶ ಹೆಚ್ಚಿಸಲು ನಿರ್ಧರಿಸಿವೆ. ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​​ನ ಶೇ. 40 ಎಂಎಸ್​ಎಂಇಗಳು, ಹಾಗೂ ಸರ್ವಿಸ್ ಸೆಕ್ಟರ್​​ನ ಶೇ. 37ರಷ್ಟು ಎಂಎಸ್​​ಎಂಇಗಳು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿವೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Tue, 8 April 25

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ