AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive story: ಹೆಸರಾಂತ ಕಂಪೆನಿ ಫೋರ್ಡ್​ಗೆ ರತನ್​ ಟಾಟಾ ಪ್ರತೀಕಾರ ಹೇಳಿದ್ದು ಹೇಗೆ ಗೊತ್ತಾ?

ತಮಗಾದ ಅವಮಾನಕ್ಕೆ ಉದ್ಯಮಿ ರತನ್ ಟಾಟಾ ಅವರು ಫೋರ್ಡ್ ವಿರುದ್ಧ ಹೇಗೆ ಪ್ರತೀಕಾರ ಹೇಳಿದರು ಎಂಬ ಬಗ್ಗೆ ಆಸಕ್ತಿಕರವಾದ ಸಂಗತಿ ಇಲ್ಲಿದೆ.

Positive story: ಹೆಸರಾಂತ ಕಂಪೆನಿ ಫೋರ್ಡ್​ಗೆ ರತನ್​ ಟಾಟಾ ಪ್ರತೀಕಾರ ಹೇಳಿದ್ದು ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 02, 2022 | 5:15 PM

Share

ಒಬ್ಬೊಬ್ಬರ ಸಿಟ್ಟು ಒಂದೊಂದು ಬಗೆಯಲ್ಲಿ ಇರುತ್ತದೆ. ಅದೇ ರೀತಿ ಒಬ್ಬೊಬ್ಬರ ಪ್ರತೀಕಾರ ಒಂದೊಂದು ರೀತಿಯಲ್ಲಿ ಇರುತ್ತದೆ. ಜಗತ್ತಿನ ಅತಿ ದೊಡ್ಡ ಬ್ರ್ಯಾಂಡ್​ಗಳಲ್ಲಿ ಒಂದಾದ “ಫೋರ್ಡ್” ವಿರುದ್ಧದ ಟಾಟಾ “ಪ್ರತೀಕಾರ” ಹೇಗಿತ್ತು ಅನ್ನೋದನ್ನು ವೇದಾಂತ ಬಿರ್ಲಾ ಜೂನ್ 2ರ ಗುರುವಾರದಂದು ನೆನಪಿಸಿಕೊಂಡಿದ್ದಾರೆ. “ಇದು ಟಾಟಾ ಪ್ರತೀಕಾರದ ಕಥೆ, ಅದರಲ್ಲೂ ರತನ್​ ಟಾಟಾ (Ratan Tata) ಜೀ ಅವರು ಫೋರ್ಡ್​ ಮೇಲೆ ನಿಜವಾಗಿಯೂ ಭಾರೀ ಯಶಸ್ಸು ಸಾಧಿಸಿದ ಕಥೆಯೂ ಹೌದು,” ಎಂದು ಬಿರ್ಲಾ ಪ್ರಿಸಿಷನ್ ಟೆಕ್ನಾಲಜೀಸ್​ ಅಧ್ಯಕ್ಷ ವೇದಾಂತ ಬಿರ್ಲಾ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಇದೇ ದಿನ (ಜೂನ್ 2) 2008ರಲ್ಲಿ ಟಾಟಾ ಮೋಟಾರ್ಸ್​ನಿಂದ ಎರಡು ವಿಲಾಸಿ ಕಾರು ಬ್ರ್ಯಾಂಡ್​ಗಳಾದ ಜಾಗ್ವಾರ್ ಮತ್ತು ಲ್ಯಾಂಡ್​ರೋವರ್ ಅನ್ನು ಫೋರ್ಡ್​ನಿಂದ ಸ್ವಾಧೀನ ಮಾಡಿಕೊಳ್ಳಲಾಯಿತು. ಅದು ಕೇವಲ ಭಾರತೀಯ ವಾಹನ ತಯಾರಕ ಸಂಸ್ಥೆಯೊಂದರ ವೃತ್ತಿ ಯಶಸ್ಸಷ್ಟೇ ಆಗಿರಲಿಲ್ಲ. ರತನ್ ಟಾಟಾ ಅವರ ವೈಯಕ್ತಿಕ ಮಹಾ ಗೆಲುವು ಸಹ ಆಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ವೇದಾಂತ ಬಿರ್ಲಾ.

1998ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್​ನಿಂದ ಟಾಟಾ ಇಂಡಿಕಾ ಬಿಡುಗಡೆ ಮಾಡಲಾಯಿತು. ಅದು ಭಾರತದ ಮೊದಲ ದೇಶೀ ಕಾರು ಆಗಿತ್ತು. ಆದರೆ ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಆಗಲಿಲ್ಲ. ಕಡಿಮೆ ಮಾರಾಟದ ಕಾರಣಕ್ಕೆ ಟಾಟಾ ಮೋಟಾರ್ಸ್​ನಿಂದ ಆ ಕಾರು ವ್ಯವಹಾರವನ್ನು ಒಂದು ವರ್ಷದೊಳಗೆ ಮಾರಾಟ ಮಾಡಲು ನಿರ್ಧರಿಸಲಾಯಿತು. ಅಮೆರಿಕದ ಫೋರ್ಡ್​ ಜತೆಗೆ ವ್ಯವಹಾರವೊಂದನ್ನು ಮಾಡಿಕೊಳ್ಳಲು ಟಾಟಾದಿಂದ 1999ರಲ್ಲಿ ನಿರ್ಧರಿಸಲಾಯಿತು. ಸರಿ, ರತನ್ ಟಾಟಾ ಮತ್ತು ಅಚರ ತಂಡ ಬಿಲ್​ ಫೋರ್ಡ್​ರನ್ನು ಭೇಟಿ ಆಗಲು ಅಮೆರಿಕಾಗೆ ತೆರಳಿತು. ಆಗ ಅವರು ಫೋರ್ಡ್​ನ ಅಧ್ಯಕ್ಷರಾಗಿದ್ದರು. ಈ ಭೇಟಿ ವೇಳೆ ಟಾಟಾ ಅವರನ್ನು ಫೊರ್ಡ್ ಅವಮಾನಿಸಿದ್ದರಂತೆ.

ಅಮೆರಿಕದ ಉದ್ಯಮಿ ಬಿಲ್​ ಫೋರ್ಡ್, ವಾಹನ ಉತ್ಪಾದನೆ ಉದ್ಯಮಕ್ಕೆ ನೀವು ಇಳಿದಿದ್ದೇ ತಪ್ಪು ಎಂದಿದ್ದರಂತೆ. ರತನ್ ಟಾಟಾ ಅವರ ತಂಡದಲ್ಲಿ ಇದ್ದ ಪ್ರವೀಣ್ ಕಡ್ಲೆ 2015ರ ಕಾರ್ಯಕ್ರಮವೊಂದರಲ್ಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದರು: ನಿಮಗೆ ಏನೂ ಗೊತ್ತಿಲ್ಲ. ನೀವೇಕೆ ಪ್ರಯಾಣಿಕರ ಕಾರಿನ ವಿಭಾಗ ಯಾಕೆ ಶುರು ಮಾಡಿದಿರಿ ಎಂದು ಕೇಳಿದರು ಎಂದು ಅವರು ಹೇಳಿದ್ದರು. ಕಾರು ವಿಭಾಗವನ್ನು ಖರೀದಿಸುವ ಮೂಲಕ ಟಾಟಾಗೆ ಉಪಕಾರ ಮಾಡುತ್ತಿರುವುದಾಗಿ ಹೇಳಿದ್ದರಂತೆ.

ಆದರೆ, ಆ ವ್ಯವಹಾರ ಕುದುರಲಿಲ್ಲ. ಅಂದಿನ ಘಟನೆಯು ತಮ್ಮ ಗುರಿಯ ಕಡೆಗೆ ಇನ್ನಷ್ಟು ಗಮನ ಹರಿಸುವಂತೆ ರತನ್ ಟಾಟಾ ಅವರಿಗೆ ಮಾಡಿತು. ಉತ್ಪಾದನಾ ಘಟಕವನ್ನು ಮಾರಾಟ ಮಾಡಬಾರದು ಎಂದು ನಿರ್ಧರಿಸಿದರು. ಆ ನಂತರ ಏನಾಯಿತು ಅಂದರೆ, ಅತ್ಯುತ್ತಮ ವೈಫಲ್ಯವು ಉದ್ಯಮ ಜಗತ್ತಿನ ಯಶಸ್ವಿ ಕ್ಷಣಗಳಾದವು ಎಂದು ಅವರು ಸೇರಿಸಿದ್ದಾರೆ. 9 ವರ್ಷದ ನಂತರ ಪರಿಸ್ಥಿತಿ- ಸನ್ನಿವೇಶಗಳು ಬದಲಾದವು. 2008ರ ಮಹಾ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಫೋರ್ಡ್ ದಿವಾಳಿ ಅಂಚನ್ನು ತಲುಪಿತು. ಆಗ ಟಾಟಾ ಮೋಟಾರ್ಸ್​ನಿಂದ ಜಾಗ್ವಾರ್ ಮತ್ತು ಲ್ಯಾಂಡ್​ ರೋವರ್ ಪೋರ್ಟ್​ಫೋಲಿಯೋಗಳ ಖರೀದಿಯ ಆಫರ್ ಮಾಡಿದರು.

2008ರ ಜೂನ್​ನಲ್ಲಿ ರತನ್​ ಟಾಟಾ ಅವರು ಜಾಗ್ವಾರ್ ಮತ್ತು ಲ್ಯಾಂಡ್​ ರೋವರ್ ಅನ್ನು ಪೂರ್ತಿ ನಗದು ಮೊತ್ತ 230 ಕೋಟಿ ಅಮೆರಿಕ ಡಾಲರ್ ಮೊತ್ತಕ್ಕೆ ವ್ಯವಹಾರ ಅಂತಿಮವಾಯಿತು. ಆಗ ಫೋರ್ಡ್​ ಅಧ್ಯಕ್ಷ ಬಿಲ್ ಫೋರ್ಡ್ ಅವರು ರತನ್ ಟಾಟಾ ಅವರಿಗೆ ಜೆಎಲ್​ಆರ್ ಖರೀದಿಸುವ ಮೂಲಕ ಮಹದುಪಕಾರ ಮಾಡಿದ್ದೀರಿ ಎಂದರು ಎಂಬುದಾಗಿ ಕಡ್ಲೇ ನೆನಪಿಸಿಕೊಂಡಿದ್ದರು ಎಂದು ಫಸ್ಟ್​ಫೋಸ್ಟ್ ವರದಿ ಮಾಡಿದೆ.

ಜಾಗ್ವಾರ್ ಲ್ಯಾಂಡ್​ ರೋವರ್ ಅನ್ನು ಟಾಟಾ ಅತ್ಯಂತ ಲಾಭದಾಯಕ ಕಂಪೆನಿಯಾಗಿ ಮಾಡಿದರು. ಟಾಟಾದ ಹಣಕಾಸಿನಲ್ಲಿ ಇವತ್ತಿಗೆ ಜೆಎಲ್​ಆರ್ ಬೆನ್ನೆಲುಬಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಸ್ಸಾಂನಲ್ಲಿ ಜನರ ಮನಗೆದ್ದ ರತನ್ ಟಾಟಾ ಭಾಷಣ; ಮೋದಿ ಜತೆ ವೇದಿಕೆ ಹಂಚಿಕೊಂಡ ಹಿರಿಯ ಉದ್ಯಮಿ ಹೇಳಿದ್ದೇನು?

Published On - 5:13 pm, Thu, 2 June 22

Follow Us
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ