AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?

ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ 299 ಪ್ಲಾನ್ ಪರಿಚಯಿಸಲಾಗಿದೆ. ಇದರಿಂದ ಏನೇನು ಪ್ರಯೋಜನಗಳು ಆಗಲಿವೆ ಎಂಬ ಅಂಶಗಳನ್ನು ತಿಳಿಯುವುದಕ್ಕಾಗಿ ಮುಂದೆ ಓದಿ.

Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?
ಸಾಂದರ್ಭಿಕ ಚಿತ್ರ
Srinivas Mata
| Edited By: ಆಯೇಷಾ ಬಾನು|

Updated on: Mar 12, 2021 | 6:39 AM

Share

ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ಅನ್ನು ರೂ. 299ಕ್ಕೆ ಪರೀಕ್ಷೆ ನಡೆಸುತ್ತಿದೆ. ಕಿರು ತೆರೆಯ ಮೇಲೆ ಕಂಟೆಂಟ್ ನೋಡಬಯಸುವ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಹೊಸ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಮೂಲಕ ಬಳಕೆದಾರರು ನೆಟ್​ಫ್ಲಿಕ್ಸ್ ಸಿನಿಮಾಗಳು ಮತ್ತು ಶೋಗಳನ್ನು ಸ್ಮಾರ್ಟ್​ಫೋನ್​​ನಲ್ಲಿ ಮಾತ್ರ ನೋಡಲು ಅವಕಾಶ ನೀಡುವುದು ಮಾತ್ರ ಅಲ್ಲ. ಜತೆಗೆ ಟ್ಯಾಬ್ಲೆಟ್, ಡೆಸ್ಕ್​​ಟಾಪ್ ಮತ್ತು ಲ್ಯಾಪ್​ಟಾಪ್​ಗಳಲ್ಲೂ ವೀಕ್ಷಿಸಬಹುದು. ವರದಿಯ ಪ್ರಕಾರ, ಕೆಲವೇ ಗ್ರಾಹಕರೊಂದಿಗೆ ಈ ಮೊಬೈಲ್ ಯೋಜನೆಯನ್ನು ಪರೀಕ್ಷಾರ್ಥವಾಗಿ ಬಳಸುತ್ತದೆ.

ಸದ್ಯಕ್ಕೆ ನೆಟ್​​ಫ್ಲಿಕ್ಸ್​ನಿಂದ ರೂ. 199ರ ಮೊಬೈಲ್ ಪ್ಲಾನ್ ಇದೆ. ಅದು ಮೊಬೈಲ್ ಸಾಧನಗಳಿಗೆ ಮಾತ್ರ ಕಂಟೆಂಟ್ ಒದಗಿಸುತ್ತದೆ. ಹೊಸ ಮೊಬೈಲ್+ ರೂ. 299ರ ಪ್ಲಾನ್ ಮೂಲಕವಾಗಿ ಬಳಕೆದಾರರು ಹೆಚ್ಚು ಕಂಟೆಂಟ್ ಲೈಬ್ರರಿಯನ್ನು ನೋಡಬಹುದು ಎಂದು ತಿಳಿಸಿದೆ. ಹೊಸ ಪ್ಲಾನ್​ನಲ್ಲಿ ಎಚ್​ಡಿ ರೆಸಲ್ಯೂಷನ್ (720p) ಕಂಟೆಂಟ್ ಒದಗಿಸಲಾಗುತ್ತದೆ. 199ರ ಪ್ಲಾನ್ ಎಸ್​ಡಿ ರೆಸಲ್ಯೂಷನ್​ನಲ್ಲಿ ಇರುತ್ತವೆ. ಹೊಸ ಮೊಬೈಲ್+ ಪ್ಲಾನ್ ರೂ. 299ರ ಮೌಲ್ಯದ್ದು ಮ್ಯಾಕ್, ಪಿ.ಸಿ.ಗಳು ಹಾಗೂ ಕ್ರೋಮೋಬುಕ್​ಗಳನ್ನು ಸಪೋರ್ಟ್ ಮಾಡುತ್ತದೆ.

ಒಂದು ವೇಳೆ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಲ್ಲಿ ಮಾತ್ರ ಈ ಪ್ಲಾನ್ ಅನ್ನು ಎಲ್ಲ ಕಡೆ ತರಲಾಗುತ್ತದೆ. ಕಳೆದ ವರ್ಷವೇ ಕಂಪೆನಿಯು ರೂ. 345ಕ್ಕೆ ಈ ಪ್ಲಾನ್ ತರಬೇಕು ಎಂದಿತ್ತು. ಆದರೆ ಡಿಸ್ನಿ+ ಹಾಟ್​ಸ್ಟಾರ್​ನಂಥ ಸ್ಪರ್ಧೆಗಳಿಂದಾಗಿ ಈ ವರ್ಷ ಹೊಸ ನೆಟ್​ಫ್ಲಿಕ್ಸ್ ಪ್ಲಾನ್ ಕಡಿಮೆ ದರದೊಂದಿಗೆ ಬಂದಿದೆ.

ಇದನ್ನೂ ಓದಿ: OTT Regulations: ಓಟಿಟಿ ನಿಯಂತ್ರಿಸಲು ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಪಟ್ಟಿಗೆ ‘ಹಲ್ಲೇ ಇಲ್ಲ’ ಎಂದ ಸುಪ್ರೀಂ ಕೋರ್ಟ್

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು