AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile Call Tariff: ಹಲೋ, ಮೊಬೈಲ್ ಫೋನ್ ಕರೆ ದರಗಳ ಏರುವ ಸಾಧ್ಯತೆಯಿದೆ ಗಮನಿಸಿ

ಮೊಬೈಲ್ ಫೋನ್ ಕರೆ ದರಗಳು ಸದ್ಯದಲ್ಲೇ ದುಬಾರಿ ಆಗಲಿವೆ. ಅದರ ಹಿಂದಿನ ಕಾರಣ ಏನು ಎಂಬ ಬಗೆಗಿನ ವಿವರಗಳು ಈ ಲೇಖನದಲ್ಲಿವೆ.

Mobile Call Tariff: ಹಲೋ, ಮೊಬೈಲ್ ಫೋನ್ ಕರೆ ದರಗಳ ಏರುವ ಸಾಧ್ಯತೆಯಿದೆ ಗಮನಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 02, 2022 | 5:55 PM

Share

ಏರುತ್ತಿರುವ ಹಣದುಬ್ಬರದ (Inflation) ಮಧ್ಯೆ ಟೆಲಿಕಾಂ ಸೇವೆಗಳು ಮತ್ತೊಮ್ಮೆ ದುಬಾರಿ ಆಗಬಹುದು. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ದರ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು ಚಂದಾದಾರರ ಬೇಸ್ 37 ಮಿಲಿಯನ್ ಕಡಿಮೆಯಾಗಿದೆ, ಆದರೆ ಅವರ ಸಕ್ರಿಯ ಚಂದಾದಾರರ ಬೇಸ್ ಶೇ 3ರಷ್ಟು ಹೆಚ್ಚಾಗಿದೆ. ಅಂದರೆ, 29 ಮಿಲಿಯನ್. ಅಂತಹ ಪರಿಸ್ಥಿತಿಯಲ್ಲಿ, ಕಂಪೆನಿಗಳು ಸೇವಾ ದರಗಳಲ್ಲಿ ಮತ್ತೊಂದು ಹೆಚ್ಚಳದ ಬಗ್ಗೆ ಯೋಚಿಸಬಹುದು. CRISILನ ವರದಿಯ ಪ್ರಕಾರ, ಆಗಸ್ಟ್ 2021 ಮತ್ತು ಫೆಬ್ರವರಿ 2022ರ ನಡುವೆ ರಿಲಯನ್ಸ್ ಜಿಯೋದ ಒಟ್ಟು ಚಂದಾದಾರರ ನೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಮತ್ತೊಂದೆಡೆ, ಕಂಪೆನಿಯ ಸಕ್ರಿಯ ಚಂದಾದಾರರು ಮಾರ್ಚ್ 2022 ತ್ರೈಮಾಸಿಕದಲ್ಲಿ ಶೇ 94ರಷ್ಟು ಬೆಳೆದಿದ್ದಾರೆ. ಒಂದು ವರ್ಷದ ಹಿಂದೆ, ಕಂಪೆನಿಯ ಸಕ್ರಿಯ ಚಂದಾದಾರರು ಕೇವಲ ಶೇ 78 ಮಾತ್ರ. ಭಾರ್ತಿ ಏರ್‌ಟೆಲ್‌ನ ಸಕ್ರಿಯ ಚಂದಾದಾರರು ಮಾರ್ಚ್ ತ್ರೈಮಾಸಿಕದಲ್ಲಿ 11 ಮಿಲಿಯನ್‌ನಿಂದ 99ರಷ್ಟು ಬೆಳೆದಿದ್ದಾರೆ. ಐಡಿಯಾದ ಸಕ್ರಿಯ ಚಂದಾದಾರರು 30 ಮಿಲಿಯನ್‌ನಿಂದ ಕುಸಿದಿದ್ದಾರೆ.

ಕಂಪೆನಿಗಳ ಗಳಿಕೆಯು 2020-21ರಲ್ಲಿ ಶೇ 20-25ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದ್ದು, ಟೆಲಿಕಾಂ ಕಂಪೆನಿಗಳ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಶೇ 11ರಷ್ಟು ಏರಿಕೆಯಾಗಿ, ರೂ. 149ಕ್ಕೆ ತಲುಪಿದೆ. ಕಾರಣ ಏನೆಂದರೆ, ಡಿಸೆಂಬರ್ 2019ರಲ್ಲಿ, ಈ ಕಂಪೆನಿಗಳು ದರವನ್ನು ಹೆಚ್ಚಿಸಿವೆ. ಆದರೆ ಅವರ ARPU ಬೆಳವಣಿಗೆಯು 2021-22ರಲ್ಲಿ ಶೇ 5ಕ್ಕೆ ಕುಸಿಯಿತು.

ಈ ಕಂಪೆನಿಗಳು 2022-23ರಲ್ಲಿ ಶೇ 15-20 ARPU ಬೆಳವಣಿಗೆಯನ್ನು ಹೊಂದಿರಬೇಕು. ಇದು ಕಳೆದ ಹಣಕಾಸು ವರ್ಷದಲ್ಲಿ ದರ ಹೆಚ್ಚಳದ ಪೂರ್ಣ ವರ್ಷದ ಲಾಭ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ದರ ಹೆಚ್ಚಳದ ಸಾಧ್ಯತೆಯ ಕಾರಣದಿಂದ ಆಗಿರುತ್ತದೆ. ಈ ಕಾರಣದಿಂದಾಗಿ, ದೇಶದ ಪ್ರಮುಖ ಮೂರು ಟೆಲಿಕಾಂ ಕಂಪೆನಿಗಳ ಆದಾಯವು ಶೇ 20-25ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೊಬೈಲ್​ಗಳ ಖಾಸಗಿ ಮಾಹಿತಿಗೆ ಚೀನಾ ಕನ್ನ: ಮಾಲ್​ವೇರ್ ದಾಟಿಸಲು ಲೋನ್ ಆ್ಯಪ್ ಬಳಕೆ, ಸಾಲ ಪಡೆದವರ ಸುಲಿಗೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ